Connect with us

Agriculture

50ವರ್ಷಗಳ ಹಿಂದಿನ ಓಬಿರಾಯನ ಕಾಲದ ಕಿಂಡಿ ಅಣೆಕಟ್ಟು.. ಜನನಾಯಕರಿಂದ ನಿರ್ಲಕ್ಷ್ಯಕ್ಕೊಳಗಾದ ಕೃಷಿಕರ ಜೀವನಾಡಿ

Published

on

ಪುತ್ತೂರು : ಒಳಮೊಗ್ರು ಗ್ರಾಮ ಪಂ.ವ್ಯಾಪ್ತಿಯ ಕೈಕಾರ-ಎರ್ಮೆಟ್ಟಿ ಸಂಪರ್ಕದ ಹೊಳೆಯಲ್ಲಿ 1975ರಲ್ಲಿ ಕೃಷಿಕರ ಅನುಕೂಲಕ್ಕಾಗಿ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟು ಜನನಾಯಕರ ನಿರ್ಲಕ್ಷ್ಯದಿಂದಾಗಿ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಕೆಲ ವರ್ಷಗಳ ಕಾಲ ಒಳಮೊಗ್ರು ಗ್ರಾಮ ಪಂಚಾಯತ್ ನಿರ್ವಹಣಾ ಉಸ್ತುವಾರಿ ನೋಡಿಕೊಂಡಿತ್ತು.
1990ರಿಂದ ಪಂಚಾಯತ್ ಕೈ ಚೆಲ್ಲಿದ ಕಾರಣ ಸ್ಥಳೀಯ ಬಡ ಕೃಷಿಕರೇ ಅನಿವಾರ್ಯವಾಗಿ ಮರಳು ಗೋಣಿಗಳ ಬಳಸಿ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡುತ್ತಿದ್ದರು.


ಆ ಬಳಿಕ 2006ರ ತನಕ ಕಿಂಡಿ ಅಣೆಕಟ್ಟಿಲ್ಲದೇ ಬಡ ಕೃಷಿಕರು ಬೇಸಿಗೆ ಕಾಲದಲ್ಲಿ ಹೈರಾಣರಾಗಿದ್ದರು.
ಕಳೆದ ಆರು ವರ್ಷಗಳಿಂದ ಮತ್ತೆ ಮರಳು ತುಂಬಿದ ಗೋಣಿಗಳ ಸಹಾಯದಿಂದ ಸ್ಥಳೀಯರೇ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾದರು. ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಮರಳು ಗೋಣಿಗಳ ರೂಢಿ ಮಾಡುವುದೇ ದೊಡ್ಡ ಕೃಷಿಕರಿಗೆ ದೊಡ್ಡ ಸವಾಲಾಗಿತ್ತು.

ಸ್ಪಂದಿಸದ ಜನನಾಯಕರು.
ಅಣೆಕಟ್ಟು ನಿರ್ವಹಣೆ ಮಾಡಿಸುವಂತೆ ಇಪ್ಪತ್ತೈದಕ್ಕೂ ಹೆಚ್ಚು ಬಡ ಕೃಷಿಕರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಪುಢಾರಿಗಳ ಕಿವಿಗೆ ಬಡವರ ನೋವು ಕೇಳಿಸಿಲ್ಲವಾಗಿತ್ತು.

ಚುನಾವಣಾ ಸಂದರ್ಭದಲ್ಲಿ ಮತದಾರರ ಮನೆ ಬಾಗಿಲಿಗೆ ಬಂದು ಕಿಂಡಿ ಅಣೆಕಟ್ಟು ದುರಸ್ತಿ ಮಾಡಿಸುವ ಭರವಸೆ ನೀಡಿದ್ದ ಪುಡಾರಿಗಳು ಚುನಾವಣೆ ಕಳೆದ ಬಳಿಕ ದುರಸ್ತಿ ಮಾಡಿಸುವುದು ಬಿಡಿ ಅತ್ತ ಕಡೆ ಅಪ್ಪಿತಪ್ಪಿಯೂ ತಲೆ ಹಾಕಿ ಮಲಗಿಲ್ಲ ಎಂಬುದು ಬಡ ಕೃಷಿಕರ ನೋವಿನ ಮಾತಾಗಿದೆ.

ಸಡ್ಡು ಹೊಡೆದ ಸ್ವಾವಲಂಬಿ ಕೃಷಿಕರು..
ಜನಪ್ರತಿನಿಧಿಗಳ/ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಮನನೊಂದ ಇಪ್ಪತೈದಕ್ಕೂ ಹೆಚ್ಚು ಅಣೆಕಟ್ಟು ನೀರಿನ ಫಲಾನುಭವಿಗಳು ಸ್ಥಳೀಯ ನಿವಾಸಿ ನೀರ್ಪಾಡಿ ಸತೀಶ್ ರೈ ನೇತೃತ್ವದಲ್ಲಿ ಒಂದೆಡೆ ಸೇರಿ ಮಾತುಕತೆ ನಡೆಸಿದರು.


ಅಣೆಕಟ್ಟು ನೀರಿನ ಫಲಾನುಭವಿ ಕೃಷಿಕರ ಸಹಕಾರದಲ್ಲಿ ಸುಮಾರು 5ಲಕ್ಷ ವೆಚ್ಚದಲ್ಲಿ ಮರದ ಹಲಗೆ ಉಪಯೋಗಿಸಿ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡುವುದೆಂದು ತೀರ್ಮಾನಿಸಿದರು. ಅದರಂತೆ ಇದೀಗ ಕಾರ್ಯರೂಪಕ್ಕೆ ತಂದಿದ್ದು ಭರದಿಂದ ಕೆಲಸ-ಕಾರ್ಯಗಳು ನಡೆಯುತ್ತಿವೆ.


ನಿಷ್ಕ್ರಿಯ ಆಡಳಿತ ವ್ಯವಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಗೆ ಸಡ್ಡು ಹೊಡೆದ ಕೃಷಿಕರೇ ಇದೀಗ ಜೀವನಾಡಿಯಾದ ಕಿಂಡಿ ಅಣೆಕಟ್ಟು ನಿರ್ಮಿಸುತ್ತಿರುವುದು ಪೊಳ್ಳು ಭರವಸೆ ನೀಡುವ ಪುಢಾರಿಗಳಿಗೆ, ಬಾಲಂಗೋಚಿಯಾಗಿರುವ ಅಧಿಕಾರಿಗಳಿಗೆ ನಾಚಿಕೆಯಿಲ್ಲವೇ?


ಜನಪ್ರಿಯ ಶಾಸಕರು ಕೃಷಿಕರ ನೋವಿಗೆ ಸ್ಪಂದಿಸಬೇಕಾಗಿದೆ.
ರಾಜಕೀಯಕ್ಕೆ ಪ್ರಥಮ ಬಾರಿಗೆ ಧುಮುಕಿ ಅಲ್ಪ ಅವಧಿಯಲ್ಲೇ ತನ್ನ ಕ್ಷೇತ್ರದ ಜನರ ನೋವು ಅರ್ಥೈಸಿಕೊಂಡು ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಾ ಶಹಬ್ಬಾಸ್ ಗಿಟ್ಟಿಸಿಕೊಳ್ಳುತ್ತಿರುವ ಶಾಸಕ ಅಶೋಕ್ ರೈಯವರು ತಕ್ಷಣವೇ ಕೃಷಿಕರ ಜೀವನಾಡಿಯಾಗಿರುವ ಎರ್ಮೆಟ್ಟಿ ಹೊಳೆಯ ಕಿಂಡಿ ಅಣೆಕಟ್ಟು ಹಾಗೂ ತಡೆಗೋಡೆಗಳ ಬಗ್ಗೆ ಸ್ಪಂದಿಸಬೇಕಾಗಿದೆ.

Continue Reading
Advertisement

Agriculture

ಅಖಿಲ ಭಾರತ ಗೇರು ಬೆಳೆಗಾರರ ಸಂಘ.(ರಿ ) ಅಧ್ಯಕ್ಷರಾಗಿ ಗಂಗಾಧರ ನಾಯಕ್, ಪ್ರ,ಕಾರ್ಯದರ್ಶಿಯಾಗಿ ವಿಶ್ವಕೇಶವ ಕುರುವೇರಿ, ಕೋಶಾಧಿಕಾರಿ ದೇವಿಪ್ರಸಾದ್ ಕಲ್ಲಾಜೆ

Published

on

ಪುತ್ತೂರು : ಅಖಿಲ ಭಾರತ ಗೇರು ಬೆಳೆಗಾರರ ಸಂಘ.(ರಿ ) ( AICGA ) ಇದರ ಅಧ್ಯಕ್ಷರಾಗಿ ಗಂಗಾಧರ ನಾಯಕ್ ಎಂ, (ನಿವೃತ್ತ) ನಿರ್ದೇಶಕರು ಗೇರು ಸಂಶೋಧನಾ ಕೇಂದ್ರ ಪುತ್ತೂರು ಹಾಗೂ ಜನರಲ್ ಸೆಕ್ರೆಟರಿ ಆಗಿ ವಿಶ್ವ ಕೇಶವ ಕುರುವೇರಿ, ಗೇರು ಬೆಳೆಗಾರರು, ಎಂಟರ್ಪ್ರೋನರ್. ಕೋಶಾಧಿಕಾರಿ ಆಗಿ ದೇವಿಪ್ರಸಾದ್ ಕಲ್ಲಾಜೆ ಇವರು ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ಸಂಘದ ವತಿಯಿಂದ ಈಗಾಗಲೇ ಸರಕಾರಕ್ಕೆ ಗೇರು ಹಣ್ಣಿನ ಫೆನ್ನಿ ತಯಾರಿಕೆಗೆ ಲೈಸನ್ಸ್ ನೀಡುವಂತೆ ಮನವಿ ಮಾಡಲಾಗಿದೆ.


ಈ ಸಂಬoಧ ಇನ್ನಷ್ಟು ಕಾರ್ಯತಂತ್ರ ರೂಪಿಸಲು ನಿನ್ನೆ ನಡೆದ ಸಭೆಯು ತೀರ್ಮಾನಿಸಿತು.
ಸಂಘದ ಸಭೆಯಲ್ಲಿ ಶಂಕರ ನಾರಾಯಣ ಭಟ್ ಖಂಡಿಗೆ ಮಾಜಿ ಉಪಾಧ್ಯಕ್ಷರು CAMPCO, ಮತ್ತು ಹಿರಿಯ ಗೇರು ಬೆಳೆಗಾರರಾದ ಶುಭಾಶ್ ರೈ ಕಡಮಜಲು ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

Trending

Copyright © 2025 Deevatige