Connect with us

VITTLA

ವಿಟ್ಲದಲ್ಲಿ ಜುಲೈ 21ರಂದು ಬೃಹತ್‌ ಕಾರ್ಮಿಕ ಕಾರ್ಡ್‌ ನೋಂದಣಿ ಅಭಿಯಾನ

Published

on

ವಿಟ್ಲ: ದಕ್ಷಿಣ ಕನ್ನಡ ಗ್ಯಾರೇಜ್‌ ಮಾಲಕರ ಸಂಘ (ರಿ.) ಮಂಗಳೂರು (ದ.ಕ. ಮತ್ತು ಉಡುಪಿ ಜಿಲ್ಲೆ) ಇದರ ವಿಟ್ಲ ವಲಯ, ಯಕ್ಷಭಾರತ ಸೇವಾ ಪ್ರತಿಷ್ಠಾನ (ರಿ.) ಹಾಗೂ ಭಾರತ ಆಡಿಟೋರಿಯಂ ಚಂದಳಿಕೆ ಇವುಗಳ ಜಂಟಿ ಆಶ್ರಯದಲ್ಲಿ ಜುಲೈ 21ರಂದು ಬೃಹತ್‌ ಕಾರ್ಮಿಕ ಕಾರ್ಡ್‌ ನೋಂದಣಿ ಅಭಿಯಾನ ಮತ್ತು ಉದ್ಘಾಟನಾ ಸಭಾ ಕಾರ್ಯಕ್ರಮ ನಡೆಯಲಿದೆ.

ಚಂದಳಿಕೆಯ ಭಾರತ ಆಡಿಟೋರಿಯಂನಲ್ಲಿ ಮಂಗಳವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಈ ಅಭಿಯಾನ ನಡೆಯಲಿದೆ.

ಉದ್ಘಾಟನೆ ಮತ್ತು ಅಧ್ಯಕ್ಷತೆ:

ವಿಟ್ಲ ವಲಯ ಗ್ಯಾರೇಜ್‌ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಲಿಯೋ ಡಿ’ ಲಸ್ರಾದೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ. ಗ್ಯಾರೇಜ್‌ ಮಾಲಕರ ಸಂಘದ ಸ್ಥಾಪಕರು ಹಾಗೂ ಪ್ರಸ್ತುತ ಚೇರ್ಮನ್ ಆಗಿರುವ ಶ್ರೀ ಜನಾರ್ದನ ಅತ್ತಾವರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳು:

ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ, ಬಂಟ್ವಾಳದ ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಲವಿನಾ ಡಿ’ಸೋಜಾ, ದ.ಕ. ಗ್ಯಾರೇಜ್‌ ಮಾಲಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ದಿನಕರ್ ಕುಲಾಲ್, ಉದ್ಯಮಿ ಹಾಗೂ ಲಯನ್ಸ್ ಕ್ಲಬ್ ವಿಟ್ಲದ ಅಧ್ಯಕ್ಷರಾದ ಶ್ರೀ ಡಿ. ಸಂಜೀವ ಪೂಜಾರಿ ಮತ್ತು ವಿಟ್ಲ ಗೀತಾ ಜ್ಯುವೆಲ್ಲರ್ಸ್ ಮಾಲಕರಾದ ಶ್ರೀ ಪ್ರಭಾಕರ ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದ.ಕ. ಜಿಲ್ಲಾ ಗ್ಯಾರೇಜ್‌ ಮಾಲಕರ ಸೌಹಾರ್ದ ಸಹಕಾರಿ ಸಂಘ (ರಿ.) ಮಂಗಳೂರು ಕಾರ್ಯಕ್ರಮಕ್ಕೆ ಶುಭ ಹಾರೈಸಿದೆ.

ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅಭಿಯಾನದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಯಕ್ಷಭಾರತ ಸೇವಾ ಪ್ರತಿಷ್ಠಾನದ ಶ್ರೀ ಡಿ. ಸಂಜೀವ ಪೂಜಾರಿ ಹಾಗೂ ವಿಟ್ಲ ವಲಯ ಗ್ಯಾರೇಜ್‌ ಮಾಲಕರ ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

DEATH

ವಿಟ್ಲ: ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವೃದ್ಧ ಗಿರಿಯಪ್ಪ ಸಪಲ್ಯ ಬದುಕುಳಿಯಲಿಲ್ಲ !

Published

on

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಗಿರಿಯಪ್ಪ ಸಪಲ್ಯ (75) ಎಂಬವರು ಚಿಕಿತ್ಸೆಗೆ ಸ್ಪಂದಿಸದೆ ಇಂದು (ಆಗಸ್ಟ್ 1) ಮಧ್ಯಾಹ್ನ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಘಟನೆಯ ವಿವರ:

ನಾಪತ್ತೆ: ಗಿರಿಯಪ್ಪ ಸಪಲ್ಯ ಅವರು ಜುಲೈ 28 ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಹಾಗೂ ಸ್ಥಳೀಯರು ಸುತ್ತಮುತ್ತ ತೀವ್ರ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಪತ್ತೆಯಾದ ಸನ್ನಿವೇಶ: ಜುಲೈ 31 ರಂದು ಬೆಳಿಗ್ಗೆ ಕುಕ್ಕಿಲದ ಪುರಂದರ ಭಟ್‌ ಎಂಬವರ ಅಡಿಕೆ ತೋಟದ ನೀರು ಹರಿಯುವ ಚರಂಡಿಯಲ್ಲಿ ವೃದ್ಧ ಅಸ್ವಸ್ಥರಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ರಕ್ಷಣೆ: ಸತತ 3 ದಿನಗಳ ಕಾಲ ಸುರಿಯುವ ಮಳೆ ಮತ್ತು ಶೀತದ ವಾತಾವರಣದಲ್ಲಿದ್ದರೂ ಅವರು ಜೀವಂತವಾಗಿದ್ದರು. ಸ್ಥಳೀಯರು ತಕ್ಷಣ ‘ಫ್ರೆಂಡ್ಸ್‌ ವಿಟ್ಲ’ ತಂಡದ ಮುರಳೀಧರ (ಮುರಳಿ ವಿಟ್ಲ) ಅವರಿಗೆ ಮಾಹಿತಿ ನೀಡಿದ್ದು, ಅಂಬ್ಯುಲೆನ್ಸ್ ಮೂಲಕ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಚಿಂತಾಜನಕ ಸ್ಥಿತಿ ಮತ್ತು ಸಾವು:

ಆರಂಭದಲ್ಲಿ ವಿಟ್ಲ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಗೆ ಸ್ಪಂದಿಸಿದಂತೆ ಕಂಡರೂ, ಸಂಜೆಯ ವೇಳೆಗೆ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಯಿತು. ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 1 ರ ಮಧ್ಯಾಹ್ನ ಅವರು ಮೃತರಾಗಿದ್ದಾರೆ.

ಸ್ಥಳೀಯರಲ್ಲಿ ಮುಂದುವರಿದ ಅನುಮಾನಗಳು:

ಆರ್ಥಿಕವಾಗಿ ಸದೃಢವಾಗಿದ್ದ ಗಿರಿಯಪ್ಪ ಸಪಲ್ಯ ಅವರು ಈ ಭಾರಿ ಮಳೆಯ ನಡುವೆ ಬೇರೆಯವರ ಅಡಿಕೆ ತೋಟಕ್ಕೆ ಯಾಕೆ ಹೋದರು? ದಾರಿ ತಪ್ಪಿ ಬಿದ್ದರಾ ಅಥವಾ ಇದರ ಹಿಂದೆ ಬೇರೇನಾದರೂ ಕಾರಣವಿದೆಯೇ ಎಂಬ ಪ್ರಶ್ನೆಗಳು ಸ್ಥಳೀಯವಾಗಿ ಹಾಗೆಯೇ ಉಳಿದುಕೊಂಡಿವೆ

Continue Reading

DEATH

ಅನಾಥ ವೃದ್ಧೆಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಫ್ರೆಂಡ್ಸ್ ವಿಟ್ಲ ತಂಡ

Published

on

ವಿಟ್ಲ: ಮೂಲತಃ ವಿಟ್ಲ ಕಸಬಾ ಗ್ರಾಮದ ಶಿವಾಜಿ ನಗರ ನೆಕ್ಕರೆಕಾಡು ನಿವಾಸಿಯಾಗಿದ್ದು, ಪ್ರಸ್ತುತ ಮಾಮೇಶ್ವರ ಜನತಾ ಕಾಲೋನಿಯಲ್ಲಿ ವಾಸಿಸುತ್ತಿದ್ದ ಅನಾಥ ವೃದ್ಧೆ ಭವಾನಿ ನಾಯ್ಕ (67) ಅವರು ಶನಿವಾರ ಮುಂಜಾನೆ ಮಲಗಿದ್ದ ಸ್ಥಿತಿಯಲ್ಲೇ ಇಹಲೋಕ ತ್ಯಜಿಸಿದ್ದಾರೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ‘ಫ್ರೆಂಡ್ಸ್ ವಿಟ್ಲ’ ತಂಡದ ಪ್ರಮುಖ ಮುರಳೀಧರ ಅವರ ನೇತೃತ್ವದ ಕಾರ್ಯಕರ್ತರು ತಕ್ಷಣ ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಮೃತದೇಹವನ್ನು ವಿಟ್ಲದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ

ಬಳಿಕ ಆಸ್ಪತ್ರೆಯ ಪ್ರಕ್ರಿಯೆಗಳನ್ನು ಪೂರೈಸಿ, ಮುರಳೀಧರ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದ ಕಾರ್ಯಕರ್ತರು ವಿಟ್ಲದ ಹಿಂದೂ ರುದ್ರಭೂಮಿಯಲ್ಲಿ ಭವಾನಿಯವರ ಮೃತದೇಹದ ಧಾರ್ಮಿಕ ಅಂತ್ಯಕ್ರಿಯೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮೃತರ ಪುತ್ರ ಬಾಲಕೃಷ್ಣ ಹಾಗೂ ಕನ್ಯಾನದ ಭಾರತ ಸೇವಾಶ್ರಮದಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿರುವ ಅವರ ಇಬ್ಬರು ಮೊಮ್ಮಕ್ಕಳು ಹಾಜರಿದ್ದರು.

ಸಾರ್ವಜನಿಕರ ಮೆಚ್ಚುಗೆ

ಕಳೆದ ಹಲವು ವರ್ಷಗಳಿಂದ ವಿಟ್ಲ ಪೇಟೆಯಲ್ಲಿ ಸುತ್ತಾಡುತ್ತಿದ್ದ, ನೊಂದ ವೃದ್ಧೆ ಭವಾನಿಯವರ ಅಂತಿಮ ಪಯಣಕ್ಕೆ ಹೆಗಲು ನೀಡಿ, ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಿದ ‘ಫ್ರೆಂಡ್ಸ್ ವಿಟ್ಲ’ ತಂಡದ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಆಪತ್ಬಾಂಧವ ಫ್ರೆಂಡ್ಸ್ ವಿಟ್ಲ: ಕಳೆದ ಹಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಲು ಸಾಲು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಮುರಳೀಧರ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡವು, ತುರ್ತು ಸಂದರ್ಭಗಳಲ್ಲಿ ಕಷ್ಟದಲ್ಲಿರುವ ನೊಂದವರ ಪಾಲಿಗೆ ನಿಜವಾದ ‘ಆಪತ್ಬಾಂಧವ’ನಾಗಿ ಧಾವಿಸಿ ಬರುತ್ತಿದೆ.

Continue Reading

Bantawala

ವಿಟ್ಲ ಪಿಎಂಶ್ರೀ ಸರಕಾರಿ ಪ್ರೌಢಶಾಲೆ ಸಹಶಿಕ್ಷಕಿ ಅಮಾನತು: ಆದೇಶದ ಪ್ರತಿ ಲಭ್ಯ, KAT ಮೊರೆ ಹೋದ ಶಿಕ್ಷಕಿ ಅನ್ನಪೂರ್ಣ

Published

on

ವಿಟ್ಲ / ಮಂಗಳೂರು (ಜುಲೈ 31): ಬಂಟ್ವಾಳ ತಾಲೂಕಿನ ಐತಿಹಾಸಿಕ ಹಾಗೂ ಪ್ರತಿಷ್ಠಿತ ವಿಟ್ಲ ಪಿಎಂಶ್ರೀ ಸರ್ಕಾರಿ ಪ್ರೌಢ ಶಾಲೆಯ (ಆರ್‌ಎಂಎಸ್‌ಎ) ಸಹಶಿಕ್ಷಕಿ ಶ್ರೀಮತಿ ಅನ್ನಪೂರ್ಣ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಮಾನತು ಆದೇಶದ ಪ್ರತಿ ಇದೀಗ ಲಭ್ಯವಾಗಿದ್ದು, ಈ ಘಟನೆ ಸ್ಥಳೀಯವಾಗಿ ಹಾಗೂ ಶಾಲಾ ಪೋಷಕರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಮಾನತು ಆದೇಶದ ಪ್ರಮುಖ ಮುಖ್ಯಾಂಶಗಳು

ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ/ಶಿಸ್ತು ಪ್ರಾಧಿಕಾರಿ ಜಿ.ಎಸ್. ಶಶಿಧರ್ ಅವರು ದಿನಾಂಕ 28-07-2026 ರಂದು ಅಮಾನತು ಆದೇಶವನ್ನು ಹೊರಡಿಸಿದ್ದಾರೆ.

ದೂರಿನ ಹಿನ್ನೆಲೆ: ಶಾಲಾಭಿವೃದ್ಧಿ ಸಮಿತಿಯ (SDMC) ಪ್ರಾಥಮಿಕ ವಿಭಾಗದ ಅಧ್ಯಕ್ಷ ರವಿಶಂಕರ್ ಸಿ. (06-11-2025) ಹಾಗೂ ಪ್ರೌಢಶಾಲಾ ವಿಭಾಗದ ಉಪಾಧ್ಯಕ್ಷ ಸದಾಶಿವ ಭಟ್ (15-11-2025) ಅವರು ಶಿಕ್ಷಕಿ ವಿರುದ್ಧ ಕರ್ತವ್ಯ ಲೋಪದ ದೂರು ನೀಡಿದ್ದರು.

ವಿಚಾರಣಾ ವರದಿ: ದೂರಿನ ಅನ್ವಯ ನಡೆದ ಪ್ರಾಥಮಿಕ ವಿಚಾರಣೆಯಲ್ಲಿ (ದಿನಾಂಕ: 05-01-2026 ಮತ್ತು 24-02-2026) ಶಿಕ್ಷಕಿ ವಿರುದ್ಧ ಸಲ್ಲಿಕೆಯಾಗಿದ್ದ 11 ಅಂಶಗಳ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ವಿಚಾರಣಾಧಿಕಾರಿಗಳು ವರದಿ ನೀಡಿದ್ದಾರೆ.

ನಿಯಮಾವಳಿ ಉಲ್ಲಂಘನೆ: ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳು 2021ರ ಉಪನಿಯಮ 3(i)(ii) ರಂತೆ ಶಿಕ್ಷಕಿ ಅನ್ನಪೂರ್ಣ ಅವರು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ.

ಅಮಾನತು ಕ್ರಮ: ಕರ್ನಾಟಕ ನಾಗರಿಕ ಸೇವಾ ನಿಯಮ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 2021ರ ಉಪನಿಯಮ 10(1)ಡಿ ರಂತೆ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಷರತ್ತುಗಳು: ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ. ನಿಯಮಾನುಸಾರ ಜೀವನಾಂಶ ಭತ್ಯೆಗೆ ಅವರು ಅರ್ಹರಿರುತ್ತಾರೆ.

ನ್ಯಾಯಮಂಡಳಿ (KAT) ಮೊರೆ ಹೋದ ಶಿಕ್ಷಕಿ

ತಮ್ಮ ಮೇಲಿನ ಅಮಾನತು ಆದೇಶವನ್ನು ಪ್ರಶ್ನಿಸಿ ಪುತ್ತೂರು ನಿವಾಸಿಯಾಗಿರುವ ಶಿಕ್ಷಕಿ ಅನ್ನಪೂರ್ಣ ಅವರು ಬೆಂಗಳೂರಿನ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಮೆಟ್ಟಿಲೇರಿದ್ದಾರೆ. ತಮ್ಮ ಮೇಲಿನ 11 ಆರೋಪಗಳು ಸಂಪೂರ್ಣ ಆಧಾರರಹಿತ ಹಾಗೂ ಅಪವಾದದಿಂದ ಕೂಡಿವೆ ಎಂದು ಅವರು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಅಮಾನತಾದ ಶಿಕ್ಷಕಿಯು ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ/ಶಿಸ್ತು ಪ್ರಾಧಿಕಾರಿ ಜಿ.ಎಸ್. ಶಶಿಧರ್, ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ಮತ್ತು ಶಾಲಾಭಿವೃದ್ಧಿ ಸಮಿತಿಯ (SDMC) ಪ್ರಾಥಮಿಕ ವಿಭಾಗದ ಅಧ್ಯಕ್ಷ ರವಿಶಂಕರ್ ಸಿ. ಮತ್ತು ಇತರರ ವಿರುದ್ಧ ಕಾನೂನು ಸಮರ ಸಾರಿದ್ದಾರೆ.

ಒಳ ರಾಜಕೀಯದ ಆರೋಪ: ಪೋಷಕರಲ್ಲಿ ಅಸಮಾಧಾನ

ಒಂದು ಕಾಲದಲ್ಲಿ ‘ಸರ್ಕಾರಿ ಮಾದರಿ ಶಾಲೆ’ ಎನಿಸಿಕೊಂಡು ಶತಮಾನೋತ್ಸವ ಆಚರಿಸಿರುವ ಈ ಸಂಸ್ಥೆಯಲ್ಲಿ 1,600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಏಕಾಏಕಿ ಶಿಕ್ಷಕಿಯ ಅಮಾನತಿನಿಂದ ಪೋಷಕರು ಮತ್ತು ಸಾರ್ವಜನಿಕರ ಕಡೆಯಿಂದ ಪರವಿರೋಧ ಚರ್ಚೆಗಳು ಆರಂಭವಾಗಿದೆ.

ಶಾಲಾ ಅಭಿವೃದ್ಧಿ ಸಮಿತಿಯ ಒಳಗಿನ ಒಳ ರಾಜಕೀಯ ಹಾಗೂ ಸ್ವಯಂಘೋಷಿತ ನಾಯಕರ ಒಣ ಪ್ರತಿಷ್ಠೆಗೆ ನೇರ ನಡೆ-ನುಡಿಯ ಶಿಕ್ಷಕಿ ಬಲಿಯಾಗಿದ್ದಾರೆ ಎಂಬ ಚರ್ಚೆಯೂ ಸ್ಥಳೀಯವಾಗಿ ಕೇಳಿಬರುತ್ತಿದೆ. ಶಿಕ್ಷಕರ ನಡುವಿನ ವೈಮನಸ್ಸಿನಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು, ಹೀಗಾಗಿ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಪೋಷಕರು ಕೂಡಾ ಆಗ್ರಹಿಸಿದ್ದಾರೆ.

ನ್ಯಾಯಮಂಡಳಿಯಲ್ಲಿ (KAT) ಅರ್ಜಿ ವಿಚಾರಣೆಗೆ ಬರಲಿದ್ದು, ಮುಂದಿನ ತೀರ್ಪಿನ ಮೇಲೆ ಇಲಾಖೆಯ ಮುಂದಿನ ನಡೆ ನಿರ್ಧಾರವಾಗಲಿದೆ.

Continue Reading

Trending

Copyright © 2025 Deevatige

error: Content is protected !!