Connect with us

Uncategorized

ವಿಟ್ಲ ಬೊಬ್ಬೆಕೇರಿ ರಸ್ತೆ ಪುನರ್ ನಿರ್ಮಾಣ ಕಾಮಗಾರಿ: ಜೂನ್ 5 ರಿಂದ 3 ತಿಂಗಳ ಕಾಲ ವಾಹನ ಸಂಚಾರ ಮಾರ್ಗ ಬದಲಾವಣೆ

Published

on

ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಡೂರು-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ವಿಟ್ಲ ಸಮೀಪದ ಬೊಬ್ಬೆಕೇರಿ ಎಂಬಲ್ಲಿ ರಸ್ತೆ ಪುನರ್ ನಿರ್ಮಾಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಜೂನ್ 5 ರಿಂದ ಮುಂದಿನ 3 ತಿಂಗಳ ಅವಧಿಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳಾದ ದರ್ಶನ್ ಎಚ್.ವಿ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಬಂಟ್ವಾಳ ಉಪವಿಭಾಗದ ಮನವಿ ಹಾಗೂ ಮಂಗಳೂರು ಉಪವಿಭಾಗಾಧಿಕಾರಿಗಳ ವರದಿ ಆಧಾರಿಸಿ ಈ ಕೆಳಗಿನಂತೆ ಬದಲಿ ಮಾರ್ಗಗಳನ್ನು ನಿಗದಿಪಡಿಸಲಾಗಿದೆ.

ಬದಲಿ ಸಂಚಾರ ಮಾರ್ಗಗಳ ವಿವರ:

ಲಘು ವಾಹನಗಳಿಗೆ (ದ್ವಿಚಕ್ರ, ನಾಲ್ಕು ಚಕ್ರದ ವಾಹನ ಹಾಗೂ ಬಸ್‌ಗಳು): ಸಾರಡ್ಕ ಮತ್ತು ವಿಟ್ಲ ಕಡೆಯಿಂದ ಮಂಗಳಪದವು, ಕಲ್ಲಡ್ಕ ಕಡೆಗೆ ಸಂಚರಿಸುವ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು ಹಾಗೂ ಬಸ್‌ಗಳು ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ ಬಳಿ ಇರುವ ಬದ್ರಿಯಾ ಟೆಕ್ಸ್‌ಟೈಲ್ಸ್ ರಸ್ತೆಯಾಗಿ ಅನಂತೇಶ್ವರ, ಪಂಚಲಿಂಗೇಶ್ವರ, ಅಯ್ಯಪ್ಪ ದೇವಸ್ಥಾನ ಹಾಗೂ ಸುರಕ್ಷಾ ಆಸ್ಪತ್ರೆ ಮಾರ್ಗವಾಗಿ ಬೊಬ್ಬೆಕೇರಿ ತಲುಪಿ ಮುಂದೆ ಸಾಗಬೇಕು.

ಕಲ್ಲಡ್ಕ ಕಡೆಯಿಂದ ಬರುವ ವಾಹನಗಳು: ಕಲ್ಲಡ್ಕ ಕಡೆಯಿಂದ ವಿಟ್ಲಕ್ಕೆ ಆಗಮಿಸುವ ಎಲ್ಲಾ ವಾಹನಗಳಿಗೆ ಪ್ರಸ್ತುತ ಇರುವ ಹಳೆಯ ರಸ್ತೆಯಲ್ಲೇ ಏಕಮುಖ ಸಂಚಾರಕ್ಕೆ (One-way) ಅವಕಾಶ ಕಲ್ಪಿಸಲಾಗಿದೆ.

ಭಾರಿ ಘನ ವಾಹನಗಳಿಗೆ ನಿಷೇಧ: ನಾಲ್ಕು ಮಾರ್ಗ ಜಂಕ್ಷನ್‌ನಿಂದ ದೇವಸ್ಥಾನ ರಸ್ತೆಯಾಗಿ ಬೊಬ್ಬೆಕೇರಿಗೆ ಹೋಗುವ ಮಾರ್ಗದಲ್ಲಿ ಭಾರಿ ಘನ ವಾಹನಗಳ (10 ಚಕ್ರ ಹಾಗೂ ಅದಕ್ಕಿಂತ ಮೇಲ್ಪಟ್ಟ) ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಭಾರಿ ವಾಹನಗಳು ಕಬಕ ರಸ್ತೆಯ ಮೂಲಕ ಪರ್ಯಾಯವಾಗಿ ಸಂಚರಿಸಲು ಸೂಚಿಸಲಾಗಿದೆ.

ಸದರಿ ಬದಲಿ ರಸ್ತೆ ಮಾರ್ಗಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲು ಹಾಗೂ ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಈ ತಾತ್ಕಾಲಿಕ ಬದಲಾವಣೆಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಕಡಬ: ಕಾಣೆಯಾಗಿದ್ದ ನವವಿವಾಹಿತೆ ಶಿವಮೊಗ್ಗದ ತವರಿನಲ್ಲಿ ಪ್ರತ್ಯಕ್ಷ; ನಿಟ್ಟುಸಿರು ಬಿಟ್ಟ ಕುಟುಂಬಸ್ಥರು!

Published

on

ಕಡಬ: ತಾಲ್ಲೂಕಿನ ನೂಜಿಬಾಳ್ತಿಲ ಗ್ರಾಮದಿಂದ ಚಿನ್ನಾಭರಣಗಳ ಸಮೇತ ನಿಗೂಢವಾಗಿ ನಾಪತ್ತೆಯಾಗಿದ್ದ ನವವಿವಾಹಿತೆ ಕೊನೆಗೂ ಶಿವಮೊಗ್ಗದ ತನ್ನ ತವರು ಮನೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಆತಂಕದಲ್ಲಿದ್ದ ಕುಟುಂಬಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನೀರಾರಿ ಮನೆ ನಿವಾಸಿ ಮೊಹಮ್ಮದ್ ಆಶಿಕ್ (29) ಎಂಬವರ ಪತ್ನಿ ಆರ್ ಫೈನ್ ಮಹ್ತಾಬ್ (18) ಕಾಣೆಯಾದ ಯುವತಿ. ಈಕೆ ಜೂನ್ 7ರ ನಸುಕಿನ ಜಾವ ಗಂಡನ ಮನೆಯಿಂದ ಯಾರಿಗೂ ತಿಳಿಸದೆ ದಿಢೀರ್ ನಾಪತ್ತೆಯಾಗಿದ್ದಳು.

ಮೇ 31 ರಂದು ನಡೆದಿತ್ತು ನಿಕಾಹ್‌:

ಎಫ್.ಐ.ಆರ್. ವಿವರಗಳ ಪ್ರಕಾರ, ಮೊಹಮ್ಮದ್ ಆಶಿಕ್ ಅವರಿಗೂ, ಶಿವಮೊಗ್ಗದ ಕೆ.ಆರ್. ಪುರಂ ರೋಡ್ ನಿವಾಸಿ ಶೇಖ್ ಫಾಯಾಜ್ ಹಮೀದ್ ಅವರ ಮಗಳು ಆರ್ ಫೈನ್ ಮಹ್ತಾಬ್ ಅವರಿಗೂ ಕಳೆದ ಮೇ 31 ರಂದು ಭಾನುವಾರ ಶಿವಮೊಗ್ಗದ ರಿಜ್ವಾನ್ ಮಸೀದಿಯ ಖಾಜಿಗಳ ಸಮಕ್ಷಮದಲ್ಲಿ ಮುಸ್ಲಿಂ ಧಾರ್ಮಿಕ ವಿಧಿವಿಧಾನದಂತೆ ವಿವಾಹ ನಡೆದಿತ್ತು. ಜೂನ್ 2 ರಂದು ಕಲ್ಲುಗುಡ್ಡೆಯ ಜೆ.ಜೆ. ಪ್ಲಾಜಾದಲ್ಲಿ ಮದುವೆ ಔತಣಕೂಟ (ಡಿನ್ನರ್) ಏರ್ಪಡಿಸಲಾಗಿತ್ತು. ಬಳಿಕ ಜೂನ್ 5 ರಂದು ತಂದೆ-ತಾಯಿ ಮಹ್ತಾಬ್‌ಳನ್ನು ನೂಜಿಬಾಳ್ತಿಲದಲ್ಲಿರುವ ಗಂಡನ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದರು.

ಗಂಡನ ಮೊಬೈಲ್‌ನಲ್ಲಿ ಅಲಾರಾಂ ಸೆಟ್ ಮಾಡಿ ಎಸ್ಕೇಪ್!

ಜೂನ್ 6 ರಂದು ರಾತ್ರಿ ಮನೆಯವರೆಲ್ಲರೂ ಒಟ್ಟಿಗೆ ಊಟ ಮುಗಿಸಿ 10 ಗಂಟೆಗೆ ಮಲಗಿದ್ದರು. ಮಧ್ಯರಾತ್ರಿ 12 ಗಂಟೆಗೆ ಪತಿ ಆಶಿಕ್ ಅವರಿಗೆ ಎಚ್ಚರವಾದಾಗಲೂ ಮಹ್ತಾಬ್ ಪಕ್ಕದಲ್ಲೇ ಮಲಗಿದ್ದಳು. ಆದರೆ, ಜೂನ್ 7ರ ನಸುಕಿನ ಜಾವ 2.00 ಗಂಟೆಗೆ ಆಶಿಕ್ ಅವರ ಮೊಬೈಲ್‌ನಲ್ಲಿ ದಿಢೀರನೆ ಅಲಾರಾಂ ರಿಂಗಣಿಸಿದೆ.

ಅಲಾರಾಂ ಶಬ್ದಕ್ಕೆ ಎದ್ದು ನೋಡಿದ ಆಶಿಕ್ ಅವರಿಗೆ ತೀವ್ರ ಆಘಾತ ಕಾದಿತ್ತು. ಪಕ್ಕದಲ್ಲಿ ಮಲಗಿದ್ದ ಪತ್ನಿ ಮಹ್ತಾಬ್ ಅಲ್ಲಿರಲಿಲ್ಲ! ಗಾಬರಿಗೊಂಡ ಆಶಿಕ್ ಮನೆಯ ಒಳಗೆ, ಹೊರಗೆ ಹಾಗೂ ಪಕ್ಕದಲ್ಲೇ ಇರುವ ಅಣ್ಣನ ಮನೆಯಲ್ಲೂ ಹುಡುಕಾಡಿದ್ದಾರೆ. ಆದರೆ ಎಲ್ಲೂ ಆಕೆ ಪತ್ತೆಯಾಗಿರಲಿಲ್ಲ. ಅಚ್ಚರಿಯ ವಿಷಯವೆಂದರೆ, ತಾನು ಎದ್ದು ಹೋಗುವ ಮುನ್ನ ಪತಿಯ ಮೊಬೈಲ್‌ನಲ್ಲಿ ಆಕೆಯೇ ನಸುಕಿನ ಜಾವ 2 ಗಂಟೆಗೆ ಅಲಾರಾಂ ಸೆಟ್ ಮಾಡಿಟ್ಟು, ತನ್ನ ಮೈಮೇಲಿದ್ದ ಚಿನ್ನಾಭರಣಗಳ ಸಮೇತ ಯಾರಿಗೂ ತಿಳಿಯದಂತೆ ಮನೆಯಿಂದ ಜಾಗ ಖಾಲಿ ಮಾಡಿದ್ದಾಳೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ತವರು ಮನೆಯಲ್ಲಿ ಲ್ಯಾಂಡ್; ಫೈಲ್ ಕ್ಲೋಸ್‌ಗೆ ಕಡಬಕ್ಕೆ ಬರಬೇಕಷ್ಟೇ!

ಮಹತ್ವಾಕಾಂಕ್ಷಿ ಹುಡುಕಾಟದ ಬಳಿಕ, ತವರು ಮನೆಗೂ ಮಾಹಿತಿ ನೀಡಿ, ಪತಿ ಆಶಿಕ್ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಿದ್ದಂತೆಯೇ, ಮಹ್ತಾಬ್ ಶಿವಮೊಗ್ಗದ ತನ್ನ ತವರು ಮನೆಗೆ ಸುರಕ್ಷಿತವಾಗಿ ಬಂದು ತಲುಪಿರುವ ಸಮಾಧಾನಕರ ಸುದ್ದಿ ಬಂದಿದೆ.

ಆದರೆ, ಮದುವೆಯಾದ ಕೇವಲ ವಾರದಲ್ಲೇ, ಅಷ್ಟು ನಸುಕಿನ ಜಾವ ಪತಿಯ ಮೊಬೈಲ್‌ನಲ್ಲಿ ತಾನೇ ಅಲಾರಾಂ ಇಟ್ಟು ಚಿನ್ನಾಭರಣಗಳೊಂದಿಗೆ ನಾಪತ್ತೆಯಾಗಲು ಅಸಲಿ ಕಾರಣವೇನು? ಎಂಬುದು ಇನ್ನು ನಿಗೂಢವಾಗಿದೆ. ಸದ್ಯ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ, ಕಾನೂನಾತ್ಮಕ ತನಿಖೆಯ ಫೈಲ್ ಕ್ಲೋಸ್ ಮಾಡಲು ಯುವತಿಯನ್ನು ಕಡಬಕ್ಕೆ ಕರೆತರಬೇಕಾಗಿದ್ದು, ಪೊಲೀಸರ ವಿಚಾರಣೆಯ ಬಳಿಕವಷ್ಟೇ ಈ ಹೈಡ್ರಾಮಾದ ಹಿಂದಿನ ನೈಜ ಕಾರಣ ಬೆಳಕಿಗೆ ಬರಬೇಕಿದೆ




Continue Reading

theft

ವಿಟ್ಲ ವ್ಯಾಪ್ತಿಯಲ್ಲಿ ಮತ್ತೆ ಬ್ಯಾಟರಿ ಕಳ್ಳರ ಅಟ್ಟಹಾಸ: ಒಂದೇ ರಾತ್ರಿ 4 ಲಾರಿಗಳ ಬ್ಯಾಟರಿ ಕಳ್ಳತನ!

Published

on

ವಿಟ್ಲ: ಮಳೆಗಾಲ ಆರಂಭವಾಗುತ್ತಿದ್ದಂತೆ ರಾತ್ರಿ ಹೊತ್ತು ರಸ್ತೆಬದಿ ಹಾಗೂ ಮೈದಾನಗಳಲ್ಲಿ ನಿಲ್ಲಿಸುವ ವಾಹನಗಳ ಬ್ಯಾಟರಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುವ ಖದೀಮರ ಗ್ಯಾಂಗ್ ವಿಟ್ಲ ಪರಿಸರದಲ್ಲಿ ಮತ್ತೆ ಸಕ್ರಿಯವಾಗಿದೆ. ಭಾನುವಾರ ರಾತ್ರಿ ಒಂದೇ ದಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಪ್ರತ್ಯೇಕ ವಾಹನಗಳ ಬ್ಯಾಟರಿಗಳನ್ನು ಚೋರರು ಕದ್ದೊಯ್ದಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸಾಲೆತ್ತೂರು ಮತ್ತು ಕುಡ್ತಮುಗೇರಿನಲ್ಲಿ ರಾತ್ರಿ ಹೊತ್ತು ನಿಲ್ಲಿಸಿದ್ದ ಪಿಕಪ್ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಇದೀಗ ಮತ್ತೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಅಳಕೆಮಜಲಿನಲ್ಲಿ ಎರಡು ಲಾರಿಗಳ ಬ್ಯಾಟರಿ ಕಳವು:

ಅಳಕೆಮಜಲು ಮಸೀದಿ ಆವರಣದ ಹೊರಗಡೆ ಎಂದಿನಂತೆ ಭಾನುವಾರ ರಾತ್ರಿ ನಿಲ್ಲಿಸಲಾಗಿದ್ದ ಎರಡು ಲಾರಿಗಳ ಬ್ಯಾಟರಿಗಳನ್ನು ಚೋರರು ಎಗರಿಸಿದ್ದಾರೆ. ಪ್ರವೀಣ್ ಶೆಟ್ಟಿ ಎಂಬವರಿಗೆ ಸೇರಿದ ಗೂಡ್ಸ್ ಲಾರಿ ಹಾಗೂ ಸೋನಾ ಸಾಗರ್ ಇಬ್ರಾಹಿಂ ಎಂಬವರ ಲಾರಿಗಳ ಬ್ಯಾಟರಿಗಳು ಕಳವಾಗಿವೆ. ಸೋಮವಾರ ಬೆಳಗ್ಗೆ ಚಾಲಕರು ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಮತ್ತೆರಡು ಕಡೆ ಕಳ್ಳತನ:

ಇದೇ ರಾತ್ರಿ ಅಳಕೆಮಜಲು ಜಂಕ್ಷನ್‌ನಿಂದ ಸ್ವಲ್ಪ ಮುಂದಕ್ಕೆ ನಿನ್ನಿಕಲ್ಲು ಸಂಪರ್ಕಿಸುವ ಅಡ್ಡರಸ್ತೆ ಬಳಿ ನಿಲ್ಲಿಸಲಾಗಿದ್ದ ಕೋಳಿ ಸಾಗಾಟದ ಲಾರಿಯಿಂದಲೂ ಬ್ಯಾಟರಿಯನ್ನು ಕದಿಯಲಾಗಿದೆ. ಇದರೊಂದಿಗೆ ಉಕ್ಕುಡ ಚೆಕ್‌ಪೋಸ್ಟ್ ಸಮೀಪದ ಮಸೀದಿ ಬಳಿಯ ಮೈದಾನದಲ್ಲಿ ನಿಲ್ಲಿಸಿದ್ದ ಮತ್ತೊಂದು ಲಾರಿಯ ಬ್ಯಾಟರಿಯನ್ನೂ ಖದೀಮರು ಹೊತ್ತೊಯ್ದಿದ್ದಾರೆ.

ನಾಲ್ಕು ತಿಂಗಳ ಹಿಂದೆಯೂ ನಡೆದಿತ್ತು ಸರಣಿ ಕಳ್ಳತನ:

ವಿಟ್ಲ ಪರಿಸರದಲ್ಲಿ ಬ್ಯಾಟರಿ ಕಳ್ಳರ ಕಾಟ ಇದೇ ಮೊದಲಲ್ಲ. ಇನ್ನು ಸುಮಾರು 4 ತಿಂಗಳ ಹಿಂದೆಯೂ (ಫೆಬ್ರವರಿ ತಿಂಗಳಲ್ಲಿ) ಇದೇ ರೀತಿ ಕಳ್ಳರು ಸರಣಿ ಕಳ್ಳತನ ನಡೆಸಿ ಅಟ್ಟಹಾಸ ಮೆರೆದಿದ್ದರು. ಕೇವಲ 3 ದಿನಗಳ ಅವಧಿಯಲ್ಲಿ ವಿಟ್ಲದ ಕಲ್ಯಾಣಿ ರಸ್ತೆ, ಜಯನಗರ, ಒಕ್ಕೆತ್ತೂರು ಸೇರಿದಂತೆ ವಿಟ್ಲ ಕಸಬಾ ಮತ್ತು ಪೆರುವಾಯಿ ಪರಿಸರದಲ್ಲಿ ನಿಲ್ಲಿಸಲಾಗಿದ್ದ ಒಟ್ಟು 9 ವಾಹನಗಳ ಬ್ಯಾಟರಿಗಳನ್ನು ಕಳ್ಳರು ಲೂಟಿ ಮಾಡಿದ್ದರು. ಆಗಲೂ ಲಾರಿ, ಟಿಪ್ಪರ್, ಪಿಕಪ್ ಹಾಗೂ ಜೆಸಿಬಿ ವಾಹನಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡಲಾಗಿತ್ತು.

ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಕಳ್ಳರು ಅದೇ ಚಾಳಿಯನ್ನು ಮುಂದುವರಿಸಿರುವುದು ವಾಹನ ಮಾಲೀಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ – ಪೊಲೀಸರಿಗೆ ದೂರು:

ವಿಟ್ಲ ವ್ಯಾಪ್ತಿಯಲ್ಲಿ ಭಾನುವಾರ ಒಂದೇ ರಾತ್ರಿ ಒಟ್ಟು ನಾಲ್ಕು ವಾಹನಗಳ ಬ್ಯಾಟರಿ ಕಳ್ಳತನ ನಡೆದಿರುವ ಬಗ್ಗೆ ಲಾರಿ ಚಾಲಕರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳರ ಕರಾಮತ್ತು ಸ್ಥಳೀಯ ಸಿಸಿಟಿವಿ (CC Camera) ಕ್ಯಾಮರಾಗಳಲ್ಲಿ ದಾಖಲಾಗಿದ್ದು, ಪೊಲೀಸರು ಈ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

ವಿಶೇಷ ಸೂಚನೆ (ವಾಹನ ಸವಾರರ ಗಮನಕ್ಕೆ): ಮಳೆಗಾಲದ ಕತ್ತಲನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವುದರಿಂದ, ವಾಹನ ಮಾಲೀಕರು ರಾತ್ರಿ ವೇಳೆ ಜನಸಂದಣಿ ಇರುವ ಅಥವಾ ಸಿ.ಸಿ. ಕ್ಯಾಮರಾ ನಿಗಾ ಇರುವ ಸುರಕ್ಷಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವಂತೆ ವಿನಂತಿಸಲಾಗಿದೆ.




Continue Reading

Politics

ಸಿದ್ದರಾಮಯ್ಯರೊಂದಿಗೆ ನಿಮ್ಮ ಪೋಟೋ ಬೇಕು; ನೀವು ಸಿಎಂ ಆದಾಗ ಡಿಸಿಎಂ ಪೋಟೋ ಬೇಡವೇ ?

Published

on

ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಕಾರ್ಯಕ್ರಮದ ಸರ್ಕಾರಿ ಜಾಹೀರಾತಿನಲ್ಲಿ ಉಪ ಮುಖ್ಯಮಂತ್ರಿ ಹಾಗೂ ಪ್ರಮುಖ ದಲಿತ ನಾಯಕ ಡಾ. ಜಿ. ಪರಮೇಶ್ವರ್ ಅವರ ಭಾವಚಿತ್ರವನ್ನು ಕೈಬಿಟ್ಟಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ಧೋರಣೆಯನ್ನು ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳ (ಜೆಡಿಎಸ್) ಕಟುವಾಗಿ ಟೀಕಿಸಿದೆ.

ಸಾಮಾಜಿಕ ನ್ಯಾಯದ ಬಗ್ಗೆ ನಿರಂತರವಾಗಿ ಮಾತನಾಡುವ ಕಾಂಗ್ರೆಸ್‌ನ ನಿಜವಾದ ಮುಖ ಇಂದು ಬಯಲಾಗಿದೆ ಎಂದು ಆರೋಪಿಸಿರುವ ಜೆಡಿಎಸ್, ತನ್ನ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ನೇರ ವಾಗ್ದಾಳಿ ನಡೆಸಿದೆ.

ಜೆಡಿಎಸ್ ಹಂಚಿಕೊಂಡಿರುವ ಎಕ್ಸ್ (ಟ್ವಿಟರ್) ಪೋಸ್ಟ್ ಇಲ್ಲಿದೆ:

“2025ರಲ್ಲಿ ತಮಗೊಂದು ನ್ಯಾಯ, 2026ರಲ್ಲಿ ದಲಿತರಿಗೊಂದು ನ್ಯಾಯವೇ? ದಲಿತ ನಾಯಕ DCM ಆದಾಗ ಫೋಟೋಗೆ ಜಾಗವಿಲ್ಲವೇ ಮುಖ್ಯಮಂತ್ರಿಗಳೇ?

ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯದ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ದೇವರಾಜ ಅರಸು ಅವರ ಕಾರ್ಯಕ್ರಮದ ಜಾಹೀರಾತಿನಲ್ಲೇ ಹಾಲಿ ಉಪ ಮುಖ್ಯಮಂತ್ರಿ ಹಾಗೂ ಪ್ರಮುಖ ದಲಿತ ನಾಯಕ ಡಾ. ಜಿ. ಪರಮೇಶ್ವರ್ ಅವರ ಚಿತ್ರವನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ.

ನೀವೇ ಉಪ ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಫೋಟೋ ಕಡ್ಡಾಯವಾಗಿತ್ತು. ಆದರೆ, ಈಗ ಒಬ್ಬ ದಲಿತ ನಾಯಕ ಉಪ ಮುಖ್ಯಮಂತ್ರಿಯಾಗಿದ್ದಾಗ ಅವರ ಫೋಟೋಗೆ ಜಾಗ ಇಲ್ಲವೇ ಮುಖ್ಯಮಂತ್ರಿಗಳೇ?”

ಜನತಾದಳ (ಸೆಕ್ಯುಲರ್) / @JanataDal_S

ಏಕಸ್ವಾಮ್ಯ ಧೋರಣೆಯ ಪ್ರದರ್ಶನ: ಹಿಂದುಳಿದ ಹಾಗೂ ದಲಿತ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ದೇವರಾಜ ಅರಸು ಅವರ ಹೆಸರಿನ ಕಾರ್ಯಕ್ರಮದ ಜಾಹೀರಾತಿನಲ್ಲೇ ದಲಿತ ಸಮುದಾಯದ ಪ್ರಮುಖ ನಾಯಕರಾಗಿರುವ ಡಾ. ಜಿ. ಪರಮೇಶ್ವರ್ ಅವರನ್ನು ಕಡೆಗಣಿಸಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಜಾಹೀರಾತಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರ ಮಾತ್ರ ಪ್ರಕಟವಾಗಿದ್ದು, ಉಪ ಮುಖ್ಯಮಂತ್ರಿಗಳ ಫೋಟೋ ಮಿಸ್ ಆಗಿರುವುದನ್ನು ಮುಂದಿಟ್ಟುಕೊಂಡು ಕಿಡಿಕಾರಿರುವ ಜೆಡಿಎಸ್, “ಡಿ.ಕೆ. ಶಿವಕುಮಾರ್ ಅವರು ತಮ್ಮ ಏಕಸ್ವಾಮ್ಯ ಧೋರಣೆ ಮತ್ತು ಅಹಂಕಾರವನ್ನು ಪ್ರದರ್ಶಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕಳೆದ ವರ್ಷ ತಾವಿದ್ದ ಸ್ಥಾನದಲ್ಲಿ ಬೇರೊಬ್ಬರು, ಅದರಲ್ಲೂ ದಲಿತ ಸಮುದಾಯದ ನಾಯಕರೊಬ್ಬರು ಬಂದಾಗ ಕಾಂಗ್ರೆಸ್ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂಬ ಆರೋಪ ಈಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.




Continue Reading

Trending

Copyright © 2025 Deevatige

error: Content is protected !!