Connect with us

accident

ಮಾಣಿ: NH-75ರಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು!

Published

on

ಮಾಣಿ (ಬಂಟ್ವಾಳ): ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ NH-75 ರ ಮಾಣಿ ಮತ್ತು ಸೂರಿಕುಮೇರು ನಡುವಿನ ಪೆಟ್ರೋಲ್ ಬಂಕ್ ಸಮೀಪ ಗುರುವಾರ ಭೀಕರ ಕಾರು ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ: ಧಾರಾಕಾರ ಮಳೆಯಿಂದಾಗಿ ರಸ್ತೆ ಸಂಪೂರ್ಣ ಜಾರುತ್ತಿದ್ದ ವೇಳೆಯಲ್ಲಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಕಾರು ನೇರವಾಗಿ ರಸ್ತೆ ಮಧ್ಯದ ಡಿವೈಡರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದು, ಹೆದ್ದಾರಿಯಲ್ಲೇ ತಲೆಕೆಳಗಾಗಿ ಪಲ್ಟಿಯಾಗಿದೆ.

ಸಣ್ಣಪುಟ್ಟ ಗಾಯ, ಪ್ರಾಣಾಪಾಯವಿಲ್ಲ: ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದ್ದರೂ, ಅದರಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳ ಸಂಪೂರ್ಣ ಗುರುತು ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

ಪೊಲೀಸರ ಎಚ್ಚರಿಕೆ ಹಾಗೂ ಸುಗಮ ಸಂಚಾರ: ಮಳೆಯಿಂದಾಗಿ ರಸ್ತೆಗಳು ಜಾರುತ್ತಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ವೇಗದ ಮಿತಿ ಕಾಯ್ದುಕೊಂಡು ಅತ್ಯಂತ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅಪಘಾತದ ಬಳಿಕ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿದ್ದು, ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಪಲ್ಟಿಯಾದ ಕಾರನ್ನು ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ವಿಟ್ಲ: ಮಲಬಾರ್ ಬಸ್ ಢಿಕ್ಕಿ ಹೊಡೆದು ವೃದ್ಧನ ಕಾಲಿಗೆ ಗಂಭೀರ ಗಾಯ

Published

on

ವಿಟ್ಲ: ಕಾಸರಗೋಡು-ಪುತ್ತೂರು ರಸ್ತೆಯಲ್ಲಿ ಸಂಚರಿಸುವ ‘ಕೇರಳ ಮಲಬಾರ್’ ಬಸ್ ಬಡಿದು ಪಾದಾಚಾರಿ ವೃದ್ಧರೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ವಿಟ್ಲದ ಸಂತೆಕಟ್ಟೆ ರಸ್ತೆ ಬಳಿ ನಡೆದಿದೆ.

ಕೇರಳದ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳುಬೈಲು ನಿವಾಸಿ ಸತ್ಯನಾರಾಯಣ ಭಟ್ (76) ಗಾಯಗೊಂಡ ದುರ್ದೈವಿ.

ಘಟನೆಯ ವಿವರ:

ಸತ್ಯನಾರಾಯಣ ಭಟ್ ಅವರು ತಮ್ಮ ಪತ್ನಿಯೊಂದಿಗೆ ಕೊಳ್ನಾಡು ಗ್ರಾಮದಲ್ಲಿರುವ ಮಗಳ ಮನೆಗೆ ತೆರಳಲು ವಿಟ್ಲಕ್ಕೆ ಬಂದಿದ್ದರು. ಈ ವೇಳೆ ವಿಟ್ಲದ ಸಂತೆಕಟ್ಟೆ ರಸ್ತೆ ಸಮೀಪದ ಹಣ್ಣಿನ ಅಂಗಡಿಯ ಮುಂದೆ ಹಣ್ಣು ಖರೀದಿಸಲು ನಿಂತಿದ್ದಾಗ, ಕಾಸರಗೋಡಿನಿಂದ ಪುತ್ತೂರು ಕಡೆಗೆ ಸಾಗುತ್ತಿದ್ದ ‘ಕೇರಳ ಮಲಬಾರ್’ ಬಸ್ ಇವರಿಗೆ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಭಟ್ ಅವರು ರಸ್ತೆಗೆ ಬಿದ್ದಿದ್ದು, ಬಸ್ಸಿನ ಕಬ್ಬಿಣದ ಭಾಗ ಬಡಿದು ಅವರ ಕಾಲಿಗೆ ತೀವ್ರ ಹಾಗೂ ಗಂಭೀರ ಸ್ವರೂಪದ ಗಾಯಗಳಾಗಿವೆ.

ಶಸ್ತ್ರಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ದಾಖಲು:

ಘಟನೆ ನಡೆದ ತಕ್ಷಣವೇ ಸ್ಥಳೀಯರು ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಗಾಯವು ಅತ್ಯಂತ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಾಗಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ವಶಕ್ಕೆ – ಪ್ರಕರಣ ದಾಖಲು:

ಅಪಘಾತಕ್ಕೆ ಕಾರಣವಾದ ಕೇರಳ ನೋಂದಣಿಯ ಮಲಬಾರ್ ಬಸ್ (KL 15 9995) ಅನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

accident

ಬಿ.ಸಿ. ರೋಡ್‌ ಸರ್ಕಲ್‌ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ

Published

on

ಬಿ.ಸಿ. ರೋಡ್: ರಾಷ್ಟ್ರೀಯ ಹೆದ್ದಾರಿಯ ಬಿ.ಸಿ. ರೋಡ್ ಸರ್ಕಲ್ ಬಳಿ ಟಿಪ್ಪರ್ ಲಾರಿ ಹಾಗೂ ಆಕ್ಟಿವಾ ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದು, ಮತ್ತೊರ್ವ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಇಬ್ಬರೂ ಅಪಘಾತಕ್ಕೆ ಬಲಿಯಾದ ಸುದ್ದಿ ಬಂದಿದೆ.

ಅಪಘಾತ ಪ್ರಕರಣದಲ್ಲಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಆಕ್ಟಿವಾ ಸಹ ಸವಾರ ಯಶವಂತ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಇದೀಗ ಗಂಭೀರವಾಗಿ ಗಾಯಗೊಂಡಿದ್ದ ಸವಾರ ದಯಾನಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳದಿಂದ ಮಂಗಳೂರಿನ ಎ. ಜೆ. ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ.

ಪಾಣೆಮಂಗಳೂರು ಹೊರವಲಯದ ಮರ್ದೋಳಿ ನಿವಾಸಿಗಳಾದ ಯಶವಂತ್ ಮತ್ತು ದಯಾನಂದ ಆಕ್ಟೀವಾದಲ್ಲಿ ಪ್ರಯಾಣಿಸುತ್ತಿದ್ದು ಅಪಘಾತದಲ್ಲಿ ಗಂಭೀರ ಗಾಯಗೊಂಡ ಯಶವಂತ್ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ದಯಾನಂದ ಕೂಡಾ ಗಂಭೀರ ಗಾಯಗೊಂಡು ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಇದೀಗ ಅವರೂ ಮೃತರಾಗಿರುವ ನೋವಿನ ಮಾಹಿತಿಯೊಂದು ಬಂದಿದೆ.

ಘಟನೆಯ ವಿವರ:

ಬಿ.ಸಿ. ರೋಡ್ ಜಂಕ್ಷನ್ ಬಳಿ ಟಿಪ್ಪರ್ ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಈ ಅಪಘಾತಕ್ಕೆ ನೇರ ಕಾರಣವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಆಕ್ಟಿವಾ ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದರು.ಟಿಪ್ಪರ್‌ ಚಾಲಕನ ಮೇಲೆ ಸಾರ್ವಜನಿಕರು ‌ ಆಕ್ರೋಶಿತರಾಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಆಸ್ಪತ್ರೆಗೆ ದಾಖಲು:

ಅಪಘಾತದ ತೀವ್ರತೆಗೆ ಇಬ್ಬರೂ ರಕ್ತಸಿಕ್ತವಾಗಿ ರಸ್ತೆಯಲ್ಲಿ ಬಿದ್ದಿದ್ದು, ಗಾಯಾಳುಗಳ ಪೈಕಿ ಓರ್ವನ ಸ್ಥಿತಿ ಅತ್ಯಂತ ಚಿಂತಾಜನಕವಾಗಿತ್ತು ತಕ್ಷಣವೇ ಸ್ಥಳೀಯರು ಸ್ಪಂದಿಸಿ, ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಿದ್ದಾರೆ. ಆದರೂ ದಾರಿ ಮದ್ಯೆ ಯಶವಂತ್‌ ಕೊನೆಯುಸಿರೆಳೆದಿದ್ದರು ಇದೀಗ ದಯಾನಂದ ಕೂಡಾ ಸಾವನ್ನಪ್ಪಿದ್ದಾರೆ.

ಬಿ.ಸಿ ರೋಡ್ ಸರ್ಕಲ್ ಅಪಘಾತ ಪ್ರಕರಣ, ಲಾರಿ ಚಾಲಕನ ವಶಕ್ಕೆ ಪಡೆದ ಪೊಲೀಸರು.
ಕಲ್ಲಡ್ಕ ಕಡೆಯಿಂದ ಲೊರೆಟ್ಟೊ ಪದವು ಕಡೆಗೆ ಬರುತ್ತಿದ್ದ KA-19-AF-8073 ನೋಂದಣಿಯ ಟಿಪ್ಪರ್ ವಾಹನವನ್ನು ಅದರ ಚಾಲಕ ಬಂಟ್ವಾಳ ಪಲ್ಲಮಜಲು ನಿವಾಸಿ ಸಲ್ಮಾನ್‌ ಫಾರೂಕ್ (33) ಎಂಬಾತನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೆರಳುತ್ತಿದ್ದ KA-70-H-5059 ನೊಂದಣಿ ಸಂಖ್ಯೆಯ ಆಕ್ಟಿವಾ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾನೆ. ಈ ಬಗ್ಗೆ ಬಂಟ್ವಾಳ ಸಂಚಾರ ಠಾಣೆಯಲ್ಲಿ ಅ.ಕ್ರ: 99/2026, ಕಲಂ: 281, 125 (ಎ), 106 (1) ) ಬಿ ಎನ್‌ ಎಸ್‌ ರಂತೆ ಪ್ರಕರಣ ದಾಖಲಾಗಿದ್ದು ಆರೋಪಿ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂತೂ ನಿಯಮ ಬಾಹಿರ ಸರ್ಕಲ್ ಈವರೆಗೆ ಏಳು ಜೀವಗಳ ಬಲಿ ಪಡೆದಿದ್ದು ಇನ್ನಾದರೂ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೋ ಎಂದು ಕಾದುನೋಡುವಂತಾಗಿದೆ.

Continue Reading

accident

ಕಾರಿನ ಮೇಲೆ ಕಾಡಾನೆ ದಾಳಿ: ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಕುಟುಂಬ!

Published

on

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ದೋಲನಮನೆ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ರಸ್ತೆಯಲ್ಲಿ ಎದುರಾದ ಕಾಡಾನೆಯೊಂದು ಕಾರಿನ ಮೇಲೆ ದಾಳಿ ನಡೆಸಿದೆ. ಆದರೆ, ಚಾಲಕನ ಅತ್ಯಂತ ಸಮಯಪ್ರಜ್ಞೆಯಿಂದಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಘಟನೆಯ ವಿವರ:

ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮಹಮ್ಮದ್ ಜಾಹಿದ್ ಎಂಬವರು ತಮ್ಮ ತಾಯಿ, ಅಕ್ಕ ಹಾಗೂ ಅವರ ಮಕ್ಕಳೊಂದಿಗೆ ಸೋಮವಾರ ಮಧ್ಯರಾತ್ರಿ ವೇಳೆ ಕಾರಿನಲ್ಲಿ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ದೋಲನಮನೆ ಗ್ರಾಮದ ಬಳಿ ದಿಢೀರನೆ ಪ್ರತ್ಯಕ್ಷಗೊಂಡ ಕಾಡಾನೆಯೊಂದು ಕಾರಿನ ಮೇಲೆ ದಾಳಿ ನಡೆಸಿದೆ.

ದಾಳಿಯ ರಭಸಕ್ಕೆ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಇದರಿಂದ ಭಯಭೀತರಾದ ಕಾರಿನಲ್ಲಿದ್ದ ತಾಯಿ, ಅಕ್ಕ ಹಾಗೂ ಮಕ್ಕಳು ಗಟ್ಟಿಯಾಗಿ ಕಿರುಚಾಡತೊಡಗಿದ್ದಾರೆ. ಜನರು ಕಿರುಚಾಡಿದರೂ ಜಾಗದಿಂದ ಕದಲದ ಕಾಡಾನೆ, ಕಾರಿನ ಬಳಿಯೇ ಕೆಲಕಾಲ ನಿಂತು ಆತಂಕ ಸೃಷ್ಟಿಸಿತ್ತು.

ಚಾಲಕನ ಸಮಯಪ್ರಜ್ಞೆ – ಪಾರಾದ ಕುಟುಂಬ:

ಈ ಆತಂಕದ ಕ್ಷಣದಲ್ಲೂ ಧೈರ್ಯ ಗೆಡದ ಚಾಲಕ ಮಹಮ್ಮದ್ ಜಾಹಿದ್, ತಕ್ಷಣವೇ ಕಾರಿನ ಪಾರ್ಕಿಂಗ್ (ಹ್ಯಾಜಾರ್ಡ್) ಲೈಟ್‌ಗಳನ್ನು ಆನ್ ಮಾಡಿದ್ದಾರೆ. ಪಾರ್ಕಿಂಗ್ ಲೈಟ್‌ನ ಬೆಳಕನ್ನು ಕಂಡ ಕಾಡಾನೆ ಹೆದರಿ ಕಾರಿನಿಂದ ಸ್ವಲ್ಪ ದೂರ ಹೋಗಿ ನಿಂತಿದೆ.

ತಕ್ಷಣವೇ ಎಚ್ಚೆತ್ತ ಜಾಹಿದ್, ಆನೆ ಕಾರ್ಯಪಡೆಗೆ (ಇಟಿಎಫ್ – Elephant Task Force) ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಇಟಿಎಫ್ ಸಿಬ್ಬಂದಿ, ಪಟಾಕಿ ಸಿಡಿಸಿ ಕಾಡಾನೆಯನ್ನು ಯಶಸ್ವಿಯಾಗಿ ಅರಣ್ಯಕ್ಕೆ ಅಟ್ಟಿದ್ದಾರೆ.

ಕಾಡಾನೆ ಹಾವಳಿ ಪ್ರದೇಶಗಳಲ್ಲಿ ಪ್ರಯಾಣಿಸುವಿರಾ? ಈ ಸುರಕ್ಷತಾ ಕ್ರಮಗಳು ತಿಳಿದಿರಲಿ!

ಕರ್ನಾಟಕ ಅರಣ್ಯ ಇಲಾಖೆ ಹಾಗೂ ತುರ್ತು ಸೇವೆಗಳು ಸಾರ್ವಜನಿಕರ ರಕ್ಷಣೆಗಾಗಿ ಒದಗಿಸಿರುವ ಪ್ರಮುಖ ಸಹಾಯವಾಣಿ ಸಂಖ್ಯೆಗಳು ಮತ್ತು ಪಾಲಿಸಬೇಕಾದ ಸುರಕ್ಷತಾ ನಿಯಮಗಳು ಇಲ್ಲಿವೆ:

1. ತುರ್ತು ಸಹಾಯವಾಣಿ ಸಂಖ್ಯೆಗಳು (Emergency Helplines)

ಕಾಡಾನೆ ದಾಳಿ ಅಥವಾ ವನ್ಯಜೀವಿಗಳ ತುರ್ತು ಸಂದರ್ಭ ಎದುರಾದಾಗ ತಕ್ಷಣ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ:

  • ರಾಷ್ಟ್ರೀಯ ತುರ್ತು ಸಹಾಯವಾಣಿ: 112 (ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಏಕೀಕೃತ ಸಂಖ್ಯೆ)
  • ಅರಣ್ಯ ಇಲಾಖೆಯ 24×7 ಸಹಾಯವಾಣಿ: 1926 (ಅರಣ್ಯ ಸಂಬಂಧಿ ದೂರುಗಳಿಗೆ ರಾಷ್ಟ್ರವ್ಯಾಪಿ ಸಂಖ್ಯೆ)
  • ಹಾಸನ ಜಿಲ್ಲಾ ಅರಣ್ಯ ಕಚೇರಿ (Hassan Circle): 08172-240163
  • ಪೊಲೀಸ್ ಇಲಾಖೆ: 100
  • ಆಂಬ್ಯುಲೆನ್ಸ್ ಸೇವೆ: 108

2. ವಾಹನ ಚಾಲನೆ ಮಾಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು

ವೇಗದ ಮಿತಿ ಇರಲಿ: ಆನೆಗಳು ಸಂಚರಿಸುವ ವಲಯಗಳಲ್ಲಿ (Elephant Corridors) ವಾಹನದ ವೇಗ ಯಾವಾಗಲೂ ಕಡಿಮೆ ಇರಲಿ. ಇದರಿಂದ ಹಠಾತ್ ಆನೆ ಎದುರಾದರೆ ವಾಹನ ನಿಲ್ಲಿಸಲು ಸಾಧ್ಯವಾಗುತ್ತದೆ.

  • ಹಾರ್ನ್ ಮಾಡಬೇಡಿ: ಕಾಡಾನೆಗಳು ಎದುರಾದಾಗ ಯಾವುದೇ ಕಾರಣಕ್ಕೂ ಜೋರಾಗಿ ಹಾರ್ನ್ ಮಾಡಬೇಡಿ. ಹಾರ್ನ್ ಸದ್ದು ಆನೆಗಳನ್ನು ಕೆರಳಿಸಿ, ವಾಹನದ ಮೇಲೆ ದಾಳಿ ಮಾಡಲು ಪ್ರೇರೇಪಿಸುತ್ತದೆ.
  • ಲೈಟ್‌ಗಳ ಬಳಕೆಯ ವಿವೇಕ: ರಾತ್ರಿ ವೇಳೆ ಆನೆಗಳು ಕಂಡರೆ ಹೈ-ಬೀಮ್ (High Beam) ಹೆಡ್‌ಲೈಟ್‌ಗಳನ್ನು ನೇರವಾಗಿ ಆನೆಯ ಕಣ್ಣಿಗೆ ಬೀಳುವಂತೆ ಹಾಕಬೇಡಿ. ಹಠಾತ್ ಬೆಳಕಿನಿಂದ ಅವು ಹೆದರಿ ದಾಳಿ ಮಾಡಬಹುದು. ಡಿಮ್ಮರ್ ಅಥವಾ ಈ ಘಟನೆಯಲ್ಲಿ ಚಾಲಕ ಮಾಡಿದಂತೆ ಪಾರ್ಕಿಂಗ್/ಹ್ಯಾಜಾರ್ಡ್ ಲೈಟ್‌ಗಳನ್ನು ಬಳಸಿ.
  • ವಾಹನದಿಂದ ಇಳಿಯಬೇಡಿ: ಆನೆಗಳನ್ನು ಹತ್ತಿರದಿಂದ ನೋಡಲು ಅಥವಾ ಮೊಬೈಲ್‌ನಲ್ಲಿ ಫೋಟೋ/ಸೆಲ್ಫಿ ತೆಗೆಯಲು ವಾಹನದಿಂದ ಕೆಳಗಿಳಿಯುವ ಸಾಹಸ ಮಾಡಲೇಬೇಡಿ.
  • ಸುರಕ್ಷಿತ ಅಂತರ ಕಾಯ್ದುಕೊಳ್ಳಿ: ಆನೆಗಳು ರಸ್ತೆ ದಾಟುತ್ತಿದ್ದರೆ ಅಥವಾ ರಸ್ತೆ ಬದಿಯಲ್ಲಿದ್ದರೆ ಕನಿಷ್ಠ 50-100 ಮೀಟರ್ ದೂರದಲ್ಲೇ ವಾಹನ ನಿಲ್ಲಿಸಿ. ಇಂಜಿನ್ ಆಫ್ ಮಾಡಿ ಶಾಂತವಾಗಿ ಅವುಗಳಿಗೆ ರಸ್ತೆ ದಾಟಲು ದಾರಿ ಮಾಡಿಕೊಡಿ.
Continue Reading

Trending

Copyright © 2025 Deevatige

error: Content is protected !!