F.I.R.
ಕೇರಳದಲ್ಲಿ ಕರುಳು ಹಿಂಡುವ ಘಟನೆ: ಒಂದೂವರೆ ವರ್ಷದ ಕಂದಮ್ಮನಿಗೆ ನರಕಯಾತನೆ ನೀಡಿ ಕೊಂದ ಪಾಪಿ ತಾಯಿ ಮತ್ತು ಪ್ರೇಮಿ!
ಹೆತ್ತ ಕರುಳಿಗಿಂತ ಹೆಣ್ಣಿಗೆ ಕಾಮವೇ ಕಣ್ಣಾಯಿತು… ಆಶ್ರಯ ನೀಡಬೇಕಾದ ಕೈಗಳೇ ಯಮಸ್ವರೂಪಿಯಾದವು! ದೇವರ ಸ್ವಂತ ನಾಡು ಕೇರಳದಲ್ಲಿ ಮಾನವೀಯತೆಯೇ ಸಂಪೂರ್ಣವಾಗಿ ತಲೆತಗ್ಗಿಸುವಂತಹ, ಕಲ್ಲು ಹೃದಯದವರೂ ಕಣ್ಣೀರು ಸುರಿಸುವಂತಹ ಅತ್ಯಂತ ಕ್ರೂರ ಘಟನೆಯೊಂದು ತಿರುವನಂತಪುರಂ ನಿಂದ ಬೆಳಕಿಗೆ ಬಂದಿದೆ. ಮಾತು ಬಾರದ, ತನ್ನ ನೋವನ್ನು ಹೇಳಿಕೊಳ್ಳಲಾಗದ ಕೇವಲ ಒಂದೂವರೆ ವರ್ಷದ ಮುಗ್ಧ ಕಂದಮ್ಮ ಅರ್ಷಿದ್ನನ್ನು ಹೆತ್ತ ತಾಯಿ ಮತ್ತು ಆಕೆಯ ಪ್ರೇಮಿ ಸೇರಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಭೀಕರ ಕಥೆ ಇಡೀ ಸಮಾಜವನ್ನೇ ನಡುಗಿಸಿದೆ.

ಮಗುವನ್ನು ಹತ್ಯೆ ಮಾಡಿದ ಆರೋಪದ ಮೇಲೆ ತಾಯಿ ಅಖಿಲಾ (24) ಮತ್ತು ಆಕೆಯ ಲಿವ್-ಇನ್ ಸಂಗಾತಿ ಅಶ್ಕರ್ (31) ಎಂಬ ಇಬ್ಬರು ನರರೂಪದ ರಾಕ್ಷಸರನ್ನು ನೆಡುಮಂಗಾಡ್ ಪೊಲೀಸರು ಕಬ್ಬಿಣದ ಸರಳುಗಳ ಹಿಂದೆ ತಳ್ಳಿದ್ದಾರೆ.

ಸುಳ್ಳು ಕಥೆ ಸೃಷ್ಟಿಸಿದ್ದ ಪಾಪಿಗಳು: ಪೋಸ್ಟ್ಮಾರ್ಟಮ್ನಲ್ಲಿ ಬಯಲಾಯ್ತು ಸತ್ಯ!
ಮೇ 29ರ ಶುಕ್ರವಾರದಂದು ಈ ದುರಂತ ಜಗತ್ತಿಗೆ ಗೊತ್ತಾಯಿತು. ಮಗು ಅರ್ಷಿದ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ, ಆರೋಪಿಗಳು ನಾಟಕವಾಡಿ ಆಂಬ್ಯುಲೆನ್ಸ್ ಮೂಲಕ ಪಣವೂರಿನ ಖಾಸಗಿ ಆಸ್ಪತ್ರೆಗೆ, ಅಲ್ಲಿಂದ ಎಸ್ಎಟಿ (SAT) ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲೇ ಆ ಪುಟ್ಟ ಜೀವ ಬಾರದ ಲೋಕಕ್ಕೆ ಪಯಣಿಸಿತ್ತು.
ಆರೋಪಿ ಅಶ್ಕರ್ ಪೊಲೀಸರಿಗೆ ಹೇಳಿದ ಕಟ್ಟುಕಥೆ:
“ಮಗು ಹಾಲು, ನೀರು ಕುಡಿದು ಮಲಗಿತ್ತು. ಇದ್ದಕ್ಕಿದ್ದಂತೆ ಕೆಮ್ಮಲು ಮತ್ತು ವಾಂತಿ ಮಾಡಲು ಆರಂಭಿಸಿತು. ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿತು.”
ಆದರೆ, ಮಗುವಿನ ಮರಣೋತ್ತರ ಪರೀಕ್ಷಾ ವರದಿ ಬರುತ್ತಿದ್ದಂತೆ ವೈದ್ಯರೇ ಬೆಚ್ಚಿಬಿದ್ದರು. ಮಗುವಿನ ತಲೆ ಹಾಗೂ ದೇಹದಾದ್ಯಂತ ತೀವ್ರ ಆಂತರಿಕ ರಕ್ತಸ್ರಾವ ಉಂಟಾಗಿದ್ದೇ ಸಾವಿಗೆ ಕಾರಣ ಎಂದು ವರದಿ ಬಹಿರಂಗಪಡಿಸಿತು. ಪಾಪಿಗಳು ಹೆಣೆದಿದ್ದ ಸುಳ್ಳಿನ ಜಾಲ ಕ್ಷಣಾರ್ಧದಲ್ಲಿ ಧೂಳೀಪಟವಾಯಿತು.
ಪುಟ್ಟ ದೇಹದ ಮೇಲೆ 50ಕ್ಕೂ ಹೆಚ್ಚು ಗಾಯಗಳು: ದಿನವೂ ನಡೆಯುತ್ತಿತ್ತು ನರಕಯಾತನೆ!
ಪೊಲೀಸ್ ತನಿಖೆ ಮುಂದುವರಿದಂತೆ ಆ ಒಂದೂವರೆ ವರ್ಷದ ಕಂದ ಪ್ರತಿದಿನ ಅನುಭವಿಸುತ್ತಿದ್ದ ನರಕಯಾತನೆಯ ಎಳೆಎಳೆಗಳು ಬಿಚ್ಚಿಕೊಳ್ಳತೊಡಗಿದವು. ತನಿಖಾಧಿಕಾರಿಗಳು ಅರ್ಷಿದ್ನ ಪುಟ್ಟ ಮತ್ತು ಕೋಮಲವಾದ ದೇಹದ ಮೇಲೆ ಬರೋಬ್ಬರಿ 50ಕ್ಕೂ ಹೆಚ್ಚು ಹಳೆಯ ಮತ್ತು ತಾಜಾ ಗಾಯಗಳನ್ನು ಪತ್ತೆಹಚ್ಚಿದ್ದಾರೆ.
ಸಿಗರೇಟ್ನಿಂದ ಸುಟ್ಟ ಗಾಯಗಳು: ಮಗುವಿನ ಇಡೀ ದೇಹದಾದ್ಯಂತ ಸಿಗರೇಟ್ ತುಂಡುಗಳಿಂದ ಸುಟ್ಟು ಹಾಕಿರುವ ದುಂಡಗಿನ ಗುರುತುಗಳಿದ್ದವು.
ಮುರಿದಿದ್ದ ಕೈಗಳು: ಈ ಹಿಂದೆ ಮಗುವಿನ ಎರಡೂ ತೋಳುಗಳು ಮುರಿದಿದ್ದವು. ಆ ಸಮಯದಲ್ಲಿ “ಮಗು ಆಟ ಆಡುತ್ತಾ ಕೆಳಗೆ ಬಿದ್ದಿದೆ” ಎಂದು ಈ ಪಾಪಿಗಳು ಜಾಣತನದಿಂದ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದರು.

ಅರ್ಷಿದ್ನ ತಂದೆ (ಅಖಿಲಾಳ ಮೊದಲ ಪತಿ) ಮೃತಪಟ್ಟ ನಂತರ ಮಗುವನ್ನು ಅಜ್ಜಿ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅಜ್ಜಿಯ ಮಡಿಲಲ್ಲಿ ಮಗು ಸುರಕ್ಷಿತವಾಗಿತ್ತು. ಆದರೆ, ಅಖಿಲಾ ತನಗೆ ಮಗುವನ್ನು ಸಾಕಲು ಸಾಧ್ಯವಿಲ್ಲ ಎಂದು ಹೇಳಿ, ನಂತರ ತನ್ನ ಪ್ರೇಮಿ ಅಶ್ಕರ್ ಜೊತೆ ಲಿವ್-ಇನ್ ರಿಲೇಶನ್ಶಿಪ್ನಲ್ಲಿ ವಾಸಿಸಲು ಮಗುವನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಳು. ಅಲ್ಲಿಂದಲೇ ಮಗುವಿನ ಪಾಲಿಗೆ ನರಕದ ಬಾಗಿಲು ತೆರೆದಿತ್ತು. ಹೆತ್ತ ಮಗನಿಗೆ ಅಶ್ಕರ್ ರಾಕ್ಷಸನಂತೆ ಹಿಂಸಿಸುತ್ತಿದ್ದರೂ, ಕಣ್ಣೆದುರೇ ಮಗುವಿನ ಕೈ ಮುರಿದರೂ ಅಖಿಲಾ ಮಗನನ್ನು ರಕ್ಷಿಸಲಿಲ್ಲ, ಪೊಲೀಸರಿಗೂ ಹೇಳಲಿಲ್ಲ. ಇದೇ ಕಾರಣಕ್ಕೆ ಆಕೆಯನ್ನೂ ಕೊಲೆ ಆರೋಪಿಯನ್ನಾಗಿ ಮಾಡಲಾಗಿದೆ.
ಮೊದಲ ಪತ್ನಿಯನ್ನೂ ಜೀವಚ್ಛವ ಮಾಡಿದ್ದ ಕ್ರೂರಿ ಅಶ್ಕರ್!
ಬಂಧಿತ ಆರೋಪಿ ಅಶ್ಕರ್ ಕೇವಲ ಮಗುವಿನ ಪಾಲಿಗೆ ಮಾತ್ರವಲ್ಲ, ಆತನ ಸಹವಾಸಕ್ಕೆ ಬಂದವರೆಲ್ಲರಿಗೂ ಯಮನಾಗಿದ್ದ. ಆತನ ಮೊದಲ ಪತ್ನಿ ಅಮೀನಾಳ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಬಂದು ಆಘಾತಕಾರಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅಶ್ಕರ್ ಇನ್ನು ಕೂಡ ಅಮೀನಾಗೆ ಅಧಿಕೃತ ವಿಚ್ಛೇದನ ನೀಡಿಲ್ಲ. ಆಕೆಯ ತಲೆಯನ್ನು ಗೋಡೆಗೆ ಬಡಿಯುವುದು, ಸೀಲಿಂಗ್ ಫ್ಯಾನ್ ಉರುಳಿಗೆ ಸಿಲುಕಿಸಲು ಯತ್ನಿಸುವಂತಹ ಘೋರ ದೈಹಿಕ ಹಿಂಸೆ ನೀಡಿದ್ದ. ಆ ಭೀಕರ ಹಲ್ಲೆಯ ಕಾರಣದಿಂದಾಗಿ ಅಮೀನಾ ಕಳೆದ ಒಂದು ವರ್ಷದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಸಿಗೆ ಹಿಡಿದಿದ್ದು, ಪ್ರಸ್ತುತ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಹೊತ್ತಿ ಉರಿದ ಗ್ರಾಮಸ್ಥರ ಆಕ್ರೋಶ: ಆರೋಪಿಗೆ ಧರ್ಮದೇಟು ನೀಡಲು ಯತ್ನ!
ರವಿವಾರ ತನಿಖೆಯ ಭಾಗವಾಗಿ ಮಹಜರು (ಸ್ಥಳ ಪರಿಶೀಲನೆ) ನಡೆಸಲು ನೆಡುಮಂಗಾಡ್ ಪೊಲೀಸರು ಆರೋಪಿ ಅಶ್ಕರ್ನನ್ನು ಕರಿಕುಳಿಯಲ್ಲಿರುವ ಆತನ ಮನೆಗೆ ಕರೆದೊಯ್ದಾಗ ಇಡೀ ಗ್ರಾಮವೇ ಆಕ್ರೋಶದ ಜ್ವಾಲೆಯಾಗಿ ಬೀದಿಗೆ ಬಂದಿತ್ತು. ನೂರಾರು ಸ್ಥಳೀಯ ನಿವಾಸಿಗಳು, ಮಹಿಳೆಯರು ಜಮಾಯಿಸಿ ಆ ಪಾಪಿಯ ಮುಖಕ್ಕೆ ಉಗುಳಿ, ಆತನ ಮೇಲೆ ದಾಳಿ ಮಾಡಲು ಯತ್ನಿಸಿದರು. “ಆ ನರರಾಕ್ಷಸನನ್ನು ನಮಗೆ ಒಪ್ಪಿಸಿ, ಇಲ್ಲೇ ಜೀವಂತವಾಗಿ ಮುಗಿಸುತ್ತೇವೆ” ಎಂದು ಜನ ಕಿರುಚಾಡಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಹರಸಾಹಸ ಪಟ್ಟು ಕೋಪಗೊಂಡ ಜನರನ್ನು ನಿಯಂತ್ರಿಸಿ, ಆರೋಪಿಯನ್ನು ಸುರಕ್ಷಿತವಾಗಿ ಜೈಲಿನತ್ತ ಸಾಗಿಸಿದರು.
ಒಡಲಲ್ಲಿ ಹೊತ್ತು ಹೆತ್ತ ಮಗುವನ್ನೇ ಕಾಮದ ಅಮಲಿನಲ್ಲಿ ಕ್ರೂರಿಯ ಕೈಗಿಟ್ಟು ಸಾಯಿಸಿದ ಆ ತಾಯಿಗೂ, ಚಿಕ್ಕ ಕಂದಮ್ಮನಿಗೆ ಸಿಗರೇಟ್ನಿಂದ ಸುಟ್ಟು ಕೊಂದ ಆ ನರರಾಕ್ಷಸನಿಗೂ ಕಾನೂನು ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕಿದೆ. ಇಂತಹ ಘಟನೆಗಳು ಮರುಕಳಿಸದಂತೆ ಇಡೀ ಸಮಾಜವೇ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮುಗ್ಧ ಅರ್ಷಿದ್ನ ಆತ್ಮಕ್ಕೆ ಶಾಂತಿ ಸಿಗಲಿ
crime
ಪುತ್ತೂರು: ಗಣೇಶ ವಿಸರ್ಜನಾ ಶೋಭಾಯಾತ್ರೆ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ; ಅಜಿತ್ ರೈ ಹೊಸಮನೆ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು
ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ.17ರಂದು ರಾತ್ರಿ ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ನಿಯಮ ಉಲ್ಲಂಘಿಸಿ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ:
- ಷರತ್ತುಬದ್ಧ ಅನುಮತಿ: ಶೋಭಾಯಾತ್ರೆಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಷರತ್ತುಬದ್ಧ ಅನುಮತಿ ನೀಡಲಾಗಿತ್ತು.
- ಸಮಯ ಮೀರಿದ ಬಳಿಕವೂ ಬಳಕೆ: ರಾತ್ರಿ ಸುಮಾರು 10.35ರ ವೇಳೆಗೆ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಜಂಕ್ಷನ್ನಲ್ಲಿ ‘ಪಂಚಮುಖಿ ಫ್ರೆಂಡ್ಸ್’ ಹೆಸರಿನ ಸ್ತಬ್ಧಚಿತ್ರದಲ್ಲಿ ಧ್ವನಿವರ್ಧಕ ಬಳಕೆ ಮುಂದುವರಿದಿರುವುದನ್ನು ಗಮನಿಸಿದ ಪೊಲೀಸರು, ಅದನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು.
- ಆರೋಪವೇನು?: ಪೊಲೀಸರು ಸೂಚನೆ ನೀಡಿದರೂ, ಸ್ಥಳಕ್ಕೆ ಆಗಮಿಸಿದ ಅಜಿತ್ ರೈ ಹೊಸಮನೆ ಹಾಗೂ ಇತರರು ಧ್ವನಿವರ್ಧಕ ಬಂದ್ ಮಾಡದಂತೆ ತಡೆದು, ಪುನಃ ಧ್ವನಿವರ್ಧಕ ಬಳಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆರೋಪ:
ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನಗಳು ಹಾಗೂ ಠಾಣೆಯಿಂದ ಆಯೋಜಕರಿಗೆ ನೀಡಲಾಗಿದ್ದ ಷರತ್ತುಗಳ ಕುರಿತು ಸ್ಥಳದಲ್ಲಿದ್ದವರಿಗೆ ಪೊಲೀಸರು ತಿಳಿವಳಿಕೆ ನೀಡಿದರೂ, ಅದನ್ನು ಲೆಕ್ಕಿಸದೆ ಧ್ವನಿವರ್ಧಕ ಬಳಕೆಯನ್ನು ಮುಂದುವರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಪೊಲೀಸ್ ಉಪನಿರೀಕ್ಷಕರು ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಅಧಿಕಾರಿಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್ ಸ್ತಬ್ಧಚಿತ್ರದ ಆಯೋಜಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ
crime
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಕೆಂಪು ಕಲ್ಲು ಸಾಗಾಟ: ಎರಡು ಲಾರಿಗಳು ವಶಕ್ಕೆ, ಮೂವರ ವಿರುದ್ಧ ಪ್ರಕರಣ ದಾಖಲು!
ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಪರವಾನಿಗೆ ಅಥವಾ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡು, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಪ್ರಮುಖ ವಿವರಗಳು:
ಮೊದಲ ಪ್ರಕರಣ (ನೆಲ್ಲಿಕಟ್ಟೆ ಜಂಕ್ಷನ್): ದಿನಾಂಕ 14.09.2026ರಂದು ರಾತ್ರಿ ವೇಳೆ ಕೇರಳ ಕಡೆಯಿಂದ ಕನ್ಯಾನ ಕಡೆಗೆ ಲಾರಿಯಲ್ಲಿ (ನಂಬರ್: KA-21-D-0784) ಅಕ್ರಮವಾಗಿ ಕೆಂಪು ಕಲ್ಲು ಸಾಗಿಸುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ರವರಿಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಸಿಬ್ಬಂದಿಗಳೊಂದಿಗೆ ಕರೋಪಾಡಿ ಗ್ರಾಮದ ನೆಲ್ಲಿಕಟ್ಟೆ ಜಂಕ್ಷನ್ ಬಳಿ ದಾಳಿ ನಡೆಸಿ ಲಾರಿಯನ್ನು ತಡೆದು ಪರಿಶೀಲಿಸಿದಾಗ ಪರವಾನಿಗೆ ಇಲ್ಲದಿರುವುದು ಪತ್ತೆಯಾಗಿದೆ.
ಆರೋಪಿಗಳು: ಈ ಪ್ರಕರಣದಲ್ಲಿ ಲಾರಿ ಚಾಲಕ ವೀರಕಂಭ ನಿವಾಸಿ ಮಹಮ್ಮದ್ ತೌಕಿರ್ (26), ಲಾರಿ ಮಾಲಿಕ ಮೊಹಮ್ಮದ್ ಸಿಮ್ರಾನ್ ಹಾಗೂ ಅಕ್ರಮ ಕೃತ್ಯಕ್ಕೆ ಸಹಕರಿಸಿದ ಸಜೀರ್ ಎಂಬುವವರ ವಿರುದ್ಧ ವಿಟ್ಲ ಠಾಣೆಯಲ್ಲಿ ಅಕ್ರ ಸಂಖ್ಯೆ: 193/2026, BNS ಕಾಯ್ದೆ ಕಲಂ 303(2) ಮತ್ತು MMDR ಆ್ಯಕ್ಟ್ ಹಾಗೂ ಕರ್ನಾಟಕ ಮೈನರ್ ಮಿನರಲ್ ರೂಲ್ಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎರಡನೇ ಪ್ರಕರಣ (ಕುದ್ದುಪದವು ರಸ್ತೆ): ಅದೇ ದಿನ (14.09.2026) ತಡರಾತ್ರಿ ಕುದ್ದುಪದವು ಮಾರ್ಗವಾಗಿ ಕಲ್ಲಡ್ಕ-ಕಾಂಞಗಾಡ್ ಅಂತರ ರಾಜ್ಯ ಹೆದ್ದಾರಿಯಲ್ಲಿ ಮತ್ತೊಂದು ಟಿಪ್ಪರ್ ಲಾರಿಯಲ್ಲಿ (ನಂಬರ್: KA-70-A-1926) ಯಾವುದೇ ಪರವಾನಿಗೆಯಿಲ್ಲದೆ ಕೆಂಪು ಕಲ್ಲು ಸಾಗಿಸುತ್ತಿರುವುದನ್ನು ಪಿಎಸ್ಐ ರಾಮಕೃಷ್ಣ ಹಾಗೂ ತಂಡ ಪತ್ತೆಹಚ್ಚಿ ವಶಕ್ಕೆ ಪಡೆದಿದೆ.
ಆರೋಪಿ: ಬೆಳ್ತಂಗಡಿ ಕನ್ಯಾಡಿ ನಿವಾಸಿ ಚಂದ್ರೇಶ್ (40) ಎಂಬಾತನ ವಿರುದ್ಧ ವಿಟ್ಲ ಠಾಣೆಯಲ್ಲಿ ಅಕ್ರ ಸಂಖ್ಯೆ: 194/2026ರಡಿ ಕಾನೂನುರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೊಲೀಸ್ ಎಚ್ಚರಿಕೆ: ಅಕ್ರಮವಾಗಿ ಮರಳು, ಕಲ್ಲು ಹಾಗೂ ಇತರೆ ಖನಿಜ ಸಂಪನ್ಮೂಲಗಳನ್ನು ಸಾಗಿಸುವವರ ವಿರುದ್ಧ ಜಿಲ್ಲೆಯಲ್ಲಿ ಕಠಿಣ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
cyber crime
ಮಂಗಳೂರು: ಇನ್ಸ್ಟಾಗ್ರಾಮ್ ಸ್ನೇಹ ಬಲೆಗೆ ಬಿದ್ದ 19ರ ಯುವಕನಿಗೆ ಮಾರ್ಫ್ ಫೋಟೋ ತೋರಿಸಿ 5.24 ಲಕ್ಷ ರೂ. ಸುಲಿಗೆ!
ಮಂಗಳೂರು: ಇನ್ಸ್ಟಾಗ್ರಾಮ್ನಲ್ಲಿ ಸ್ನೇಹ ಬೆಳೆಸಿ, ಯುವಕನ ಫೋಟೋವನ್ನು ಅಶ್ಲೀಲವಾಗಿ ಮಾರ್ಫ್ (Morph) ಮಾಡಿ ಬ್ಲ್ಯಾಕ್ಮೇಲ್ ಮಾಡಿ ಒಟ್ಟು 5.24 ಲಕ್ಷ ರೂ. ಗೂ ಅಧಿಕ ಹಣವನ್ನು ಸೈಬರ್ ವಂಚಕರು ಸುಲಿಗೆ ಮಾಡಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮಂಗಳೂರು ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
19 ವರ್ಷದ ಪಿಯು ವಿದ್ಯಾರ್ಥಿಯೊಬ್ಬರು ಇನ್ಸ್ಟಾಗ್ರಾಮ್ ಬಳಸುತ್ತಿದ್ದಾಗ ‘ಜಮ್ಶೇದ್’ ಎಂಬ ಹೆಸರಿನ ಖಾತೆಯಿಂದ ವ್ಯಕ್ತಿಯೊಬ್ಬ ಕಮೆಂಟ್ ಮೂಲಕ ಪರಿಚಯವಾಗಿದ್ದಾನೆ. ಬಳಿಕ ವಾಟ್ಸಾಪ್ನಲ್ಲಿ ಚಾಟ್ ಮಾಡಲು ನಂಬರ್ ಪಡೆದುಕೊಂಡಿದ್ದಾನೆ.
ಜೂನ್ 19, 2026ರಂದು ವಾಟ್ಸಾಪ್ ಚಾಟ್ ಆರಂಭವಾದಾಗ, ಆರೋಪಿಯು ಮೊದಲು 300 ರೂ. ಹಣ ನೀಡುವಂತೆ ಕೇಳಿದ್ದಾನೆ. ಯುವಕ ನಿರಾಕರಿಸಿದರೂ, ಆರೋಪಿ ಪದೇ ಪದೇ ಫೋನ್ ಮಾಡಿ ಗೋಗರೆದಿದ್ದರಿಂದ ಆತ ಕಳುಹಿಸಿದ ಕ್ಯೂಆರ್ ಕೋಡ್ಗೆ 300 ರೂ. ಫೋನ್ಪೇ ಮಾಡಲಾಗಿದೆ.
ಬ್ಲ್ಯಾಕ್ಮೇಲ್ ಮತ್ತು ಹಣ ಸುಲಿಗೆ:
300 ರೂ. ಪಡೆದ ಬಳಿಕ ಆರೋಪಿಯ ಬೇಡಿಕೆ ಹೆಚ್ಚಾಗಿದ್ದು, ವಿವಿಧ ವಾಟ್ಸಾಪ್ ನಂಬರ್ಗಳಿಂದ ನಿರಂತರವಾಗಿ ಹಣಕ್ಕಾಗಿ ಪೀಡಿಸಲು ಶುರು ಮಾಡಿದ್ದಾನೆ. ಯುವಕ ಹಣ ನೀಡಲು ಒಪ್ಪದಿದ್ದಾಗ, ಆತನ ಮುಖದ ಭಾವಚಿತ್ರವನ್ನು ಅಶ್ಲೀಲ ಚಿತ್ರದೊಂದಿಗೆ ಮಾರ್ಫ್ ಮಾಡಿ ಯುವಕನಿಗೆ ಕಳುಹಿಸಿ ಬೆದರಿಕೆ ಹಾಕಲಾಗಿದೆ.
“ಹೇಳಿದಷ್ಟು ಹಣ ನೀಡದಿದ್ದರೆ ಈ ಅಶ್ಲೀಲ ಫೋಟೋಗಳನ್ನು ನಿನ್ನ ಇನ್ಸ್ಟಾಗ್ರಾಮ್ ಫಾಲೋವರ್ಸ್ಗೆ ಕಳುಹಿಸಿ ಸಮಾಜದಲ್ಲಿ ಮಾನ ಹರಾಜು ಹಾಕುತ್ತೇನೆ” ಎಂದು ವಂಚಕರು ಬೆದರಿಸಿದ್ದಾರೆ.
ಮಾನಹಾನಿಗೆ ಹೆದರಿ ಕಂಗೆಟ್ಟ ವಿದ್ಯಾರ್ಥಿ, ಜೂನ್ 19 ರಿಂದ ಜುಲೈ 23, 2026ರವರೆಗೆ ವಂಚಕರು ಸೂಚಿಸಿದ ವಿವಿಧ ಕ್ಯೂಆರ್ ಕೋಡ್ಗಳಿಗೆ ತನ್ನ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ಹಂತ ಹಂತವಾಗಿ ಒಟ್ಟು 5,24,712 ರೂ. ಹಣವನ್ನು ವರ್ಗಾಯಿಸಿದ್ದಾನೆ. ಇಷ್ಟೆಲ್ಲಾ ಹಣ ನೀಡಿದರೂ ವಂಚಕರ ಬ್ಲ್ಯಾಕ್ಮೇಲ್ ನಿಲ್ಲದ ಕಾರಣ, ಅಂತಿಮವಾಗಿ ಯುವಕ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
