Connect with us

Bantawala

ವಿಟ್ಲ ಜಾತ್ರೆಯ ಸಂತೆ ಮಳಿಗೆಗಳ ಗೋಲ್‌ಮಾಲ್ ಬೆಳಕಿಗೆ… ಇದು ಪಂಚಲಿಂಗೇಶ್ವರನ ಮಹಿಮೆ

Published

on

ವಿಟ್ಲ : ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯಲ್ಲಿ ಸಂತೆ ವ್ಯಾಪಾರದ ಗುತ್ತಿಗೆ ಪಡೆದ ವ್ಯಕ್ತಿಯೋರ್ವ ಸಂತೆ ವ್ಯಾಪಾರಸ್ಥರಿಂದ ಬೇಕಾಬಿಟ್ಟಿ ಬಾಡಿಗೆ ಕಿತ್ತುಕೊಂಡು ಪಂಚಾಯತ್‌ ಅಧ್ಯಕ್ಷರಿಗೆ ಸನ್ಮಾನ ಮಾಡಿ ಕೈತೊಳೆದುಕೊಂಡ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ನ್ಯಾಯಕ್ಕಾಗಿ ಬಡ ವ್ಯಾಪಾರಸ್ಥರು ಪಂಚಾಯತಿನ ಮೆಟ್ಟಿಲೇರಿದ್ದಾರೆ.
ಸಂತೆ ವ್ಯಾಪಾರದಲ್ಲಿ ಮಿತಿಮೀರಿದ ಬ್ರೋಕರ್‌ಗಳ ಹಾವಳಿಯಿಂದ ಬಡ ವ್ಯಾಪಾರಸ್ಥರಿಗೆ ನಿರಂತರವಾಗಿ ಆಗುತ್ತಿರುವ ಅನ್ಯಾಯದ ವಿರುದ್ಧ ಗಟ್ಟಿ ಧ್ವನಿ ಎತ್ತುತ್ತಿದ್ದ ಮಹೇಶ್‌ದಾಸ್ ಎಂಬಾತನೇ ಇದೀಗ ವಿಟ್ಲ ಜಾತ್ರೆಯ ಸಂತೆ ಮಳಿಗೆಗಳ ಗುತ್ತಿಗೆಯನ್ನು ವಹಿಸಿಕೊಂಡು ಬಡ ವ್ಯಾಪಾರಸ್ಥರಲ್ಲಿ ಒಂದಕ್ಕೆ ಎರಡುಪಟ್ಟು ಬಾಡಿಗೆ ವಸೂಲಾತಿ ಮಾಡಿಕೊಂಡು ಮೋಸ ಎಸಗಿದ ಸಂತೆ ವ್ಯಾಪಾರಿಗಳ ಅಧ್ಯಕ್ಷ ಎಂದು ತಿಳಿದುಬಂದಿದೆ.


ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಕುತ್ಯಾಡಿ ನಿವಾಸಿ ಲಕ್ಷ್ಮೀಶ ಎಂಬ ಸಂತೆ ವ್ಯಾಪಾರಸ್ಥರು ಪಂಚಾಯತ್‌ಗೆ ದೂರು ನೀಡಿದವರಾಗಿದ್ದು, ‌ ತನ್ನ ವ್ಯಾಪಾರದ ಬಾಬ್ತು ಪಂಚಾಯತ್‌ ನಿಯಮಗಳನ್ನು ಮೀರಿ ಗುತ್ತಿಗೆದಾರ ಅಧಿಕ ಬಾಡಿಗೆಯನ್ನು ತನ್ನಿಂದ ವಸೂಲಾತಿ ಮಾಡಿರುವನೆಂದು ಆರೋಪಿಸಿದ್ದಾರೆ. ನಾನು, ನನ್ನ ಅಣ್ಣ, ನನ್ನ ಚಿಕ್ಕಮ್ಮ, ಹೇಮಂತ್‌, ಸುಬಾಶ್‌, ಪ್ರಸಾದ್‌ ಮತ್ತು ಅವರ ಪತ್ನಿ ಹಾಗೆ ಸುಮಾರು 10 ಜನ ವ್ಯಾಪಾರಸ್ಥರು ಜ,28ರಂದು ದೂರು ಸಲ್ಲಿಸಿದ್ದೇವೆ ಎಂದು ಲಕ್ಷ್ಮೀಶ ಮಾದ್ಯಮಕ್ಕೆ ತಿಳಿಸಿದ್ದಾರೆ.

ವಿಟ್ಲದ ಜಾತ್ರೆಯ ನೊಂದ ಸಂತೆ ವ್ಯಾಪಾರಸ್ಥ ಲಕ್ಷ್ಮೀಶ ಅವರು ಮಾದ್ಯಮದೊಂದಿಗೆ ಮಾತನಾಡಿದ ಆಡಿಯೋ ಕೇಳಿಸಿಕೊಳ್ಳಿ


ಮಹೇಶ್‌ ವಿರುದ್ಧ ಸಂತೆ ಮಳಿಗೆಗಳ ವಸೂಲಾತಿಯಲ್ಲಿ ದೊಡ್ಡ ಮಟ್ಟದಲ್ಲಿ ಅವ್ಯವಹಾರ ಮತ್ತು ಮೋಸ ಮಾಡಿರುವುದಾಗಿ ವಿಟ್ಲ ಪಟ್ಟಣ ಪಂಚಾಯತ್‌ಗೆ ಲಿಖಿತ ದೂರು ನೀಡಿದ್ದು, ಒಟ್ಟು 65 ಅಂಗಡಿಮಳಿಗೆಗಳ ಲೆಕ್ಕ ಸಿಕ್ಕಿದ್ದು. ಈ ಪೈಕಿ ಇನ್ನು ಹೆಚ್ಚುವರಿ 25 ಅಂಗಡಿಗಳ ಹಣ ಬರಬೇಕಾಗಿದೆ ಅದಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದಿರುವ ಪಂಚಾಯತ್‌ ಖಂಡಿತಾ ಆತನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ಪಂಚಾಯತ್‌ ಟೆಂಡರ್‌ ಪ್ರಕಾರ ಜಾತ್ರಾ ಸಂತೆಗಾಗಿ 10ಅಡಿ ಜಾಗಕ್ಕೆ 10ಸಾವಿರ ಬಾಡಿಗೆ, 1800 ರೂ. ಜಿಎಸ್‌ಟಿ ಹಾಗೂ ಆತನೇ ಟೆಂಡರ್‌ ಪ್ರಕ್ರಿಯೆಯಲ್ಲಿ ನಿಗದಿ ಪಡಿಸಿದ 1900 ರೂ. ಸೇರಿ ಒಟ್ಟು 13700 ರೂ. ಆಗಿರುತ್ತದೆ. ಆದರೆ ಈತ ಬಡ ವ್ಯಾಪಾರಸ್ಥರಿಂದ 20 ಅಡಿ ಜಾಗಕ್ಕೆ 27400 ರೂ. ಪಡೆದುಕೊಳ್ಳಬೇಕಾದ ಬದಲು 35000.00 ಪಡೆದುಕೊಂಡಿರುತ್ತಾನೆ. ಹಾಗೆಯೇ 10 ಫೀಟ್‌ ಅಂಗಡಿಗೆ 15 ಸಾವಿರ ಮತ್ತು 15 ಫೀಟ್‌ ನ ಅಂಗಡಿಗೆ 10 ಫೀಟ್‌ ಸ್ಥಳದ ರಶೀದಿ ನೀಡಿ 18000/20000 ಹಣವನ್ನು ಕೊಡುವಂತೆ ದಮ್ಕಿ ಹಾಕಿ ಪಡೆದಿರುವುದಾಗಿದೆ ಎಂದು ಆರೋಪಿಸಿದ್ದಾರೆ.
ದೂರುದಾರ ಲಕ್ಷ್ಮೀಶ್‌ ಮತ್ತು ಆತನ ಸಹೋದರ ನವನೀತ್‌ ಸಂತೆ ವ್ಯಾಪಾರಸ್ಥರಾಗಿದ್ದು, ಅವರು ಪಡೆದುಕೊಂಡ 20 ಫೀಟ್‌ ಅಂಗಡಿಯ ಸ್ಥಳಾವಕಾಶಕ್ಕೆ 27400 ಆಗಿದ್ದು, 35000 ರೂ. ಪಡೆದುಕೊಂಡು ಮೋಸ ಮಾಡಿರುವುದಾಗಿದೆ. ಈ ಮೊದಲು ಮದ್ಯವತಿಗಳ ವಿರುದ್ಧ ಹೋರಾಡುತಿದ್ದ ಮಹೇಶ್‌ ಈಗ ಸ್ವತಃ ತಾನೇ ಬ್ರೋಕರ್ ಆಗಿ ಧಮ್ಕಿ ಹಾಕಿದ ಘಟನೆ ನಡೆದಿದ್ದು ಬಡ ವ್ಯಾಪಾರಸ್ಥರಾದ ನಮಗೆ ಮೋಸ ಆಗಿದೆ ಎಂದು ತಿಳಿಸಿದ್ದಾರೆ.
40 ಅಂಗಡಿಗಳ ಲೆಕ್ಕಾಚಾರದಲ್ಲಿ ಪಂಚಾಯತ್‌ಗೆ ಹಣ ಪಾವತಿಸಿದ್ದು, ಪಂಚಾಯತ್‌ ಸಾರ್ವಜನಿಕ ಭಕ್ತಾದಿಗಳ ಮತ್ತು ಮಾದ್ಯಮದವರ ಒತ್ತಡಕ್ಕೆ ಈಗಾಗಲೇ ಸಂತೆ ಅಂಗಡಿಗಳನ್ನು ಎಣಿಸಿ 65 ಎಂದು ಲೆಕ್ಕ ಮಾಡಿದ್ದು, ಹೆಚ್ಚುವರಿ ಬಾಡಿಗೆ ಅಂಗಡಿಗಳ ಹಣವನ್ನು ಗುತ್ತಿಗೆದಾರನಿಂದ ವಸೂಲಾತಿ ಮಾಡಿ ಕೊಳ್ಳುತ್ತೇವೆ ಎಂದು ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿಗಳವರು ಮಾದ್ಯಮಕ್ಕೆ ತಿಳಿಸಿದ್ದಾರೆ.
ಸಂತೆ ವ್ಯಾಪಾರಸ್ಥರ ಅಧ್ಯಕ್ಷ ,ಹಿಂದೂ ಜಾತ್ರೆ ವ್ಯಾಪಾರಸ್ಥರ ಅಧ್ಯಕ್ಷ ,ಜಿಲ್ಲಾ ಅಧ್ಯಕ್ಷ ಎಂದೆಲ್ಲಾ ಹೇಳಿಕೊಳ್ಳುತ್ತಿರುವ ಮಹೇಶ್‌ ವಿಟ್ಲ ಜಾತ್ರೆಯ ಸುಸಂದರ್ಭದಲ್ಲಿಯೇ ಜನಪ್ರತಿನಿಧಿಗಳ ಮನವೊಲಿಸಲು ಸಂತೆ ವ್ಯಾಪಾರದ ಹೆಸರಿನಲ್ಲಿ ಪಂಚಾಯತ್‌ ಅಧ್ಯಕ್ಷರಿಗೆ ಸನ್ಮಾನ ಮಾಡುವಾಗಲೇ ಸಂತೆ ಗೋಲ್‌ ಮಾಲ್‌ ಬಯಲಾಗಿದೆ.

ಬಡ ವ್ಯಾಪಾರಸ್ಥರಿಗೆ ಬತ್ತಿಯಿಟ್ಟು, ಪಂಚಾಯತನ್ನು ಏಮಾರಿಸಿ ಅಧಿಕಾರಿಗಳನ್ನು ತನ್ನ ಕಪಿಮುಷ್ಠಿಯೊಳಗೆ ಇರಿಸಿಕೊಳ್ಳುವ ಗುತ್ತಿಗೆದಾರರೇ ಅಥವಾ ಜಾತ್ರೆ ಹೆಸರಲ್ಲಿ ಗುಳುಂ ಮಾಡುವ ಭಕ್ತ ವೇಷದಾರಿಗಳೇ ಕಾಲಾವಧಿಗೆ ನಡೆದುಕೊಂಡು ಬಂದಿರುವ ಜಾತ್ರೋತ್ಸವ ಶ್ರದ್ಧಾ ಕೇಂದ್ರಗಳು ದೇವರ ಹೆಸರಿನಲ್ಲಿ ಜೇಬು ತುಂಬಿಸಿಕೊಳ್ಳಲು ಇರುವ ಧಾರ್ಮಿಕ ಜೂಜು ಕೇಂದ್ರವಲ್ಲ. ಹಿಂದೂ ಧಾರ್ಮಿಕ ಆಚರಣೆಯಲ್ಲಿ ಭಕ್ತಾದಿಗಳಿಗೆ ಸಂತೆ ಸಾಮಾನುಗಳ ಅಧಿಕ ಹೊರೆ ಬೀಳಬಾರದೆಂದು ಪಂಚಾಯತ್‌ ಅತೀ ಕಡಿಮೆ ಬಾಡಿಗೆಗೆ ಅಂಗಡಿ ಮಳಿಗೆಗಳನ್ನು ನೀಡಿರುವಾಗ ಬಡ ವ್ಯಾಪಾರಸ್ಥರ ಮೇಲೆ ಅಪ್ರಯೋಜಿತವಾಗಿ ಹೇರುವ ಬಾಡಿಗೆ ದರಗಳು ನೇರವಾಗಿ ಭಕ್ತರ ಜೇಬಿಗೆ ಬೀಳುತ್ತದೆ ಎಂಬುವುದು ಸುಳ್ಳಲ್ಲ.
ನಾಳೆಯೂ ಪಂಚಾಯತ್‌ಗೆ ಇನ್ನೂ 3-4 ಜನ ವ್ಯಾಪಾರಸ್ಥರು ಬಂದು ದೂರು ನೀಡಲಿದ್ದೇವೆ ಎಂದು ಲಕ್ಷ್ಮೀಶ ತಿಳಿಸಿದ್ದಾರೆ. ಕೊನೆಗೂ ವಿಟ್ಲ ಜಾತ್ರೆಯ ಸಂತೆ ಮಳಿಗೆಗಳ ಗೋಲ್‌ ಮಾಲ್‌ ಬಯಲಿಗೆ ಬಂದೇ ಬಿಟ್ಟಿದೆ. ಎಲ್ಲವೂ ಪಂಚಲಿಂಗೇಶ್ವರನ ಮಹಿಮೆ.

Continue Reading
Advertisement

Bantawala

ವಿಟ್ಲದಲ್ಲಿ ಬಡಕಾರ್ಮಿಕೆ ರಾಜೇಶ್ವರಿಯವರ ಮನೆ ಬೆಂಕಿಗಾಹುತಿ

Published

on

ವಿಟ್ಲ ಸಮೀಪದ ವೀರಕಂಬ ಗ್ರಾಮದ ಗಣೇಶ್ ಕೋಡಿ ನಿವಾಸಿ ಕಾರ್ಮಿಕೆಯಾಗಿರುವ ರಾಜೇಶ್ವರಿ ಎಂಬವರ ಮನೆ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಹೊತ್ತಿ ಉರಿದ ಘಟನೆಯೊಂದು ಪೆ.10ರಂದು ಸಂಭವಿಸಿದ್ದು, ಬಡ ನಿರ್ಗತಿಕ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.


ಮನೆಯೊಡತಿ ರಾಜೇಶ್ವರಿ ಅವರು ಎಂದಿನಂತೆ ಬೆಳಗ್ಗೆ ಬೀಗ ಹಾಕಿ ಅಡಿಕೆ ಗಾರ್ಬನ್ ಕೆಲಸಕ್ಕೆ ಹೋಗಿದ್ದರೆ ಮಕ್ಕಳಿಬ್ಬರು ಶಾಲೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡು ಮನೆಯನ್ನು ಭಸ್ಮ ಮಾಡಿದೆ.

ಮನೆಯಿಂದ ವಿಪರೀತ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣ ಜಮಾಯಿಸಿ ಬೆಂಕಿಯನ್ನು ನಂದಿಸುವಷ್ಟರಲ್ಲಿಯೇ ಮನೆಯೊಳಗಿದ್ದ ಮಕ್ಕಳ ಬಟ್ಟೆಬರೆ ಶಾಲಾ ಪುಸ್ತಕಗಳು, ಮನೆಯ ದಾಖಲೆಪತ್ರಗಳು ಸೇರಿದಂತೆ ಮನೆಯೊಳಗಿದ್ದ ವಸ್ತುಗಳು ಕರಟಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಬಡ ಕಾರ್ಮಿಕೆ ಗಾರ್ಬಲ್‌ ಕೆಲಸಕ್ಕೆ ಹೋಗಿ ದುಡಿದು ಜೀವನ ಸಾಗಿಸುತ್ತಿದ್ದು, ಮನೆ ಬೆಂಕಿಗಾಹುತಿಯಾದ ಘಟನೆಯಿಂದ ತೀವ್ರ ಅಸ್ವಸ್ಥರಾಗಿದ್ದು, ಅವರ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

Continue Reading

accident

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ದುರ್ಮರಣ..

Published

on

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ನಿಧನರಾಗಿದ್ದಾರೆ. ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗದಲ್ಲಿದ್ದ ನಿಶಿತ್ ಊರಿಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು ತಡರಾತ್ರಿ 2-30ರ ಸುಮಾರಿಗೆ ಚೆನ್ನರಾಯಪಟ್ಟಣ ಹೊರವಲಯದಲ್ಲಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ನಿಶಿತ್ ನಾಯ್ಕ್ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾಗಿ ಗುರುತಿಸಿಕೊಂಡಿದ್ದರು.


ಪುಣಚ ಗ್ರಾಮದ ಬುಡಲೆ ನಿವಾಸಿ, ಮಾಜಿ ಸೈನಿಕರಾಗಿರುವ ಕುಂಞಣ್ಣ ನಾಯ್ಕ್ ಪುತ್ರ ನಿಧನದ ಸುದ್ದಿ ಗ್ರಾಮಸ್ಥರ ಅತೀವ ದು:ಖಕ್ಕೆ ಕಾರಣವಾಗಿದೆ. ಮೃತರು ತಂದೆ ಕುಂಞಣ್ಣ ನಾಯ್ಕ, ತಾಯಿ ರಾಧಾ ಹಾಗೂ ಓರ್ವ ಸಹೋದರಿ ನಿಶಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇದೀಗ ಹಾಸನದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಪ್ರಾರ್ಥಿವ ಶರೀರ ಪುಣಚ ಗ್ರಾಮ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

Continue Reading

Bantawala

ಕುಟುಂಬದ ಯಜಮಾನರಾಗಿ ಪೂಂಜರಬೆಟ್ಟು ಕೇಶವ ಭಂಡಾರಿ; ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್‌ ರಚನಾ ಸಭೆ

Published

on

ವಿಟ್ಲ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಸಮೀಪದ ಕುದ್ರಿಯ ತರವಾಡಿನ ನೂತನ ಯಜಮಾನರಾಗಿ ಹಿರಿಯ ದೈವ ಚಾಕಿರಿಯವರಾದ ಪೂಂಜರಬೆಟ್ಟು ಕೇಶವ ಭಂಡಾರಿ ಆಯ್ಕೆಯಾಗಿದ್ದಾರೆ. ಟ್ರಸ್ಟಿಗಳು ಮತ್ತು ಕುಟುಂಬಿಕರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್‌ ರಚನೆಯ ಸಭೆ ನಡೆಯಿತು.

ಹಿಂದಿನ ಟ್ರಸ್ಟಿಗಳ ಮರಣ, ರಾಜೀನಾಮೆ, ಹಾಗೂ ವಜಾಗೊಂಡ ಸದಸ್ಯರ ಸ್ಥಾನಕ್ಕೆ ನೂತನ ಟ್ರಸ್ಟಿಗಳನ್ನು ಆಯ್ಕೆ ಮಾಡಲಾಯಿತು. ಕುದ್ರಿಯ ಗುತ್ತು ಟ್ರಸ್ಟಿನ ನೂತನ ಗೌರವಾಧ್ಯಕ್ಷರಾಗಿ ವಿಠಲ ಮೋನಪ್ಪ ಶೆಟ್ಟಿ ನಾಂದೇಡ್, ಅಧ್ಯಕ್ಷರಾಗಿ ಚಂದ್ರಹಾಸ ಎಂ ಶೆಟ್ಟಿ ಅಳಕೆಮಜಲು, ಉಪಾಧ್ಯಕ್ಷರಾಗಿ ರೋಹಿಣಿ ರೈ ನೇರಳಕಟ್ಟೆ, ಹಾಗೂ ಚಂದ್ರಹಾಸ ರೈ ಮುಲ್ಕಾಜೆ ಮಾ ಡ, ಕಾರ್ಯದರ್ಶಿಯಾಗಿ ಗಣೇಶ್‌ ರೈ, ಕೋಶಾಧಿಕಾರಿಯಾಗಿ ಧನಂಜಯ ಶೆಟ್ಟಿ ಮುತ್ತೂರು, ಇವರನ್ನು ಟ್ರಸ್ಟಿಗಳ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇವರನ್ನು ಕುಟುಂಬಿಕರ ಮತ್ತು ಟ್ರಸ್ಟಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

Continue Reading

Trending

Copyright © 2025 Deevatige