Connect with us

Condolences

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಗರ್ಭಿಣಿ ಮಗಳನ್ನೇ ಕೊಲೆ ಮಾಡಿದ ತಂದೆ

Published

on

ದಲಿತ ಯುವಕನನ್ನು ಪ್ರೀತಿಸಿ ಕುಟುಂಬದ ವಿರೋಧದ ಮದ್ಯೆಯೇ ಮದುವೆಯಾಗಿದ್ದ ಕಾರಣವಾಗಿ ಹೆತ್ತ ಮಗಳನ್ನೇ ಸ್ವಂತ ತಂದೆ ಹಾಗೂ ಕುಟುಂಬಸ್ತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆಯೊಂದು ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ನಡೆದಿದೆ.
ಇನಾಂ ವೀರಾಪೂರ ಗ್ರಾಮದ ಮಾನ್ಯ ಎಂಬವರೇ ಸಮಾಜದ ಕಟ್ಟುಪಾಡುಗಳ ಮುಂದೆ ಮಾನವೀಯತೆ ಮರೆತ ತಂದೆಯಿoದ ಮರ್ಯಾದಾ ಹತ್ಯೆಯಾಗಿ ಭೀಕರವಾಗಿ ಕೊಲೆಯಾದ ದುರ್ದೈವಿ ಗರ್ಭಿಣಿ ಯುವತಿ.
ಕೊಲೆಯಾದ ಯುವತಿ ಮಾನ್ಯಾ ಮತ್ತು ಅದೇ ಗ್ರಾಮದ ವಿವೇಕಾನಂದ ಎಂಬುವವರು ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮಾನ್ಯಾ ವರೂರಿನ ಖಾಸಗಿ ಕಾಲೇಜಿನಲ್ಲಿ ಹಾಗೂ ವಿವೇಕಾನಂದ ಹುಬ್ಬಳ್ಳಿಯ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಇನ್‌ಸ್ಟಾಗ್ರಾಂ ಮೂಲಕ ಇಬ್ಬರ ಪರಿಚಯವಾಗಿತ್ತು. ಬಳಿಕ ಈ ಪರಿಚಯ ಇಬ್ಬರ ನಡುವಿನ ಪ್ರೇಮಕ್ಕೆ ತಿರುಗಿದೆ


ಮಾನ್ಯಾ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರೆ, ವಿವೇಕಾನಂದ ದಲಿತ ಸಮುದಾಯದವರಾಗಿದ್ದರು. ಈ ವಿಷಯ ತಿಳಿದ ಯುವತಿಯ ಮನೆಯವರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ವಿವೇಕಾನಂದನ ಬಿಟ್ಟು ಬದುಕಲಾರೆ ಎಂದು ಹಠ ಹಿಡಿದಿದ್ದ ಮಾನ್ಯಾ, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಬಳಿಕ ವಿವೇಕಾನಂದ, ಜೂನ್ 19 ರಂದು ಹುಬ್ಬಳ್ಳಿಯಲ್ಲಿ ಮಾನ್ಯಾ ಜೊತೆ ನೋಂದಾಯಿತ ವಿವಾಹವಾಗಿದ್ದರು.
ಮದುವೆಯ ನಂತರ ಎರಡು ಕುಟುಂಬಗಳ ನಡುವೆ ಸಂಘರ್ಷ ಉಂಟಾದಾಗ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ರಾಜಿ ಸಂಧಾನ ಮಾಡಿಸಿದ್ದರು. ಪ್ರಾಣಭಯದಿಂದ ದಂಪತಿ ಊರು ಬಿಟ್ಟು ಹಾವೇರಿಯಲ್ಲಿ ನೆಲೆಸಿದ್ದರು. ಈ ಅವಧಿಯಲ್ಲಿ ಮಾನ್ಯಾ ಗರ್ಭಿಣಿಯಾಗಿದ್ದರು. ಅಷ್ಟರಲ್ಲಿ ಎಲ್ಲಾ ಕೋಪ ತಣ್ಣಗಾಗಿರಬಹುದು ಎಂದು ಭಾವಿಸಿದ ದಂಪತಿ, ಡಿಸೆಂಬರ್ ೮ ರಂದು ಸ್ವಗ್ರಾಮಕ್ಕೆ ಮರಳಿದ್ದರು.
ಹಳ್ಳಿಗೆ ಮರಳಿದ ಮೇಲೂ ಮತ್ತೆ ಕಿರಿಕ್ ಶುರುವಾದಾಗ ಪೊಲೀಸರು ಮತ್ತೊಮ್ಮೆ ಶಾಂತಿ ಸಭೆ ನಡೆಸಿದ್ದರು. ಆದರೆ ಇದಾದ ಎರಡೇ ವಾರದಲ್ಲಿ ದಂಪತಿಗಳ ಮೇಲೆ ದಾಳಿ ನಡೆಸಲಾಗಿದೆ.
ಭಾನುವಾರ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಪತಿ ಹಾಗೂ ಆತನ ತಂದೆಯ ಮೇಲೆ ಮಾನ್ಯಾಳ ತಂದೆ ಪ್ರಕಾಶ್ ಪಾಟೀಲ ಮತ್ತು ಕುಟುಂಬದವರು ಏಕಾಏಕಿ ನುಗ್ಗಿ ಪೈಪ್ ಮತ್ತು ಗುದ್ದಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಅಲ್ಲಿಂದ ನೇರವಾಗಿ ಪತಿಯ ಮನೆಗೆ ತೆರಳಿ ಅಲ್ಲಿದ್ದ ಮಗಳು ಮಾನ್ಯಾ, ಮತ್ತು ವಿವೇಕಾನಂದನ ತಾಯಿ ರೇಣವ್ವ ಸೇರಿದಂತೆ ಕುಟುಂಬ ಸದಸ್ಯರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.

ಆರು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದ್ದು, ಪರಿಣಾಮ ಆಕೆಯ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು ತೀವ್ರವಾಗಿ ಗಾಯಗೊಂಡ ಮಾನ್ಯಾಳನ್ನು ಚಿಕಿತ್ಸೆಗಾಗಿ ಆಕೆಯನ್ನು ಹುಬ್ಬಳ್ಳಿ ನಗರದ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾನ್ಯಾ ಹೊಟ್ಟೆಯಲ್ಲಿದ್ದ ಮಗುವಿನೊಂದಿಗೆ ಕೊನೆಯುಸಿರೆಳೆದಿದ್ದಾರೆ
ಹಲ್ಲೆಯಿಂದ ಗಾಯಗೊಂಡಿರುವ ವಿವೇಕಾನಂದನ ತಾಯಿ ರೇಣವ್ವ ಹಾಗೂ ದೊಡ್ಡಪ್ಪನ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಹಲ್ಲೆಯಿoದ ಗಾಯಗೊಂಡಿರುವ ವಿವೇಕಾನಂದನ ತಾಯಿ ರೇಣವ್ವ ಹಾಗೂ ದೊಡ್ಡಪ್ಪನ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Bantawala

ವಿಟ್ಲದ ಹಿರಿಯ ಬಾಡಿಗೆ ಕಾರು ಚಾಲಕ ಈಶ್ವರ್ ಮೂಲ್ಯ ಇನ್ನಿಲ್ಲ

Published

on

ವಿಟ್ಲ: ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿಟ್ಲ ಪರಿಸರದಲ್ಲಿ ಬಾಡಿಗೆ ಕಾರು ಚಾಲಕರಾಗಿ ಗುರುತಿಸಿಕೊಂಡಿದ್ದ, ಅಳಿಕೆ ಗ್ರಾಮದ ಮುಳಿಯ ಅಡ್ಕ ನಿವಾಸಿ ಈಶ್ವರ್ ಮೂಲ್ಯ (71) ಅವರು ಶನಿವಾರ(ಮಾರ್ಚ್‌ 21) ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿಟ್ಲದಲ್ಲಿ ಸುಮಾರು 45 ವರ್ಷಗಳಿಂದ ಬಾಡಿಗೆ ಕಾರು ಚಾಲನೆ ಮಾಡುತ್ತಿದ್ದ ಈಶ್ವರ್ ಅವರು ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರು. ಸದಾ ಬಿಳಿ ವಸ್ತ್ರ ಧರಿಸುತ್ತಿದ್ದ ಇವರು, ತಮ್ಮ ಸೌಮ್ಯ ಸ್ವಭಾವ ಮತ್ತು ವೃತ್ತಿಪರತೆಯಿಂದ ಎಲ್ಲರ ಪ್ರೀತಿಪಾತ್ರರಾಗಿದ್ದರು.

ಮಾರ್ಚ್ 20ರಂದು ಎಂದಿನಂತೆ ವೃತ್ತಿಗೆ ಹಾಜರಾಗಿದ್ದ ಅವರು, ಕೇರಳದ ಪೆರೂರಿನ ಬೇಕರಿ ಮಾಲೀಕರೊಬ್ಬರ ಮನೆಗೆ ಹಾಗೂ ನಂತರ ಉಳ್ಳಾಲಕ್ಕೆ ಬಾಡಿಗೆ ಹೋಗಿ ಅಳಿಕೆಗೆ ವಾಪಸ್ಸಾಗಿದ್ದರು. ಅಂದು ಸಂಜೆ ಮನೆ ಸಮೀಪದ ಅಂಗಡಿಯಲ್ಲಿ ದಿನಪತ್ರಿಕೆ ಓದಿ, ಮೊಮ್ಮಕ್ಕಳಿಗೆ ತಿಂಡಿ ಖರೀದಿಸಿ ಮನೆಗೆ ತೆರಳಿದ್ದರು.

ಆದರೆ, ಮಾರ್ಚ್ 21ರ ಮುಂಜಾನೆ 3 ಗಂಟೆಯ ಸುಮಾರಿಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ವಿಟ್ಲದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ದೇರ್ಲಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಅಂಬ್ಯುಲೆನ್ಸ್ ಸಜ್ಜಾಗುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ ಯಮುನಾ, ಪುತ್ರಿಯರಾದ ನಳಿನಾಕ್ಷಿ, ಗೀತಾ, ವಿದ್ಯಾ ಹಾಗೂ ಉಳ್ಳಾಲ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಆಗಿರುವ ಪುತ್ರ ವಿನೋದ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಹಿರಿಯ ಚಾಲಕನ ಅಗಲಿಕೆಗೆ ವಿಟ್ಲದ ಚಾಲಕರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.

Continue Reading

Bantawala

ಯಕ್ಷಗಾನದ ಮೇರುನಟ ‘ಅಭಿನಯ ಚತುರ’ ಸೂರಿಕುಮೇರು ಕೆ. ಗೋವಿಂದ ಭಟ್ ಅಸ್ತಂಗತ

Published

on

ಮಂಗಳೂರು: ಯಕ್ಷಗಾನ ರಂಗದ ಭೀಷ್ಮ, ದಶಾವತಾರಿ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ (90) ಅವರು ಶುಕ್ರವಾರ ನಿಧನರಾಗಿದ್ದಾರೆ. ಏಳು ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ್ದ ಅವರು, ಸಾವಿರಾರು ಅಭಿಮಾನಿಗಳನ್ನು ಅಗಲಿದ್ದಾರೆ.

ಸೂರಿಕುಮೇರು ಕೆ. ಗೋವಿಂದ ಭಟ್ (1938-2026) ತೆಂಕುತಿಟ್ಟು ಯಕ್ಷಗಾನದ ಮೇರು ಕಲಾವಿದ, ನಟ ಮತ್ತು ಭಾಗವತರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನವರಾದ ಇವರು ಸುಮಾರು 7 ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಸಕ್ರಿಯರಾಗಿದ್ದರು. 

ಕಲಾ ಪಯಣದ ಮುಖ್ಯಾಂಶಗಳು:
ದಶಾವತಾರಿ: ಬಣ್ಣದ ವೇಷದಿಂದ ಹಿಡಿದು ಸ್ತ್ರೀ ವೇಷದವರೆಗೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ಇವರು, ಯಕ್ಷಗಾನದ ದಶಾವತಾರಗಳನ್ನು ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ವಿಶಿಷ್ಟ ಕಲಾವಿದ.

ಅಭಿನಯದ ಗಾರುಡಿಗ: ಮಾತಿನ ಚಾತುರ್ಯ, ಮುದ್ರೆಗಳ ಬಳಕೆ ಮತ್ತು ಪಾತ್ರದ ಪರಕಾಯ ಪ್ರವೇಶಕ್ಕೆ ಇವರು ಹೆಸರಾಗಿದ್ದರು. ಇವರ ‘ಧರ್ಮರಾಯ’, ‘ಭೀಷ್ಮ’ ಹಾಗೂ ‘ಕೃಷ್ಣ’ನ ಪಾತ್ರಗಳು ಕಲಾಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿವೆ.

ಗೋವಿಂದ ಭಟ್ಟರ ಕಲಾ ಸೇವೆಯನ್ನು ಗುರುತಿಸಿ ಸಾಲು ಸಾಲು ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದವು:ರಾಜ್ಯೋತ್ಸವ ಪ್ರಶಸ್ತಿ ,ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಸೇರಿದಂತೆ ಹತ್ತಾರು ಗೌರವಗಳಿಗೆ ಇವರು ಪಾತ್ರರಾಗಿದ್ದರು.

“ವೇದಿಕೆಯಲ್ಲಿ ಅವರು ಬಣ್ಣ ಹಚ್ಚಿ ನಿಂತರೆ ಸಾಕು, ಆ ಪಾತ್ರವೇ ಜೀವಂತವಾಗಿ ಎದುರು ನಿಂತಂತೆ ಭಾಸವಾಗುತ್ತಿತ್ತು. ಅವರ ಶಿಸ್ತು ಮತ್ತು ಕಲಾ ನಿಷ್ಠೆ ಇಂದಿನ ತಲೆಮಾರಿನ ಕಲಾವಿದರಿಗೆ ದಾರಿದೀಪ.” – ಕಲಾ ವಿಮರ್ಶಕರು

ಅಗಲಿದ ಹಿರಿಯ ಚೇತನಕ್ಕೆ ವಿಷ್ಣುಸಾಯುಜ್ಯ ಪ್ರಾಪ್ತವಾಗಲಿ ಎಂದು ಪ್ರಾರ್ಥಿಸೋಣ. ಕಲಾಮಾತೆಯ ಸೇವೆಯಲ್ಲಿ ತಮ್ಮ ಜೀವನವನ್ನೇ ಸವೆಸಿದ ಅವರ ಸ್ಮರಣೆ ಸದಾ ಜೀವಂತ.

ಗೋವಿಂದ ಭಟ್ ಅವರು ಕೇವಲ ಕಲಾವಿದರಷ್ಟೇ ಅಲ್ಲದೆ, ಯಕ್ಷಗಾನದ ಶಿಸ್ತು ಮತ್ತು ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ದಾಟಿಸಿದ ಶ್ರೇಷ್ಠ ಗುರುಗಳೂ ಆಗಿದ್ದರು. ಅವರ ನಿಧನದಿಂದ ಯಕ್ಷಗಾನದ ಒಂದು ಸುವರ್ಣ ಯುಗ ಅಂತ್ಯಗೊಂಡಂತಾಗಿದೆ.

ಯಕ್ಷಗಾನದ ಹತ್ತು ಅವತಾರಗಳಲ್ಲೂ ಸೈ ಎನಿಸಿಕೊಂಡಿದ್ದ ಇವರು ‘ದಶಾವತಾರಿ’ ಎಂದೇ ಪ್ರಸಿದ್ಧರು. ಸೌಮ್ಯ ಮತ್ತು ರೌದ್ರ ಎರಡೂ ಪಾತ್ರಗಳಲ್ಲಿ ಅವರು ಸೈ ಎನಿಸಿಕೊಂಡಿದ್ದರು. ಶ್ರೀಕೃಷ್ಣ, ಧರ್ಮರಾಯ, ಭೀಷ್ಮ, ವಿಶ್ವಾಮಿತ್ರ, ಅರ್ಜುನ, ಮತ್ತು ಹಿರಣ್ಯಕಶಿಪುವಿನಂತಹ ಪಾತ್ರಗಳಿಗೆ ಅವರು ಹೊಸ ಆಯಾಮ ನೀಡಿದ್ದರು. ಧರ್ಮಸ್ಥಳ ಮೇಳದಲ್ಲಿ ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು. ಇದಲ್ಲದೆ ಕದ್ರಿ ಮತ್ತು ಇತರೆ ಪ್ರಮುಖ ಮೇಳಗಳಲ್ಲಿಯೂ ಕಾರ್ಯನಿರ್ವಹಿಸಿದ್ದರು.

ಅವರು ಶ್ರೀಕೃಷ್ಣನ ಪಾತ್ರದಲ್ಲಿ ನೀಡುತ್ತಿದ್ದ ‘ಗೀತೋಪದೇಶ’ದ ಪ್ರಸಂಗ ಇಂದಿಗೂ ಅನೇಕ ಕಲಾಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ.ಅವರ ನಿಧನಕ್ಕೆ ಗಣ್ಯರು ಹಾಗೂ ಕಲಾ ಪ್ರೇಮಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

Continue Reading

Condolences

ಸಾವನ್ನೇ ಗೆಲ್ಲುವ ಪ್ರೀತಿ! ; ಕೋಮಾದಲ್ಲಿರುವ ಪತಿಯ ನೆನಪಿಗಾಗಿ ಪತ್ನಿಯ ಅವಿರತ ಹೋರಾಟ

Published

on

ಜೀವನ ಅಂದುಕೊಂಡಂತೆ ನಡೆಯುವುದಿಲ್ಲ ಎನ್ನುವುದಕ್ಕೆ ಈ ದಂಪತಿಗಳ ಕಥೆಯೇ ಸಾಕ್ಷಿ. ಪ್ರೀತಿ ಮತ್ತು ನಂಬಿಕೆಯ ಬಲದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಲು ಹೊರಟಿರುವ ಪತ್ನಿಯೊಬ್ಬಳ ಕರುಣಾಜನಕ ಹಾಗೂ ಅಷ್ಟೇ ಧೈರ್ಯದ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ.

ವಿಧಿಯ ಆಟ: ಒಂದು ಅಪಘಾತ ಬದಲಿಸಿದ ಬದುಕು
ಪಶ್ಚಿಮ ಬಂಗಾಳದ ಅಸನ್ಸೋಲ್ ನಿವಾಸಿಗಳಾದ ಸೀಮಾ ಚಟರ್ಜಿ ಮತ್ತು ಆಕಾಶ್ ಪ್ರೀತಿಸಿ ಮದುವೆಯಾದವರು. ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದ ಈ ಜೋಡಿಯ ಸಂಭ್ರಮಕ್ಕೆ ವಿಧಿ 2025ರ ಅಕ್ಟೋಬರ್ 12ರಂದು ತಣ್ಣೀರೆರಚಿತು. ವಿಐಪಿ ರಸ್ತೆಯ ಹಲ್ದಿರಾಮ್ ಮೋರ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಕಾಶ್ ಅವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿತು. ಅಂದಿನಿಂದ ಆಕಾಶ್ ಕೋಮಾದಲ್ಲಿದ್ದಾರೆ.

ಪತಿಯ ಮರುಜನ್ಮಕ್ಕಾಗಿ ಪತ್ನಿಯ “ಹರಸಾಹಸ”
ಕಳೆದ ಐದು ತಿಂಗಳುಗಳಿಂದ ಸೀಮಾ ಅವರ ಬದುಕು ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯೆ ಕಳೆಯುತ್ತಿದೆ. ಆದರೆ ಅವರು ಧೃತಿಗೆಟ್ಟಿಲ್ಲ. ತನ್ನ ಪತಿಯ ಹಳೆಯ ನೆನಪುಗಳು ಮರುಕಳಿಸಲಿ ಎಂಬ ಆಶಯದೊಂದಿಗೆ ಅವರು ಪ್ರತಿದಿನ ವಿಶೇಷ ಪ್ರಯತ್ನಗಳನ್ನು ಮಾಡುತ್ತಿದ್ದಾರೆ:
ಆಕಾಶ್‌ಗೆ ಇಷ್ಟವಾದ ಸುಗಂಧ ದ್ರವ್ಯವನ್ನು (Perfume) ಹಚ್ಚುವುದು. ಪ್ರೀತಿಯಿಂದ ಹಣೆಗೇ ಮುತ್ತಿಟ್ಟು ಅವರನ್ನು ಮಾತನಾಡಿಸುವುದು. ಸದಾ ಅವರ ಕೈಹಿಡಿದು ಕುಳಿತು, ಪ್ರೀತಿಯ ಮಾತುಗಳ ಮೂಲಕ ಅವರನ್ನು ಎಚ್ಚರಿಸಲು ಪ್ರಯತ್ನಿಸುವುದು ಮಾಡುತ್ತಲೇ ಇದ್ದಾರೆ ಪತ್ನಿ

ಬೆಡ್ ಮೇಲೆಯೇ ವಿವಾಹ ವಾರ್ಷಿಕೋತ್ಸವ!
ಇತ್ತೀಚೆಗೆ ಈ ದಂಪತಿಯ ವಿವಾಹ ವಾರ್ಷಿಕೋತ್ಸವ ಬಂದಾಗ ಸೀಮಾ ಮಾಡಿದ ಕೆಲಸ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಹಳೆಯ ಸುಂದರ ಕ್ಷಣಗಳನ್ನು ನೆನಪಿಸಲು ಅವರು ವಧುವಿನಂತೆ ಸಿಂಗಾರಗೊಂಡು, ಪತಿಯ ಮಗ್ಗುಲಲ್ಲೇ ಕೇಕ್ ಕತ್ತರಿಸಿ, ಹೂಗುಚ್ಛ ಮತ್ತು ಉಂಗುರ ನೀಡಿ ಶುಭ ಕೋರಿದ್ದಾರೆ. ಈ ಭಾವನಾತ್ಮಕ ಕ್ಷಣದ ಫೋಟೋಗಳು ವೈರಲ್ ಆಗಿದ್ದು, ಸೀಮಾ ಅವರ ಧೈರ್ಯ ಮತ್ತು ಪ್ರೀತಿಗೆ ಜನ “ಹ್ಯಾಟ್ಸ್‌ ಆಫ್” ಎನ್ನುತ್ತಿದ್ದಾರೆ.

“ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದರೂ, ದೇವರ ಮೇಲೆ ನಂಬಿಕೆಯಿಟ್ಟು ತನ್ನ ಪತಿಯನ್ನು ಸಹಜ ಸ್ಥಿತಿಗೆ ತರಲು ಸೀಮಾ ಹೋರಾಡುತ್ತಿದ್ದಾರೆ. ಅವರ ಈ ಅಚಲ ಪ್ರೀತಿ ಇಂದಿನ ಕಾಲಕ್ಕೆ ಒಂದು ದೊಡ್ಡ ಮಾದರಿ.”

Continue Reading

Trending

Copyright © 2025 Deevatige