Connect with us

Dakshina Kannada

ಪಿಲಿಕುಳಕ್ಕೆ ಈಗ ಸಂಕಷ್ಟ, ಅವ್ಯವಸ್ಥೆಯಿಂದ ನರಳುತ್ತಿವೆ ಪ್ರಾಣಿಗಳು! ಸಂಕಷ್ಟದಲ್ಲಿ ಕರ್ನಾಟಕದ ಅತ್ಯಂತ ಸುಂದರ ಮೃಗಾಲಯ ಪಿಲಿಕುಳ

Published

on

ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಮೃಗಾಲಯವನ್ನು ತಕ್ಷಣವೇ ಮುಚ್ಚಿಬಿಡಿ” ಪಿಲಿಕುಳದಲ್ಲಿ ಪ್ರಾಣಿಗಳ ದಯಾನೀಯ ಸ್ಥಿತಿ ಕಂಡು ಶಾಕ್‌ ಆದ ನ್ಯಾಯಾದೀಶರು
ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಅವ್ಯವಸ್ಥೆ ಮತ್ತು ನಿರ್ಲಕ್ಷ್ಯದ ಬಗ್ಗೆ ದೂರು. ಪ್ರವಾಸಿಗರ ಮೊದಲ ಆಯ್ಕೆ ಆಗಿದ್ದ ಈ ಜಾಗಕ್ಕೆ ಈಗ ಸಂಕಷ್ಟ, ಅವ್ಯವಸ್ಥೆಯಿಂದ ನರಳುತ್ತಿವೆ ಪ್ರಾಣಿಗಳು!
ಈಗ ಅವ್ಯವಸ್ಥೆಯಿಂದ ಸಂಕಷ್ಟ ಅನುಭವಿಸುತ್ತಿದೆ. ತುಕ್ಕುಪಂಜರ, ಅಶುಚಿ ನೀರು, ಲೈಸೆನ್ಸ್ ಇಲ್ಲದೆ ಕಾರ್ಯನಿರ್ವಹಣೆ, ಪ್ರಾಣಿಗಳ ದಯನೀಯ ಸ್ಥಿತಿ ಹೈಕೋರ್ಟ್ ನ್ಯಾಯಾಧೀಶರನ್ನು ಶಾಕ್ ಮಾಡಿದೆ.

ಮಂಗಳೂರು: ಅರಬ್ಬಿ ಸಮುದ್ರದ ತಡಿಯ ಮಂಗಳೂರಿನಲ್ಲಿರೋ (Mangaluru) ಈ ಪಿಲಿಕುಳ ದೇಶದ ಅತ್ಯಂತ ನೈಸರ್ಗಿಕವಾದ ಮೃಗಾಲಯಗಳಲ್ಲಿ ಒಂದು ಅಂತಲೇ ಹೆಸರುವಾಸಿ. ಮಂಗಳೂರು ಪಿಲಿಕುಳ ಪಾರ್ಕ್,270 ಎಕರೆಗಳಲ್ಲಿ ಹಬ್ಬಿದ್ದು, ‘ಪಿಲಿ’ ಅಂದ್ರೆ ಹುಲಿ, ‘ಕುಳ’ ಅಂದ್ರೆ ಕೆರೆ. ಒಂದು ಕಾಲದಲ್ಲಿ ಹುಲಿಗಳು (Tigers) ಬಂದು ನೀರು ಕುಡಿಯುತ್ತಿದ್ದ ಈ ಜಾಗವನ್ನ ಇಂದು ಅಂತರಾಷ್ಟ್ರೀಯ ಮಟ್ಟದ ಜೈವಿಕ ಉದ್ಯಾನವನವಾಗಿ ರೂಪಿಸಲಾಗಿದೆ. ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರೋ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರೋ ಪಿಲಿಕುಳ, ಕರಾವಳಿಗೆ ಬರೋ ಪ್ರವಾಸಿಗರ ಮೊದಲ ಆಯ್ಕೆ. ಅಂತಹ ಸುಂದರ ತಾಣ ಇಂದು ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. ಪಿಲಿಕುಳದ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಅಂದ್ರೆ, ಇಲ್ಲಿನ ಅವ್ಯವಸ್ಥೆ, ಪ್ರಾಣಿಗಳ ದಯಾನೀಯ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಧೀಶರೇ ಶಾಕ್ ಆಗಿದ್ದಾರೆ. ಮಂಗಳೂರಿನ ಪ್ರವಾಸಿಗರ ಹಾಟ್ ಫೇವರೆಟ್ ಪಿಲಿಕುಳ ಮೃಗಾಲಯಕ್ಕೀಗ ಇಂತಹದೊಂದು ಸಂಕಷ್ಟ ಎದುರಾಗಿದೆ. ಇದು ಇಲ್ಲಿರೋ ಮೂಕ ಪ್ರಾಣಿಗಳಿಂದಾದ ತಪ್ಪಲ್ಲ. ಬದಲಾಗಿ ಇಲ್ಲಿನ ಆಡಳಿತ ವ್ಯವಸ್ಥೆಯಿಂದ ಸ್ವಯಂ ಕೃತ ಅಪರಾಧ. ತುಕ್ಕು ಹಿಡಿದ ಪಂಜರ, ತುಕ್ಕು ಹಿಡಿದ ಪಂಜರ, ಕಲುಷಿತ ನೀರು ಅಶುಚಿ ವಾತಾವರಣ ಇದು ಪಿಲಿಕುಳ ಮೃಗಾಲಯದ ಸದ್ಯದ ಸ್ಥಿತಿ.

ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ವನ್ಯಜೀವಿ ಸಂರಕ್ಷಕ ಭುವನ್ ದೇವಾಡಿಗ ಅವರು ಕೇವಲ ದೂರು ನೀಡದೆ, ಮೃಗಾಲಯದ ಒಳಗಿನ ಭೀಕರ ಸ್ಥಿತಿಯನ್ನು ಎತ್ತಿ ತೋರಿಸುವ ಭದ್ರ ಸಾಕ್ಷ್ಯಗಳನ್ನು ಹೈಕೋರ್ಟ್‌ಗೆ ನೀಡಿದ್ದಾರೆ. ಸೊರಗಿದ ಪ್ರಾಣಿಗಳ ಫೋಟೋಗಳು: ಸರಿಯಾದ ಆಹಾರವಿಲ್ಲದೆ ಎಲುಬು ಕಾಣುವಂತಾಗಿರುವ ಚಿರತೆ ಮತ್ತು ಹುಲಿಗಳ ಫೋಟೋಗಳು. ಅಸುರಕ್ಷಿತ ಪಂಜರಗಳು, ತುಕ್ಕು ಹಿಡಿದು ಕಿತ್ತುಹೋಗಿರುವ ಕಬ್ಬಿಣದ ಸರಳುಗಳು, ಇದರಿಂದ ಪ್ರಾಣಿಗಳು ಹೊರಬರುವ ಅಥವಾ ಗಾಯ ಮಾಡಿಕೊಳ್ಳುವ ಅಪಾಯವಿದೆ ಎಂದು ತೋರಿಸಿದ್ದಾರೆ. ಪ್ರಾಣಿಗಳ ಕುಡಿಯುವ ನೀರಿನ ತೊಟ್ಟಿಗಳಲ್ಲಿ ಪಾಚಿ ಕಟ್ಟಿರುವುದು ಮತ್ತು ಪ್ರಾಣಿಗಳ ಮಲ-ಮೂತ್ರ ವಿಲೇವಾರಿ ಆಗದೆ ಪಂಜರದಲ್ಲೇ ಕೊಳೆಯುತ್ತಿರುವುದು. ಅನಾರೋಗ್ಯಕ್ಕೀಡಾದ ಪ್ರಾಣಿಗಳಿಗೆ ಸರಿಯಾದ ಸಮಯದಲ್ಲಿ ವೈದ್ಯಕೀಯ ನೆರವು ಸಿಗುತ್ತಿಲ್ಲ ಎಂಬುದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಅವರು ಸಂಗ್ರಹಿಸಿ ದಾಖಲೆಯಾಗಿ ನೀಡಿದ್ದಾರೆ.

ಪಿಲಿಕುಳ ಮೃಗಾಲಯದ ಕರ್ಮ ಕಾಂಡಗಳು ಹೈಕೋರ್ಟ್‍ನಲ್ಲಿ ಹೊರಬಿದ್ದಿವೆ. ಪ್ರಾಣಿಗಳನ್ನು ಇರಿಸಿರುವ ಪಂಜರಗಳು ಸಂಪೂರ್ಣ ತುಕ್ಕು ಹಿಡಿದಿವೆ, ಅಲ್ಲಿ ಸರಿಯಾದ ಭದ್ರತೆಯೇ ಇಲ್ಲ. ಅಶುಚಿಯಾದ ಪರಿಸರದಲ್ಲಿ ಪ್ರಾಣಿಗಳು ನರಳುತ್ತಿರೋ ಫೋಟೋಗಳನ್ನು ನೋಡಿ ನ್ಯಾಯಪೀಠ ಕೆಂಡಾಮಂಡಲವಾಗಿದೆ. ಇಲ್ಲಿ ಮತ್ತೊಂದು ದುರಂತ ಅಂದ್ರೆ ಜನಮನ್ನಣೆ ಪಡೆದ ಈ ಪಾರ್ಕ್‍ನ ಲೈಸೆನ್ಸ್ ಅವಧಿ 2025ರ ಡಿಸೆಂಬರ್ 1ಕ್ಕೇ ಮುಕ್ತಾಯವಾಗಿದೆ. ಅಂದ್ರೆ ಸದ್ಯ ಯಾವುದೇ ಪರವಾನಗಿ ಇಲ್ಲದೇ ಪಿಲಿಕುಳ ಮೃಗಾಲಯ ನಡೀತಿದೆ. ಇಷ್ಟೆಲ್ಲಾ ಅವ್ಯವಸ್ಥೆ ಬಗ್ಗೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ 2023 ಮತ್ತು 2025ರಲ್ಲಿ ಶೋಕಾಸ್ ನೋಟಿಸ್ ನೀಡಿದ್ರೂ ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿಲ್ಲ. ಮಲೀನಗೊಂಡ ನೀರು ಕುಡಿದು, ಸರಿಯಾದ ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿವೆ ಅನ್ನೋದು ಅರ್ಜಿದಾರರ ಗಂಭೀರ ಆರೋಪಕ್ಕೆ ಹೈಕೋರ್ಟ್‍ ಗರಂ ಆಗಿದೆ. ಇವುಗಳನ್ನು ನೋಡಿದ ನ್ಯಾಯಾಧೀಶರು ಆಘಾತ ಮತ್ತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಮೃಗಾಲಯವನ್ನು ತಕ್ಷಣವೇ ಮುಚ್ಚಿ” ಎಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದ್ದು, ಮೃಗಾಲಯದ ಆಡಳಿತವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಅಥವಾ ವ್ಯವಸ್ಥಿತವಾಗಿ ಸುಧಾರಿಸುವಂತೆ ಸೂಚಿಸಿದೆ. ಕರ್ನಾಟಕ ಹೈಕೋರ್ಟ್ ಫೆಬ್ರವರಿ ಮೊದಲ ವಾರದಲ್ಲಿ ಪಿಲಿಕುಳ ಮೃಗಾಲಯದ ಬಗ್ಗೆ ಅತ್ಯಂತ ಕಠಿಣವಾದ ನಿಲುವನ್ನು ತಳೆದಿದೆ.

ಹೈಕೋರ್ಟ್ ಸರ್ಕಾರಕ್ಕೆ ಈ ಮೂರು ಪ್ರಶ್ನೆಗಳನ್ನು ಕೇಳಿದ್ದು, ಪರವಾನಗಿ ಇಲ್ಲದೆ ಇಷ್ಟು ದಿನ ಮೃಗಾಲಯವನ್ನು ಹೇಗೆ ನಡೆಸಲು ಬಿಟ್ಟಿದ್ದೀರಿ? ಪ್ರಾಣಿಗಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟ ಪರೀಕ್ಷೆಯ ವರದಿ ಎಲ್ಲಿದೆ? ಪ್ರಾಣಿಗಳ ಅಸಹಜ ಸಾವುಗಳ ಬಗ್ಗೆ ಪೋಸ್ಟ್ ಮಾರ್ಟಂ (Post-mortem) ವರದಿಯನ್ನು ತಕ್ಷಣ ಸಲ್ಲಿಸಿ. ಎಂದು ಉತ್ತರ ನೀಡಲು ತಿಳಿಸಿದೆ. ಮೃಗಾಲಯದ ನಿರ್ದೇಶಕರು ಮತ್ತು ಅಧಿಕಾರಿಗಳು ಇತ್ತೀಚೆಗೆ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ಅಧಿಕ ಮಳೆಯಿಂದಾಗಿ ತಡೆಗೋಡೆ ಕುಸಿದು ಸಮಸ್ಯೆ ಉಂಟಾಗಿದೆ ಎಂದು ಸಮಜಾಯಿಷಿ ನೀಡಿದ್ದರು. ಆದರೆ, ನ್ಯಾಯಾಲಯವು ಇದನ್ನು “ಆಡಳಿತಾತ್ಮಕ ವೈಫಲ್ಯ” ಎಂದು ಕರೆದಿದೆ. ಸರಿಯಾದ ಹಣಕಾಸಿನ ಹಂಚಿಕೆ ಇಲ್ಲದಿರುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಮಾಜಿ ನಿರ್ದೇಶಕರು (ಜಯಪ್ರಕಾಶ್ ಭಂಡಾರಿ) ಈ ಹಿಂದೆ ರಾಜೀನಾಮೆ ನೀಡುವಾಗ ತಿಳಿಸಿದ್ದರು.

ಮುಂದಿನ ಕ್ರಮ ಏನಾಗಬಹುದು?
ನ್ಯಾಯಾಲಯದ ಸೂಚನೆಯಂತೆ ಸರ್ಕಾರವು ಮೃಗಾಲಯದ ನಿರ್ವಹಣೆಯನ್ನು ಸಂಪೂರ್ಣವಾಗಿ ಅರಣ್ಯ ಇಲಾಖೆ ಅಥವಾ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ (KZA) ಹಸ್ತಾಂತರಿಸುವ ಸಾಧ್ಯತೆಯಿದೆ. ಇಲ್ಲದಿದ್ದರೆ ಪ್ರಾಣಿಗಳನ್ನು ಬೇರೆ ಸುರಕ್ಷಿತ ಮೃಗಾಲಯಗಳಿಗೆ ವರ್ಗಾಯಿಸುವ ಆದೇಶ ಹೊರಬರುವ ಸಾಧ್ಯತೆಯಿದೆ. ಕರ್ನಾಟಕ ಹೈಕೋರ್ಟ್ ಈ ಪ್ರಕರಣವನ್ನು (PIL) ಅತ್ಯಂತ ತುರ್ತು ವಿಷಯವೆಂದು ಪರಿಗಣಿಸಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ ತಿಂಗಳ ಮೂರನೇ ವಾರದಲ್ಲಿ ನಡೆಸಲು ನ್ಯಾಯಾಲಯ ನಿಗದಿಪಡಿಸಿದೆ. ಅಲ್ಲಿಯವರೆಗೆ ಪ್ರಾಣಿಗಳ ಪರಿಸ್ಥಿತಿಯ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ (CZA) ಸೂಚಿಸಿದೆ ಒಂದು ವೇಳೆ ಮೃಗಾಲಯದ ಪರವಾನಗಿಯನ್ನು ನವೀಕರಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರ ನಿರಾಕರಿಸಿದರೆ, ಅಲ್ಲಿರುವ ಪ್ರಾಣಿಗಳನ್ನು ಶ್ರೀ ಚಾಮರಾಜೇಂದ್ರ ಮೃಗಾಲಯ (ಮೈಸೂರು) ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ ಅಥವಾ ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬೆಂಗಳೂರು) ಕ್ಕೆ ವರ್ಗಾಯಿಸುವ ಸಾಧ್ಯತೆಯಿದೆ

ಪಿಲಿಕುಳ ಒಂದು ಕಾಲದಲ್ಲಿ ಜಿಲ್ಲಾಡಳಿತದ ಅಡಿಯಲ್ಲಿದ್ದ ಪಿಲಿಕುಳ ನಿಸರ್ಗಧಾಮ ಪ್ರಾಧಿಕಾರ (PNDA) ಮೂಲಕ ನಿರ್ವಹಿಸಲ್ಪಡುತ್ತಿತ್ತು. ಆದರೆ ಈಗ ಉಂಟಾಗಿರುವ ಅವ್ಯವಸ್ಥೆಯಿಂದಾಗಿ, ಇದನ್ನು ಸಂಪೂರ್ಣವಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ (KZA) ಸುಪರ್ದಿಗೆ ಪಡೆಯುವಂತೆ ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ. ಕೆ.ಜೆಡ್.ಎ ಅಡಿಯಲ್ಲಿ ಬಂದರೆ ಪ್ರಾಣಿಗಳಿಗೆ ನಿರಂತರ ಅನುದಾನ ಮತ್ತು ಪರಿಣಿತ ವೈದ್ಯರ ಸೇವೆ ಸಿಗಲಿದೆ.

ಪಿಲಿಕುಳ ಮೃಗಾಲಯ ಒಂದು ಕಾಲದಲ್ಲಿ ಇದು ಕರ್ನಾಟಕದ ಅತ್ಯಂತ ಸುಂದರ ಮೃಗಾಲಯಗಳಲ್ಲಿ ಒಂದಾಗಿತ್ತು ಇದನ್ನು 1990ರ ದಶಕದ ಉತ್ತರಾರ್ಧದಲ್ಲಿ ಮಂಗಳೂರಿನ ವಾಮಂಜೂರಿನಲ್ಲಿ ಸ್ಥಾಪಿಸಲಾಯಿತು. ‘ಪಿಲಿಕುಳ’ ಎಂದರೆ ತುಳು ಭಾಷೆಯಲ್ಲಿ “ಹುಲಿಗಳ ಕೆರೆ” ಎಂದರ್ಥ. ಇಲ್ಲಿ ಅಪರೂಪದ ರಾಜನಾಗ (King Cobra) ಸಂತಾನೋತ್ಪತ್ತಿ ಕೇಂದ್ರವಿದ್ದು, ಇದು ಏಷ್ಯಾದಲ್ಲೇ ಪ್ರಸಿದ್ಧವಾಗಿದೆ. ಸುಮಾರು 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿರುವ ಈ ಉದ್ಯಾನವನವು ಕರಾವಳಿಯ ಜೀವವೈವಿಧ್ಯದ ಕೇಂದ್ರವಾಗಿತ್ತು.
ಪಿಲಿಕುಳ ರೀಜನಲ್ ಸೈನ್ಸ್ ಸೆಂಟರ್ ಮೃಗಾಲಯಕ್ಕೆ ಹೋಲಿಸಿದರೆ ವಿಜ್ಞಾನ ಕೇಂದ್ರದ ಸ್ಥಿತಿ ಉತ್ತಮವಾಗಿದೆ. ಈಗ ಹೈಕೋರ್ಟ್‌ನ ಫೆಬ್ರವರಿ 3ನೇ ವಾರದ ವಿಚಾರಣೆಯ ಮೇಲೆ ಎಲ್ಲರ ಕಣ್ಣಿದೆ. ಅಲ್ಲಿ ಹೊರಬರುವ ತೀರ್ಪು ಪಿಲಿಕುಳದ ಪ್ರಾಣಿಗಳ ಭವಿಷ್ಯವನ್ನು ನಿರ್ಧರಿಸಲಿದೆ.

Continue Reading
Advertisement

crime

ಹಣ ಒಡವೆಯೊಂದಿಗೆ ಪರಾರಿಯಾಗುತ್ತಿದ್ದ ವಧುವಂಚಕನ ಹೆಡೆಮುರಿ ಕಟ್ಟಿದ ಪೊಲೀಸರು

Published

on

ಆನ್‌ ಲೈನ್‌ ಪ್ಲಾಟ್‌ ಫಾರಂ ಮ್ಯಾಟ್ರಮೋನಿ ಮೂಲಕ ಹಲವಾರು ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಒಡವೆಯೊಂದಿಗೆ ಪರಾರಿಯಾಗುತ್ತಿದ್ದ ವಧುವಂಚಕನ ಹೆಡೆಮುರಿ ಕಟ್ಟಿದ ಪೊಲೀಸರು. ಆರೋಪಿತನಾದ ಸುಶಾಂತ್ ಪೂಜಾರಿ @ ಸುಶಾಂತ್ ಅಂಕುಶ್ ಪೂಜಾರಿ @ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು ದಿನಾಂಕ:05/02/2026 ರಂದು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಆಪಾದಿತನು ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯಮಾಡಿಕೊಂಡು ಇಬ್ಬರನ್ನು ಮದುವೇಯಾಗಿ ವಂಚಿಸಿ ಪರಾರಿಯಾಗಿದ್ದರೆ, 5 ಜನ ಮಹಿಳೆಯರನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿರುವುದಾಗಿ ತನಿಖೆಯಲ್ಲಿ ಬೇಳಕಿಗೆ ಬಂದಿದೆ. ಈತನ ವಂಚನಾ ಮದುವೆ ವ್ಯವಹಾರಕ್ಕೆ ಮುಲ್ಕಿ ನಿವಾಸಿ ಭಾಸ್ಕರ್‌ ಎಂಬಾತನೂ ಸಹಕರಿಸುತ್ತಿದ್ದು, ಸದ್ರಿ ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.
ಆರೋಪಿತ ಸುಶಾಂತ್ ಪೂಜಾರಿ ವಿರುದ್ದ ಮಂಗಳೂರು ಊರ್ವಾ ಪೊಲೀಸ್ ಠಾಣಾಅ.ಕ್ರ: 202/2017 ಕಲಂ: 406, 420 ಐಪಿಸಿ, ಉಡುಪಿ ಜಿಲ್ಲೆಯ ಕೋಟಾ ಪೊಲೀಸ್ ಠಾಣಾ ಅ.ಕ್ರ: 132/2022 ಕಲಂ: 379 ಐಪಿಸಿ ಮತ್ತು ಮಹಾರಾಷ್ಟ್ರ ರಾಜ್ಯದ ಅರ್ನಾಲ್ ಪೊಲೀಸ್ ಠಾಣಾ ಅ.ಕ್ರ:354/2022 ಕಲಂ:336(ಎ), 370, 370(4), 376(2),(ಎನ್) 342, ಜೊತೆಗೆ 34 ಐಪಿಸಿ ಕಲಂ:3,4,5 ಇಮ್ಮೋರಲ್ ಟ್ರಾಫಿಕಿಂಗ್ ಆ್ಯಕ್ಟ್, ಕಲಂ:4,8,12 ಪೋಕ್ಸೋ ಕಾಯ್ದೆ ರಂತೆ ಪ್ರಕರಣಗಳು ದಾಖಲಾಗಿರುತ್ತದೆ.
ನೊಂದ ಮಹಿಳೆಗೆ ಸುಶಾಂತ್ ಪೂಜಾರಿ ಎಂಬ ವ್ಯಕ್ತಿಯು ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯವಾಗಿ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈ ನಲ್ಲಿ 02/02/2025 ರಲ್ಲಿ ಮದುವೆಯಾಗಿದ್ದಲ್ಲದೆ ನಂಬಿಸಿ ಹಂತ ಹಂತವಾಗಿ 6,60,000/- ಹಣವನ್ನು ಪಡೆದುಕೊಂಡು ಮೋಸ ಮಾಡುವ ಉದ್ದೇಶದಿಂದ ದಿನಾಂಕ 15/11/2025 ರಂದು ನಾಪತ್ತೆ ಯಾಗಿರುತ್ತಾನೆ. ನಂತರದ ದಿನಗಳಲ್ಲಿ ಪಿರ್ಯಾದುದಾರರು ಅನುಮಾನಗೊಂಡ ಆತನ ಬಗ್ಗೆ ವಿಚಾರಿಸಿದಾಗ ಇದೇ ರೀತಿ ಸುಮಾರು ಕಡೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಮೋಸ ಮಾಡಿರುವ ಹಾಗೂ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದ ಮೇರೆಗೆ ಪಿ ನೊಂದ ಮಹಿಳೆಯು ಕಾವೂರು ಪೊಲೀಸು ಠಾಣಾ ಅಕ್ರ: 184/2025 ಕಲಂ: 318(4), 316(2), 316(1), 336(3), 340(1) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ.
ಸದ್ರಿ ಪ್ರಕರಣದಲ್ಲಿನ ಆರೋಪಿತನಾದ ಸುಶಾಂತ್ ಪೂಜಾರಿ @ ಸುಶಾಂತ್ ಅಂಕುಶ್ ಪೂಜಾರಿ @ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು ದಿನಾಂಕ:05/02/2026 ರಂದು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಆಪಾದಿತನು ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯಮಾಡಿಕೊಂಡು ಈ ಮೊದಲು 2021 ರಲ್ಲಿ ಉಡುಪಿಯ ಹುಡುಗಿಯೊಬ್ಬಳನ್ನು ಮದುವೆ ಆಗಿರುತ್ತಾನೆ. ಹಾಗೂ ಉಡುಪಿ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದುಕೊಂಡಿರುತ್ತಾನೆ, ಮುಂಬೈನ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುತ್ತಾನೆ. ಬೆಂಗಳೂರಿನಲ್ಲಿ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುತ್ತಾನೆ ಕಾರ್ಕಳದ ಒಂದು ಹುಡುಗಿಗೆ ಮದುವೆ ಆಗುವುದಾಗಿ ನಂಬಿಸಿ ಮೊಸ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ. ನಂತರ ಸದ್ರಿ ಪ್ರಕರಣದಲ್ಲಿ ಆರೋಪಿತ ಸುಶಾಂತ್ ಪೂಜಾರಿ ಯವನೊಂದಿಗೆ ಮುಲ್ಕಿ ನಿವಾಸಿ ಭಾಸ್ಕರ್ ಎಂಬಾತನು ಪಿರ್ಯಾದಿದಾರರಿಗೆ ಮತ್ತು ಕುಟುಂಬದವರಿಗೆ ನಂಬಿಸುವ ಉದ್ದೇಶದಿಂದ ಆರೋಪಿತ ಸುಶಾಂತ್ ನನ್ನ ಅಳಿಯ ಎಂದು ಹೇಳಿಕೊಂಡು ನಂಬಿಸಿ ಆರೋಪಿತ ಸುಶಾಂತ್ ಪೂಜಾರಿಯ ಕುಟುಂಬಸ್ಥರ ಪರವಾಗಿ ಮುಂಬೈನಲ್ಲಿ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡು ಮದುವೆ ನಡೆಸಿದವರಾಗಿರುತ್ತಾನೆ.

Continue Reading

crime

ಬಜ್ಪೆ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣ..ಮೆಹಂದಿಗೆ ಹೋಗಿದ್ದಾಗ ಮನೆಗೆ ನುಗ್ಗಿ 23ಲಕ್ಷದ ಚಿನ್ನಾಭರಣ, 1,25,000ನಗದು ಹಣ ಎಗರಿಸಿದ ಖದೀಮರಿಬ್ಬರು ಅಂದರ್.

Published

on

.

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ಮೊಹಮ್ಮದ್ ಷರೀಫ್ ಎಂಬವರು ತನ್ನ ಸಂಬಂಧಿಕರ ಮನೆಯ ಮೆಹಂದಿ ಕಾರ್ಯಕ್ರಮಕ್ಕೆ ಕಳವಾರಿಗೆ ಹೋಗಿದ್ದ ಸಂದರ್ಭ ರಾತ್ರಿ ಮನೆಗೆ ನುಗ್ಗಿ 23 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 1,25,000/- ರೂಪಾಯಿ ನಗದು ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಖದೀಮರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 176/2025 ಕಲಂ ಕಲಂ 331(3), 331(4), 305 BNS 2023 ರಂತೆ ಪ್ರಕರಣ ದಾಖಲಾಗಿತ್ತು.

ಬಜ್ಪೆ ಪೊಲೀಸರು ಆರೋಪಿತರ ಪತ್ತೆಗಾಗಿ ಬಲೆ ಬೀಸಿದಾಗ ಮೂಲತಃ ಕಳವಾರು ಚರ್ಚ್ ಬಳಿ ನಿವಾಸಿ, ಪ್ರಸ್ತುತ ಬಜ್ಪೆ ಗ್ರಾಮದ ಜರಿನಗರ ಬಾಡಿಗೆ ಮನೆಯಲ್ಲಿರುವ ಯೂಸುಫ್ ಪುತ್ರ ಅಬ್ದುಲ್ ನಾಸಿರ್@ಸಾಸಿರ್@ನಾಚಿ(31)ಎಂಬಾತ ಕಳ್ಳತನ ಮಾಡಿ ಬಳಿಕ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು.
ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಿದ ಪೊಲೀಸರು LOC ಹೊರಡಿಸಿದ್ದರು. ಅಬ್ದುಲ್ ನಾಸೀರ್ @ ನಾಚಿ ಎಂಬಾತನನ್ನು LOC ಯಲ್ಲಿ ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಪ್ರಕರಣದ ಪಿರ್ಯಾದಿದಾರರಾದ ಮೊಹಮ್ಮದ್ ಷರೀಫ್ ಎಂಬವರ ಸಂಬಂಧಿ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಮತ್ತು ತಾನು ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದನು.
ಆರೋಪಿತರಿಂದ ಸುಮಾರು 27 ಲಕ್ಷ ರೂಪಾಯಿ ಮೌಲ್ಯದ 222 ಗ್ರಾಂ ತೂಕದ ಚಿನ್ನವನ್ನು, 20,000/- ರೂಪಾಯಿ ನಗದು ಹಣ, ಸುಮಾರು 50,000/- ರೂಪಾಯಿ ಮೌಲ್ಯದ ಸ್ಕೂಟರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ .

ಆರೋಪಿತರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Continue Reading

Bantawala

ಬಾಕ್ಸೆಟ್ ಸಾಗಾಟದ ಲಾರಿಗಳಿಗೆ ಪರವಾನಿಗೆ ಇದೆಯಲ್ಲ ಓಕೆ ! ಮತ್ತೆ ಜನರಿಗೆ ಆಕ್ರೋಶ ಯಾಕೆ ?

Published

on

ಕರಾವಳಿ ಪ್ರದೇಶದಿಂದ ಹೊರ ರಾಜ್ಯಗಳಿಗೆ ಕಳೆದ ಹಲವು ಸಮಯಗಳಿಂದ ಬಾಕ್ಸೆಟ್ ಸಾಗಾಟದ ಲಾರಿಗಳ ಘರ್ಜನೆ ಸಾರ್ವಜನಿಕರಲ್ಲಿ ಸಾಕಷ್ಟು ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇದು ಹಲವು ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಅತಿಯಾದ ಭಾರ ಹೊತ್ತ ಬಾಕ್ಸೈಟ್ ಲಾರಿಗಳಿಂದಾಗಿ ಕರಾವಳಿಯ ಪ್ರಮುಖ ಹೆದ್ದಾರಿಗಳು ಮತ್ತು ಒಳರಸ್ತೆಗಳು ಗುಂಡಿಬಿದ್ದು ಹಾಳಾಗಿ ಹೋಗಿದೆ. ಲಾರಿಗಳ ಅತಿ ವೇಗ ಮತ್ತು ಅಜಾಗರೂಕ ಚಾಲನೆಯಿಂದಾಗಿ ಸಣ್ಣ ವಾಹನ ಸವಾರರು ಹಾಗೂ ಪಾದಚಾರಿಗಳು ಜೀವಭಯದಲ್ಲಿ ಸಂಚರಿಸುವಂತಾಗಿದೆ. ಸಾಗಾಟದ ವೇಳೆ ಲಾರಿಗಳಿಂದ ಹಾರುವ ಬಾಕ್ಸೈಟ್ ಪುಡಿ ರಸ್ತೆಯ ಪಕ್ಕದ ಮನೆಗಳು, ಅಂಗಡಿಗಳು ಮತ್ತು ಕೃಷಿ ಭೂಮಿಯ ಮೇಲೆ ಕುಳಿತು ಆರೋಗ್ಯ ಸಮಸ್ಯೆಗಳನ್ನು (ಶ್ವಾಸಕೋಶದ ತೊಂದರೆ) ಉಂಟುಮಾಡುವ ಭಯವಿದೆ. ರಾತ್ರಿ ಎನ್ನದೆ ಸಂಚರಿಸುವ ಈ ಬೃಹತ್ ಲಾರಿಗಳ ಶಬ್ದದಿಂದಾಗಿ ಸ್ಥಳೀಯ ನಿವಾಸಿಗಳ ನೆಮ್ಮದಿಗೆ ಭಂಗ ಬಂದಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಅದಿರನ್ನು ಸಾಗಿಸುವುದು ಇಲ್ಲಿ ಸಾಮಾನ್ಯವಾಗಿದ್ದು, ಹಲವು ಬಾರಿ ಈ ಸಾಗಾಟವು ಅಕ್ರಮ ಗಣಿಗಾರಿಕೆಯ ಭಾಗವಾಗಿರುತ್ತದೆಯೇ ಅಥವಾ ಸರಿಯಾದ ಪರವಾನಗಿ ಹೊಂದಿದೆಯೇ ಎಂಬ ಸಂಶಯ ಸ್ಥಳೀಯರಲ್ಲಿ ಬಂದಾಗ ಬಾಕ್ಸೆಟ್ ಸಾಗಾಟದ ಲಾರಿಗಳ ಘರ್ಜನೆಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದೂ ಆಯಿತು. ಆವರದೇ ಆದ ಸಾಮ್ರಾಜ್ಯದಂತೆ ಅಪಘಾತಗಳನ್ನೂ ನಡೆಸಿದಾಗಲೂ ಬಾಕ್ಸೆಟ್ ಸಾಗಾಟದ ಲಾರಿಗಳದೇ ಮೇಲುಗೈ ಆಯಿತು. ನಂತರ ನಡೆದಿರುವುದು ಪ್ರತಿಭಟನೆ …

ರಸ್ತೆಯಲ್ಲಿ ಓಡಾಡುವ ನಾಗರಿಕರ ಮತ್ತು ವಾಹನ ಸವಾರರ ಪಾಲಿಗೆ ಅಕ್ರಮ ಹಾಗೂ ಸಾರಿಗೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿರುವ ಬಾಕ್ಸೈಟ್ ಸಾಗಾಟದ ಯಮದೂತ ಲಾರಿಗಳು ಸಂಕಷ್ಟ ತಂದೊಡ್ಡಿದೆಯೆಂದು ಈ ಬಗ್ಗೆ ಎಚ್ಚೆತ್ತುಕೊಂಡು ಬಾಕ್ಸೈಟ್ ಲಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲವು ಬಾರಿ ಮನವಿ ನೀಡಿದ್ದರೂ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದ ಕಾರಣ ಕನ್ಯಾನ ನೆಲ್ಲಿಕಟ್ಟೆ ಜಂಕ್ಷನಲ್ಲಿ ಪ್ರತಿಭಟನೆಯೂ ನಡೆಯಿತು. ಎಲ್ಲದಕ್ಕೂ ಉತ್ತರ ಒಂದೇ ಆಗಿತ್ತು. ಅದು ಪರವಾನಿಗೆ ಇದ್ದು ಆಗುತ್ತಿರುವ ಸಾಗಾಟ..ಎಷ್ಟೋ ವರ್ಷಗಳ ಪರವಾನಿಗೆಯಡಿಯಲ್ಲಿ ಮಂತ್ರಿಗಳ ಕೃಪಾ ಕಟಾಕ್ಷದಲ್ಲಿಯೇ ನಡೆಯುತ್ತಿರುವ ಬಾಕ್ಸೆಟ್ ಸಾಗಾಟ. ಹೌದು ! ಈಗ ಹೋರಾಟಗಾರರು, ಮಾದ್ಯಮದವರು, ನಾಗರೀಕರು ಇದರ ಎದುರು ಹೋರಾಟ ಮಾಡುವುದು ಕಷ್ಟ ಸಾಧ್ಯ ಎಂದು ಮೌನವಾಗಿದ್ದಾರೆ.
ಈಗಲೂ ಬಾಕ್ಸೆಟ್ ಸಾಗಾಟದ ಲಾರಿಗಳ ಘರ್ಜನೆ ಕೇಳಿಸುತ್ತಲೇ ಇದೆ. 6ಅಲ್ಲ 8ಅಲ್ಲ 14 ಅಲ್ಲ 18ರಿಂದಲೂ ಹೆಚ್ಚು ಚಕ್ರದ ಲಾರಿಗಳು…ಅದು ಸಾಗುವ ವೇಳೆಗೆ ರಾಜ ಮರ್ಯಾದೆಯನ್ನು ನೀಡಲೇ ಬೇಕು ಇಲ್ಲವಾದರೆ ಅನುಭವಿಸಬೇಕು ಎಂತಾಗಿದೆ ಸ್ಥಿತಿ.


ಸಾಗಾಟವನ್ನು ನಿಲ್ಲಿಸಿ ಪ್ರಶ್ನಿಸಿ ಆಯ್ತು, ಸಾರಿಗೆ ಇಲಾಖೆಗೆ ತಿಳಿಸಿ ಆಯ್ತು, ಜನ ಸೇರಿ ಪ್ರತಿಭಟನೆ ಮಾಡಿ ಆಯ್ತು, ಈಗ ಜನ ಕೇಳುವುದು ಮಾದ್ಯಮವೇಕೆ ಮೌನವಾಗಿದೆ ? ಎಂದು. ಅದು ಸಹಜವೇ ಕೇಳಲೇ ಬೇಕು, ಜನರ ಸಮಸ್ಯೆಗಳಿಗೆ ಕಟ್ಟ ಕಡೆಗೆ ಪರಿಹಾರ ಸಿಗುವುದು ಮಾದ್ಯಮಗಳಿಂದ ಎಂಬುವುದು ಜನರಿಗೂ ಗೊತ್ತು.


ವಿಟ್ಲದ ಮಾದ್ಯಮ ವರದಿಗಾರ ರಾಮ್‌ದಾಸ್‌ ವಿಟ್ಲ ದಕ್ಷಿಣ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿಗಳಲ್ಲಿ ಈ ಬಗ್ಗೆ ಕೇಳಿಯೇ ಬಿಟ್ಟಿದ್ದಾರೆ. ರಾತ್ರಿ ಹೊತ್ತು ಸಾಗಾಟವಾಗುತ್ತಿರುವ ಬಾಕ್ಸೈಟ್‌ ಲಾರಿಗಳ ವಿಡಿಯೋವನ್ನು ಕಳುಹಿಸಿ ಪ್ರಶ್ನಿಸಿದ್ದಾರೆ. ಇದಕ್ಕೆ ಸಮರ್ಪಕವಾದ ಉತ್ತರವನ್ನು ಮಾಹಿತಿ ರೂಪದಲ್ಲಿ ಎಸ್. ಪಿ. ಯವರು ನೀಡಿದ್ದಾರೆ. ಅದು ಈ ರೀತಿ ಇದೆ.


ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಪಾದೇಕಲ್ಲು ಎಂಬಲ್ಲಿ ದಾಖಲಾತಿ ಮತ್ತು ಪರವಾನಿಗೆಯಲ್ಲಿ ( MDP No.252617431T003662), (Lease No.DSKN5413) ಬಾಕ್ಸೆಟ್ ಮಣ್ಣು ಲಾರಿಗಳ ಮುಖಾಂತರ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದು. ಸದ್ರಿ ಬಾಕ್ಸೆಟ್ ಸಾಗಾಟ ಮಾಡುತ್ತಿದ್ದ ಬಗ್ಗೆ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಿ ಬರುವಾಗ ತೊಂದರೆಯಾಗುತ್ತಿರುವ ಬಗ್ಗೆ ದಿನಾಂಕ 30-12-2026 ರಂದು ಸ್ಥಳೀಯರು ಪ್ರತಿಭಟನೆ ಮಾಡಿದ್ದು. ಅದರಂತೆ ಶಾಲಾ ಮಕ್ಕಳು ಬೆಳಗ್ಗೆ ಶಾಲೆಗೆ ಹೋಗುವ ಸಮಯ ಮತ್ತು ಶಾಲೆ ಬಿಡುವ ಸಮಯ ಲಾರಿಗಳನ್ನು ಸಂಚಾರ ಮಾಡದಂತೆ ಬಾಕ್ಸೇಟ್ ಸರಕು ಸಾಗಾಣಿಕೆ ಮಾಡುವವರಿಗೆ ತಿಳುವಳಿಕೆ ನೀಡಲಾಗಿದೆ ಎಂಬುವುದಾಗಿದೆ.

ಬಾಕ್ಸೈಟ್‌ ಸಾಗಾಟದ ಸಮಸ್ಯೆಗಳ ವಿರುದ್ಧ ಡಿಜಿಟಲ್‌ ಮಾದ್ಯಮದಲ್ಲಿ ಪ್ರಸಾರವಾದ ವಿಡಿಯೋ ಸ್ಟೇಟಸ್


ಮಾನ್ಯ ಪೊಲೀಸ್‌ ವರಿಷ್ಠಾಧಿಕಾರಿಗಳು ಹೇಳಿರುವಂತೆಯೇ ಈಗ ರಾತ್ರಿ ವೇಳೆಯಲ್ಲಿಯೇ ಸಾಗಾಟ ನಡೆಯುತ್ತಿದೆ. ಆದರೆ ಒಳ ರಸ್ತೆಯಲ್ಲಿ ಮಿತಿಮೀರಿ ಸಾಗಾಟ ನಡೆಯುತ್ತಿರುವುದು, ವೇಗದಿಂದ ದೂಳು ಹಾರಿ ರಸ್ತೆ ದೂಳುಮಯವಾಗಿರುವುದು, ರಸ್ತೆಯುದ್ದಕ್ಕೂ ಮಣ್ಣು ಚೆಲ್ಲುತ್ತಿರುವುದು, ವೇಗ ನಿಯಂತ್ರಣ ಇಲ್ಲದಿರುವುದು ಈಗಲೂ ಕಂಡುಬರುತ್ತಿದೆ. ಆದುದರಿಂದ ಜನರ ಪ್ರಬಲ ಒತ್ತಾಯದಂತೆ ಸ್ಥಳೀಯ ಆಡಳಿತ ಮತ್ತು ಸಾರಿಗೆ ಇಲಾಖೆ (RTO) ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಲಾರಿಗಳಿಗೆ ವೇಗ ನಿಯಂತ್ರಕ ಅಳವಡಿಸಬೇಕು ಮತ್ತು ಸಾಗಾಟದ ವೇಳೆ ಅದಿರು ಚೆಲ್ಲದಂತೆ ಟಾರ್ಪಾಲಿನ್ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂಬುದಾಗಿದೆ. ಸಂಬಂದ ಪಟ್ಟವರು ಕ್ರಮ ಕೈಗೊಳ್ಳುವಿರಾಗಿ ಜನ ನಂಬಿದ್ದಾರೆ.

Continue Reading

Trending

Copyright © 2025 Deevatige