Employment
ಸರಕಾರಿ ನೌಕರರ ಡ್ರೆಸ್ ಕೋಡ್ ; ಹರಿದ ಜೀನ್ಸ್, ಸ್ಲೀವ್ ಲೆಸ್ ಗೆ ಬಿತ್ತು ಬ್ರೇಕ್
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ತನ್ನ ನೌಕರರ ಶಿಸ್ತು ಮತ್ತು ನಡವಳಿಕೆಗೆ ಸಂಬoಧಿಸಿದoತೆ ಉಡುಪು, ಕೆಲಸದ ಅವಧಿ ಮತ್ತು ಪಾರದರ್ಶಕತೆಯನ್ನು ಕಾಯ್ದು ಕೊಳ್ಳಲು ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಕಚೇರಿಗಳಲ್ಲಿ ನೌಕರರ ವಸ್ತ್ರಸಂಹಿತೆ ಮತ್ತು ಹಾಜರಾತಿಯಲ್ಲಿ ಕಂಡುಬರುತ್ತಿರುವ ಸಡಿಲಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಟ್ಟುನಿಟ್ಟಾದ ಹೊಸ ಸುತ್ತೋಲೆಯನ್ನು ಹೊರಡಿಸಿದೆ.

ಈ ಸುತ್ತೋಲೆಯನ್ನು ಕೇವಲ ಕಾಗದಕ್ಕಷ್ಟೇ ಸೀಮಿತಗೊಳಿಸದೆ ಪ್ರಾಯೋಗಿಕವಾಗಿ ಜಾರಿಗೆ ತರಲು ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವ ನೌಕರರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸರ್ಕಾರವು ನೌಕರರಿಗೆ ಸಭ್ಯ ಮತ್ತು ಸೌಮ್ಯ ಉಡುಗೆಯನ್ನು ಕಡ್ಡಾಯಗೊಳಿಸಿ ಅಸಭ್ಯ ಉಡುಪು ನಿಷೇಧಿಸಿದೆ. ಪುರುಷ ನೌಕರರು ಪ್ಯಾಂಟ್ ಮತ್ತು ಶರ್ಟ್ ಧರಿಸಬೇಕು ಹಾಗೂ ಮಹಿಳಾ ನೌಕರರು ಸೀರೆ ಅಥವಾ ಚೂಡಿದಾರ್ನಂತಹ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವುದು ಸೂಕ್ತ ಎಂದು ಸೂಚಿಸಲಾಗಿದೆ.
ಕೇವಲ ಉಡುಪಷ್ಟೇ ಅಲ್ಲದೆ, ಕೆಲಸದ ಅವಧಿಯ ಶಿಸ್ತಿಗೂ ಸರ್ಕಾರ ಆದ್ಯತೆ ನೀಡಿದೆ. ನಿಯಮದ ಪ್ರಕಾರ, ಎಲ್ಲಾ ನೌಕರರು ಬೆಳಿಗ್ಗೆ ೧೦:೧೦ ರೊಳಗೆ ಕಚೇರಿಗೆ ಹಾಜರಿರಬೇಕು. ಕಚೇರಿ ಅವಧಿಯಲ್ಲಿ ಅಧಿಕೃತ ಕೆಲಸದ ಮೇಲೆ ಹೊರಗೆ ಹೋಗಬೇಕಾದ ಸಂದರ್ಭ ಎದುರಾದರೆ, ಅದನ್ನು ‘ಚಲನೆ ರಿಜಿಸ್ಟರ್’ (movement register) ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಯಾವುದೇ ದಾಖಲೆ ಇಲ್ಲದೆ ಸೀಟಿನಲ್ಲಿ ಇಲ್ಲದಿರುವುದು ಕರ್ತವ್ಯ ಲೋಪವೆಂದು ಪರಿಗಣಿಸಲಾಗುತ್ತದೆ.

ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸರ್ಕಾರವು ‘ನಗದು ಘೋಷಣೆ ರಿಜಿಸ್ಟರ್’ (cash declaration register) ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಕಚೇರಿಗೆ ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ನೌಕರರು ತಮ್ಮ ಬಳಿ ಇರುವ ನಗದು ಮೊತ್ತವನ್ನು ದಾಖಲಿಸಬೇಕು. ಇದು ಅನಗತ್ಯ ಆಪಾದನೆಗಳಿಂದ ನೌಕರರನ್ನು ರಕ್ಷಿಸುವುದಲ್ಲದೆ, ಕಚೇರಿಯಲ್ಲಿ ಭ್ರಷ್ಟಾಚಾರ ತಡೆಯಲು ಸಹಕಾರಿಯಾಗಲಿದೆ.
ಸರ್ಕಾರಿ ಕಚೇರಿ ಎನ್ನುವುದು ಸಾರ್ವಜನಿಕ ಸೇವಾ ಕೇಂದ್ರವಾಗಿದ್ದು, ಅಲ್ಲಿನ ನೌಕರರ ಉಡುಗೆ-ತೊಡುಗೆಗಳು ಗೌರವಯುತವಾಗಿರಬೇಕು ಎಂಬುದು ಸರ್ಕಾರದ ಆಶಯ. ಇತ್ತೀಚೆಗೆ ಕೆಲವು ಸಿಬ್ಬಂದಿಗಳು, ವಿಶೇಷವಾಗಿ ಕಿರಿಯ ವರ್ಗದ ನೌಕರರು, ಕಚೇರಿಗೆ ಹರಿದ ಜೀನ್ಸ್ (ripped jeans), ತೋಳಿಲ್ಲದ ಉಡುಪುಗಳು (Sleeveless) ಮತ್ತು ಅತ್ಯಂತ ಬಿಗಿಯಾದ ಬಟ್ಟೆಗಳನ್ನು ಧರಿಸಿ ಬರುತ್ತಿರುವುದು ಕಂಡುಬoದಿದೆ. ಇದು ಕಚೇರಿ ವಾತಾವರಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದು, ಸಾರ್ವಜನಿಕರಿಂದಲೂ ಈ ಬಗ್ಗೆ ದೂರುಗಳು ಕೇಳಿಬಂದಿದ್ದವು.
ವಿಶೇಷವೆಂದರೆ, ಸರ್ಕಾರದ ಈ ಕಠಿಣ ನಡೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸ್ವಾಗತಿಸಿದೆ. ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಅವರು ಮಾತನಾಡಿ, ಸರ್ಕಾರಿ ನೌಕರರು ಸಮಾಜಕ್ಕೆ ಮಾದರಿಯಾಗಿರಬೇಕು. ಕಚೇರಿಯ ಘನತೆಯನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ನೌಕರನ ಜವಾಬ್ದಾರಿ ಎಂದು ಹೇಳುವ ಮೂಲಕ ಶಿಸ್ತು ಪಾಲನೆಗೆ ಬೆಂಬಲ ಸೂಚಿಸಿದ್ದಾರೆ.
education
ಸೈನಿಕರು ಇನ್ನು ಮುಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವಂತಿಲ್ಲ ! ವೀಕ್ಷಣೆಗೆ ಮಾತ್ರ ಮೀಸಲು – ಭಾರತೀಯ ಸೇನೆ ಆದೇಶ
ಯೋಧರು ಇನ್ನು ಮುಂದೆ ಇನ್ಸ್ಟಾಗ್ರಾಮ್ ಮತ್ತು ಎಕ್ಸ್ \ ತಾಣಗಳನ್ನು. ಕೇವಲ ಮಾಹಿತಿ ಪಡೆಯಲು ಅಥವಾ ವಿಡಿಯೋ/ಪೋಸ್ಟ್ಗಳನ್ನು ನೋಡಲು ಮಾತ್ರ ಬಳಸಬಹುದಾಗಿರುತ್ತದೆ. ಯೋಧರು ಯಾವುದೇ ಪೋಸ್ಟ್ಗಳನ್ನು ಹಾಕುವಂತಿಲ್ಲ, ಯಾವುದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡುವಂತಿಲ್ಲ ಅಥವಾ ಲೈಕ್ ಮಾಡುವಂತಿಲ್ಲ. ಕೇವಲ ಆ ಪೋಸ್ಟ್ಗಳನ್ನ ಮಾತ್ರ ವೀಕ್ಷಿಸಬಹುದು ಎಂಬುವುದಾಗಿ ಭಾರತೀಯ ಸೇನೆಯ ಇತ್ತೀಚಿನ ಆದೇಶದಲ್ಲಿ ತಿಳಿಸಲಾಗಿದೆ.

ದೇಶದ ರಕ್ಷಣೆ ಮಾಡುವ ಯೋಧರ ಶಿಸ್ತು ಮತ್ತು ಭದ್ರತೆಯ ದೃಷ್ಟಿಯಿಂದ ಭಾರತೀಯ ಸೇನೆಯು ತನ್ನ ಸಾಮಾಜಿಕ ಮಾಧ್ಯಮ ಬಳಕೆಯ ನೀತಿಯಲ್ಲಿ ಮಹತ್ವದ ತಿದ್ದುಪಡಿ ಮಾಡಿದೆ. ದಶಕಗಳಿಂದಲೂ ಯೋಧರು ಸಾರ್ವಜನಿಕವಾಗಿ ಸೋಶಿಯಲ್ ಮೀಡಿಯಾ ಬಳಸುವುದರ ಮೇಲೆ ಕಟ್ಟುನಿಟ್ಟಿನ ನಿಷೇಧವಿತ್ತು. ಈಗ ಆ ನಿಯಮದಲ್ಲಿ ಸಣ್ಣ ಸಡಿಲಿಕೆ ಮಾಡಲಾಗಿದ್ದು, ಜ್ಞಾನಾರ್ಜನೆಯ ಉದ್ದೇಶಕ್ಕಾಗಿ ಕೆಲವು ಸಾಮಾಜಿಕ ಜಾಲತಾಣಗಳನ್ನು ಬಳಸಲು ಅನುಮತಿ ನೀಡಲಾಗಿದೆ.
ಶತ್ರು ರಾಷ್ಟ್ರಗಳ ಗುಪ್ತಚರ ಸಂಸ್ಥೆಗಳು ಸುಂದರ ಯುವತಿಯರ ಹೆಸರಿನಲ್ಲಿ ಫೇಕ್ ಪ್ರೊಫೈಲ್ ಸೃಷ್ಟಿಸಿ ಯೋಧರನ್ನು ಸ್ನೇಹದ ಜಾಲಕ್ಕೆ ಬೀಳಿಸುತ್ತವೆ. ಈ ಮೂಲಕ ಸೇನೆಯ ರಹಸ್ಯ ಮಾಹಿತಿಗಳನ್ನು ಕದಿಯುವ ಅಪಾಯವಿರುತ್ತದೆ. ತಿಳಿಯದೆಯೇ ಯೋಧರು ತಮ್ಮ ಸ್ಥಳ ಅಥವಾ ಸೇನಾ ನೆಲೆಯ ಫೋಟೋಗಳನ್ನು ಹಂಚಿಕೊoಡಾಗ, ಅದು ದೇಶದ ಭದ್ರತೆಗೆ ದೊಡ್ಡ ಸಂಚಕಾರ ತರಬಲ್ಲದು ಎಂಬ ಎರಡು ಕಾರಣಗಳು ಈ ಕಠಿಣ ನಿರ್ಧಾರಕ್ಕೆ ಕಾರಣವಾಗಿದೆ.

ಫೇಸ್ಬುಕ್ ಸೇರಿದಂತೆ ಚೀನಾ ಮೂಲದ ಆಪ್ಗಳು ಮತ್ತು ಇತರ ಮೆಸೇಜಿಂಗ್ ಆಪ್ಗಳ ಮೇಲಿನ ಸಂಪೂರ್ಣ ನಿಷೇಧ ಹಾಗೆಯೇ ಮುಂದುವರಿಯಲಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ಸ್ಮಾರ್ಟ್ಫೋನ್ ಬಳಕೆಯ ಮೇಲೂ ಮಿತಿ ಹೇರಲಾಗಿದೆ. ಈ ಹೊಸ ಬದಲಾವಣೆಯು ಕೇವಲ ಯೋಧರು ಜಾಗತಿಕ ವಿದ್ಯಮಾನಗಳನ್ನು ತಿಳಿದುಕೊಳ್ಳಲಿ ಎಂಬ ಉದ್ದೇಶವನ್ನು ಹೊಂದಿದೆ.
ತoತ್ರಜ್ಞಾನದ ಯುಗದಲ್ಲಿ ಮಾಹಿತಿ ಎಲ್ಲರಿಗೂ ಅಗತ್ಯ. ಆದರೆ ದೇಶದ ಭದ್ರತೆಯ ವಿಷಯ ಬಂದಾಗ ಶಿಸ್ತು ಅತಿ ಮುಖ್ಯ. ಭಾರತೀಯ ಸೇನೆಯ ಈ ಸಮತೋಲಿತ ನಿರ್ಧಾರವು ಯೋಧರಿಗೆ ಬಾಹ್ಯ ಪ್ರಪಂಚದ ಅರಿವು ಮೂಡಿಸುವ ಜೊತೆಗೆ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ
Dakshina Kannada
ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗನಿಗೆ ಮನ್ನಣೆ: ‘ಆಲ್ ಇಂಡಿಯಾ ಮಜ್ದೂರ್ ಯೂನಿಯನ್’ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಎಚ್. ಎಂ. ಮಲ್ಲಿಕಾರ್ಜುನ್ ಆಯ್ಕೆ
ಬೆಂಗಳೂರು, ಡಿಸೆಂಬರ್ 24: ರಾಷ್ಟ್ರದಾದ್ಯಂತ ವ್ಯಾಪಿಸಿರುವ ಪ್ರಬಲ ಕಾರ್ಮಿಕ ಸಂಘಟನೆಯಾದ ‘ಆಲ್ ಇಂಡಿಯಾ ಮಜ್ದೂರ್ ಯೂನಿಯನ್’ (All India Mazdoor Union) ನ ನೂತನ ರಾಷ್ಟ್ರೀಯ ಉಪಾಧ್ಯಕ್ಷರಾಗಿ (National Vice President) ಕರ್ನಾಟಕದ ಹಿರಿಯ ಕಾರ್ಮಿಕ ಮುಖಂಡರಾದ ಶ್ರೀ ಎಚ್. ಎಂ. ಮಲ್ಲಿಕಾರ್ಜುನ್ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಘನಶ್ಯಾಮ್ ಅಡ್ಸುಲ್ (Ghanshyam Adsul) ಅವರು ಡಿಸೆಂಬರ್ 23 ರಂದು ಅಧಿಕೃತ ಆದೇಶ ಹೊರಡಿಸಿದ್ದು, ರಾಷ್ಟ್ರೀಯ ನಾಯಕತ್ವಕ್ಕೆ ಕನ್ನಡಿಗರೊಬ್ಬರನ್ನು ಆಯ್ಕೆ ಮಾಡಿರುವುದು ರಾಜ್ಯದ ಕಾರ್ಮಿಕ ವಲಯದಲ್ಲಿ ಸಂತಸ ಮೂಡಿಸಿದೆ.

ಸಂಘಟನೆಯ ವ್ಯಾಪ್ತಿ ಮತ್ತು ಮಹತ್ವ:
‘ಆಲ್ ಇಂಡಿಯಾ ಮಜ್ದೂರ್ ಯೂನಿಯನ್’ ಟ್ರೇಡ್ ಯೂನಿಯನ್ ಕಾಯ್ದೆ 1926 ರ ಅಡಿಯಲ್ಲಿ ನೋಂದಾಯಿತವಾದ ರಾಷ್ಟ್ರೀಯ ಸಂಘಟನೆಯಾಗಿದೆ. ಇದು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲದೆ, ಜನರಲ್, ಸೆಕ್ಯುರಿಟಿ (Security), ಲೋಡಿಂಗ್-ಅನ್ಲೋಡಿಂಗ್, ಟೀ ಮತ್ತು ಕಾಫಿ ಪ್ಲಾಂಟೇಶನ್ (Tea & Coffee Plantation), ಹಾಗೂ ಟ್ರಾನ್ಸ್ಪೋರ್ಟ್ (Transport) ಮುಂತಾದ ವಿವಿಧ ಅಸಂಘಟಿತ ಮತ್ತು ಸಂಘಟಿತ ವಲಯದ ಕಾರ್ಮಿಕರ ಪರವಾಗಿ ದಶಕಗಳಿಂದ ಹೋರಾಡುತ್ತಿದೆ. ಇಂತಹ ಬೃಹತ್ ಜವಾಬ್ದಾರಿಯನ್ನು ಹೊಂದಿರುವ ಸಂಘಟನೆಯ ಚುಕ್ಕಾಣಿ ಹಿಡಿಯುವ ತಂಡದಲ್ಲಿ ಈಗ ಮಲ್ಲಿಕಾರ್ಜುನ್ ಅವರು ಸ್ಥಾನ ಪಡೆದಿದ್ದಾರೆ.
ಜವಾಬ್ದಾರಿ ಮತ್ತು ನಿರೀಕ್ಷೆಗಳು:
ನೇಮಕಾತಿ ಪತ್ರದಲ್ಲಿ ತಿಳಿಸಿರುವಂತೆ, ಮಲ್ಲಿಕಾರ್ಜುನ್ ಅವರು ಸಂಘಟನೆಯ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ. ಕಾರ್ಮಿಕರ ಹಕ್ಕುಗಳ ರಕ್ಷಣೆ, ಸಂಘಟನೆಯ ಬಲವರ್ಧನೆ ಮತ್ತು ಹಿರಿಯ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸುವ ಗುರುತರ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ.

ರಾಜ್ಯಕ್ಕೆ ಹೆಮ್ಮೆ:
ದೆಹಲಿ ಮತ್ತು ಮುಂಬೈ ಮಟ್ಟದಲ್ಲಿ ನಡೆಯುವ ರಾಷ್ಟ್ರೀಯ ಕಾರ್ಮಿಕ ಚಟುವಟಿಕೆಗಳಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಮಲ್ಲಿಕಾರ್ಜುನ್ ಅವರು ಧ್ವನಿ ಎತ್ತಲಿದ್ದಾರೆ. ಅವರ ನೇಮಕಾತಿಯು ರಾಜ್ಯದ ಕಾಫಿ ತೋಟದ ಕಾರ್ಮಿಕರು, ಸಾರಿಗೆ ನೌಕರರು ಮತ್ತು ಭದ್ರತಾ ಸಿಬ್ಬಂದಿಗಳ ಸಮಸ್ಯೆಗಳನ್ನು ರಾಷ್ಟ್ರಮಟ್ಟದಲ್ಲಿ ಪರಿಹರಿಸಲು ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ನೂತನ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಶ್ರೀ ಎಚ್. ಎಂ. ಮಲ್ಲಿಕಾರ್ಜುನ್ ಅವರಿಗೆ ಸಂಘದ ಪದಾಧಿಕಾರಿಗಳು, ಕಾರ್ಮಿಕ ಬಂಧುಗಳು ಮತ್ತು ಹಿತೈಷಿಗಳು ಶುಭ ಕೋರಿದ್ದಾರೆ.
-
crime3 days agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
