Condolences
ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಕಳೆದ 14 ದಿನಗಳಿಂದ ದರಣಿ ನಿರತ ಕೌಕ್ರಾಡಿ ನಿವಾಸಿ ರಾದಮ್ಮ ದಂಪತಿಗಳನ್ನು ಭೇಟಿಯಾಗಿ ನ್ಯಾಯ ಕೊಡಿಸುವ ಭರವಸೆ ನೀಡಿದ ಶಾಸಕ ಅಶೋಕ್ ರೈ.
ಪುತ್ತೂರು : ಕಂದಾಯ ಇಲಾಖೆಯ ಅಧಿಕಾರಿಗಳು ನೆಲಸಮಗೊಳಿಸಿ ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ಮತ್ತು ನ್ಯಾಯ ಸಿಗುವ ತನಕ ಇಲ್ಲಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದಿರುವ ಕಡಬಾ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನ ಬಾಗಿಲು ನಿವಾಸಿಗಳಾದ ವೃದ್ಧ ರಾಧಮ್ಮ ಹಾಗೂ ಮುತ್ತುಸ್ವಾಮಿ ದಂಪತಿಗಳನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಇಂದು ಭೇಟಿ ಮಾಡಿ ಅವರಿಗೆ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದರು.

ಪುತ್ತೂರು ಆಡಳಿತ ಸೌಧದ ಎದುರು ಆರಂಭಿಸಿರುವ ಅಹೋರಾತ್ರಿ ಧರಣಿ 7 ದಿನಗಳಿಂದ ಮುಂದುವರೆದಿದ್ದು, ರಜಾ ದಿನವಾದ ಭಾನುವಾರವೂ ಮುಂದುವರೆದಿದೆ. ಆಡಳಿತ ಸೌಧದ ಎದುರು ಭಾಗದಲ್ಲಿರುವ ಮರದಡಿಯಲ್ಲಿ ಕಳೆದ ಹಲವು ದಿನಗಳಿಂದ ವೃದ್ಧ ದಂಪತಿ ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ. ಆರಂಭದ ದಿನ ಧರಿಸಿದ ಬಟ್ಟೆಯಲ್ಲಿ ಸ್ನಾನವನ್ನು ಮಾಡದೆ ಧರಣಿ ನಡೆಸುತ್ತಿದ್ದು, ರಾತ್ರಿ ವೇಳೆ ಮರದಡಿಯಲ್ಲಿ ಮಲಗುತ್ತಿದ್ದಾರೆ

ರಾತ್ರಿವೇಳೆ ಸೊಳ್ಳೆಗಳ ಕಾಟದಿಂದ ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ ಎಂದು ದಂಪತಿಯೊoದಿಗೆ ಧರಣಿ ಕುಳಿತಿರುವ ಅವರ ಪುತ್ರ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಗೆ ಜಿಲ್ಲಾಧಿಕಾರಿ ಬರುತ್ತಾರೆಂಬ ಮಾಹಿತಿ ಇತ್ತು ಆದರೆ ಅವರು ಬಂದಿರಲಿಲ್ಲ. ಉಪವಿಭಾಗಾಧಿಕಾರಿಗಳು ನೀಡಿರುವ ಕಾಲಾವಕಾಶದಲ್ಲಿ ಇನ್ನೂ ಒಂದು ದಿನಗಳಷ್ಟೇ ಬಾಕಿ ಇದ್ದು ನ್ಯಾಯ ಸಿಗದಿದ್ದರೆ ಜನವರಿ ೬ ರಿಂದ ಆಹಾರ ತ್ಯಜಿಸಿ ಧರಣಿ ನಡೆಸುವ ನಿರ್ಧಾರ ಕೈಗೊಳ್ಳುವ ಹಂತಕ್ಕೆ ಶಾಸಕರು ಧರಣಿ ನಿರತರನ್ನು ಭೇಟಿ ಮಾಡಿ ಅವರ ಸಂಕಷ್ಟವನ್ನು ಆಲಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.
ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನ ಬಾಗಿಲು ನಿವಾಸಿಗಳಾದ ವೃದ್ಧ ರಾಧಮ್ಮ ಹಾಗೂ ಮುತ್ತುಸ್ವಾಮಿ ದಂಪತಿಗಳ ಮನೆಯನ್ನು ನೆಲಸಮ ಗೊಳಿಸಿ ಒಂದು ವರ್ಷವೇ ಕಳೆದಿದೆ ಒಂದು ವರ್ಷದ ಹಿಂದೆ ಇವರ ಮನೆಯನ್ನು ನೆಲಸಮಗೊಳಿಸಲಾಗಿತ್ತು. ವೃದ್ಧ ದಂಪತಿಗಳು ಅಂದಿನಿoದ ಸರಿಯಾದ ಸೂರು ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಪ್ರಸ್ತುತ ಸ್ಥಿತಿ: ಮಳೆ, ಗಾಳಿ ಮತ್ತು ಬಿಸಿಲಿಗೆ ಮೈಯೊಡ್ಡಿ ತಾತ್ಕಾಲಿಕ ಶೆಡ್ ಅಥವಾ ಅಸುರಕ್ಷಿತ ಜಾಗದಲ್ಲಿ ವಾಸಿಸುವ ಅನಿವಾರ್ಯತೆ ಇವರಿಗೆ ಎದುರಾಗಿದೆ.

ಅವರಿಗೆ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿ ನೀತಿ ತಂಡವು ಕಳೆದ ಒಂದು ವರ್ಷದಿಂದಲೂ ತಂಡದ ಮುಖ್ಯಸ್ಥ ಹಾಗೂ ಹೋರಾಟಗರರಾದ ಜಯಂತ್ ಟಿ ನೇತೃತ್ವದಲಿ ನಿರಂತರವಾಗಿ ಹೋರಾಟ ನಡೆಸುತ್ತಲೇ ಇದೆ.
ಬಡಜನತೆಯ ಸಂಕಷ್ಟಗಳಿಗೆ ಕೈಹಿಡಿದು ಸ್ಪಂದಿಸುವ ಶಾಸಕ ಆಶೋಕ್ ಕುಮಾರ್ ರೈಯವರು ಧರಣಿ ನಿರತರ ಟರ್ಪಾಲಿನಲ್ಲಿಯೇ ಕುಳಿತು ಕೊಂಡು ಅವರ ಸಂಕಷ್ಟವನ್ನು ಆಲಿಸಿದ್ದಾರೆ.

ಜನವರಿ ೫ರಂದು ಅಧಿಕಾರಿಗಳನ್ನು ಕರೆದು ವೃದ್ಧ ದಂಪತಿಗಳಿಗೆ ನ್ಯಾಯ ಒದಗಿಸುವಲ್ಲಿ ಪ್ರಯತ್ನಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು. ಧರಣಿ ಮುಂದುವರಿದಿದೆ. ನ್ಯಾಯಸ್ಥಾನದಲ್ಲಿರುವ ವೃದ್ಧರಿಗೆ ನ್ಯಾಯ ಸಿಕ್ಕಿಯೇ ಸಿಗುತ್ತದೆ ಎಂಬ ವಿಶ್ವಾಸ ನಮಗಿದೆ. ಅವರಿಗೆ ನ್ಯಾಯ ಸಿಗಲೇ ಬೇಕು ಎಂದು ನೀತಿ ತಂಡ ತಿಳಿಸಿದೆ.
Condolences
ಮಂಡ್ಯದಲ್ಲಿ ಕಣ್ಣೀರು ತರಿಸುವ ಘಟನೆ: ಬದುಕಿದ್ದಾಗ ಕಡೆಗಣಿಸಿ ಸತ್ತಾಗ ಲಕ್ಷಾಂತರ ರೂ. ಹಂಚಿಕೊಂಡ ಸಂಬಂಧಿಕರು!
ಮಂಡ್ಯ: ಮಾನವೀಯತೆ ಮರೆತು, ಹಣಕ್ಕಷ್ಟೇ ಬೆಲೆ ನೀಡುವ ಕಟು ಸತ್ಯಕ್ಕೆ ಸಾಕ್ಷಿಯಾಗುವಂತಹ ಹೃದಯವಿದ್ರಾವಕ ಘಟನೆಯೊಂದು ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ನಡೆದಿದೆ. ಆಸರೆ ನೀಡಬೇಕಾದ ಕುಟುಂಬಸ್ಥರಿದ್ದರೂ ಭಿಕ್ಷೆ ಬೇಡಿ ಬದುಕುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ನಂತರ, ಅವರ ಮನೆಯಲ್ಲಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದ್ದು, ಸತ್ತ ಮೇಲೆ ಆ ಹಣವನ್ನು ಸಂಬಂಧಿಕರು ಹಂಚಿಕೊಂಡಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಡ್ಯ ನಗರದ ಗುತ್ತಲು ನಿವಾಸಿಯಾಗಿದ್ದ ನೂರ್ ಎಂಬ ವೃದ್ಧೆ, ಕುಟುಂಬದವರ ನೆರವಿಲ್ಲದೆ ದಶಕಗಳಿಂದ ಊರೂರು ಅಲೆದು ಭಿಕ್ಷಾಟನೆ ಮಾಡುತ್ತಿದ್ದರು. ಸಿಕ್ಕರೆ ಊಟ, ಇಲ್ಲದಿದ್ದರೆ ಉಪವಾಸ ಎಂಬಂತೆ ದಿನ ದೂಡುತ್ತಿದ್ದ ಇವರು, ವಯೋಸಹಜ ಕಾಯಿಲೆಯಿಂದ ತಮ್ಮ ಪುಟ್ಟ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸಾವಿನ ನಂತರ ಬೆಳಕಿಗೆ ಬಂದ ಲಕ್ಷಾಂತರ ರೂಪಾಯಿ! ವೃದ್ಧೆ ಮೃತಪಟ್ಟ ಸುದ್ದಿ ತಿಳಿದು ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಬಳಿಕ ಮನೆಯನ್ನು ಪರಿಶೀಲಿಸಿದಾಗ ಮೂಟೆಗಳು ಹಾಗೂ ಪೆಟ್ಟಿಗೆಗಳಲ್ಲಿ ಕಂತೆ ಕಂತೆ ನೋಟುಗಳು ಮತ್ತು ನಾಣ್ಯಗಳು ಪತ್ತೆಯಾಗಿವೆ. ಎಣಿಕೆ ಮಾಡಿದಾಗ ಒಟ್ಟು ಮೊತ್ತ ₹8 ಲಕ್ಷಕ್ಕೂ ಅಧಿಕ ಇರುವುದು ತಿಳಿದುಬಂದಿದೆ.
ಆಶ್ಚರ್ಯ ಎಂದರೆ, ಅಜ್ಜಿ ಬದುಕಿದ್ದಾಗ ತಿರುಗಿಯೂ ನೋಡದ, ಅವರ ಕಷ್ಟಕ್ಕೆ ಸ್ಪಂದಿಸದ ಸಂಬಂಧಿಕರು, ಈ ಹಣ ಪತ್ತೆಯಾಗುತ್ತಿದ್ದಂತೆಯೇ ಅದನ್ನು ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವೃದ್ಧೆ ಬದುಕಿದ್ದಾಗ ಅನ್ನ ಹಾಕದವರು, ಸತ್ತ ಮೇಲೆ ಅವರ ಕಷ್ಟದ ಹಣಕ್ಕೆ ಮುಗಿಬಿದ್ದಿರುವುದು ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗುತ್ತಿದೆ. “ಹಣಕ್ಕೆ ಕೊಡುವ ಬೆಲೆಯನ್ನು ಮನುಷ್ಯತ್ವಕ್ಕೆ ನೀಡದ ಇವರೆಲ್ಲಾ ಮನುಷ್ಯರಾ?” ಎಂದು ಸಾರ್ವಜನಿಕರು ಹಾಗೂ ನೆಟ್ಟಿಗರು ಸಂಬಂಧಿಕರ ಅನಾಗರಿಕ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ
Condolences
ಚಿಕ್ಕಬಾಣಾವರದಲ್ಲಿ ಬೆಚ್ಚಿಬೀಳಿಸುವ ಜೋಡಿ ಕೊಲೆ: ಪ್ರಿಯಕರನ ಜೊತೆ ಸೇರಿ ಗಂಡ, ಮಗನನ್ನೇ ಕೊಲೆಮಾಡಿದ ಪಾಪಿ ಪತ್ನಿ!
ಬೆಂಗಳೂರು: ರಾಜಧಾನಿಯ ಚಿಕ್ಕಬಾಣಾವರದಲ್ಲಿ ನಡೆದಿದ್ದ ಗಂಡ ಹಾಗೂ ಪುಟ್ಟ ಮಗುವಿನ ರಹಸ್ಯ ಕೊಲೆ ಪ್ರಕರಣದ ಸುತ್ತಲಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದರೆಂಬ ಕಾರಣಕ್ಕೆ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಸ್ವಂತ ಗಂಡ ಹಾಗೂ ಕಣ್ಣೆದುರೇ ಘಟನೆಯನ್ನು ಕಂಡ ಮೂಕಪ್ರಾಣಿ ಮಗುವನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅಭಿನಂದನ್ ಅವರ ಪತ್ನಿ ಹರಿಣಿ ಪೊಲೀಸರ ತೀವ್ರ ವಿಚಾರಣೆ ಎದುರಿಸಿದ್ದು, ತಾನೇ ನಡೆಸಿದ ನರಮೇಧದ ಅಸಲಿ ಕಹಾನಿಯನ್ನು ಒಪ್ಪಿಕೊಂಡಿದ್ದಾಳೆ.

ರಕ್ತಸಿಕ್ತ ರಾತ್ರಿಯ ಭೀಕರ ಘಟನೆ: ನಡೆದಿದ್ದು ಹೇಗೆ?
ಸಿಸಿಟಿವಿ ಆಫ್, ಪ್ರಿಯಕರನ ಎಂಟ್ರಿ: ಘಟನೆ ನಡೆದ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಹರಿಣಿ ತನ್ನ ಪ್ರಿಯಕರ ವಿನಯ್ನನ್ನು ಮನೆಗೆ ಕರೆಸಿಕೊಂಡಿದ್ದಳು. ಕೃತ್ಯಕ್ಕೆ ಯಾವುದೇ ಸಾಕ್ಷ್ಯ ಸಿಗದಂತೆ ಮಾಡಲು ಮೊದಲೇ ಮನೆಯಲ್ಲಿದ್ದ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಆಫ್ ಮಾಡಿದ್ದಳು.
ಸೌಟ್ನಿಂದ ಹೊಡೆದು ಗಂಡನ ಹತ್ಯೆ: ವಿನಯ್ ಬಂದ ನಂತರ ಇಬ್ಬರೂ ಸೇರಿ ಗಾಢ ನಿದ್ರೆಯಲ್ಲಿದ್ದ ಅಭಿನಂದನ್ ಅವರ ಮೇಲೆ ದಾಳಿ ನಡೆಸಿದ್ದಾರೆ. ಮನೆಯಲ್ಲಿದ್ದ ಸೌಟ್ನಿಂದ (ಸಾಂಬಾರ್ ಸೌಟು/ಮೆಟಲ್ ಸೌಟು) ಅಭಿನಂದನ್ ಅವರ ತಲೆಗೆ ಬಲವಾಗಿ ಹಲ್ಲೆ ನಡೆಸಿ ಕ್ರೂರವಾಗಿ ಕೊಲೆ ಮಾಡಿದ್ದಾರೆ.
ಸಾಕ್ಷಿ ನಾಶಕ್ಕೆ ಕಂದಮ್ಮನ ಕೊಲೆ: ಗಂಡನ ಕೊಲೆಯಾಗುತ್ತಿದ್ದ ಭೀಕರ ದೃಶ್ಯವನ್ನು ದಂಪತಿಯ ಪುಟ್ಟ ಮಗ ಯದುವೀರ್ ಕಣ್ಣಾರೆ ಕಂಡಿದ್ದಾನೆ. ಮಗು ಮುಂದೆ ಪೊಲೀಸರಿಗೆ ಅಥವಾ ಸಂಬಂಧಿಕರಿಗೆ ವಿಚಾರ ತಿಳಿಸಿ ತಮಗೆ ತೊಂದರೆಯಾಗಬಹುದು ಎಂಬ ಭೀತಿಯಿಂದ, ಹರಿಣಿ ಹಾಗೂ ಆಕೆಯ ಪ್ರಿಯಕರ ವಿನಯ್ ಸೇರಿ ಮಗುವಿನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಸಾಕ್ಷ್ಯ ನಾಶಕ್ಕೆ ಕಿರಾತಕ ಪ್ಲಾನ್!
ಕೊಲೆಯ ಬಳಿಕ ಪೊಲೀಸರ ಕಣ್ಣಿಗೆ ಮಣ್ಣೆರಚಲು ಹರಿಣಿ ಮಾಸ್ಟರ್ ಪ್ಲಾನ್ ರೂಪಿಸಿದ್ದಳು:
ಸುಳ್ಳು ಕಥೆ ಸೃಷ್ಟಿ: ಗಂಡ ನಿದ್ರೆಯಲ್ಲಿ ಮಗುವಿನ ಮೇಲೆ ಬಿದ್ದು, ಉಸಿರುಗಟ್ಟಿ ಮಗು ಮೃತಪಟ್ಟಿದೆ ಹಾಗೂ ಗಂಡನಿಗೆ ನೈಸರ್ಗಿಕವಾಗಿ ಪೆಟ್ಟಾಗಿದೆ ಎಂಬಂತೆ ಬಿಂಬಿಸಲು ಅಭಿನಂದನ್ ಅವರ ಮೃತದೇಹವನ್ನು ಮಗುವಿನ ಮೇಲೆಯೇ ಮಲಗಿಸಿ ನಾಟಕವಾಡಲು ಯತ್ನಿಸಿದ್ದಳು.
ಪೋಲಿಸರ ತನಿಖೆಗೆ ಸಿಕ್ಕಿಬಿದ್ದಿದ್ದು ಹೇಗೆ?
ಕೃತ್ಯ ಮುಗಿಸಿದ ನಂತರ ಪ್ರಿಯಕರ ವಿನಯ್ ಸ್ಥಳದಿಂದ ಪರಾರಿಯಾಗಿದ್ದ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಕ್ಕಬಾಣಾವರ ಪೊಲೀಸರು ಪರಿಶೀಲನೆ ನಡೆಸಿದಾಗ ಅಭಿನಂದನ್ ತಲೆಯಲ್ಲಿದ್ದ ಆಳವಾದ ಗಾಯದ ಗುರುತುಗಳು ಅನುಮಾನ ಮೂಡಿಸಿದ್ದವು. ಜೊತೆಗೆ ಮನೆಯ ಸಿಸಿಟಿವಿ ಕ್ಯಾಮೆರಾಗಳು ಇದ್ದಕ್ಕಿದ್ದಂತೆ ಆಫ್ ಆಗಿರುವುದು ಪೊಲೀಸರ ಅನುಮಾನವನ್ನು ಹೆಚ್ಚಿಸಿತು.
ಹರಿಣಿಯನ್ನು ವಶಕ್ಕೆ ಪಡೆದು ತೀವ್ರ ತನಿಖೆ ನಡೆಸಿದಾಗ, ಆಕೆ ಪೋಲಿಸರ ಚಾಚೂ ತಪ್ಪದ ಪ್ರಶ್ನೆಗಳಿಗೆ ತಡಬಡಾಯಿಸಿ ಅಸಲಿ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ.
ಪ್ರಸ್ತುತ ಸ್ಥಿತಿ
ಚಿಕ್ಕಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ಹರಿಣಿಯನ್ನು ಬಂಧಿಸಲಾಗಿದೆ. ಕೊಲೆ ಮಾಡಿ ತಲೆಮರೆಸಿಕೊಂಡಿರುವ ಪ್ರಿಯಕರ ವಿನಯ್ಗಾಗಿ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
Bantawala
ಯಕ್ಷಗಾನ ಕ್ಷೇತ್ರದ ಹಿರಿಯ ಪ್ರಸಂಗಕರ್ತ, ಕಲಾವಿದ ಬೋಳೂರು ಮಧು ಕುಮಾರ್ ಇಹಲೋಕತ್ಯಾಗ
ಮಂಗಳೂರು / ಬಂಟ್ವಾಳ: ಕರಾವಳಿಯ ಗಂಡುಕಲೆ ಯಕ್ಷಗಾನ ರಂಗದ ಹಿರಿಯ ಪ್ರಸಂಗಕರ್ತ, ಭಾಗವತ ಹಾಗೂ ಬಹುಮುಖ ಪ್ರತಿಭೆಯ ಕಲಾವಿದ ಬೋಳೂರು ಮಧು ಕುಮಾರ್ (86) ಅವರು ಇಂದು ಸಂಜೆ ನಿಧನರಾದರು. ಬಂಟ್ವಾಳ ತಾಲೂಕಿನ ನರಿಕೊಂಬಿಯಲ್ಲಿರುವ ತಮ್ಮ ಪುತ್ರನ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಮಿತ್ರರು ಮತ್ತು ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ.
ಕಲಾ ಕುಟುಂಬದ ಹಿನ್ನೆಲೆ
ಬೋಳೂರು ಮಧು ಕುಮಾರ್ ಅವರು ಯಕ್ಷಗಾನದ ಹೆಸರಾಂತ ಕಲಾ ಕುಟುಂಬದಿಂದ ಬಂದವರು.ಯಕ್ಷಗಾನದ ಹಿರಿಯ ಸಂಘಟಕರಾಗಿದ್ದ ದಿ. ಬೋಳೂರು ದೋಗ್ರ ಪೂಜಾರಿ ಅವರ ಪುತ್ರರಾದ ಇವರು, ಖ್ಯಾತ ಸಾಹಿತಿ ದಿ. ವಿಶು ಕುಮಾರ್ ಹಾಗೂ ಪ್ರಸಿದ್ಧ ಸಂಘಟಕ ಹಾಗೂ ಸಾಹಿತಿ ದಿ. ದಾಮೋದರ ನಿಸರ್ಗ ಅವರ ಸಹೋದರರಾಗಿದ್ದಾರೆ.
ಕುಟುಂಬದ ಕಲಾ ಸಂಸ್ಕಾರವನ್ನು ಮೈಗೂಡಿಸಿಕೊಂಡು ಬೆಳೆದ ಮಧು ಕುಮಾರ್ ಅವರು, ತಮ್ಮ ಜೀವಿತಾವಧಿಯನ್ನು ಯಕ್ಷಗಾನ ರಂಗದ ಸೇವೆಗಾಗಿಯೇ ಸಮರ್ಪಿಸಿಕೊಂಡಿದ್ದರು.
ಐದು ದಶಕಗಳ ಜನಪ್ರಿಯ ಪ್ರಸಂಗ ‘ಸುದರ್ಶನ ವಿಜಯ’
ತುಳು ಹಾಗೂ ಕನ್ನಡ ಯಕ್ಷಗಾನ ರಂಗದಲ್ಲಿ ಪ್ರಸಂಗಕರ್ತರಾಗಿ ಮಧು ಕುಮಾರ್ ಅವರು ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು.
ಇವರು ರಚಿಸಿದ ‘ಸುದರ್ಶನ ವಿಜಯ’ ಯಕ್ಷಗಾನ ಪ್ರಸಂಗವು ಕಳೆದ ಐದು ದಶಕಗಳಿಂದ (50 ವರ್ಷಗಳು) ವೃತ್ತಿಪರ ಮೇಳಗಳು ಹಾಗೂ ಹವ್ಯಾಸಿ ಕಲಾವಿದರ ಬಳಗದಲ್ಲಿ ಅತ್ಯಂತ ಜನಪ್ರಿಯ ಪ್ರಸಂಗವಾಗಿ ನಿರಂತರವಾಗಿ ಪ್ರದರ್ಶನ ಕಾಣುತ್ತಾ ಬಂದಿದೆ.
ಅವರ ಪ್ರಮುಖ ಯಕ್ಷಗಾನ ಪ್ರಸಂಗಗಳು:
ಕಡುಗಲಿ ಕುಮಾರ ರಾಮ
ಏಕಾದಶಿ ದೇವಿ ಮಹಾತ್ಮ್ಯೆ
ಬಾಲೆ ನಾಗಮ್ಮ
ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ
ಕೋಟಿ ಚೆನ್ನಯ (ತುಳು)
ಈ ಎಲ್ಲಾ ಪ್ರಸಂಗಗಳು ಕರಾವಳಿಯ ಯಕ್ಷಗಾನ ವಲಯದಲ್ಲಿ ಅಪಾರ ಪ್ರೇಕ್ಷಕರ ಮೆಚ್ಚುಗೆ ಗಳಿಸಿ, ರಂಗದ ಮೇಲೆ ಸದಾ ಜೀವಂತವಾಗಿವೆ.
ಬಹುಮುಖ ಪ್ರತಿಭಾವಂತ ಕಲಾವಿದ
ಕೇವಲ ಪ್ರಸಂಗಕರ್ತರಾಗಿ ಮಾತ್ರವಲ್ಲದೆ, ಯಕ್ಷಗಾನದ ವಿವಿಧ ವಿಭಾಗಗಳಲ್ಲಿ ಅವರು ಸಕ್ರಿಯರಾಗಿದ್ದರು:
ಭಾಗವತಿಕೆ: ವಿವಿಧ ವೃತ್ತಿಪರ ಯಕ್ಷಗಾನ ಮೇಳಗಳಲ್ಲಿ ಭಾಗವತರಾಗಿ ತಿರುಗಾಟ ನಡೆಸಿ, ತಮ್ಮ ಗಾಯನದ ಮೂಲಕ ಕಲಾಭಿಮಾನಿಗಳನ್ನು ರಂಜಿಸಿದ್ದರು.
ವೇಷಭೂಷಣ ವಿನ್ಯಾಸ: ಯಕ್ಷಗಾನದ ಸಾಂಪ್ರದಾಯಿಕ ವೇಷಭೂಷಣ ವ್ಯವಸ್ಥೆಯಲ್ಲಿ ಆಳವಾದ ಪರಿಣತಿ ಹೊಂದಿದ್ದರು.
ಸಂಘಟನೆ: ಒಬ್ಬ ಸಂಘಟಕರಾಗಿ ಮತ್ತು ಸಕ್ರಿಯ ಕಲಾವಿದರಾಗಿ ಯಕ್ಷಗಾನ ರಂಗದ ಬೆಳವಣಿಗೆಗೆ ಶ್ರಮಿಸಿದ್ದರು.
ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ
ಕರಾವಳಿಯ ಯಕ್ಷಗಾನ ಪರಂಪರೆಯೊಂದಿಗೆ ಆಳವಾದ ನಂಟು ಹೊಂದಿದ್ದ ಬೋಳೂರು ಮಧು ಕುಮಾರ್ ಅವರ ನಿಧನಕ್ಕೆ ಯಕ್ಷಗಾನ ಕ್ಷೇತ್ರದ ಪ್ರಮುಖರು, ಭಾಗವತರು, ಅರ್ಥಧಾರಿಗಳು, ಮೇಳದ ಯಜಮಾನರು ಹಾಗೂ ಕಲಾಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಅವರ ಅಗಲಿಕೆಯಿಂದ ಯಕ್ಷಗಾನ ರಂಗವು ಒಬ್ಬ ಹಿರಿಯ ಮಾರ್ಗದರ್ಶಕ ಹಾಗೂ ಕಲಾಪೋಷಕರನ್ನು ಕಳೆದುಕೊಂಡಂತಾಗಿದೆ.

-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
