Connect with us

INCIDENT

ಪುಚ್ಚೆಮೊಗರು: ದೈವದ ಭಂಡಾರ ಮೆರವಣಿಗೆ ವೇಳೆ ಕಾಲುಸಂಕ ಕುಸಿತ – 8 ಮಂದಿಗೆ ಗಂಭೀರ ಗಾಯ

Published

on

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಪುಚ್ಚೆಮೊಗರು: ಮೂಡಬಿದಿರೆ ತಾಕೋಡೆ ಬರ್ಕೆ ಧರ್ಮನೇಮೋತ್ಸವದ ಅಂಗವಾಗಿ ನಡೆಯುತ್ತಿದ್ದ ದೈವದ ಭಂಡಾರ ಮೆರವಣಿಗೆ ವೇಳೆ ಭಾರೀ ಅವಘಡ ಸಂಭವಿಸಿದೆ. ಪುಚ್ಚೆಮೊಗರು ಗ್ರಾಮದ ಬಾವದಬೈಲಿನಲ್ಲಿ ಕಾಲುಸಂಕ ಏಕಾಏಕಿ ಮುರಿದು ಬಿದ್ದು 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ:

ದೈವದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಕೊಂಬು, ಬ್ಯಾಂಡ್ ವಾದ್ಯಗಳ ಜೊತೆ ಭಕ್ತರು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಬಾವದಬೈಲು ಎಂಬಲ್ಲಿ ಸಣ್ಣ ಕಾಲುಸಂಕ ದಾಟುವಾಗ ಸಂಕ ಮುರಿದುಬಿದ್ದಿದೆ. ಪರಿಣಾಮ ಭಂಡಾರ ಹೊತ್ತ ಪಲ್ಲಕ್ಕಿ ಸಮೇತ ಭಕ್ತರು ಕೆಳಗೆ ಬಿದ್ದಿದ್ದಾರೆ.

ಸಂಕದ ಭಾರೀ ಗಾತ್ರದ ಬೀಮ್ ಪಲ್ಲಕ್ಕಿ ಹೊತ್ತವರ ಮೇಲೆಯೇ ಬಿದ್ದ ಪರಿಣಾಮ ಗಾಯದ ತೀವ್ರತೆ ಹೆಚ್ಚಾಗಿದೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಸುನಿಲ್ ಶೆಟ್ಟಿ ಮುಕಾಲ್ದಿ ಮಾರೂರು ಮತ್ತು ಲೋಕೇಶ್ ಭಂಡಾರಿ ಸೇರಿದ್ದಾರೆ. 

ಮೊಗಮೂರ್ತಿಗಳಿಗೆ ಹಾನಿ: ದುರ್ಘಟನೆಯಲ್ಲಿ ಪಲ್ಲಕ್ಕಿಯಲ್ಲಿದ್ದ ದೈವದ ಮೊಗಮೂರ್ತಿಗಳು ಹಾಗೂ ಪವಿತ್ರ ಧಾರ್ಮಿಕ ಪರಿಕರಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.

ಘಟನೆಯ ಆತಂಕಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಕ್ತ ವಲಯದಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಸುಳ್ಯದ ಮೆಸ್ಕಾಂ ಅಧಿಕಾರಿ ಟೈಂಯ… ! ಕಂಠಪೂರ್ತಿ ಕುಡಿದು ಮೆಟ್ಟಿಲಲ್ಲಿ ಹೊರಳಾಡಿದ ಮೆಸ್ಕಾಂ ಹಿರಿಯ ಅಧಿಕಾರಿ – ಸಾರ್ವಜನಿಕರ ಆಕ್ರೋಶ

Published

on

ಸುಳ್ಯ: ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕಂಠಪೂರ್ತಿ ಮದ್ಯ ಸೇವಿಸಿ ಶ್ರೀರಾಮ ಪೇಟೆಯ ಕಟ್ಟಡದ ಮೆಟ್ಟಿಲಲ್ಲಿ ಹೊರಳಾಡಿದ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಡೆದದ್ದೇನು? : ಮಟಮಟ ಮಧ್ಯಾಹ್ನದಲ್ಲೇ ಮೆಸ್ಕಾಂ ಅಧಿಕಾರಿ ಮದ್ಯದ ನಶೆಯಲ್ಲಿ ಮೇಲೇಳಲಾರದೆ ಮೆಟ್ಟಿಲಲ್ಲಿ ಹೊರಳಾಡುತ್ತಿದ್ದರು. ವಿಷಯ ತಿಳಿದು ಸ್ಥಳದಲ್ಲಿ ಜನ ಜಮಾಯಿಸಿದ್ದರು.

ಮಾಹಿತಿ ತಿಳಿದ ಮೆಸ್ಕಾಂ ಸಿಬ್ಬಂದಿ ಇಲಾಖೆಗೆ ಮುಜುಗರವಾಗುವುದನ್ನು ಅರಿತು ತಕ್ಷಣ ಸ್ಥಳಕ್ಕೆ ಧಾವಿಸಿ, ಇಲಾಖಾ ವಾಹನದಲ್ಲಿ ಕುಡುಕ ಅಧಿಕಾರಿಯನ್ನು ತುಂಬಿಸಿಕೊಂಡು ಕರೆದೊಯ್ದಿದ್ದಾರೆ.

ಸಾರ್ವಜನಿಕರ ಒತ್ತಾಯ: ಕರ್ತವ್ಯದ ವೇಳೆಯಲ್ಲೇ ಮದ್ಯ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಹೊರಳಾಡಿ ಇಲಾಖೆಯ ಮಾನ ಹರಾಜು ಹಾಕಿದ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸೇವೆಯಿಂದ ಅಮಾನತು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮೆಸ್ಕಾಂ ಮೇಲಾಧಿಕಾರಿಗಳು ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Continue Reading

INCIDENT

ಪುತ್ತೂರಿನಲ್ಲಿ ಸುಡುಮದ್ದು ಅವಾಂತರ ಹಾಗೂ ಕಟ್ಟಡ ಧ್ವಂಸ ಪ್ರಕರಣ – ಎರಡು ಪ್ರತ್ಯೇಕ ಪ್ರಕರಣ ದಾಖಲು

Published

on

ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವದ ಸಂಭ್ರಮದ ನಡುವೆಯೇ ಎರಡು ಅಹಿತಕರ ಘಟನೆಗಳು ಸಂಭವಿಸಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ದಿನಾಂಕ 17-04-2026 ರಂದು ರಾತ್ರಿ ಜಾತ್ರೆಯ ಗದ್ದೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಯುತ್ತಿದ್ದಾಗ ಅವಾಂತರ ಸಂಭವಿಸಿದೆ. ದೂರದಲ್ಲಿ ನಿಂತು ಪ್ರದರ್ಶನ ವೀಕ್ಷಿಸುತ್ತಿದ್ದ ಕುಂದಾಪುರ ನಿವಾಸಿ ಸುಮಂತ್ ಶೆಟ್ಟಿ (20) ಹಾಗೂ ಅವರ ಸ್ನೇಹಿತರಾದ ಭರತ್, ಕೌಶಿಕ್, ಸೌಮ್ಯ, ದೀಪಕ್, ಯಶವಂತ್ ಮತ್ತು ಮೋಹನ್ ಎಂಬುವವರ ಮೇಲೆ ಸುಡುಮದ್ದಿನ ಬೆಂಕಿ ಬಿದ್ದಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಡುಮದ್ದು ನಿರ್ವಹಣೆ ಮಾಡುವವರು ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದೇ ಈ ಘಟನೆಗೆ ಕಾರಣ ಎಂದು ಸುಮಂತ್ ಶೆಟ್ಟಿ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ: 45/2026 ಕಲಂ: 288, 125(a), 3(5) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, ಮಂಗಳೂರಿನ ಕದ್ರಿಹಿಲ್ಸ್ ನಿವಾಸಿ ಡಾ. ಅರವಿಂದ ರಾವ್ ಕೇದಿಗೆ ಅವರು ದೇವಸ್ಥಾನದ ಪದಾಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಮಾನ್ಯ ಬಂಟ್ವಾಳ ನ್ಯಾಯಾಲಯದ ಆದೇಶದ ಮೇರೆಗೆ ಪಿರ್ಯಾದುದಾರರ ಸುಪರ್ದಿಯಲ್ಲಿದ್ದ ಪುತ್ತೂರು ಮುಖ್ಯ ರಸ್ತೆಯ ಬದಿಯಲ್ಲಿರುವ ಹಳೆಯ ಕಟ್ಟಡ ಮತ್ತು ಜಮೀನಿಗೆ, ದಿನಾಂಕ 14-04-2026 ರಂದು ರಾತ್ರಿ ದೇವಸ್ಥಾನದ ಪದಾಧಿಕಾರಿ ಅಧ್ಯಕ್ಷರು ಮತ್ತು ಇತರರು ಅಕ್ರಮವಾಗಿ ಪ್ರವೇಶಿಸಿ, ಕಟ್ಟಡವನ್ನು ಕೆಡವಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ದಿನಾಂಕ 17-04-2026 ರಂದು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 44/2026, ಕಲಂ: 329(3), 324(2) ಜೊತೆಗೆ 3(5) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

INCIDENT

ಬೆಕ್ಕಿನ ಪ್ರೀತಿಗಾಗಿ ಬಾವಿಯಲ್ಲಿ ಬಾಕಿಯಾದ ಬಾಲಕ: ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ ಅವರಿಂದ ಸಾಹಸಮಯ ರಕ್ಷಣೆ!

Published

on

ವಿಟ್ಲ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಬಾಲಕನೊಬ್ಬ ಸುಮಾರು 60 ಅಡಿ ಆಳದ ಬಾವಿಯಲ್ಲಿ ಸಿಲುಕಿಕೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಶಿವಾಜಿನಗರದಲ್ಲಿ ನಡೆದಿದೆ. ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿದ ಫ್ರೆಂಡ್ಸ್ ವಿಟ್ಲ ತಂಡದ ನಾಯಕ ಮುರಳೀಧರ ವಿಟ್ಲ ಅವರು ಬಾಲಕನನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಮೂಲಕ ಸಂಭವನೀಯ ಅನಾಹುತವನ್ನು ತಪ್ಪಿಸಿದ್ದಾರೆ.

ಘಟನೆಯ ವಿವರ:

ಶಿವಾಜಿನಗರದ ಕೃಷ್ಣ ನಾಯ್ಕ ಎಂಬುವವರ ಮನೆಯ ಬಳಿಯಿರುವ ಸುಮಾರು 60 ಅಡಿ ಆಳದ ನೀರಿಲ್ಲದ ಬಾವಿಗೆ ಆಕಸ್ಮಿಕವಾಗಿ ಬೆಕ್ಕೊಂದು ಬಿದ್ದಿತ್ತು. ಬಾವಿಯ ಒಳಗಿನಿಂದ ಬೆಕ್ಕು ಪ್ರಾಣಭಯದಲ್ಲಿ ಕಿರುಚುತ್ತಿರುವುದನ್ನು ಕಂಡು ಮನೆಯವರು ಮರುಗಿದ್ದರು. ಈ ವೇಳೆ ಕೃಷ್ಣ ನಾಯ್ಕ ಅವರ ಅಪ್ರಾಪ್ತ ಮೊಮ್ಮಗ ತಾನೇ ಕೆಳಗಿಳಿದು ಬೆಕ್ಕನ್ನು ತರುವುದಾಗಿ ಹೇಳಿದ್ದಾನೆ. ಮೊಮ್ಮಗನ ಹಠಕ್ಕೆ ಮಣಿದ ತಾತ ಹಗ್ಗದ ಸಹಾಯದಿಂದ ಆತನನ್ನು ಕೆಳಗಿಳಿಸಿದ್ದಾರೆ.

ಬಾಲಕ ಯಶಸ್ವಿಯಾಗಿ ಕೆಳಗಿಳಿದು, ಬೆಕ್ಕನ್ನು ಬಕೆಟ್‌ನಲ್ಲಿ ಹಾಕಿ ಮೇಲಕ್ಕೆ ಕಳುಹಿಸುವ ಮೂಲಕ ಮೂಕಪ್ರಾಣಿಯ ಜೀವ ಉಳಿಸಿದ್ದಾನೆ. ಆದರೆ, ಬೆಕ್ಕನ್ನು ರಕ್ಷಿಸಿದ ನಂತರ ಬಾಲಕನಿಗೆ ಮೇಲಕ್ಕೆ ಬರಲು ಸಾಧ್ಯವಾಗದೆ ಒಂದು ಗಂಟೆಯ ಕಾಲ ಬಾವಿಯೊಳಗೇ ಚಡಪಡಿಸುವಂತಾಯಿತು.

ಗಲಿಬಿಲಗೊಂಡ ಕುಟುಂಬಸ್ಥರು:

ಮೊಮ್ಮಗ ಬಾವಿಯೊಳಗೆ ಸಿಲುಕಿರುವುದನ್ನು ಕಂಡು ತಾತ ಮತ್ತು ಅಜ್ಜಿ ಕಂಗಾಲಾಗಿದ್ದರು. ಏನು ಮಾಡಬೇಕೆಂದು ತೋಚದೆ ಗಾಬರಿಗೊಂಡಿದ್ದ ಸಂದರ್ಭದಲ್ಲಿ, ಸ್ಥಳೀಯವಾಗಿ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ಫ್ರೆಂಡ್ಸ್ ವಿಟ್ಲ ತಂಡದ ನಾಯಕ ಮುರಳೀಧರ ವಿಟ್ಲ ಅವರಿಗೆ ವಿಷಯ ಮುಟ್ಟಿಸಲಾಯಿತು.

ಸಾಹಸಮಯ ರಕ್ಷಣೆ:

ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಮುರಳೀಧರ ಅವರು ಕ್ಷಣಾರ್ಧದಲ್ಲಿ ಬಾವಿಯೊಳಗೆ ಇಳಿದಿದ್ದಾರೆ. ಅತಂತ್ರ ಸ್ಥಿತಿಯಲ್ಲಿದ್ದ ಬಾಲಕನಿಗೆ ಧೈರ್ಯ ತುಂಬಿ, ಹಗ್ಗದ ಸಹಾಯದಿಂದ ಆತನನ್ನು ಸುರಕ್ಷಿತವಾಗಿ ಮೇಲಕ್ಕೆ ತರುವಲ್ಲಿ ಯಶಸ್ವಿಯಾದರು.

ಮೂಕಪ್ರಾಣಿಯ ಮೇಲಿನ ಕಾಳಜಿಯಿಂದ ಬಾಲಕ ಸಾಹಸಕ್ಕೆ ಕೈಹಾಕಿದ್ದರೂ, ಹಿರಿಯರು ಇಂತಹ ಅಪಾಯಕಾರಿ ಸಂದರ್ಭಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ,” ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ತನ್ನ ಪ್ರಾಣದ ಹಂಗು ತೊರೆದು ಬಾಲಕನನ್ನು ರಕ್ಷಿಸಿದ ಮುರಳೀಧರ ವಿಟ್ಲ ಅವರ ಈ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Continue Reading

Trending

Copyright © 2025 Deevatige

error: Content is protected !!