Missing
ಪೊಳಲಿ ದೇವಸ್ಥಾನಕ್ಕೆ ಹೋದ ಹತ್ತನೇ ತರಗತಿ ವಿದ್ಯಾರ್ಥಿನಿ ನಾಪತ್ತೆ; ದೂರು ದಾಖಲು
ಮಂಗಳೂರು: ಉಳ್ಳಾಲ ತಾಲೂಕಿನ ಪಜೀರ್ ಅಡ್ಕ ನಿವಾಸಿಯೊಬ್ಬರ ಅಪ್ರಾಪ್ತ ಪುತ್ರಿ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಜೀರ್ ಅಡ್ಕ ನಿವಾಸಿ ಗುಲಾಬಿ ಮತ್ತು ಜಗದೀಶ್ ಪೂಜಾರಿ ದಂಪತಿಯ ಪುತ್ರಿ, ಹರೇಕಳ ರಾಮಕೃಷ್ಣ ಹೈಸ್ಕೂಲ್ನ 10ನೇ ತರಗತಿ ವಿದ್ಯಾರ್ಥಿನಿ ಚೈತನ್ಯ (16) ನಾಪತ್ತೆಯಾದವಳು. ಏಪ್ರಿಲ್ 12ರಂದು ಬೆಳಗ್ಗೆ 7:30ಕ್ಕೆ ಸ್ನೇಹಿತರ ಜೊತೆ ಪೊಳಲಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಈಕೆ, ರಾತ್ರಿಯಾದರೂ ಮನೆಗೆ ಮರಳದಿದ್ದಾಗ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಸಂಬಂಧಿಕರ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಸುಳಿವು ಸಿಗದ ಕಾರಣ ಏಪ್ರಿಲ್ 15ರಂದು ಪೊಲೀಸರಿಗೆ ದೂರು ನೀಡಲಾಗಿದೆ.

ಕೊಣಾಜೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 137(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾಣೆಯಾದ ಬಾಲಕಿಯು ಸುಮಾರು 5 ಅಡಿ ಎತ್ತರ, ಗೋಧಿ ಮೈಬಣ್ಣ, ದಪ್ಪ ಶರೀರ ಹೊಂದಿದ್ದು, ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾಳೆ. ನಾಪತ್ತೆಯಾದ ದಿನ ಈಕೆ ನೇರಳೆ ಬಣ್ಣದ ಗೌನ್ ಹಾಗೂ ಕಪ್ಪು ಬಣ್ಣದ ಕೋಟ್ ಧರಿಸಿದ್ದಳು.
ಈ ಬಾಲಕಿಯ ಬಗ್ಗೆ ಮಾಹಿತಿ ಇರುವವರು ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ (0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (0824-2220536 / 9480802350) ಸಂಪರ್ಕಿಸುವಂತೆ ಪೊಲೀಸರು ವಿನಂತಿಸಿದ್ದಾರೆ.

crime
ಕಡಬ: ಕಾಣೆಯಾಗಿದ್ದ ನವವಿವಾಹಿತೆ ಶಿವಮೊಗ್ಗದ ತವರಿನಲ್ಲಿ ಪ್ರತ್ಯಕ್ಷ; ನಿಟ್ಟುಸಿರು ಬಿಟ್ಟ ಕುಟುಂಬಸ್ಥರು!
ಕಡಬ: ತಾಲ್ಲೂಕಿನ ನೂಜಿಬಾಳ್ತಿಲ ಗ್ರಾಮದಿಂದ ಚಿನ್ನಾಭರಣಗಳ ಸಮೇತ ನಿಗೂಢವಾಗಿ ನಾಪತ್ತೆಯಾಗಿದ್ದ ನವವಿವಾಹಿತೆ ಕೊನೆಗೂ ಶಿವಮೊಗ್ಗದ ತನ್ನ ತವರು ಮನೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಆತಂಕದಲ್ಲಿದ್ದ ಕುಟುಂಬಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನೀರಾರಿ ಮನೆ ನಿವಾಸಿ ಮೊಹಮ್ಮದ್ ಆಶಿಕ್ (29) ಎಂಬವರ ಪತ್ನಿ ಆರ್ ಫೈನ್ ಮಹ್ತಾಬ್ (18) ಕಾಣೆಯಾದ ಯುವತಿ. ಈಕೆ ಜೂನ್ 7ರ ನಸುಕಿನ ಜಾವ ಗಂಡನ ಮನೆಯಿಂದ ಯಾರಿಗೂ ತಿಳಿಸದೆ ದಿಢೀರ್ ನಾಪತ್ತೆಯಾಗಿದ್ದಳು.

ಮೇ 31 ರಂದು ನಡೆದಿತ್ತು ನಿಕಾಹ್:
ಎಫ್.ಐ.ಆರ್. ವಿವರಗಳ ಪ್ರಕಾರ, ಮೊಹಮ್ಮದ್ ಆಶಿಕ್ ಅವರಿಗೂ, ಶಿವಮೊಗ್ಗದ ಕೆ.ಆರ್. ಪುರಂ ರೋಡ್ ನಿವಾಸಿ ಶೇಖ್ ಫಾಯಾಜ್ ಹಮೀದ್ ಅವರ ಮಗಳು ಆರ್ ಫೈನ್ ಮಹ್ತಾಬ್ ಅವರಿಗೂ ಕಳೆದ ಮೇ 31 ರಂದು ಭಾನುವಾರ ಶಿವಮೊಗ್ಗದ ರಿಜ್ವಾನ್ ಮಸೀದಿಯ ಖಾಜಿಗಳ ಸಮಕ್ಷಮದಲ್ಲಿ ಮುಸ್ಲಿಂ ಧಾರ್ಮಿಕ ವಿಧಿವಿಧಾನದಂತೆ ವಿವಾಹ ನಡೆದಿತ್ತು. ಜೂನ್ 2 ರಂದು ಕಲ್ಲುಗುಡ್ಡೆಯ ಜೆ.ಜೆ. ಪ್ಲಾಜಾದಲ್ಲಿ ಮದುವೆ ಔತಣಕೂಟ (ಡಿನ್ನರ್) ಏರ್ಪಡಿಸಲಾಗಿತ್ತು. ಬಳಿಕ ಜೂನ್ 5 ರಂದು ತಂದೆ-ತಾಯಿ ಮಹ್ತಾಬ್ಳನ್ನು ನೂಜಿಬಾಳ್ತಿಲದಲ್ಲಿರುವ ಗಂಡನ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದರು.
ಗಂಡನ ಮೊಬೈಲ್ನಲ್ಲಿ ಅಲಾರಾಂ ಸೆಟ್ ಮಾಡಿ ಎಸ್ಕೇಪ್!
ಜೂನ್ 6 ರಂದು ರಾತ್ರಿ ಮನೆಯವರೆಲ್ಲರೂ ಒಟ್ಟಿಗೆ ಊಟ ಮುಗಿಸಿ 10 ಗಂಟೆಗೆ ಮಲಗಿದ್ದರು. ಮಧ್ಯರಾತ್ರಿ 12 ಗಂಟೆಗೆ ಪತಿ ಆಶಿಕ್ ಅವರಿಗೆ ಎಚ್ಚರವಾದಾಗಲೂ ಮಹ್ತಾಬ್ ಪಕ್ಕದಲ್ಲೇ ಮಲಗಿದ್ದಳು. ಆದರೆ, ಜೂನ್ 7ರ ನಸುಕಿನ ಜಾವ 2.00 ಗಂಟೆಗೆ ಆಶಿಕ್ ಅವರ ಮೊಬೈಲ್ನಲ್ಲಿ ದಿಢೀರನೆ ಅಲಾರಾಂ ರಿಂಗಣಿಸಿದೆ.

ಅಲಾರಾಂ ಶಬ್ದಕ್ಕೆ ಎದ್ದು ನೋಡಿದ ಆಶಿಕ್ ಅವರಿಗೆ ತೀವ್ರ ಆಘಾತ ಕಾದಿತ್ತು. ಪಕ್ಕದಲ್ಲಿ ಮಲಗಿದ್ದ ಪತ್ನಿ ಮಹ್ತಾಬ್ ಅಲ್ಲಿರಲಿಲ್ಲ! ಗಾಬರಿಗೊಂಡ ಆಶಿಕ್ ಮನೆಯ ಒಳಗೆ, ಹೊರಗೆ ಹಾಗೂ ಪಕ್ಕದಲ್ಲೇ ಇರುವ ಅಣ್ಣನ ಮನೆಯಲ್ಲೂ ಹುಡುಕಾಡಿದ್ದಾರೆ. ಆದರೆ ಎಲ್ಲೂ ಆಕೆ ಪತ್ತೆಯಾಗಿರಲಿಲ್ಲ. ಅಚ್ಚರಿಯ ವಿಷಯವೆಂದರೆ, ತಾನು ಎದ್ದು ಹೋಗುವ ಮುನ್ನ ಪತಿಯ ಮೊಬೈಲ್ನಲ್ಲಿ ಆಕೆಯೇ ನಸುಕಿನ ಜಾವ 2 ಗಂಟೆಗೆ ಅಲಾರಾಂ ಸೆಟ್ ಮಾಡಿಟ್ಟು, ತನ್ನ ಮೈಮೇಲಿದ್ದ ಚಿನ್ನಾಭರಣಗಳ ಸಮೇತ ಯಾರಿಗೂ ತಿಳಿಯದಂತೆ ಮನೆಯಿಂದ ಜಾಗ ಖಾಲಿ ಮಾಡಿದ್ದಾಳೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ತವರು ಮನೆಯಲ್ಲಿ ಲ್ಯಾಂಡ್; ಫೈಲ್ ಕ್ಲೋಸ್ಗೆ ಕಡಬಕ್ಕೆ ಬರಬೇಕಷ್ಟೇ!
ಮಹತ್ವಾಕಾಂಕ್ಷಿ ಹುಡುಕಾಟದ ಬಳಿಕ, ತವರು ಮನೆಗೂ ಮಾಹಿತಿ ನೀಡಿ, ಪತಿ ಆಶಿಕ್ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಿದ್ದಂತೆಯೇ, ಮಹ್ತಾಬ್ ಶಿವಮೊಗ್ಗದ ತನ್ನ ತವರು ಮನೆಗೆ ಸುರಕ್ಷಿತವಾಗಿ ಬಂದು ತಲುಪಿರುವ ಸಮಾಧಾನಕರ ಸುದ್ದಿ ಬಂದಿದೆ.
ಆದರೆ, ಮದುವೆಯಾದ ಕೇವಲ ವಾರದಲ್ಲೇ, ಅಷ್ಟು ನಸುಕಿನ ಜಾವ ಪತಿಯ ಮೊಬೈಲ್ನಲ್ಲಿ ತಾನೇ ಅಲಾರಾಂ ಇಟ್ಟು ಚಿನ್ನಾಭರಣಗಳೊಂದಿಗೆ ನಾಪತ್ತೆಯಾಗಲು ಅಸಲಿ ಕಾರಣವೇನು? ಎಂಬುದು ಇನ್ನು ನಿಗೂಢವಾಗಿದೆ. ಸದ್ಯ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ, ಕಾನೂನಾತ್ಮಕ ತನಿಖೆಯ ಫೈಲ್ ಕ್ಲೋಸ್ ಮಾಡಲು ಯುವತಿಯನ್ನು ಕಡಬಕ್ಕೆ ಕರೆತರಬೇಕಾಗಿದ್ದು, ಪೊಲೀಸರ ವಿಚಾರಣೆಯ ಬಳಿಕವಷ್ಟೇ ಈ ಹೈಡ್ರಾಮಾದ ಹಿಂದಿನ ನೈಜ ಕಾರಣ ಬೆಳಕಿಗೆ ಬರಬೇಕಿದೆ



-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ