Condolences
ಕುಂದಾಪುರ ಗ್ರಾಮಾಂತರ ಠಾಣಾ ಎಸೈ ನಾಸಿರ್ ಹುಸೇನ್ ನಿಧನ; “ಡ್ರಗ್ಸ್ ಫ್ರೀ ಕರ್ನಾಟಕ”ಮ್ಯಾರಥಾನ್ ಓಟದ ಸಂದರ್ಭ, ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ನಿಷ್ಠಾವಂತ ಎಸೈ.
ನಾಗರಿಕ ಸಮಾಜದಲ್ಲಿ ಸ್ವಾಸ್ಥ್ಯ ಮತ್ತು ಸುರಕ್ಷತೆಯನ್ನು ಸ್ಥಾಪಿಸುವ ಹಿತದೃಷ್ಟಿಯಿಂದ ಹಮ್ಮಿಕೊಂಡಿದ್ದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” “ಡ್ರಗ್ಸ್ ಫ್ರೀ ಕರ್ನಾಟಕ” ಮ್ಯಾರಥಾನ್ ನಡಿಗೆ ಕಾರ್ಯಕ್ರಮ ಸುಖಾಂತ್ಯ ಕಾಣುವ ಬದಲಾಗಿ ವಿಧಿಯಾಟವೋ ಎಂಬಂತೆ ದುಖಾಂತ್ಯ ಕಂಡಿದೆ.
ಉಡುಪಿ ಜಿಲ್ಲಾ ಪೊಲೀಸರು ಹಮ್ಮಿಕೊಂಡಿದ್ದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ಹಾಗೂ “ಡ್ರಗ್ಸ್ ಫ್ರೀ ಕರ್ನಾಟಕ” ಕಾರ್ಯಕ್ರಮದಲ್ಲಿ ಕುಂದಾಪುರದ ಗ್ರಾಮಾಂತರ ಠಾಣೆಯ ನಿಷ್ಟಾವಂತ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಠಾಣಾಧಿಕಾರಿ ನಾಸೀರ್ ಹುಸೇನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಬೆಳಿಗ್ಗೆ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜನ ಜಾಗೃತಿ ಓಟದಲ್ಲಿ ನಾಸೀರ್ ಹುಸೇನ್ ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಆರೋಗ್ಯ ಮತ್ತು ಮಾದಕ ವ್ಯಸನ ಮುಕ್ತ ಸಮಾಜವನ್ನು ಕರ್ನಾಟಕದಲ್ಲಿ ನಿರ್ಮಿಸಬೇಕೆಂಬ ಕನಸು ಕಂಡು ಜನತೆಗೆ ಉತ್ತಮ ಸಂದೇಶ ನೀಡುವ ಉದ್ದೇಶದಿಂದ ಹಮ್ಮಿಕೊಂಡ ಮ್ಯಾರಥಾನ್ ಓಟದ ಸಂದರ್ಭದಲ್ಲಿ ನಾಸೀರ್ ಹುಸೇನ್ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಹುಸೇನ್ ಅವರು ಮೃತಪಟ್ಟಿದ್ದಾರೆ.
ನಿಷ್ಟಾವಂತ, ಜನಸ್ನೇಹಿ ಅಧಿಕಾರಿಯಾಗಿದ್ದ ನಾಸೀರ್ ಹುಸೇನ್ ಅವರು ಪೊಲೀಸ್ ಇಲಾಖೆಯ ಪ್ರತಿಯೊಂದು ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು ಎಂದು ಕುಂದಾಪುರದ ಜನತೆ ಕೊಂಡಾಡುತ್ತಿದೆ.

“ಜನರ ಸೇವೆಗಾಗಿ ಸದಾ ಸಿದ್ಧ” ಎಂಬ ಪೊಲೀಸ್ ಇಲಾಖೆಯ ಧ್ಯೇಯವಾಕ್ಯ ಎಸೈ ನಾಸಿರ್ ಹುಸೇನ್ ಅವರಿಗೆ ಹೇಳಿಮಾಡಿಸಿದಂತಿತ್ತು. ದಕ್ಷ ಎಸೈ ನಾಸಿರ್ ಹುಸೇನ್ ಅಕಾಲಿಕ ನಿಧನ ಕುಂದಾಪುರದ ಜನತೆಗೆ ತಡೆಯಲಾರದ ನೋವನ್ನುಂಟುಮಾಡಿದೆ.
Bantawala
ವಿಟ್ಲದ ಹಿರಿಯ ಬಾಡಿಗೆ ಕಾರು ಚಾಲಕ ಈಶ್ವರ್ ಮೂಲ್ಯ ಇನ್ನಿಲ್ಲ
ವಿಟ್ಲ: ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿಟ್ಲ ಪರಿಸರದಲ್ಲಿ ಬಾಡಿಗೆ ಕಾರು ಚಾಲಕರಾಗಿ ಗುರುತಿಸಿಕೊಂಡಿದ್ದ, ಅಳಿಕೆ ಗ್ರಾಮದ ಮುಳಿಯ ಅಡ್ಕ ನಿವಾಸಿ ಈಶ್ವರ್ ಮೂಲ್ಯ (71) ಅವರು ಶನಿವಾರ(ಮಾರ್ಚ್ 21) ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿಟ್ಲದಲ್ಲಿ ಸುಮಾರು 45 ವರ್ಷಗಳಿಂದ ಬಾಡಿಗೆ ಕಾರು ಚಾಲನೆ ಮಾಡುತ್ತಿದ್ದ ಈಶ್ವರ್ ಅವರು ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರು. ಸದಾ ಬಿಳಿ ವಸ್ತ್ರ ಧರಿಸುತ್ತಿದ್ದ ಇವರು, ತಮ್ಮ ಸೌಮ್ಯ ಸ್ವಭಾವ ಮತ್ತು ವೃತ್ತಿಪರತೆಯಿಂದ ಎಲ್ಲರ ಪ್ರೀತಿಪಾತ್ರರಾಗಿದ್ದರು.

ಮಾರ್ಚ್ 20ರಂದು ಎಂದಿನಂತೆ ವೃತ್ತಿಗೆ ಹಾಜರಾಗಿದ್ದ ಅವರು, ಕೇರಳದ ಪೆರೂರಿನ ಬೇಕರಿ ಮಾಲೀಕರೊಬ್ಬರ ಮನೆಗೆ ಹಾಗೂ ನಂತರ ಉಳ್ಳಾಲಕ್ಕೆ ಬಾಡಿಗೆ ಹೋಗಿ ಅಳಿಕೆಗೆ ವಾಪಸ್ಸಾಗಿದ್ದರು. ಅಂದು ಸಂಜೆ ಮನೆ ಸಮೀಪದ ಅಂಗಡಿಯಲ್ಲಿ ದಿನಪತ್ರಿಕೆ ಓದಿ, ಮೊಮ್ಮಕ್ಕಳಿಗೆ ತಿಂಡಿ ಖರೀದಿಸಿ ಮನೆಗೆ ತೆರಳಿದ್ದರು.
ಆದರೆ, ಮಾರ್ಚ್ 21ರ ಮುಂಜಾನೆ 3 ಗಂಟೆಯ ಸುಮಾರಿಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ವಿಟ್ಲದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ದೇರ್ಲಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಅಂಬ್ಯುಲೆನ್ಸ್ ಸಜ್ಜಾಗುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಯಮುನಾ, ಪುತ್ರಿಯರಾದ ನಳಿನಾಕ್ಷಿ, ಗೀತಾ, ವಿದ್ಯಾ ಹಾಗೂ ಉಳ್ಳಾಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿರುವ ಪುತ್ರ ವಿನೋದ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಹಿರಿಯ ಚಾಲಕನ ಅಗಲಿಕೆಗೆ ವಿಟ್ಲದ ಚಾಲಕರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.
Bantawala
ಯಕ್ಷಗಾನದ ಮೇರುನಟ ‘ಅಭಿನಯ ಚತುರ’ ಸೂರಿಕುಮೇರು ಕೆ. ಗೋವಿಂದ ಭಟ್ ಅಸ್ತಂಗತ
ಮಂಗಳೂರು: ಯಕ್ಷಗಾನ ರಂಗದ ಭೀಷ್ಮ, ದಶಾವತಾರಿ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ (90) ಅವರು ಶುಕ್ರವಾರ ನಿಧನರಾಗಿದ್ದಾರೆ. ಏಳು ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ್ದ ಅವರು, ಸಾವಿರಾರು ಅಭಿಮಾನಿಗಳನ್ನು ಅಗಲಿದ್ದಾರೆ.

ಸೂರಿಕುಮೇರು ಕೆ. ಗೋವಿಂದ ಭಟ್ (1938-2026) ತೆಂಕುತಿಟ್ಟು ಯಕ್ಷಗಾನದ ಮೇರು ಕಲಾವಿದ, ನಟ ಮತ್ತು ಭಾಗವತರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನವರಾದ ಇವರು ಸುಮಾರು 7 ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಸಕ್ರಿಯರಾಗಿದ್ದರು.
ಕಲಾ ಪಯಣದ ಮುಖ್ಯಾಂಶಗಳು:
ದಶಾವತಾರಿ: ಬಣ್ಣದ ವೇಷದಿಂದ ಹಿಡಿದು ಸ್ತ್ರೀ ವೇಷದವರೆಗೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ಇವರು, ಯಕ್ಷಗಾನದ ದಶಾವತಾರಗಳನ್ನು ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ವಿಶಿಷ್ಟ ಕಲಾವಿದ.

ಅಭಿನಯದ ಗಾರುಡಿಗ: ಮಾತಿನ ಚಾತುರ್ಯ, ಮುದ್ರೆಗಳ ಬಳಕೆ ಮತ್ತು ಪಾತ್ರದ ಪರಕಾಯ ಪ್ರವೇಶಕ್ಕೆ ಇವರು ಹೆಸರಾಗಿದ್ದರು. ಇವರ ‘ಧರ್ಮರಾಯ’, ‘ಭೀಷ್ಮ’ ಹಾಗೂ ‘ಕೃಷ್ಣ’ನ ಪಾತ್ರಗಳು ಕಲಾಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿವೆ.
ಗೋವಿಂದ ಭಟ್ಟರ ಕಲಾ ಸೇವೆಯನ್ನು ಗುರುತಿಸಿ ಸಾಲು ಸಾಲು ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದವು:ರಾಜ್ಯೋತ್ಸವ ಪ್ರಶಸ್ತಿ ,ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಸೇರಿದಂತೆ ಹತ್ತಾರು ಗೌರವಗಳಿಗೆ ಇವರು ಪಾತ್ರರಾಗಿದ್ದರು.

“ವೇದಿಕೆಯಲ್ಲಿ ಅವರು ಬಣ್ಣ ಹಚ್ಚಿ ನಿಂತರೆ ಸಾಕು, ಆ ಪಾತ್ರವೇ ಜೀವಂತವಾಗಿ ಎದುರು ನಿಂತಂತೆ ಭಾಸವಾಗುತ್ತಿತ್ತು. ಅವರ ಶಿಸ್ತು ಮತ್ತು ಕಲಾ ನಿಷ್ಠೆ ಇಂದಿನ ತಲೆಮಾರಿನ ಕಲಾವಿದರಿಗೆ ದಾರಿದೀಪ.” – ಕಲಾ ವಿಮರ್ಶಕರು
ಅಗಲಿದ ಹಿರಿಯ ಚೇತನಕ್ಕೆ ವಿಷ್ಣುಸಾಯುಜ್ಯ ಪ್ರಾಪ್ತವಾಗಲಿ ಎಂದು ಪ್ರಾರ್ಥಿಸೋಣ. ಕಲಾಮಾತೆಯ ಸೇವೆಯಲ್ಲಿ ತಮ್ಮ ಜೀವನವನ್ನೇ ಸವೆಸಿದ ಅವರ ಸ್ಮರಣೆ ಸದಾ ಜೀವಂತ.
ಗೋವಿಂದ ಭಟ್ ಅವರು ಕೇವಲ ಕಲಾವಿದರಷ್ಟೇ ಅಲ್ಲದೆ, ಯಕ್ಷಗಾನದ ಶಿಸ್ತು ಮತ್ತು ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ದಾಟಿಸಿದ ಶ್ರೇಷ್ಠ ಗುರುಗಳೂ ಆಗಿದ್ದರು. ಅವರ ನಿಧನದಿಂದ ಯಕ್ಷಗಾನದ ಒಂದು ಸುವರ್ಣ ಯುಗ ಅಂತ್ಯಗೊಂಡಂತಾಗಿದೆ.

ಯಕ್ಷಗಾನದ ಹತ್ತು ಅವತಾರಗಳಲ್ಲೂ ಸೈ ಎನಿಸಿಕೊಂಡಿದ್ದ ಇವರು ‘ದಶಾವತಾರಿ’ ಎಂದೇ ಪ್ರಸಿದ್ಧರು. ಸೌಮ್ಯ ಮತ್ತು ರೌದ್ರ ಎರಡೂ ಪಾತ್ರಗಳಲ್ಲಿ ಅವರು ಸೈ ಎನಿಸಿಕೊಂಡಿದ್ದರು. ಶ್ರೀಕೃಷ್ಣ, ಧರ್ಮರಾಯ, ಭೀಷ್ಮ, ವಿಶ್ವಾಮಿತ್ರ, ಅರ್ಜುನ, ಮತ್ತು ಹಿರಣ್ಯಕಶಿಪುವಿನಂತಹ ಪಾತ್ರಗಳಿಗೆ ಅವರು ಹೊಸ ಆಯಾಮ ನೀಡಿದ್ದರು. ಧರ್ಮಸ್ಥಳ ಮೇಳದಲ್ಲಿ ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು. ಇದಲ್ಲದೆ ಕದ್ರಿ ಮತ್ತು ಇತರೆ ಪ್ರಮುಖ ಮೇಳಗಳಲ್ಲಿಯೂ ಕಾರ್ಯನಿರ್ವಹಿಸಿದ್ದರು.
ಅವರು ಶ್ರೀಕೃಷ್ಣನ ಪಾತ್ರದಲ್ಲಿ ನೀಡುತ್ತಿದ್ದ ‘ಗೀತೋಪದೇಶ’ದ ಪ್ರಸಂಗ ಇಂದಿಗೂ ಅನೇಕ ಕಲಾಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ.ಅವರ ನಿಧನಕ್ಕೆ ಗಣ್ಯರು ಹಾಗೂ ಕಲಾ ಪ್ರೇಮಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
Condolences
ಸಾವನ್ನೇ ಗೆಲ್ಲುವ ಪ್ರೀತಿ! ; ಕೋಮಾದಲ್ಲಿರುವ ಪತಿಯ ನೆನಪಿಗಾಗಿ ಪತ್ನಿಯ ಅವಿರತ ಹೋರಾಟ
ಜೀವನ ಅಂದುಕೊಂಡಂತೆ ನಡೆಯುವುದಿಲ್ಲ ಎನ್ನುವುದಕ್ಕೆ ಈ ದಂಪತಿಗಳ ಕಥೆಯೇ ಸಾಕ್ಷಿ. ಪ್ರೀತಿ ಮತ್ತು ನಂಬಿಕೆಯ ಬಲದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಲು ಹೊರಟಿರುವ ಪತ್ನಿಯೊಬ್ಬಳ ಕರುಣಾಜನಕ ಹಾಗೂ ಅಷ್ಟೇ ಧೈರ್ಯದ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ.
ವಿಧಿಯ ಆಟ: ಒಂದು ಅಪಘಾತ ಬದಲಿಸಿದ ಬದುಕು
ಪಶ್ಚಿಮ ಬಂಗಾಳದ ಅಸನ್ಸೋಲ್ ನಿವಾಸಿಗಳಾದ ಸೀಮಾ ಚಟರ್ಜಿ ಮತ್ತು ಆಕಾಶ್ ಪ್ರೀತಿಸಿ ಮದುವೆಯಾದವರು. ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದ ಈ ಜೋಡಿಯ ಸಂಭ್ರಮಕ್ಕೆ ವಿಧಿ 2025ರ ಅಕ್ಟೋಬರ್ 12ರಂದು ತಣ್ಣೀರೆರಚಿತು. ವಿಐಪಿ ರಸ್ತೆಯ ಹಲ್ದಿರಾಮ್ ಮೋರ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಕಾಶ್ ಅವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿತು. ಅಂದಿನಿಂದ ಆಕಾಶ್ ಕೋಮಾದಲ್ಲಿದ್ದಾರೆ.

ಪತಿಯ ಮರುಜನ್ಮಕ್ಕಾಗಿ ಪತ್ನಿಯ “ಹರಸಾಹಸ”
ಕಳೆದ ಐದು ತಿಂಗಳುಗಳಿಂದ ಸೀಮಾ ಅವರ ಬದುಕು ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯೆ ಕಳೆಯುತ್ತಿದೆ. ಆದರೆ ಅವರು ಧೃತಿಗೆಟ್ಟಿಲ್ಲ. ತನ್ನ ಪತಿಯ ಹಳೆಯ ನೆನಪುಗಳು ಮರುಕಳಿಸಲಿ ಎಂಬ ಆಶಯದೊಂದಿಗೆ ಅವರು ಪ್ರತಿದಿನ ವಿಶೇಷ ಪ್ರಯತ್ನಗಳನ್ನು ಮಾಡುತ್ತಿದ್ದಾರೆ:
ಆಕಾಶ್ಗೆ ಇಷ್ಟವಾದ ಸುಗಂಧ ದ್ರವ್ಯವನ್ನು (Perfume) ಹಚ್ಚುವುದು. ಪ್ರೀತಿಯಿಂದ ಹಣೆಗೇ ಮುತ್ತಿಟ್ಟು ಅವರನ್ನು ಮಾತನಾಡಿಸುವುದು. ಸದಾ ಅವರ ಕೈಹಿಡಿದು ಕುಳಿತು, ಪ್ರೀತಿಯ ಮಾತುಗಳ ಮೂಲಕ ಅವರನ್ನು ಎಚ್ಚರಿಸಲು ಪ್ರಯತ್ನಿಸುವುದು ಮಾಡುತ್ತಲೇ ಇದ್ದಾರೆ ಪತ್ನಿ

ಬೆಡ್ ಮೇಲೆಯೇ ವಿವಾಹ ವಾರ್ಷಿಕೋತ್ಸವ!
ಇತ್ತೀಚೆಗೆ ಈ ದಂಪತಿಯ ವಿವಾಹ ವಾರ್ಷಿಕೋತ್ಸವ ಬಂದಾಗ ಸೀಮಾ ಮಾಡಿದ ಕೆಲಸ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಹಳೆಯ ಸುಂದರ ಕ್ಷಣಗಳನ್ನು ನೆನಪಿಸಲು ಅವರು ವಧುವಿನಂತೆ ಸಿಂಗಾರಗೊಂಡು, ಪತಿಯ ಮಗ್ಗುಲಲ್ಲೇ ಕೇಕ್ ಕತ್ತರಿಸಿ, ಹೂಗುಚ್ಛ ಮತ್ತು ಉಂಗುರ ನೀಡಿ ಶುಭ ಕೋರಿದ್ದಾರೆ. ಈ ಭಾವನಾತ್ಮಕ ಕ್ಷಣದ ಫೋಟೋಗಳು ವೈರಲ್ ಆಗಿದ್ದು, ಸೀಮಾ ಅವರ ಧೈರ್ಯ ಮತ್ತು ಪ್ರೀತಿಗೆ ಜನ “ಹ್ಯಾಟ್ಸ್ ಆಫ್” ಎನ್ನುತ್ತಿದ್ದಾರೆ.
“ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದರೂ, ದೇವರ ಮೇಲೆ ನಂಬಿಕೆಯಿಟ್ಟು ತನ್ನ ಪತಿಯನ್ನು ಸಹಜ ಸ್ಥಿತಿಗೆ ತರಲು ಸೀಮಾ ಹೋರಾಡುತ್ತಿದ್ದಾರೆ. ಅವರ ಈ ಅಚಲ ಪ್ರೀತಿ ಇಂದಿನ ಕಾಲಕ್ಕೆ ಒಂದು ದೊಡ್ಡ ಮಾದರಿ.”
-
crime5 days agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 days agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
