Connect with us

ELECTION

ಶೃಂಗೇರಿ: 3 ವರ್ಷದ ಕಾನೂನು ಹೋರಾಟದ ಬಳಿಕ ಡಿ.ಎನ್. ಜೀವರಾಜ್‌ಗೆ ಶಾಸಕ ಸ್ಥಾನ – ಕಾಂಗ್ರೆಸ್‌ಗೆ ತೀವ್ರ ಮುಖಭಂಗ

Published

on

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 3 ವರ್ಷಗಳ ಕಾನೂನು ಹೋರಾಟದ ಬಳಿಕ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅಂತಿಮವಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಗೌತಮ್ ಕುಮಾರ್ ಶೆಟ್ಟಿ ಸೋಮವಾರ, ಮೇ 4 ರಂದು ಜೀವರಾಜ್ ಅವರಿಗೆ ಅಧಿಕೃತ ಶಾಸಕ ಸ್ಥಾನದ ಪ್ರಮಾಣಪತ್ರ ಹಸ್ತಾಂತರಿಸಿದರು.

ಮರು ಎಣಿಕೆಯಲ್ಲಿ 52 ಮತಗಳಿಂದ ಗೆಲುವು:
ಶನಿವಾರ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಡಿ.ಎನ್. ಜೀವರಾಜ್ ಅವರು ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗಿಂತ 52 ಮತಗಳ ಅಂತರದಿಂದ ಬಹುಮತ ಪಡೆದಿದ್ದರು. ಆದರೆ ಆ ದಿನ ಅಧಿಕೃತ ಘೋಷಣೆ ಮಾಡಿರಲಿಲ್ಲ. ಹೈಕೋರ್ಟ್‌ಗೆ ಮರು ಎಣಿಕೆ ವರದಿ ಸಲ್ಲಿಸುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದರು.

ಭಾನುವಾರ ತಡರಾತ್ರಿ ಚುನಾವಣಾಧಿಕಾರಿಗಳು ಜೀವರಾಜ್ ಅವರಿಗೆ ಅಧಿಕೃತ ಘೋಷಣಾ ಪತ್ರವನ್ನು ಇಮೇಲ್ ಮೂಲಕ ಕಳುಹಿಸಿದ್ದರು. ಸೋಮವಾರ ಬೆಳಿಗ್ಗೆ ಪ್ರಮಾಣಪತ್ರ ನೀಡುವುದರೊಂದಿಗೆ ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಡಿ.ಎನ್. ಜೀವರಾಜ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.

ಕಾಂಗ್ರೆಸ್‌ಗೆ ಹಿನ್ನಡೆ – 5ರಿಂದ 4ಕ್ಕೆ ಕುಸಿತ:
2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿತ್ತು.

  • ಚಿಕ್ಕಮಗಳೂರು: ಎಚ್.ಡಿ. ತಮ್ಮಯ್ಯ
  • ಮೂಡಿಗೆರೆ: ನಯನ ಮೋಟಮ್ಮ
  • ಶೃಂಗೇರಿ: ಟಿ.ಡಿ. ರಾಜೇಗೌಡ
  • ಕಡೂರು: ಕೆ.ಎಸ್. ಆನಂದ್
  • ತರೀಕೆರೆ: ಜಿ.ಎಚ್. ಶ್ರೀನಿವಾಸ್

ಐದೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದ ಬಿಜೆಪಿಗೆ ಶೃಂಗೇರಿ ಗೆಲುವು ಮರಳಿ ಸಿಕ್ಕಿದೆ. ಡಿ.ಎನ್. ಜೀವರಾಜ್ ಅವರ ಮೂರು ವರ್ಷಗಳ ಕಾನೂನು ಹೋರಾಟದ ಫಲವಾಗಿ ಶೃಂಗೇರಿ ಕ್ಷೇತ್ರವನ್ನು ಕಾಂಗ್ರೆಸ್ ಕಳೆದುಕೊಂಡಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಸ್ಥಾನ ಸಂಖ್ಯೆ 5 ರಿಂದ 4ಕ್ಕೆ ಇಳಿದಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Trending

Copyright © 2025 Deevatige

error: Content is protected !!