Connect with us

INTERNATIONAL

ಇರಾನ್‌ನ ಸರ್ವೋಚ್ಚ ನಾಯಕನ ಸಾವು ; ಖಮೇನಿ X ನಲ್ಲಿ ಕೊನೆಯ ಕುತೂಹಲಕಾರಿ ಪೋಸ್ಟ್ ​! ಖಮೇನಿ ಸಾವನ್ನು ದೃಢಪಡಿಸಿದ ಇರಾನ್‌

Published

on

ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ (Ali Khamenei) ಅವರು ಇಸ್ರೇಲ್ ಮತ್ತು ಅಮೆರಿಕಾದ ಸಂಯುಕ್ತ ವಾಯು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್‌ನ ರಾಜ್ಯ ಮಾಧ್ಯಮಗಳು ಅಧಿಕೃತವಾಗಿ ದೃಢಪಡಿಸಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಮೊದಲು ಈ ಸುದ್ದಿಯನ್ನು ಘೋಷಿಸಿದ್ದರು. ಖಮೇನಿ ಅವರು ತಮ್ಮ ತೆಹ್ರಾನ್‌ನಲ್ಲಿರುವ ಕಚೇರಿಯಲ್ಲಿ ದಾಳಿಯ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.

ಇರಾನ್ ಸರ್ಕಾರವು ಖಮೇನಿ ಅವರ ನಿಧನದ ನಂತರ 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ಇದು ಇರಾನ್‌ನ ಇತಿಹಾಸದಲ್ಲಿ ಒಂದು ಪ್ರಮುಖ ತಿರುವು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಖಮೇನಿ ಅವರು 1989ರಿಂದ ಸುಪ್ರೀಂ ಲೀಡರ್ ಆಗಿ 36 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಅವರು ಇರಾನ್‌ನ ಇಸ್ಲಾಮಿಕ್ ಕ್ರಾಂತಿಯ ನಂತರದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು ಮತ್ತು ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧದ ಕಠಿಣ ನಿಲುವಿಗೆ ಹೆಸರುವಾಸಿಯಾಗಿದ್ದರು.

ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ನಿಧನರಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಆದರೆ ಈ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಖಮೇನಿ ಅವರ ಖಾತೆಯಿಂದ ಒಂದು ನಿಗೂಢ ಸಂದೇಶವನ್ನು ಹಂಚಿಕೊಳ್ಳಲಾಗಿದೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಸಾವು ವಿಶ್ವದಾದ್ಯಂತ ದೊಡ್ಡ ಸುದ್ದಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಈ ಸಾವನ್ನು ಘೋಷಿಸಿದ್ದರು. ಆದರೆ ಕೂಡಲೇ, ಖಮೇನಿ ಅವರ ಅಧಿಕೃತ X (ಟ್ವಿಟರ್) ಖಾತೆಯಿಂದ ಒಂದು ನಿಗೂಢ ಸಂದೇಶ ಬಂದಿದೆ. ಇದು ಪರ್ಷಿಯನ್ ಭಾಷೆಯಲ್ಲಿ ಬರೆದಿದ್ದು, ಇದು ಈಗ ಎಲ್ಲೆಡೆ ವೈರಲ್​ ಆಗಿದೆ. ಜೊತೆಗೆ ಹಲವು ಅನುಮಾನಕ್ಕೆ ಕಾರಣವಾಗಿದೆ.

ಖಮೇನಿ ಸಾವಿನ ಬಗ್ಗೆ ಟ್ರಂಪ್​ ಘೋಷಣೆ; ಖಮೇನಿ ಕೊನೆಯ ಪೋಸ್ಟ್​ ವೈರಲ್​!
ಟ್ರಂಪ್ ಖಮೇನಿ ಸಾವಿನ ಬಗ್ಗೆ ಪೋಸ್ಟ್ ತಡರಾತ್ರಿ ಮಾಡಿದ್ದಾರೆ. ಅವರು ಹೇಳಿದ್ದು, “ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ನಿಧನರಾಗಿದ್ದಾರೆ. ಅತ್ಯಾಧುನಿಕ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಬಳಸಿ ಅವರನ್ನು ಪತ್ತೆ ಮಾಡಲಾಯಿತು. ಇರಾನ್ ಜನರಿಗೆ ತಮ್ಮ ದೇಶವನ್ನು ಮರಳಿ ಪಡೆಯಲು ಇದು ದೊಡ್ಡ ಅವಕಾಶ” ಎಂದಿದ್ದಾರೆ. ಈ ಬೆನ್ನಲ್ಲೇ ಖಮೇನಿ ಪೋಸ್ಟ್​ ವೈರಲ್​ ಆಗಿದೆ. ಇದು ಪರ್ಷಿಯನ್ ಭಾಷೆಯಲ್ಲಿ ಬರೆದಿದ್ದು, “ಬಿ ನಮ್-ಎ ನಮಿ-ಯೇ ಹೇದರ್, ಅಲೈಹಿಸ್-ಸಲಾಮ್” ಎಂದು ಇದೆ. ಇದರ ಅರ್ಥ “ಹೈದರ್ (ಅವರಿಗೆ ಶಾಂತಿ ಸಿಗಲಿ)”, ಹೈದರ್ ಅಂದರೆ ಮೊದಲ ಶಿಯಾ ಇಮಾಮ್ ಅಲಿ ಅವರ ಹೆಸರು. ಈ ಸಂದೇಶ ಸಾವಿನ ನಂತರ ಬಂದಿದ್ದು, ವಿಶ್ವದಲ್ಲಿ ಚರ್ಚೆಗೆ ಕಾರಣವಾಗಿದೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ನಂತರ, ಟೆಹ್ರಾನ್‌ನ ಬೀದಿಗಳಲ್ಲಿ ಹರ್ಷೋದ್ಗಾರಗಳು ಕೇಳಿಬಂದಿವೆ.

ಇರಾನ್​ನಲ್ಲಿ 40 ದಿನಗಳ ರಾಷ್ಟ್ರೀಯ ಶೋಕಾಚರಣೆ
ಇರಾನ್ ಸರ್ಕಾರಿ ದೂರದರ್ಶನ ಭಾನುವಾರ ಬೆಳಿಗ್ಗೆ ಈ ಸಾವನ್ನು ದೃಢಪಡಿಸಿತು. ಅವರು 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದರು. ಖಮೇನಿ ಅವರ ಮಗಳು, ಮೊಮ್ಮಗಳು, ಸೊಸೆ ಮತ್ತು ಅಳಿಯ ಸೇರಿದಂತೆ ಕುಟುಂಬದ ಹಲವು ಸದಸ್ಯರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ. ಇದಲ್ಲದೆ, ಇರಾನ್ ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್ ಮೊಹಮ್ಮದ್ ಪಕ್‌ಪೌರ್ ಕೂಡ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.

ಖಮೇನಿ ಕೊನೆಯ ಪೋಸ್ಟ್​ ವೈರಲ್​!
ನಿಗೂಢ ಸಂದೇಶದ ಬಗ್ಗೆ ಹೇಳುವುದಾದರೆ, ಖಮೇನಿ ಅವರ ಪರ್ಷಿಯನ್ X ಖಾತೆ @Khamenei_fa ನಿಂದ ಈ ಪೋಸ್ಟ್ ಬಂದಿದೆ. ಇದು ಹೈದರ್ ಅಂದರೆ ಅಲಿ ಅವರನ್ನು ಸ್ಮರಿಸುತ್ತದೆ. ಸಾವಿನ ನಂತರ ಬಂದಿದ್ದರಿಂದ, ಇದು ಪೂರ್ವನಿಗದಿತ ಅಥವಾ ಹ್ಯಾಕ್ ಆಗಿರಬಹುದು ಎಂದು ಚರ್ಚೆಯಾಗಿದೆ.

ಈ ಘಟನೆ ಮಧ್ಯಪ್ರಾಚ್ಯದಲ್ಲಿ ದೊಡ್ಡ ಬದಲಾವಣೆ ತರಬಹುದು. ಇಸ್ರೇಲ್ ಮತ್ತು ಅಮೆರಿಕ ದಾಳಿ ಮಾಡಿದ ನಂತರ, ಇರಾನ್ ಪ್ರತೀಕಾರ ತೀರಿಸಿಕೊಳ್ಳಬಹುದು. ಸೌದಿ ಅರೇಬಿಯಾ ಮತ್ತು ಇತರ ದೇಶಗಳು ಇರಾನ್ ದಾಳಿಗಳನ್ನು ಖಂಡಿಸಿವೆ. ಕತಾರ್ ಸಮುದ್ರ ಸಂಚಾರವನ್ನು ತಾತ್ಕಾಲಿಕ ನಿಲ್ಲಿಸಿದೆ. ಇರಾನ್ ಅಮೆರಿಕ ಸೈನ್ಯ ಬೇಸ್‌ಗಳ ಮೇಲೆ ದಾಳಿ ಮಾಡಿದೆ ಎಂದು ವರದಿಗಳಿವೆ.
ಇರಾನ್ ಜನರ ಪ್ರತಿಕ್ರಿಯೆ ಮಿಶ್ರವಾಗಿದೆ. ಕೆಲವರು ಸಂತೋಷಪಡುತ್ತಿದ್ದರೆ, ಇನ್ನು ಕೆಲವರು ದುಃಖದಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಹರಿದಾಡುತ್ತಿವೆ, ಅಲ್ಲಿ ಜನರು ಆಘಾತ ಮತ್ತು ಸಂತೋಷದ ಕಣ್ಣೀರು ಸುರಿಸುತ್ತಿದ್ದಾರೆ. ಇರಾನ್ ವಿರೋಧಿ ನಾಯಕರು ಇದನ್ನು ಆಚರಣೆಯಂತೆ ನೋಡುತ್ತಾರೆ. ರೆಜಾ ಪಹ್ಲವಿ ಅವರು “ಇಸ್ಲಾಮಿಕ್ ರಿಪಬ್ಲಿಕ್ ಅಂತ್ಯಗೊಂಡಿದೆ” ಎಂದು ಹೇಳಿದ್ದಾರೆ.

ಪ್ರತಿಕಾರಕ್ಕೆ ಪ್ರತಿಜ್ಞೆ ಮಾಡಿದ ಇರಾನ್

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತುತ್ತತುದಿಗೇರಿದೆ. ಇರಾನ್‌ನ (Iran) ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಸಾವು ವಿಶ್ವದಾದ್ಯಂತ ದೊಡ್ಡ ಆಘಾತ ಉಂಟುಮಾಡಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಅವರು ಕೊಲ್ಲಲ್ಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ದೃಢಪಡಿಸಿವೆ. ಇದರ ನಂತರ, ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) “ಇತಿಹಾಸದ ಅತ್ಯಂತ ಉಗ್ರ ಆಕ್ರಮಣಕಾರಿ ಕಾರ್ಯಾಚರಣೆ” ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ಇದು ಯುದ್ಧದ ಭೀತಿಯನ್ನು ಹೆಚ್ಚಿಸಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲ ಇರಾನ್ ಅನ್ನು ಮುನ್ನಡೆಸಿದ ಮತ್ತು ದೇಶದ ರಾಜಕೀಯ ಮತ್ತು ಮಿಲಿಟರಿ ಮಾರ್ಗವನ್ನು ರೂಪಿಸಿದ ಅಯತೊಲ್ಲಾ ಅಲಿ ಖಮೇನಿ ಅವರು 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕಾ ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ ಅಯತೊಲ್ಲಾ ಅಲಿ ಖಮೇನಿ ಅವರನ್ನ ಕೊಲ್ಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ ಖಮೇನಿ ಸಾವನ್ನು ಇರಾನ್ ಕೂಡ ದೃಢಪಡಿಸಿದೆ.
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಶನಿವಾರ ಅಮೆರಿಕದ ಬೆಂಬಲದೊಂದಿಗೆ ನಡೆಸಿದ ಇಸ್ರೇಲಿ ದಾಳಿಯಲ್ಲಿ ಸಾವನ್ನಪ್ಪಿದರು. ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಖಮೇನಿ ಅವರ ಮರಣವನ್ನು ಘೋಷಿಸಿದರು. ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ನಾಯಕರಲ್ಲಿ ಖಮೇನಿ ಒಬ್ಬರು. ಅವರು 1989 ರಲ್ಲಿ 50 ನೇ ವಯಸ್ಸಿನಲ್ಲಿ ಸರ್ವೋಚ್ಚ ನಾಯಕರಾದರು ಮತ್ತು ಫೆಬ್ರವರಿ 28, 2026 ರಂದು ಸಾಯುವವರೆಗೂ ಅಧಿಕಾರದಲ್ಲಿದ್ದರು.

ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೋಕಾಚರಣೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khameni) ಅವರ ಸಾವು ವಿಶ್ವದಾದ್ಯಂತ ದೊಡ್ಡ ಸುದ್ದಿಯಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಅವರು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಇರಾನ್‌ನಲ್ಲಿ ಮಾತ್ರವಲ್ಲ, ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದಲ್ಲೂ ದುಃಖದ ಅಲೆ ಎಬ್ಬಿಸಿದೆ. ಗ್ರಾಮದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
ಅಲಿಪುರ ಗ್ರಾಮದಲ್ಲಿ ಕಪ್ಪು ಬಾವುಟಗಳನ್ನು ಪ್ರದರ್ಶಿಸಿ, ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಜನರು ಖಮೇನಿ ಅವರನ್ನು ಸ್ಮರಿಸುತ್ತಿದ್ದಾರೆ. ಇದು ಗ್ರಾಮದ ಇರಾನ್ ಸಂಬಂಧಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ

ಖಮೇನಿ ಅವರು ಶಿಯಾ ಇಸ್ಲಾಂನ ಕೇಂದ್ರ ವ್ಯಕ್ತಿ, ಹೀಗಾಗಿ ಅವರ ಸಾವು ಗ್ರಾಮಸ್ಥರಿಗೆ ವೈಯಕ್ತಿಕ ನಷ್ಟದಂತೆ ಕಾಣುತ್ತದೆ. ಗ್ರಾಮದಲ್ಲಿ ಖಮೇನಿ ಅವರ ಮಾರ್ಗದರ್ಶನವನ್ನು ಈ ಗ್ರಾಮದಲ್ಲಿ ಅನುಸರಿಸುತ್ತಾರೆ ಎಂದು ಹೇಳಲಾಗುತ್ತದೆ. 1981-82ರಲ್ಲಿ ಖಮೇನಿ ಅವರು ಅಲಿಪುರಕ್ಕೆ ಭೇಟಿ ನೀಡಿದ್ದರು ಎಂಬ ಐತಿಹಾಸಿಕ ನೆನಪುಗಳು ಇವೆ.

Continue Reading
Advertisement

drugs

ಭಾರತಕ್ಕೂ ಎಂಟ್ರಿ ಕೊಟ್ಟಿತೇ ‘ಜಾಂಬಿ ಡ್ರಗ್’? ಚಂಡೀಗಢದಲ್ಲಿ ಡೆಲಿವರಿ ಬಾಯ್ ವಿಲಕ್ಷಣ ವರ್ತನೆ; ವಿಡಿಯೋ ವೈರಲ್!

Published

on

ಅಮೆರಿಕದಂತಹ ದೇಶಗಳನ್ನು ನಡುಗಿಸಿರುವ ಭೀಕರ ‘ಜಾಂಬಿ ಡ್ರಗ್’ (Zombie Drug) ಈಗ ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಇದಕ್ಕೆ ಪೂರಕವೆಂಬಂತೆ ಚಂಡೀಗಢದಲ್ಲಿ ನಡೆದ ವಿಲಕ್ಷಣ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಚಂಡೀಗಢದ ಸೆಕ್ಟರ್ 33B ವಸತಿ ಪ್ರದೇಶದಲ್ಲಿ ಬ್ಲಿಂಕಿಟ್ (Blinkit) ಸಂಸ್ಥೆಯ ಡೆಲಿವರಿ ಬಾಯ್ ಒಬ್ಬರು ಸುಮಾರು 2 ರಿಂದ 2.5 ಗಂಟೆಗಳ ಕಾಲ ರಸ್ತೆಯಲ್ಲೇ ಯಾವುದೇ ಚಲನೆಯಿಲ್ಲದೆ, ಅರೆಪ್ರಜ್ಞಾವಸ್ಥೆಯಲ್ಲಿ ನಿಂತಿದ್ದ ಘಟನೆ ನಡೆದಿದೆ. ಬೆನ್ನಿನ ಮೇಲೆ ಡೆಲಿವರಿ ಬ್ಯಾಗ್ ಹೊತ್ತು, ಬಾಯಲ್ಲಿ ಬೀಡಿ ಇಟ್ಟುಕೊಂಡಿದ್ದ ಈ ಯುವಕ, ಸುತ್ತಮುತ್ತಲಿನ ಯಾವುದೇ ಅರಿವಿಲ್ಲದೆ ಕಲ್ಲಿನಂತೆ ಜಡವಾಗಿ ನಿಂತಿದ್ದನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅನೇಕ ಬಳಕೆದಾರರು ಇದನ್ನು ಅಮೆರಿಕದಲ್ಲಿ ಜನಜೀವನವನ್ನು ನಾಶಪಡಿಸುತ್ತಿರುವ ಫೆಂಟನಿಲ್ (Fentanyl) ಅಥವಾ ಜಾಂಬಿ ಡ್ರಗ್‌ನ ಪರಿಣಾಮ ಎಂದು ಬಣ್ಣಿಸಿದ್ದಾರೆ. “ಭಾರತಕ್ಕೂ ಈ ಮಾರಕ ಡ್ರಗ್ ಎಂಟ್ರಿ ಕೊಟ್ಟಿದೆಯೇ? ಇದು ನಿಜಕ್ಕೂ ಅಪಾಯಕಾರಿ ಮುನ್ಸೂಚನೆ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಯುವಕನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಏನಿದು ‘ಜಾಂಬಿ ಡ್ರಗ್’?
ಸಾಮಾನ್ಯವಾಗಿ ಪ್ರಾಣಿಗಳಿಗೆ ನೋವು ನಿವಾರಕವಾಗಿ ಬಳಸುವ ಕ್ಸೈಲಜಿನ್ (Xylazine) ಎಂಬ ಟ್ರ್ಯಾಂಕ್ವಿಲೈಜರ್ ಅನ್ನು ‘ಜಾಂಬಿ ಡ್ರಗ್’ ಎಂದು ಕರೆಯಲಾಗುತ್ತದೆ. ಇದನ್ನು ಫೆಂಟನಿಲ್, ಮಾರ್ಫಿನ್ ಅಥವಾ ಹೆರಾಯಿನ್‌ನಂತಹ ಮಾದಕ ವಸ್ತುಗಳೊಂದಿಗೆ ಬೆರೆಸಿ ಸೇವಿಸಿದಾಗ ಮನುಷ್ಯರು ತಮ್ಮ ಪ್ರಜ್ಞೆ ಕಳೆದುಕೊಂಡು, ದೇಹದ ಮೇಲೆ ಹತೋಟಿಯಿಲ್ಲದೆ ವಿಚಿತ್ರವಾಗಿ ವರ್ತಿಸುತ್ತಾರೆ. ಅಮೆರಿಕದಲ್ಲಿ ಈ ಡ್ರಗ್‌ನಿಂದಾಗಿ ಸಾವಿರಾರು ಯುವಕರು ಬೀದಿಗಳಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ವರದಿಯಾಗಿದೆ. ಚಂಡೀಗಢದ ಈ ಘಟನೆ ಮಾದಕ ವ್ಯಸನದ ಪರಿಣಾಮವೋ ಅಥವಾ ಆರೋಗ್ಯ ಸಮಸ್ಯೆಯೋ ಎಂಬುದು ವೈದ್ಯಕೀಯ ವರದಿ ಬಂದ ನಂತರವಷ್ಟೇ ತಿಳಿದುಬರಬೇಕಿದೆ. ಆದರೆ, ಈ ವಿಡಿಯೋ ಮಾತ್ರ ಭಾರತೀಯರಲ್ಲಿ ಹೊಸ ಆತಂಕವನ್ನಂತೂ ಸೃಷ್ಟಿಸಿದೆ.

Continue Reading

INTERNATIONAL

ನೇಪಾಳದಲ್ಲಿ ಪತನಗೊಂಡ ಹೆಲಿಕಾಪ್ಟರ್: ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು

Published

on

ಕಾಠ್ಮಂಡು: ನೇಪಾಳದ ಕಾಠ್ಮಂಡುವಿನಿಂದ ಮೈತಂಗ್ ಜಿಲ್ಲೆಗೆ ಮೃತದೇಹವನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರ್ ಒಂದು ಬುಧವಾರ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್‌ನಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
‘ಏರ್ ಡೈನಾಸ್ಟಿ’ (Air Dynasty) ಸಂಸ್ಥೆಗೆ ಸೇರಿದ 9N-AFQ ನೋಂದಣಿ ಸಂಖ್ಯೆಯ ಹೆಲಿಕಾಪ್ಟರ್ ಮೈತಂಗ್ ಜಿಲ್ಲೆಯ ಬಾಲಬೇಸಿಯ ಕೃಷಿ ಭೂಮಿಯಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹತೋಟಿ ತಪ್ಪಿದ ಹೆಲಿಕಾಪ್ಟರ್ ಬೆಟ್ಟದ ಇಳಿಜಾರಿನಲ್ಲಿ ಉರುಳಿ ಬಿದ್ದಿದ್ದು, ಅದರ ಹಿಂಭಾಗದ ರೆಕ್ಕೆ ಗುಡ್ಡಕ್ಕೆ ಅಪ್ಪಳಿಸಿ ಜಖಂಗೊಂಡಿದೆ.

ಹೆಲಿಕಾಪ್ಟರ್‌ನಲ್ಲಿದ್ದ ಪ್ರಯಾಣಿಕರ ಪೈಕಿ ಒಬ್ಬರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾಠ್ಮಂಡುವಿಗೆ ಕಳುಹಿಸಿಕೊಡಲಾಗಿದೆ. ಪೈಲಟ್ ಸೇರಿದಂತೆ ಉಳಿದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಲ್ಯಾಂಡಿಂಗ್ ಸಮಯದಲ್ಲಿ ಬೀಸುತ್ತಿದ್ದ ಬಲವಾದ ಗಾಳಿ ಅಥವಾ ಹಾರುತ್ತಿದ್ದ ಧೂಳಿನಿಂದಾಗಿ ಪೈಲಟ್ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಅಪಘಾತದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೆಲಿಕಾಪ್ಟರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವುದನ್ನು ಕಾಣಬಹುದು. ಸದ್ಯ ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರವು ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ.

Continue Reading

INTERNATIONAL

ಕುಂಭಮೇಳದ ‘ವೈರಲ್ ಸುಂದರಿ’ ಮೊನಾಲಿಸಾ ಈಗ ಫರ್ಮಾನ್ ಖಾನ್ ಪತ್ನಿ: ಸೋಷಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳ ಸಂಚಲನ!

Published

on

ಕೆಲವು ವರ್ಷಗಳ ಹಿಂದೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ, ಆಕಸ್ಮಿಕವಾಗಿ ಕ್ಯಾಮೆರಾ ಕಣ್ಣಿಗೆ ಬಿದ್ದು ರಾತ್ರೋರಾತ್ರಿ ಇಡೀ ದೇಶದ ಗಮನ ಸೆಳೆದಿದ್ದ ‘ವೈರಲ್ ಯುವತಿ’ ಮೊನಾಲಿಸಾ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಗೆಳೆಯ ಫರ್ಮಾನ್ ಖಾನ್ ಅವರನ್ನು ವರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಕುಂಭಮೇಳದಿಂದ ಮನೆಮಾತಾಗಿದ್ದ ಯುವತಿ
2019ರ ಅರ್ಧ ಕುಂಭಮೇಳದ ಸಮಯದಲ್ಲಿ ಸಾಮಾನ್ಯ ಯುವತಿಯಾಗಿದ್ದ ಮೊನಾಲಿಸಾ ಅವರ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವಿಪರೀತ ವೈರಲ್ ಆಗಿತ್ತು. ಕಪ್ಪು ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದ ಅವರ ನೈಸರ್ಗಿಕ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದರು. “ಕುಂಭಮೇಳದ ಸುಂದರಿ” ಎಂದೇ ಕರೆಯಿಸಿಕೊಂಡಿದ್ದ ಇವರು, ನಂತರ ಮಾಡೆಲಿಂಗ್ ಲೋಕದಲ್ಲೂ ಗುರುತಿಸಿಕೊಂಡಿದ್ದರು.

ಪ್ರೀತಿ ಮತ್ತು ವಿವಾಹದ ಪಯಣ
ವೈರಲ್ ಆದ ನಂತರ ಸಾಕಷ್ಟು ಪ್ರಚಾರ ಸಿಕ್ಕಿದ್ದರೂ, ಮೊನಾಲಿಸಾ ತಮ್ಮ ವೈಯಕ್ತಿಕ ಜೀವನವನ್ನು ಗೌಪ್ಯವಾಗಿಟ್ಟಿದ್ದರು. ಇದೀಗ ಫರ್ಮಾನ್ ಖಾನ್ ಎಂಬುವವರ ಜೊತೆ ಹಸೆಮಣೆ ಏರಿರುವ ಅವರು, ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇವರಿಬ್ಬರ ಮದುವೆಯು ಅಂತರಧರ್ಮೀಯ ವಿವಾಹವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳಿಗೂ ಕಾರಣವಾಗಿದೆ.

ಸಾರಾ ಆಗಿ ಬದಲಾದ ಮೊನಾಲಿಸಾ?
ವರದಿಗಳ ಪ್ರಕಾರ, ಮದುವೆಯ ನಂತರ ಮೊನಾಲಿಸಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ತಮ್ಮ ಹೆಸರನ್ನು ‘ಸಾರಾ’ ಎಂದು ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಮದುವೆಯ ಫೋಟೋಗಳಲ್ಲಿ ಅವರು ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿರುವುದು ಕಂಡುಬಂದಿದೆ.

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದ ಮೊನಾಲಿಸಾ ಅವರ ಮದುವೆ ಫೋಟೋಗಳು ಹೊರಬೀಳುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. “ನಿಮ್ಮ ವೈಯಕ್ತಿಕ ನಿರ್ಧಾರಕ್ಕೆ ನಮ್ಮ ಗೌರವವಿದೆ, ಹೊಸ ಜೀವನ ಸುಖಮಯವಾಗಿರಲಿ” ಎಂದು ಅನೇಕರು ಶುಭ ಹಾರೈಸಿದ್ದಾರೆ. ಆದರೆ, ಅಂತರಧರ್ಮೀಯ ವಿವಾಹ ಮತ್ತು ಮತಾಂತರದ ವಿಚಾರವಾಗಿ ಕೆಲವು ಸಂಪ್ರದಾಯವಾದಿ ನೆಟ್ಟಿಗರು ಟೀಕೆಗಳನ್ನು ಮಾಡುತ್ತಿದ್ದಾರೆ. ಒಟ್ಟಾರೆಯಾಗಿ, ಕುಂಭಮೇಳದ ಆ ಒಂದು ಫೋಟೋದಿಂದ ಶುರುವಾದ ಮೊನಾಲಿಸಾ ಅವರ ಈ ಪಯಣ ಈಗ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ

ತಿರುವನಂತಪುರಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊನಾಲಿಸಾ ಭೋಂಸ್ಲೆ ಮತ್ತು ಅವರ ಪತಿ ಫರ್ಹಾನ್ ಖಾನ್ ತಮ್ಮ ಮದುವೆಯ ಕುರಿತು ಹರಿದಾಡುತ್ತಿದ್ದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ‘ಲವ್ ಜಿಹಾದ್ ನಡೆದಿದೆ’ ಅಥವಾ ‘ಮತಾಂತರ ಮಾಡಲಾಗಿದೆ’ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ದಂಪತಿ, ತಮ್ಮ ಮದುವೆ ಪರಸ್ಪರ ಒಪ್ಪಿಗೆಯೊಂದಿಗೆ ನಡೆದಿದೆ ಮತ್ತು ಇದರಲ್ಲಿ ಯಾವುದೇ ಬಲವಂತ ಅಥವಾ ಮತಾಂತರದ ವಿಷಯವೇ ಇಲ್ಲ ಎಂದು ಹೇಳಿದರು. ಜೊತೆಗೆ, ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿದೆ ಎಂಬ ಆರೋಪಗಳನ್ನೂ ಅವರು ತಳ್ಳಿಹಾಕಿದರು.

Continue Reading

Trending

Copyright © 2025 Deevatige