Connect with us

Kasaragod

ಸ್ವಾಮಿಯೇ….ಶರಣಂ ಅಯ್ಯಪ್ಪ ; ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

Published

on

ಸ್ವಾಮಿಯೇ…. ಶರಣಂ ಅಯ್ಯಪ್ಪ ಎಂಬ ಲಕ್ಷಾಂತರ ಭಕ್ತರ ಮುಗಿಲು ಮುಟ್ಟುವ ಭಕ್ತಿಪರವಶತೆಯ ಕೂಗಿಗೆ ಪ್ರತ್ಯಕ್ಷವಾದ ಸಾಕ್ಷಾತ್ ದೇವಸ್ವರೂಪಿ ಮಕರಜ್ಯೋತಿ !

ಈ ವರ್ಷದ ಮಕರಸಂಕ್ರಾoತಿಯ ಶುಭ ಘಳಿಗೆಯಂದು ಸಂಜೆ ಕಂಡುಬoದ ಅದ್ಭುತ ಕ್ಷಣಕ್ಕೆ ಲಕ್ಷಾಂತರ ಕೋಟಿ ಭಕ್ತರು ಸಾಕ್ಷಿಯಾಗಿ ಜನ್ಮ ಸಾರ್ಥಕತೆ ಪಡೆದ ಭಾವನೆಯೊಂದಿಗೆ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ ಕುಣಿದಾಡಿದರು.

ಮಕರ ಸಂಕ್ರಮಣ ದಿನವಾದ ಇಂದು ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಸಂಜೆ ಮೂರು ಬಾರಿ ಮಕರ ಜ್ಯೋತಿ ಕಾಣಿಸಿಕೊಂಡು ಭಕ್ತರು ಭಕ್ತಿಯ ಪರವಶತೆಯಲ್ಲಿ ತೇಲಾಡಿದರು.
ಪ್ರತಿ ವರ್ಷದಂತೆ ಈ ಬಾರಿಯು ಶಬರಿಮಲೆಯಲ್ಲಿ (shabarimale) ಮಕರ ಜ್ಯೋತಿ (makara jyothi) ದರ್ಶನ ಪಡೆದು ಅಯ್ಯಪ್ಪ ಸ್ವಾಮಿ ಭಕ್ತರು (ayyappa deevotees) ಪುನೀತರಾಗಿದ್ದಾರೆ.
ಸಂಜೆ 6.45ಕ್ಕೆ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗಿದೆ. ಮಕರ ಜ್ಯೋತಿಯನ್ನ ಕಣ್ತುಂಬಿಕೊoಡ ಭಕ್ತರು ‘ಸ್ವಾಮೀಯೇ ಶರಣಂ ಅಯ್ಯಪ್ಪ’ ದೇವರನ್ನ ಸ್ಮರಿಸಿದರು. ಮಕರ ಸಂಕ್ರಮಣ (makara sankrathi) ದಿನವಾದ ಇಂದು ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಸಂಜೆ ಮೂರು ಬಾರಿ ಮಕರ ಜ್ಯೋತಿ ಕಾಣಿಸಿಕೊಂಡಿತು. ಈ ಅಮೃತ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ದಿವ್ಯ ಜ್ಯೋತಿಯ ಬೆಳಕನ್ನು ನೋಡಿ ಕಣ್ತುಂಬಿಕೊoಡರು.
ಬೆಳಕಿನ ರೂಪದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ
ದೇವರನಾಡು ಕೇರಳದಲ್ಲಿರುವ ಶಬರಿಮಲೆಯಲ್ಲಿ ಮಕರ ಸಂಕ್ರಾತಿಯ ಸಂಭ್ರಮ ಮುಗಿಲು ಮುಟ್ಟಿದೆ. ಪ್ರತಿವರ್ಷದಂತೆ ಈ ಬಾರಿಯು ಕೂಡ ಪೊನ್ನಂಬಲಮೇಡು ಬೆಟ್ಟದಲ್ಲಿ ಸಂಜೆ ಮೂರು ಬಾರಿ ಮಕರ ಜ್ಯೋತಿ ದರ್ಶನವಾಯಿತು. ಬೆಳಕಿನ ರೂಪದಲ್ಲಿ ಕಾಣಿಸಿಕೊಂಡ ಅಯ್ಯಪ್ಪಸ್ವಾಮಿಯನ್ನು ಕಣ್ತುಂಬಿಕೊoಡ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷಣೆ ಕೂಗಿದರು. ಮೂರು ಬಾರಿ ದರ್ಶನವಾಗುವ ಅಯ್ಯಪ್ಪ ಜ್ಯೋತಿಯನ್ನು ಕಣ್ತುಂಬಿಕೊoಡು ಪುನೀತರಾದರು. ವರ್ಷದ ಅದ್ಭುತ ಕ್ಷಣಕ್ಕೆ ಕೋಟ್ಯಾಂತರ ಭಕ್ತರು ಸಾಕ್ಷಿಯಾದರು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

DEATH

ಮಾನವೀಯತೆ ಮೆರೆದ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ: ಕ್ಯಾನ್ಸರ್‌ನಿಂದ ಮೃತಪಟ್ಟ ಮಾಜಿ ಆರ್‌ಎಸ್‌ಎಸ್ ಕಾರ್ಯಕರ್ತನ ಅಂತ್ಯಕ್ರಿಯೆ ನೆರವೇರಿಸಿ ಸೌಹಾರ್ದತೆ ಮುನ್ನುಡಿ!

Published

on

ಕಾಸರಗೋಡು: ಧರ್ಮ, ರಾಜಕೀಯ ಮತ್ತು ಜಾತಿಗಳ ಆಚೆಗೂ ಮನುಷ್ಯತ್ವ ದೊಡ್ಡದು ಎಂಬುದನ್ನು ಕಾಸರಗೋಡಿನ ಜಿಲ್ಲಾ ಪಂಚಾಯತ್ ಸದಸ್ಯೆಯೊಬ್ಬರು ಸಾಬೀತುಪಡಿಸಿದ್ದಾರೆ. ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನಿಧನರಾದ ಮಾಜಿ ಆರ್‌ಎಸ್‌ಎಸ್ ಕಾರ್ಯಕರ್ತ, ಮೀಂಜ ಸಮೀಪದ ಚಿಗುರುಪಾದೆಯ ನಾರಾಯಣ (64) ಎಂಬವರ ಅಂತ್ಯಕ್ರಿಯೆಯನ್ನು ಖುದ್ದಾಗಿ ನೆರವೇರಿಸುವ ಮೂಲಕ ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಇಕ್ಬಾಲ್ ಅವರು ಸಮಾಜಕ್ಕೆ ಸೌಹಾರ್ದತೆಯ ವಿಶಿಷ್ಟ ಸಂದೇಶವನ್ನು ನೀಡಿದ್ದಾರೆ.

20 ವರ್ಷಗಳ ಹಿಂದೆ ಆರ್‌ಎಸ್‌ಎಸ್‌ನಲ್ಲಿದ್ದ ನಾರಾಯಣ:

ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಗುರುಪಾದೆಯ ನಿವಾಸಿಯಾಗಿದ್ದ ನಾರಾಯಣ ಅವರು ಸುಮಾರು 20 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಕಳೆದ ಕೆಲವು ಸಮಯದಿಂದ ತೀವ್ರವಾದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು, ಶನಿವಾರ (ಜೂ. 27) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಮೃತ ನಾರಾಯಣ ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ.‌

ಅಂಗಡಿ ಜಗಲಿಯಲ್ಲಿ ಪತ್ತೆಯಾಗಿದ್ದ ನಾರಾಯಣ: ಆಸ್ಪತ್ರೆಗೆ ದಾಖಲಿಸಿದ್ದ ಇರ್ಫಾನಾ ತಂಡ

ಸುಮಾರು 20 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ನಾರಾಯಣ ಅವರು ತೀವ್ರವಾದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಒಂದು ತಿಂಗಳ ಹಿಂದೆ ಅವರು ಅನ್ನ, ಆಹಾರವಿಲ್ಲದೆ ಬಡತನ ಹಾಗೂ ಅಸ್ವಸ್ಥತೆಯಿಂದ ಅಂಗಡಿಯೊಂದರ ಜಗಲಿಯಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಇದನ್ನು ಗಮನಿಸಿದ ವಾರ್ಡ್ ಸದಸ್ಯ ಶರೀಫ್ ಚೀನಾಲ ಅವರು ತಕ್ಷಣವೇ ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಇರ್ಫಾನಾ ಅವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಉಪ್ಪಳ ಶೇಖ್ ಸೈಯದ್ ಫೌಂಡೇಶನ್ ಕಾರ್ಯಕರ್ತರ ನೆರವು ಪಡೆದರು. ಕಾರ್ಯಕರ್ತರು ನಾರಾಯಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.

ಅಂತ್ಯಸಂಸ್ಕಾರಕ್ಕೆ ಯಾರೂ ಬಾರದಿದ್ದಾಗ ನೆರವಾದ ಮುಸ್ಲಿಂ ಮಹಿಳೆ!

ಅತ್ಯಂತ ಬಡತನದ ಕುಟುಂಬ ಹಿನ್ನೆಲೆಯುಳ್ಳ ಇವರ ಮನೆಯಲ್ಲಿ ವೃದ್ಧನ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲು ಕುಟುಂಬದ ಇತರ ಸದಸ್ಯರಾಗಲಿ ಅಥವಾ ಪುರುಷರಾಗಲಿ ಯಾರೂ ಮುಂದೆ ಬರಲಿಲ್ಲ. ಕಾಯಿಲೆಯಿಂದ ತತ್ತರಿಸಿದ್ದ ಕುಟುಂಬವು ಮೃತದೇಹದ ಮುಂದೆ ಅಸಹಾಯಕವಾಗಿ ನಿಂತಿದ್ದ ಈ ಅತ್ಯಂತ ಕಠಿಣ ಸಂದರ್ಭದಲ್ಲಿ ನೆರವಿಗೆ ಧಾವಿಸಿದ್ದು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಇಕ್ಬಾಲ್ (ಇರ್ಫಾನಾ ಅಬ್ದುಲ್ಲಾ).

ಮುಂಚೂಣಿಯಲ್ಲಿ ನಿಂತು ಹಿಂದೂ ಸಂಸ್ಕಾರದಂತೆ ಅಂತ್ಯಕ್ರಿಯೆ:

ಕುಟುಂಬದ ಅಸಹಾಯಕತೆಯನ್ನು ಕಂಡು ಕರಗಿದ ಇರ್ಫಾನಾ ಅವರು, ಕೇವಲ ಸಾಂತ್ವನ ಹೇಳಿ ದೂರ ನಿಲ್ಲದೆ, ತಾವೇ ಮುಂಚೂಣಿಯಲ್ಲಿ ನಿಂತು ಅಂತ್ಯಕ್ರಿಯೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡರು. ಮೃತರ ಹಿನ್ನೆಲೆ ಅಥವಾ ರಾಜಕೀಯ ಸಿದ್ಧಾಂತಗಳ್ಯಾವುದನ್ನೂ ಯೋಚಿಸದ ಇರ್ಫಾನಾ ಅವರು, ಹಿಂದೂ ಧರ್ಮದ ಸಾಂಪ್ರದಾಯಿಕ ವಿಧಿವಿಧಾನಗಳ ಪ್ರಕಾರವೇ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ನಾರಾಯಣ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಿ ಮಾನವೀಯತೆಯ ಹೊಸ ಹಾದಿ ತೋರಿಸಿದರು.

“ಧರ್ಮ, ರಾಜಕೀಯಗಳು ಬೇರೆಯಾಗಿರಬಹುದು, ಆದರೆ ಕಷ್ಟದ ಸಮಯದಲ್ಲಿ ಒಂದು ಕುಟುಂಬಕ್ಕೆ ಆಸರೆಯಾಗುವುದು ನಮ್ಮ ಕರ್ತವ್ಯ” ಎಂದು ಇರ್ಫಾನಾ ಅವರು ಈ ಸಂದರ್ಭದಲ್ಲಿ ಸಾಬೀತುಪಡಿಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ:

ಜಾತಿ, ಮತ ಹಾಗೂ ರಾಜಕೀಯ ಸಿದ್ಧಾಂತಗಳ ಹೆಸರಿನಲ್ಲಿ ಸಮಾಜ ಒಡೆಯುತ್ತಿರುವ ಇಂದಿನ ದಿನಗಳಲ್ಲಿ, ಮುಸ್ಲಿಂ ಸಮುದಾಯದ ಮಹಿಳಾ ಜನಪ್ರತಿನಿಧಿಯೊಬ್ಬರು ಮಾಜಿ ಆರ್‌ಎಸ್‌ಎಸ್ ಕಾರ್ಯಕರ್ತನ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಈ ಘಟನೆ ಇಡೀ ಕಾಸರಗೋಡು ಜಿಲ್ಲೆ ಮಾತ್ರವಲ್ಲದೆ ದೇಶಾದ್ಯಂತ ಜನರ ಹೃದಯ ಮುಟ್ಟಿದೆ. ಇರ್ಫಾನಾ ಇಕ್ಬಾಲ್ ಅವರ ಈ ಹೃದಯವಂತಿಕೆಗೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.




Continue Reading

DEATH

ಕಾಸರಗೋಡು: ಅಡೂರಿನಲ್ಲಿ ಭೀಕರ ದುರಂತ; ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಸಹೋದರರು ಸಾವು, ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯ

Published

on

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಅಡೂರು ಸಮೀಪದ ಸಂಚಕ್ಕಡವ್ (ಪೊನೋರಂ) ಎಂಬಲ್ಲಿ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದು, ಇಬ್ಬರು ಸೋದರ ಸಂಬಂಧಿ ಬಾಲಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು (ಶನಿವಾರ) ಸಂಜೆ ಸಂಭವಿಸಿದೆ

ಅಬೂಬಕರ್ ಎಂಬುವವರ ಪುತ್ರರಾದ ಮುಸಮ್ಮಿಲ್ (14 ವರ್ಷ – 8ನೇ ತರಗತಿ) ಮತ್ತು ಮುನ್ಸಿರ್ (10 ವರ್ಷ – 5ನೇ ತರಗತಿ) ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಇವರ ನೆರೆಮನೆಯ 9 ವರ್ಷದ ಮತ್ತೊಬ್ಬ ಬಾಲಕನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆತನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಮೃತ ಬಾಲಕರು ಸ್ಥಳೀಯ ಅಡೂರು ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ .

ಘಟನೆಯ ವಿವರ: ಶಾಲಾ ರಜಾದಿನಗಳ ಹಿನ್ನೆಲೆಯಲ್ಲಿ ಈ ಮಕ್ಕಳು ತಮ್ಮ ಮನೆಯ ಸಮೀಪದ ರಸ್ತೆ ಬದಿಯಲ್ಲಿದ್ದ ಬಸ್ ಕಾಯುವ ನಿಲ್ದಾಣದ (Bus Waiting Shed) ಬಳಿ ಆಟವಾಡುತ್ತಾ ಪುಟ್ಟದೊಂದು ತಾತ್ಕಾಲಿಕ ಅಂಗಡಿಯನ್ನು ಇಟ್ಟುಕೊಂಡಿದ್ದರು . ಇಂದು ಸಂಜೆ ಕರಾವಳಿ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಕಾರಣ ಮೂವರೂ ಮಕ್ಕಳು ಅದೇ ಶೆಡ್‌ನ ಒಳಗೆ ಕುಳಿತಿದ್ದರು . ಈ ವೇಳೆ ಮಳೆಯ ತೀವ್ರತೆಗೆ ರಸ್ತೆಗಿಂತ ಎತ್ತರದಲ್ಲಿದ್ದ ಇವರ ಮನೆಯ ದೊಡ್ಡ ಕಾಂಪೌಂಡ್ ಗೋಡೆಯು ಏಕಾಏಕಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ .

ಗೋಡೆಯ ಭಾರಿ ಗಾತ್ರದ ಕಲ್ಲುಗಳು ಮತ್ತು ಮಣ್ಣು ನೇರವಾಗಿ ಬಸ್ ಶೆಡ್ ಹಾಗೂ ಅದರೊಳಗಿದ್ದ ಮಕ್ಕಳ ಮೇಲೆ ಬಿದ್ದಿದೆ . ಮಣ್ಣಿನ ರಾಶಿಯಡಿ ಸಿಲುಕಿದ ಮಕ್ಕಳನ್ನು ತಕ್ಷಣವೇ ಸ್ಥಳೀಯರು ರಕ್ಷಿಸಿ ಮುಳ್ಳೇರಿಯಾದ ಆಸ್ಪತ್ರೆಗೆ ಕೊಂಡೊಯ್ದರಾದರೂ, ಇಬ್ಬರು ಸಹೋದರರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು . ಸದ್ಯ ಗಾಯಗೊಂಡ ಮತ್ತೊಬ್ಬ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯಿಂದ ಅಡೂರು ಗ್ರಾಮದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ






Continue Reading

DEATH

ಕಣಜದ ಹುಳು ಕಡಿದು ಶಿಕ್ಷಕ ದಾರುಣ ಸಾವು; ಕೃಷಿ ಭೂಮಿ ಸ್ವಚ್ಛಗೊಳಿಸುವಾಗ ನಡೆದ ದಾಳಿ

Published

on

ಕಾಸರಗೋಡು: ಕೃಷಿ ಜಾಗದ ಪೊದೆ ಕಾಡು ಕಡಿದು ಶುಚೀಕರಿಸುವಾಗ ಕಣಜದ ಹುಳುಗಳ ದಾಳಿಗೆ ಒಳಗಾಗಿ ಶಿಕ್ಷಕರೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಕಾಸರಗೋಡು ಜಿಲ್ಲೆಯ ಬಳಾಂತೋಡು ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ, ಕಾಞಂಗಾಡು ಚಾಮುಂಡಿಕುನ್ನ್ ನಿವಾಸಿ ವಿಜಯನ್ ಮಾಸ್ತರ್ (56) ಮೃತಪಟ್ಟವರು.

ಘಟನೆ ವಿವರ
ಇಂದು ಬೆಳಿಗ್ಗೆ ವಿಜಯನ್ ಮಾಸ್ತರ್ ತಮ್ಮ ಭೂಮಿಯನ್ನು ಕಾರ್ಮಿಕರೊಂದಿಗೆ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಮಣ್ಣಿನ ಹುತ್ತದಲ್ಲಿ ಗೂಡು ಕಟ್ಟಿದ್ದ ಕಣಜದ ಹುಳುಗಳು ಏಕಾಏಕಿ ಗುಂಪಾಗಿ ದಾಳಿ ನಡೆಸಿವೆ.

ಕಣಜದ ಹುಳುಗಳ ತೀವ್ರ ದಾಳಿಗೆ ಒಳಗಾದ ವಿಜಯನ್ ಮಾಸ್ತರ್‌ರನ್ನು ಕೂಡಲೇ ಬಂದಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ನಾಲ್ವರು ಕಾರ್ಮಿಕರಿಗೆ ಗಾಯ
ಇವರ ಜೊತೆಗಿದ್ದ ನಾಲ್ವರು ಕಾರ್ಮಿಕರೂ ಕಣಜದ ಹುಳು ಕಡಿತಕ್ಕೆ ಒಳಗಾಗಿದ್ದಾರೆ. ಅದೃಷ್ಟವಶಾತ್ ಅವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ.

ಈ ಅಧ್ಯಯನ ವರ್ಷವೇ ಸೇವಾ ನಿವೃತ್ತಿ ಪಡೆಯಲು ಸಿದ್ಧತೆಯಲ್ಲಿದ್ದ ವಿಜಯನ್ ಮಾಸ್ತರ್ ದಾರುಣವಾಗಿ ಮೃತಪಟ್ಟಿರುವುದು ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಊರವರನ್ನು ಕಣ್ಣೀರಲ್ಲಿ ಮುಳುಗಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿತ್ತು ಎಂದು ಸ್ಥಳೀಯರು ಕಂಬನಿ ಮಿಡಿದಿದ್ದಾರೆ.



Continue Reading

Trending

Copyright © 2025 Deevatige

error: Content is protected !!