Connect with us

Condolences

ಪುತ್ತೂರು ಮಿ‌ನಿ ವಿಧಾನ ಸೌಧದ ಮುಂಭಾಗದಲ್ಲಿ ಕಳೆದ 14 ದಿನಗಳಿಂದ ದರಣಿ ನಿರತ ಕೌಕ್ರಾಡಿ ನಿವಾಸಿ ರಾದಮ್ಮ ದಂಪತಿಗಳನ್ನು ಭೇಟಿಯಾಗಿ ನ್ಯಾಯ ಕೊಡಿಸುವ ಭರವಸೆ ನೀಡಿದ ಶಾಸಕ ಅಶೋಕ್ ರೈ.

Published

on

ಪುತ್ತೂರು : ಕಂದಾಯ ಇಲಾಖೆಯ ಅಧಿಕಾರಿಗಳು ನೆಲಸಮಗೊಳಿಸಿ ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ಮತ್ತು ನ್ಯಾಯ ಸಿಗುವ ತನಕ ಇಲ್ಲಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದಿರುವ ಕಡಬಾ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನ ಬಾಗಿಲು ನಿವಾಸಿಗಳಾದ ವೃದ್ಧ ರಾಧಮ್ಮ ಹಾಗೂ ಮುತ್ತುಸ್ವಾಮಿ ದಂಪತಿಗಳನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಇಂದು ಭೇಟಿ ಮಾಡಿ ಅವರಿಗೆ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದರು.


ಪುತ್ತೂರು ಆಡಳಿತ ಸೌಧದ ಎದುರು ಆರಂಭಿಸಿರುವ ಅಹೋರಾತ್ರಿ ಧರಣಿ 7 ದಿನಗಳಿಂದ ಮುಂದುವರೆದಿದ್ದು, ರಜಾ ದಿನವಾದ ಭಾನುವಾರವೂ ಮುಂದುವರೆದಿದೆ. ಆಡಳಿತ ಸೌಧದ ಎದುರು ಭಾಗದಲ್ಲಿರುವ ಮರದಡಿಯಲ್ಲಿ ಕಳೆದ ಹಲವು ದಿನಗಳಿಂದ ವೃದ್ಧ ದಂಪತಿ ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ. ಆರಂಭದ ದಿನ ಧರಿಸಿದ ಬಟ್ಟೆಯಲ್ಲಿ ಸ್ನಾನವನ್ನು ಮಾಡದೆ ಧರಣಿ ನಡೆಸುತ್ತಿದ್ದು, ರಾತ್ರಿ ವೇಳೆ ಮರದಡಿಯಲ್ಲಿ ಮಲಗುತ್ತಿದ್ದಾರೆ

ರಾತ್ರಿವೇಳೆ ಸೊಳ್ಳೆಗಳ ಕಾಟದಿಂದ ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ ಎಂದು ದಂಪತಿಯೊoದಿಗೆ ಧರಣಿ ಕುಳಿತಿರುವ ಅವರ ಪುತ್ರ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಗೆ ಜಿಲ್ಲಾಧಿಕಾರಿ ಬರುತ್ತಾರೆಂಬ ಮಾಹಿತಿ ಇತ್ತು ಆದರೆ ಅವರು ಬಂದಿರಲಿಲ್ಲ. ಉಪವಿಭಾಗಾಧಿಕಾರಿಗಳು ನೀಡಿರುವ ಕಾಲಾವಕಾಶದಲ್ಲಿ ಇನ್ನೂ ಒಂದು ದಿನಗಳಷ್ಟೇ ಬಾಕಿ ಇದ್ದು ನ್ಯಾಯ ಸಿಗದಿದ್ದರೆ ಜನವರಿ ೬ ರಿಂದ ಆಹಾರ ತ್ಯಜಿಸಿ ಧರಣಿ ನಡೆಸುವ ನಿರ್ಧಾರ ಕೈಗೊಳ್ಳುವ ಹಂತಕ್ಕೆ ಶಾಸಕರು ಧರಣಿ ನಿರತರನ್ನು ಭೇಟಿ ಮಾಡಿ ಅವರ ಸಂಕಷ್ಟವನ್ನು ಆಲಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.

ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನ ಬಾಗಿಲು ನಿವಾಸಿಗಳಾದ ವೃದ್ಧ ರಾಧಮ್ಮ ಹಾಗೂ ಮುತ್ತುಸ್ವಾಮಿ ದಂಪತಿಗಳ ಮನೆಯನ್ನು ನೆಲಸಮ ಗೊಳಿಸಿ ಒಂದು ವರ್ಷವೇ ಕಳೆದಿದೆ ಒಂದು ವರ್ಷದ ಹಿಂದೆ ಇವರ ಮನೆಯನ್ನು ನೆಲಸಮಗೊಳಿಸಲಾಗಿತ್ತು. ವೃದ್ಧ ದಂಪತಿಗಳು ಅಂದಿನಿoದ ಸರಿಯಾದ ಸೂರು ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಪ್ರಸ್ತುತ ಸ್ಥಿತಿ: ಮಳೆ, ಗಾಳಿ ಮತ್ತು ಬಿಸಿಲಿಗೆ ಮೈಯೊಡ್ಡಿ ತಾತ್ಕಾಲಿಕ ಶೆಡ್ ಅಥವಾ ಅಸುರಕ್ಷಿತ ಜಾಗದಲ್ಲಿ ವಾಸಿಸುವ ಅನಿವಾರ್ಯತೆ ಇವರಿಗೆ ಎದುರಾಗಿದೆ.

ಅವರಿಗೆ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿ ನೀತಿ ತಂಡವು ಕಳೆದ ಒಂದು ವರ್ಷದಿಂದಲೂ ತಂಡದ ಮುಖ್ಯಸ್ಥ ಹಾಗೂ ಹೋರಾಟಗರರಾದ ಜಯಂತ್ ಟಿ ನೇತೃತ್ವದಲಿ ನಿರಂತರವಾಗಿ ಹೋರಾಟ ನಡೆಸುತ್ತಲೇ ಇದೆ.
ಬಡಜನತೆಯ ಸಂಕಷ್ಟಗಳಿಗೆ ಕೈಹಿಡಿದು ಸ್ಪಂದಿಸುವ ಶಾಸಕ ಆಶೋಕ್ ಕುಮಾರ್ ರೈಯವರು ಧರಣಿ ನಿರತರ ಟರ್ಪಾಲಿನಲ್ಲಿಯೇ ಕುಳಿತು ಕೊಂಡು ಅವರ ಸಂಕಷ್ಟವನ್ನು ಆಲಿಸಿದ್ದಾರೆ.

ಜನವರಿ ೫ರಂದು ಅಧಿಕಾರಿಗಳನ್ನು ಕರೆದು ವೃದ್ಧ ದಂಪತಿಗಳಿಗೆ ನ್ಯಾಯ ಒದಗಿಸುವಲ್ಲಿ ಪ್ರಯತ್ನಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು. ಧರಣಿ ಮುಂದುವರಿದಿದೆ. ನ್ಯಾಯಸ್ಥಾನದಲ್ಲಿರುವ ವೃದ್ಧರಿಗೆ ನ್ಯಾಯ ಸಿಕ್ಕಿಯೇ ಸಿಗುತ್ತದೆ ಎಂಬ ವಿಶ್ವಾಸ ನಮಗಿದೆ. ಅವರಿಗೆ ನ್ಯಾಯ ಸಿಗಲೇ ಬೇಕು ಎಂದು ನೀತಿ ತಂಡ ತಿಳಿಸಿದೆ.

Continue Reading
Advertisement

Bantawala

ವಿಟ್ಲದಲ್ಲಿ ಬೆಂಕಿ ದುರಂತದಿಂದ ಅಂಗಡಿಗಳು ಭಸ್ಮ ಪ್ರಕರಣ..ಸ್ಥಳಕ್ಕೆ ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ ಭೇಟಿ, ಸಾಂತ್ವಾನ..

Published

on

ವಿಟ್ಲ : ಬೆಂಕಿ ದುರಂತದಿಂದ ಬುಧವಾರ ರಾತ್ರಿ ನಾಲ್ಕು ಅಂಗಡಿಗಳು ನಾಶವಾಗಿ ಮಾಲಿಕರಿಗೆ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದ ಸ್ಥಳಕ್ಕೆ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ವಿಟ್ಲದ ಹೃದಯ ಭಾಗದಲ್ಲಿರುವ ನಾಲ್ಕು ರಸ್ತೆಗಳ ಪಕ್ಕದ ವಿಟ್ಲ-ಮಂಗಳೂರು ಸಂಪರ್ಕ ರಸ್ತೆಯ ನಾಲ್ಕು ಅಂಗಡಿಗಳು ಸಂಪೂರ್ಣ ನಾಶವಾಗಿತ್ತು.

ಪ್ರಸಿದ್ಧ ವಿದ್ಯುತ್ ಉಪಕರಣಗಳ ಮಳಿಗೆಯಾಗಿದ್ದ “ಶ್ರೀ ಎಲೆಕ್ಟ್ರಾನಿಕ್ಸ್” ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹತ್ತಿಕೊಂಡಿತ್ತು.

ಪಕ್ಕದ ಫಾಸ್ಟ್ ಫುಡ್ ಅಂಗಡಿ, ಟೈಲರ್ ಅಂಗಡಿ ಹಾಗೂ ಫೈವ್ ಸ್ಟಾರ್ ವೈನ್ ಶಾಪ್ ಸೇರಿದಂತೆ ನಾಲ್ಕು ಅಂಗಡಿಗಳು ಗುರುತು ಹಿಡಿಯಲಾರದಷ್ಟು ನಾಶವಾಗಿವೆ.


ದುರಂತದ ಸುದ್ದಿ ತಿಳಿದು ದಿಗ್ಭ್ರಮೆ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ದುರಂತ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಅಂಗಡಿ ಮಾಲಿಕ ಸಂತೋಷ್ ಕುಮಾರ್ ಪೂಂಜಾ, ಜಗನ್ನಾಥ ಸಾಲಿಯಾನ್, ಎಸ್.ಬಿ.ಟೈಲರ್ ಜೊತೆ ಮಾತುಕತೆ ನಡೆಸಿ ಸಾಂತ್ವಾನ ಹೇಳುವ ಮೂಲಕ ಧೈರ್ಯ ತುಂಬಿದರು.

ಸರ್ಕಾರದ ಮಟ್ಟದಲ್ಲಿ ಪರಿಹಾರ ದೊರಕುವ ಸಾಧ್ಯತೆಗಳಿವೆಯೇ ಎಂಬ ಬಗ್ಗೆ ಚರ್ಚಿಸುತ್ತೇನೆಂದು ಭರವಸೆ ನೀಡಿದರು.

ಈ ಸಂದರ್ಭ ಕೊಳ್ನಾಡು ಕಾಂಗ್ರೆಸ್ ಮುಖಂಡ ಪವಿತ್ರ ಪೂಂಜಾ ಕೊಡಂಗೆ, ವಿಟ್ಲ ಪಂಚಾಯತ್ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಹಿರಿಯ ವಿದ್ಯುತ್ ಗುತ್ತಿಗೆದಾರ ಲಕ್ಷ್ಮಿನಾರಾಯಣ ಅಡ್ಯಂತಾಯ ಕುದ್ರಿಯ,
ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಮಾಜಿ ಪಂ.ಸದಸ್ಯ ಸಿದ್ದೀಕ್ ಸರವು ಮತ್ತಿತರರು ಹಾಜರಿದ್ದರು.

Continue Reading

Condolences

ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಶಿಕ್ಷಣ ತಜ್ಞ, ಕೆ. ಎಸ್.ಹೆಗ್ಡೆ ಚಾರಿಟೇಬಲ್ ಹಾಸ್ಪಿಟಲ್ ವ್ಯವಸ್ಥಾಪಕ ನಿರ್ದೇಶಕ ಎನ್. ವಿನಯ್ ಹೆಗ್ಡೆ (86) ನಿಧನ.

Published

on

ಮಂಗಳೂರು : ಹೊಸವರ್ಷ ಆಗಮನದ ಸಂತಸದ ಮಧ್ಯೆಯೇ ಜನವರಿ 1ರ ಮುಂಜಾನೆ ಶಿಕ್ಷಣ ತಜ್ಞ ವಿನಯ್ ಹೆಗ್ಡೆ ನಿಧನದ ಸುದ್ದಿ ಆಘಾತವನ್ನುಂಟು ಮಾಡಿದೆ.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಎಸ್.ಹೆಗ್ಡೆ ಅವರ ದ್ವಿತೀಯ ಪುತ್ರರಾದ ವಿನಯ್ ಹೆಗ್ಡೆ ಅವರು ಕರಾವಳಿ ಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಗ್ರಾಮೀಣ ಪ್ರದೇಶವಾಗಿದ್ದ ನಿಟ್ಟೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತನೆ ಮಾಡಿದ ಕೀರ್ತಿ ವಿನಯ್ ಹೆಗ್ಡೆಯವರಿಗೆ ಸಲ್ಲುತ್ತಿದೆ.
ಶಿಕ್ಷಣ ಮಾತ್ರವಲ್ಲದೇ, ಆರೋಗ್ಯ ಕ್ಷೇತ್ರದಲ್ಲಿಯೂ ಅಪೂರ್ವ ಸಾಧನೆಗೈದು, ಧಾರ್ಮಿಕ, ಸಾಮಾಜಿಕ ಸೇವೆಗಳ ಮ‌ೂಲಕ ಹೆಗ್ಡೆಯವರು ಅಪಾರ ಖ್ಯಾತಿ ಪಡೆದಿದ್ದರು.


ಇವರ ಸೇವೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿ, ಗೌರವಗಳು ಸಂದಿವೆ. ವಿನಯ್ ಹೆಗ್ಡೆ ಅವರ ನಿಧನಕ್ಕೆ ಗಣ್ಯರು, ಶಿಕ್ಷಣ ಪ್ರೇಮಿಗಳು ಹಾಗೂ ರಾಜ್ಯದಾದ್ಯಂತ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಬೆಳಗ್ಗೆ 8-30ರಿಂದ ಸಂಜೆ 3ಗಂಟೆ ವರೆಗೆ ಮಂಗಳೂರು ಶಿವಭಾಗ್ ನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Continue Reading

Belthangady

ಶ್ರೀ ಶಿಶಿಲೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀಲಕ್ಷ್ಮಿ ನಾರಾಯಣ ಭಟ್ ಮಂಚಿತ್ತಾಯ ನಿಧನ

Published

on

ಶಿಶಿಲ:ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಕಳೆದ 14ವರ್ಷಗಳಿಂದ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮೀನಾರಾಯಣ ಭಟ್ ಮಂಚಿತ್ತಾಯ(53) ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ(ಬ್ರೈನ್ ಹೆಮರೇಜ್) ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಕಾರಿ ಆಗದೇ ಡಿ. 27ರಂದು ದೈವಾದೀನರಾಗಿದ್ದಾರೆ.

ಮೃತರು ಮೂಲತಃ ಬೆಳ್ತಂಗಡಿ ತಾಲೂಕಿನ ಸವಣಾಲ್ ಗ್ರಾಮದವರಾಗಿದ್ದು ತಂದೆ ಕೃಷ್ಣ ಭಟ್, ಹೆಂಡತಿ ವಿಶಾಲಾಕ್ಷಿ ಹಾಗೂ ಪ್ರಜ್ಞಾ, ಪೂಜಾ, ಪೃಥ್ವಿ, ಪ್ರಿಯಾ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ

Continue Reading

Trending

Copyright © 2025 Deevatige