Connect with us

Bantawala

ನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ

Published

on

ನಾಗ ಬನ ನಾಶ ! ಯಾರೋ ಅನ್ಯಧರ್ಮಿಯರಿಂದ ನಡೆಯುತ್ತಿದ್ದರೆ ಧರ್ಮ ಜಾಗೃತಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿತ್ತು. ಖಂಡನೆಗಳು, ಹೋರಾಟಗಳು ಸಾಲುಸಾಲಾಗಿ ನಡೆದೇ ಹೋಗುತ್ತಿತ್ತು. ನಮ್ಮ ಧರ್ಮದ ಮೇಲೆ ದಾಳಿ ಆರಂಭವಾಗಿದೆ ಎಚ್ಚೆತ್ತು ಕೊಳ್ಳಿ ಹಿಂದೂ ಧರ್ಮಕ್ಕೆ ಅಪಾಯ ಎದುರಾಗಿದೆ ಎಂಬೆಲ್ಲ ಸ್ಲೋಗನ್‌ಗಳು ವೈರಲ್ ಆಗುತ್ತಿತ್ತು.

ದೈವಗಳ ನೆಲೆವೀಡು ಕರಾವಳಿಯಲ್ಲಿ ಶತಶತಮಾನಗಳಿಂದ ಆರಾಧಿಸಿಕೊಂಡು ಬರುತ್ತಿದ್ದ ಮೂಲ ನಾಗದೇವರ ಬನ ಮತ್ತು ಕೆರೆಯನ್ನು ಸರ್ವನಾಶಮಾಡಿ ಭಕ್ತಾದಿಗಳ ಮನಸ್ಸನ್ನು ಘಾಸಿಗೊಳಿಸಿದ ಘಟನೆಯೊಂದಕ್ಕೆ ದೈವಭಕ್ತರಿಂದಾಗಲಿ, ಧರ್ಮಪಾಲಕರಿಂದಾಗಲಿ ಯಾವುದೇ ವಿರೋಧಗಳು ಬಾರದೆ ಇದ್ದ ಅತ್ಯಂತ ನೋವಿನ ವಿಚಾರವೊಂದು ಇದೀಗ ಬೊಂಡಾಲ ಎಂಬ ಕರಾವಳಿ ಭಾಗದಿಂದ ಸದ್ದಿಲ್ಲದೆ ಬೆಳಕಿಗೆ ಬಂದಿದೆ.

ಬoಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಬೊಂಡಾಳ ಸೇನೆರೆಬೈಲು ಎಂಬಲ್ಲಿ ಅನಾದಿ ಕಾಲದಿಂದಲೂ ಹಲವಾರು ಕುಟುಂಬಗಳಿಗೆ ಮೂಲನಾಗದೇವರಾಗಿ ಆರಾಧನೆಯಾಗುತ್ತಿದ್ದ ಪವಿತ್ರ ನಾಗಬನವನ್ನು ಭೂಮಿ ಖರೀದಿದಾರ ಸಂಪೂರ್ಣವಾಗಿ ದ್ವಂಸ ಗೊಳಿಸಿ ಅದರ ಪ್ರಾಕೃತಿಕ ರಚನೆಯನ್ನೇ ನೆಲಸಮ ಮಾಡಿ ಭಕ್ತಾದಿಗಳ ಭಾವನೆಗಳನ್ನು ಜೀವಂತ ಸುಟ್ಟು ಹಾಕಿದ ಘಟನೆಯ ಸುತ್ತು ಭಕ್ತರು ಆಕ್ರೋಶಿತರಾಗಿರುವುದು ಕಂಡುಬoದಿದೆ.

ನಮ್ಮ ಪೂರ್ವಜರ ಲಗಾಯಿತು ನೂರಾರು ವರ್ಷಗಳಿಂದ ಆರಾಧನೆಯಾಗುತ್ತಿದ್ದ ನಾಗದೇವರು ನಾಗಬ್ರಹ್ಮ, ನಾಗರಾಜ, ಮತ್ತು ನಾಗಕನ್ನಿಕೆ ಸೇರಿದಂತೆ ಅಷ್ಟಕುಲ ನಾಗದೇವರ ಸಾನಿಧ್ಯವನ್ನು ದ್ವಂಸಗೊಳಿಸಿರುವ ವಿಚಾರವನ್ನು ಬೊಂಡಾಲ ಬೊಳ್ಳೆಮಾರ್ ಬಿಲ್ಲವ ಕಿರೋಡಿಯನ್ ಕುಟುಂಬಸ್ತರು ಅವರ ಕ್ಷೇತ್ರದ ದೈವಜ್ಞರಲ್ಲಿ ಪ್ರಶ್ನಾಚಿಂತನೆಯನ್ನು ಇಟ್ಟು ಕೇಳಿದಾಗ ನಿಮ್ಮ ಮೂಲ ನಾಗದೇವರ ಸಂಕಷ್ಟ ಸಂದರ್ಭ ನೀವು ಅದನ್ನು ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸಿದಲ್ಲಿ ನಾಗದೇವರು ಇನ್ನಷ್ಟು ಸಾನಿಧ್ಯಶಕ್ತಿಯಾಗಿ ಬೆಳಗಲಿದ್ದಾರೆ ಎಂದು ತಿಳಿಸಿದರೆನ್ನಲಾಗಿದೆ.

ಅವರ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದoತೆ ಕಣಿಯೂರು ಕ್ಷೇತ್ರದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿಗಳಾದ ಶಂಕರನಾರಾಯಣ ಪುರೋಹಿತರ ದಿವ್ಯ ಉಪಸ್ಥಿತಿಯಲ್ಲಿ ಜನವರಿ 9ರಂದು ಕುಟುಂಬಸ್ತರು ಸಾನಿಧ್ಯದಲ್ಲಿ ಸೇರಿಕೊಂಡು ದೈವಗಳ ಪವಿತ್ರವಾದ ಬನ ಕಟ್ಟೆಗಳನ್ನು ದ್ವಂಸಗೊಳಿಸಲಾದ ಅದೇ ಜಾಗದಲ್ಲಿ ನಾಗದೇವರು ಮತ್ತು ರಕ್ತೇಶ್ವರಿ ಸಾನಿಧ್ಯದ ಸಂಕಲ್ಪವನ್ನು ದೀಪದಲ್ಲಿ ಲಯನ ಮಾಡಿಕೊಂಡು ಕುಟುಂಬಸ್ತರು ಸಾಮೂಹಿಕ ಪ್ರಾರ್ಥನೆ ನಡೆಸಿದರು.


ಇದೇ ಜಾಗದಲ್ಲಿ ನಮಗೆ ನಾಗಸಾನಿಧ್ಯ ಮತ್ತೆ ಉದಯಿಸಿ ಬರುವಂತೆ ಸಾಮೂಹಿಕ ಪ್ರಾರ್ಥನೆಯನ್ನು ಮಾಡಿದ ಸ್ವಾಮೀಜಿಯವರು. ಸಮಾಜದಲ್ಲಿ ದೈವಬಲ ಇಲ್ಲವಾದರೆ ಆತನಿಂದ ಏನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ. ಎಲ್ಲಿ ಕಳೆದುಕೊಂಡಿದ್ದೇವೆಯೋ ಅಲ್ಲಿಯೇ ಹುಡುಕುವ ಕೆಲಸ ಮಾಡಿದಾಗ ದೈವೀ ಅನುಗ್ರಹದ ಮೂಲಕ ಮತ್ತೇ ನಾಗಬನದ ನಿರ್ಮಾಣ ಇದೇ ಜಾಗದಲ್ಲಿ ಆಗಿಯೇ ಆಗುತ್ತದೆ ಎಂದು ಆಶೀರ್ವಚನ ಮಾಡಿದರು.

ತಲೆ ತಲಾಂತರಗಳಿOದ ಕ್ಷೇತ್ರದ ತಂತ್ರಿಗಳಾಗಿ ನಾಗದೇವರು ಸೇರಿದಂತೆ ದೈವದೇವರ ಸೇವೆಯನ್ನು ಮಾಡಿಕೊಂಡು ಬಂದಿರುವ ಶಂಕರನಾರಾಯಣ ತಂತ್ರಿಗಳವರು ಈ ಕ್ಷೇತ್ರ ನಮ್ಮವರಿಂದಲೇ ದ್ವಂಸವಾಗಿರುವ ದುಖಃದ ವಾರ್ತೆಯನ್ನು ಕೇಳಿ ಸಾನಿಧ್ಯಕ್ಕೆ ಆಗಮಿಸಿ ನೋಡಿ ಆತಂಕಗೊoಡು ನಾಗದೇವರಿಗೆ ಬಂದಿರುವ ಸಂಕಷ್ಟವನ್ನು ನೆನೆದು ಅದೇ ಸ್ಥಳದಲ್ಲಿ ಕಣ್ಣೀರು ಹಾಕಿ ಹೋಗಿದ್ದರು. ತನ್ನ ಹೃದಯಂತರಾಳದಿOದ ಸಾನಿಧ್ಯದಲ್ಲಿ ಪ್ರಾರ್ಥಿಸಿ ತೆರಳಿದವರು ಇಂದು ಮತ್ತೆ ಈ ಸಾನಿಧ್ಯಕ್ಕೆ ಆಗಮಿಸಿ ಭಕ್ತಾದಿಗಳ ನೋವಿನೊಂದಿಗೆ ಜೊತೆಯಾಗಿ ಮಾತನಾಡುತ್ತಾ ದೈವತಾ ಕಾರ್ಯವನ್ನು ನಾವು ಯಾವ ರೀತಿಯಲ್ಲಿ ಈ ಕ್ಷೇತದಲ್ಲಿ ಮಾಡಿಕೊಂಡು ಬಂದಿದ್ದೇವೆಯೋ ಅದೇ ರೀತಿಯಲ್ಲಿ ಇನ್ನು ಮುಂದೆಯೂ ಮಾಡಲು ಆ ದೈವಶಕ್ತಿಗಳು ಅನುಗ್ರಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಈ ಭೂಮಿಯ ಹಕ್ಕುದಾರ್ತಿಯಾಗಿರುವ ಗಿರಿಜ ಅವರ ಮಗಳು ಗಂಗಮ್ಮ ಮತ್ತು ಮಕ್ಕಳು ಉಪಸ್ಥಿತರಿದ್ದು, ನ್ಯಾಯಾಲಯದಲ್ಲಿ ದಾವೆಯಲ್ಲಿರುವ ಜಾಗವನ್ನು ಪರಬಾರೆ ಅಥವಾ ಮಾರಾಟ ಮಾಡಬಾರದೆಂಬ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ದೈವದೇವರ ಸ್ವತ್ತು ಎಂಬ ಭಯಭಕ್ತಿಯೂ ತೋರದೆ ಸಾನಿಧ್ಯವನ್ನು ಸಂಪೂರ್ಣವಾಗಿ ದ್ವಂಸ ಮಾಡಿರುವ ಬಗ್ಗೆ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.

ಏನಿದು ದಾವೆ ?
ಬೊಂಡಾಳ ಸೇನೆರ ಬೈಲು ಎಂಬಲ್ಲಿ ಗಿರಿಜ ಎಂಬವರಿಗೆ ಸುಮಾರು 5.5 ಎಕ್ರೆ ಜಮೀನಿದ್ದು, ಸುಮಾರು 10 ವರ್ಷಗಳ ಹಿಂದೆ ಸಮಾನ ಹಕ್ಕುದಾರರಾಗಿರುವ 4 ಗಂಡು ಮತ್ತು 5 ಹೆಣ್ಣು ಮಕ್ಕಳಿರುವ ಸಂಸಾರದಲ್ಲಿ ಹೆಣ್ಣು ಮಕ್ಕಳ ಸಹಿಯನ್ನು ಪೋರ್ಜರಿ ಮಾಡಿ 4 ಗಂಡು ಮಕ್ಕಳು ಜಾಗವನ್ನು ಕಬಳಿಸಿರುವುದು ಮತ್ತು ಈ ಬಗ್ಗೆ ಗಿರಿಜ ಅವರ ಮಗಳು ಗಂಗಮ್ಮ ಗಂಡು ಮಕ್ಕಳು ಪಡೆದಿರುವ ಆಸ್ತಿ ಹಕ್ಕು ಅಕ್ರಮವಾಗಿ ಪಡೆದಿರುವುದಾಗಿದೆ, ಹಾಗೂ ತನ್ನ ಪಾಲಿನ ಆಸ್ತಿಯ ಹಕ್ಕನ್ನು ಪಡೆಯಲು ಮುಂದಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಶ್ರೀಮತಿ ಗಂಗಮ್ಮ,ಇತರರು ಮತ್ತು ಎದುರುವಾದಿಗಳ ಮದ್ಯೆ ಒ ಎಸ್ ನಂ.80/2018 ಎಂಬ ಮೂಲದಾವೆ ಮಾನ್ಯ ಪ್ರದಾನ ಸಿವಿಲ್ ನ್ಯಾಯಾಲಯದಲ್ಲಿ ಬಾಕಿಯಿರುತ್ತದೆ.ಅದಾಗ್ಯೂ ಬಿ ಶೆಡ್ಯೂಲ್ ಆಸ್ತಿಗೆ ಸಂಬOಧಪಟ್ಟOತೆ ಮಾನ್ಯ ನ್ಯಾಯಾಲಯವು 2018ರ ಪೆ.17.ರಂದು ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದ ನಂತರ ,2018ರ ಫೆ. 24ರಂದು ತಡೆಯಾಜ್ಞೆ ಆದೇಶವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿದ್ದು, ಈ ತಡೆ ಆದೇಶದಲ್ಲಿ ದಾವಾ ಆಸ್ತಿಯ ಮಾರಾಟ ಅಥವಾ ಹಸ್ತಾಂತರವನ್ನು ನಿರ್ಬಂಧಿಸಿರುವುದು ಈಗಲೂ ಚಾಲ್ತಿಯಲ್ಲಿರುದನ್ನು ಎದ್ರಿಯವರು ಮನಗಂಡಿದ್ದರೂ ಸಾನಿಧ್ಯವಿರುವ ಜಾಗದ ಹಕ್ಕುದಾರ್ತಿ ಎಂದಿರುವ ಗಿರಿಜ ಅವರ ಮಗ ಶೇಖರ ಸಾಲ್ಯಾನ್‌ರವರ ಪತ್ನಿ ವಿಜಯ ಮತ್ತು ಮಗ ರಾಹುಲ್ ಅವರು ಬಿಸಿರೋಡಿನ ಅಮರ್ ಸತೀಶ್ ಕುಮಾರ್ ಎಂಬವರಿಗೆ ವಿಕ್ರಯಿಸಿರುವುದು ಮತ್ತು ಅವರು ಕಮರ್ಷಿಯಲ್ ಆಗಿ ಸಾನಿಧ್ಯ ಅಗೆದು ದ್ವಂಸ ಮಾಡಿರುವುದಾಗಿ.. ಇದರಿಂದ ಅನೇಕ ಭಕ್ತರ ಮನಸ್ಸಿಗೆ ಆಘಾತವಾಗಿರುವುದಾಗಿ ಗಂಗಮ್ಮ ಅವರ ಮಗ ಜಯಶಂಕರ್ ಮಾದ್ಯಮಕ್ಕೆ ತಿಳಿಸಿದ್ದಾರೆ.

ಈ ಕಾನೂನು ಪ್ರಕ್ರಿಯೆಗಳನ್ನು ತಿಳಿದುಕೊಂಡ ಜಮೀನುದಾರರು ವ್ಯಕ್ತಿಯೊಬ್ಬರಿಗೆ ಮಾರಾಟ ಹೆಸರಿನಲ್ಲಿ ಜಾಗವನ್ನು ಹಸ್ತಾಂತರಿಸಿರುವುದು ಮೊದಲನೇಯ ಅಪರಾಧವಾದರೆ. ಆ ಜಾಗವನ್ನು ಪಡೆದು ಕಮರ್ಶಿಯಲ್ ಯೋಚನೆಯಲ್ಲಿ ಅದರಲ್ಲಿದ್ದ ನಾಗಬನ ಮತ್ತು ಅದಕ್ಕೆ ಸಂಬAದಿಸಿದ ಕೆರೆಯನ್ನು ನಾಶಮಾಡಿರುವುದು ದೈವದ್ರೋಹವಾಗಿರುವುದಾಗಿ ಭಕ್ತರು ಆರೋಪಿಸಿದ್ದಾರೆ. ಅತೀ ಪುರಾತನವಾದ ನಾಗ ಬನದೊಳಗೆ ಭವ್ಯವಾದ ಕಟ್ಟೆಯನ್ನು ನಿರ್ಮಾಣ ಮಾಡಿ ಸಂಬAಧಿಸಿದ ಕೆರೆಗೂ ಕಲ್ಲಿನ ಕಟ್ಟೆಯನ್ನು ಕಟ್ಟಿ ರಕ್ತೇಶ್ವರಿ ದೈವಕ್ಕೂ ಪವಿತ್ರವದ ಕಟ್ಟೆಯನ್ನು ಕಟ್ಟಿ, ಹೀಗೆ ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಐತಿಹ್ಯವನ್ನು ದ್ವಂಸಗೊಳಿಸಿದಾಗ ಅದನ್ನು ವೀಕ್ಷಿಸಲು ಬಂದ ಭಕ್ತರ ಮೇಲೆಯೇ ಕೇಸು ದಾಖಲಿಸುವುದೆಂದರೆ ನಾವು ಪಾಕಿಸ್ತಾನದಲ್ಲಿದ್ದೇವೆಯೋ ಎಂಬ ಭಯ ಬಂದಿದೆ. ಮೇಲಾಗಿ ನಾಗಬನದಲ್ಲಿ ಬೆಳೆದಿದ್ದ ಬೃಹದಾಕಾರದ ಮರಗಳನ್ನು ಅರಣ್ಯ ಇಲಾಖೆಯ ಕೃಪಾ ಕಟಾಕ್ಷದಲ್ಲಿ ಕಡಿದು ಸಾಗಾಟ ಮಾಡುವಾಗ ಯಾವುದೇ ಅಡೆತಡೆಗಳು ಬಂದಿಲ್ಲ, ಯಾವ ಇಲಾಖೆಗಳೂ ಇತ್ತ ಸುಳಿಯಲೇ ಇಲ್ಲ ಎಂದರೆ ಎಲ್ಲವೂ ನಾಗದೇವರಿಗೆ ಅರ್ಪಿತವಾಗಲಿ ಎಂದು ನಾವು ಸುಮ್ಮನೆ ಬಿಡುವುದಿಲ್ಲ. ಮರ ಸಾಗಾಟದ ಹಿಂದೆ ಇಲಾಖೆಯ ಅನುಮತಿ ಪತ್ರವನ್ನು ಪ್ರಶ್ನಿಸುತ್ತೇವೆ ಎಂದು ರಾಜೇಶ್ ಬಾಕಿಲ ತಿಳಿಸಿದ್ದಾರೆ.

ನೂರಾರು ವರ್ಷಗಳಿಂದ ನಮ್ಮ ಪಾಲಿನ ಮೂಲನಾಗದೇವರು ಎಂದು ಆರಾಧಿಸಿಕೊಂಡು ಬಂದಿರುವ ಕೆಲವು ಕುಟುಂಬಗಳು ತಮ್ಮ ನಂಬಿಕೆಯ ಆರಾಧನಾ ಶಕ್ತಿಗಳಾದ ದೈವದೇವರುಗಳ ಪ್ರಾಕೃತಿಕ ನಾಗಬನ ಮತ್ತು ಸಂಬoದಿಸಿದ ಕೆರೆಯನ್ನು ಜೆಸಿಬಿ ತಂದು ಸಂಪೂರ್ಣವಾಗಿ ನಾಶ ಮಾಡಿರುವ ಘಟನೆಯಿಂದ ನೊಂದು ಹೋಗಿದ್ದು, ಇದೀಗ ಆ ಜಮೀನಿಗೆ ಸಂಬoಧ ಪಟ್ಟಂತೆ ಏಕಮಾತ್ರ ಗಂಗಮ್ಮ ಕುಟುಂಬ ಮಾತ್ರ ಭಕ್ತರೊಂದಿಗೆ ಬೆಂಬಲವಾಗಿ ನಿಂತಿದ್ದು, ತಮ್ಮ ಪಾಲಿನ ಹಕ್ಕನ್ನು ಪಡೆದೇ ಪಡೆಯುತ್ತೇವೆ, ಮತ್ತು ಸದ್ರಿ ಜಾಗದಲ್ಲಿಯೇ ದೈವದೇವರ ಸಾನಿಧ್ಯಕ್ಕೆ ಶಕ್ತಿಯನ್ನು ನೀಡುವ ದೈವೀ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ನಾಗದೇವರು, ರಕ್ತೇಶ್ವರಿ ದೈವಗಳ ಸಂಕಲ್ಪದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಕುಟುಂಬದ ನೂರಾರು ಭಕ್ತರು ಪಾಲ್ಗೊಂಡರು. ಈ ಜಾಗದಲ್ಲಿದ್ದ ನಾಗಬನವನ್ನು ಜೀಣೋದ್ಧಾರ ಹೆಸರಿನಲ್ಲಿ ಎತ್ತಂಗಡಿ ಮಾಡಿ ಬೇರೆ ಜಾಗದಲ್ಲಿ ಮಾಡಲು ಬರುವುದಿಲ್ಲ. ಒಂದು ವೇಳೆ ಆ ರೀತಿ ಆಗುವುದಿದ್ದರೆ ನಾಗನಿಗೆ ತನು ಎರೆಯಲು ನೂರಾರು ಕಿ.ಮೀ. ಸಾಗುವುದು ಬೇಕಾಗಿರಲಿಲ್ಲ. ನಮ್ಮ ದೈವ ಕ್ಷೇತ್ರದ ಸಾನಿಧ್ಯ ಬಳಿಯಲ್ಲಿಯೇ ನಾಗನ ಪ್ರತಿಷ್ಠಾಪನೆ ಮಾಡಬಹುದಿತ್ತು ಮತ್ತು ನಾಗನ ತೆರವುಗೊಳಿಸಿದ ಪ್ರಕರಣಕ್ಕೆ ನಮ್ಮ ತಕರಾರು ಕೂಡಾ ಇರುತ್ತಿರಲಿಲ್ಲ ಎಂದು ಕುಟುಂಬಸ್ತರಾದ ಹರೀಶ್ ಪೂಜಾರಿ ಬಾಕಿಲ ತಿಳಿಸಿದ್ದಾರೆ.

ಕೊನೆಗೆ ಭಕ್ತರು ಸಾನಿಧ್ಯದ ಸಮೀಪದಲ್ಲಿರುವ ಪಂಜುರ್ಲಿ ಸಾನಿಧ್ಯಕ್ಕೆ ತೆರಳಿ ಅಲ್ಲಿ ದೈವಗಳಿಗೆ ದೀಪದೂಪ ಬೆಳಗಿ ಆರಾಧನೆಯನ್ನು ಮಾಡಿ ದೈವಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡು ಪ್ರಾರ್ಥನೆಯನ್ನು ಸಲ್ಲಿಸಿದರು. ಬೆಳಿಗ್ಗೆ ಬೊಳ್ಳೆಮಾರ್ ಕುಟುಂಬಸ್ತರು ತಮ್ಮ ಧರ್ಮದೈವ ಧೂಮಾವತಿ ಸಪರಿವಾರ ದೈವಗಳಿಗೆ ಪ್ರಾರ್ಥಿಸಿ ಸಾನಿಧ್ಯಕ್ಕೆ ಆಗಮಿಸಿದರು ಮತ್ತು ಗ್ರಾಮದ ದೈವದೇವರಿಗೆ ಸಂಕಲ್ಪವನ್ನು ಮಾಡಿಕೊಂಡು ನಾಗ ಸಾನಿಧ್ಯವನ್ನು ಉಳಿಸಿಕೊಳ್ಳಲು ಪ್ರಾರ್ಥನೆಯನ್ನು ಮಾಡಿದರು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ದಕ್ಷಿಣಗಾಣಗಾಪುರ ಒಡಿಯೂರಿನಲ್ಲಿ ಶ್ರೀಗಳವರ ಜನ್ಮದಿನೋತ್ಸವ ಹಾಗೂ ‘ಗ್ರಾಮೋತ್ಸವ-2026’: ವೈಭವದ ಗುರುವಂದನೆ – ಸೇವಾ ಸಂಭ್ರಮ

Published

on

ಆಗಸ್ಟ್ 8ರಂದು ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸೇವಾಸಂಭ್ರಮ | ಬೆಳ್ಳಿರಥೋತ್ಸವ, ಪಾದಪೂಜೆ, ತುಲಾಭಾರ ಸೇವೆ

ವಿಟ್ಲ: ದಕ್ಷಿಣಗಾಣಗಾಪುರ ಎಂದೇ ಅಪಾರ ಭಕ್ತಾದಿಗಳಿಂದ ಶ್ರದ್ಧಾ-ಭಕ್ತಿಗಳಿಂದ ಪೂಜಿಸಲ್ಪಡುವ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಾಂಜನೇಯ ಕ್ಷೇತ್ರದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ‘ಗ್ರಾಮೋತ್ಸವ-2026’ ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮದೊಂದಿಗೆ ‘ಗುರುವಂದನೆ-ಸೇವಾಸಂಭ್ರಮ’ವಾಗಿ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮವು ಆಗಸ್ಟ್ 08ರ ಶನಿವಾರದಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಅನುಗ್ರಹ ಸಂದೇಶ ಮತ್ತು ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಇವರ ದಿವ್ಯ ಉಪಸ್ಥಿತಿಯಲ್ಲಿ ಈ ಧಾರ್ಮಿಕ ಮತ್ತು ಸಾಮಾಜಿಕ ಮಹೋತ್ಸವವು ನೆರವೇರಲಿದೆ.

ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳು ಬೆಳಿಗ್ಗೆ 8.00 ಗಂಟೆಯಿಂದಲೇ ಆರಂಭಗೊಳ್ಳಲಿದ್ದು, ಶ್ರೀ ಗಣಪತಿ ಹವನ ಹಾಗೂ ಮಹಾಪೂಜೆ ನಡೆಯಲಿದೆ. ತದನಂತರ ಬೆಳಿಗ್ಗೆ 9.00 ಗಂಟೆಯಿಂದ ಶ್ರೀ ರವಿರಾಜ್ ಒಡಿಯೂರು ಮತ್ತು ಬಳಗದವರಿಂದ ಭಕ್ತಿಪೂರ್ವಕ ನಾಮಸಂಕೀರ್ತನೆ ಜರುಗಲಿದೆ. ಬೆಳಿಗ್ಗೆ 9.30 ರಿಂದ ಪರಮಪೂಜ್ಯ ಶ್ರೀಗಳವರಿಗೆ ಭಕ್ತಾದಿಗಳಿಂದ ಪಾದಪೂಜೆ, ತುಲಾಭಾರ ಸೇವೆ ಮತ್ತು ಗುರುವಂದನೆ ನೆರವೇರಲಿದೆ. ಅಪರಾಹ್ನ 4.00 ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 7.00 ಗಂಟೆಗೆ ಶ್ರೀ ಸನ್ನಿಧಿಯಲ್ಲಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ, ಮಹಾಪೂಜೆ ನಡೆಯಲಿದೆ.

ಬೆಳಿಗ್ಗೆ 11.30ಕ್ಕೆ ಸರಿಯಾಗಿ ನಡೆಯಲಿರುವ ಭವ್ಯ ಸಭಾ ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ರಾಜಕೀಯ, ಸಾಮಾಜಿಕ ಹಾಗೂ ಉದ್ಯಮ ರಂಗದ ಧುರೀಣರು ಭಾಗವಹಿಸಲಿದ್ದಾರೆ.

ಮಂಗಳೂರು ಸಂಸದ ಕ್ಯಾ| ಬ್ರಿಜೇಶ್ ಚೌಟ, ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ, ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್ ಆಡಳಿತ ನಿರ್ದೇಶಕ ಕೆ.ಕೆ. ಶೆಟ್ಟಿ,‌ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಮುಂಬೈ ಉದ್ಯಮಿ ರಘು ಎಲ್. ಶೆಟ್ಟಿ ದೇವಸ್ಯ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು., ಶಶಿ ಕ್ಯಾಟರಿಂಗ್‌ ಸರ್ವೀಸಸ್‌ ಇದರ ಆಡಳಿತ ನಿರ್ದೇಶಕರಾದ ಶಶಿಧರ ಬಿ. ಶೆಟ್ಟಿ ಬರೋಡ, ಹಿರಿಯ ವಕೀಲರಾದ ಶ್ಯಾಮ ಭಟ್‌ , ಪ್ರಗತಿಪರ ಕೃಷಿಕರಾದ ಶ್ಯಾಮ್‌ ಪ್ರಸಾದ್‌ ಕೊಣಲೆ, ಬಾಂಬೆ ಬಂಟ್ಸ್‌ ಎಸೋಸಿಯೇಷನ್ಸ್ ಮುಂಬೈ ಇದರ ಮಾಜಿ ಅಧ್ಯಕ್ಷರಾದ ಶ್ಯಾಮ ಎನ್. ಶೆಟ್ಟಿ , ಎಟಿಎಸ್‌ ದೋಹ ಕತಾರ್‌ ಆಡಳಿತ ನಿರ್ದೇಶಕರಾದ ರವಿಶೆಟ್ಟಿ ಮೂಡಂಬೈಲು ಹಾಗೂ ನವಿಮುಂಬೈ ಉದ್ಯಮಿ ಭಾಸ್ಕರ ಆರ್. ಶೆಟ್ಟಿ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಾದ ಗುಜರಾತ್‌ನ ಖ್ಯಾತ ಪರಿಸರವಾದಿ, ‘ಗ್ರೀನ್ ಹೀರೊ ಆಫ್ ಇಂಡಿಯಾ’ ಡಾ. ಆರ್.ಕೆ. ನಾಯರ್ ಅವರಿಗೆ ವಿಶೇಷ ಗೌರವಾಭಿನಂದನೆ ನೆರವೇರಲಿದೆ.

ಗ್ರಾಮೋತ್ಸವದ ವಿಶೇಷತೆಗಳು

ಕ್ಷೇತ್ರದ ಸಾಮಾಜಿಕ ಕಾಳಜಿಯ ಸಂಕೇತವಾಗಿರುವ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಬೃಹತ್ ಗ್ರಾಮ ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರಗಳು ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಇದರೊಂದಿಗೆ ವನಮಹೋತ್ಸವ ಆಚರಣೆ, ಭಕ್ತಾದಿಗಳಿಗೆ ಉಚಿತ ಸಸಿ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಹಾಗೂ ಅರ್ಹ ಬಡ ರೋಗಿಗಳಿಗೆ ವೈದ್ಯಕೀಯ ಶುಶ್ರೂಷೆಗೆ ಧನಸಹಾಯ ನೀಡುವ ಉದಾತ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜವನ್ನು ಸುಸ್ಥಿತಿಯಲ್ಲಿಡಲು ವಿವಿಧ ಸಂಘ-ಸಂಸ್ಥೆಗಳಿಂದ ಗುರುವಂದನೆ, ವ್ಯಸನಮುಕ್ತ ಸಮಾಜ ಜಾಗೃತಿ ಅಭಿಯಾನಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತಿದೆ.

ಈ ಪವಿತ್ರ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿ, ಶ್ರೀಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಹಾಗೂ ಒಡಿಯೂರು ಶ್ರೀ ಸಂಸ್ಥಾನಮ್‌ ಪ್ರಕಟಣೆಯಲ್ಲಿ ತಿಳಿಸಿದೆ

Continue Reading

Bantawala

ದಕ್ಷಿಣ ಕನ್ನಡ ಕಾಂಗ್ರೆಸ್‌ಗೆ ಹೊಸ ಚೈತನ್ಯದ ಸಾರಥಿ: ಜಿಲ್ಲಾ ಅಧ್ಯಕ್ಷ ಗಾದಿಗೆ ‘ಚಂದ್ರಪ್ರಕಾಶ್ ಶೆಟ್ಟಿ ತುಂಬೆ’ ಪ್ರಬಲ ಸ್ಪರ್ಧಿ!

Published

on

ಕಾರ್ಯಕರ್ತರ ಪಡೆಗೆ ಹೊಸ ಶಕ್ತಿ, ತಳಮಟ್ಟದ ಸಂಘಟನೆಗೆ ಹೊಸ ಹುರುಪು – ಚಂದ್ರಪ್ರಕಾಶ್ ಶೆಟ್ಟಿ ಸಾರಥ್ಯಕ್ಕೆ ಹೈಕಮಾಂಡ್‌ಗೆ ಕಾರ್ಯಕರ್ತರ ಜೈಕಾರ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಅಖಾಡದಲ್ಲಿ ಈಗ ಕಾಂಗ್ರೆಸ್ ಅಧ್ಯಕ್ಷ ಗಾದಿಯ ಕೌತುಕ ಮುಗಿಲುಮುಟ್ಟಿದೆ. ಜುಲೈ 28ರಿಂದ ಆರಂಭಗೊಂಡಿರುವ ಹೊಸ ಅಧ್ಯಕ್ಷರ ಆಯ್ಕೆಯ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಜಿಲ್ಲಾದ್ಯಂತ ಕಾವೇರಿದ ವಾತಾವರಣ ಸೃಷ್ಟಿಸಿದೆ. ಪ್ರಮುಖ ನಾಯಕರು ಪಟ್ಟಕ್ಕೇರಲು ತೀವ್ರ ಪೈಪೋಟಿ ನಡೆಸುತ್ತಿರುವ ಈ ಹೊತ್ತಿನಲ್ಲಿ, ಪಕ್ಷದ ನಿಷ್ಠಾವಂತ ನಾಯಕ, ಸಂಘಟನಾ ಚತುರ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರ ಹೆಸರು ಕರಾವಳಿ ರಾಜಕೀಯದಲ್ಲಿ ಸಿಂಹಪಾಲು ಪಡೆದುಕೊಂಡಿದೆ!

ಕಷ್ಟಕಾಲದ ನಿಷ್ಠಾವಂತ ಕಾಂಗ್ರೆಸ್ಸಿಗ‌ : ಹೋರಾಟದ ಹಾದಿಯಲ್ಲಿ ಗೆದ್ದು ಬಂದ ಸರದಾರ!

ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಎಂದರೆ ಕೇವಲ ಒಬ್ಬ ರಾಜಕಾರಣಿಯಲ್ಲ, ಬದಲಿಗೆ ಹೋರಾಟ, ತ್ಯಾಗ ಮತ್ತು ಸದಾ ಜನಸೇವೆಯಲ್ಲಿ ನಿರತರಾಗಿರುವ ನಿಷ್ಠಾವಂತ ಕಾಂಗ್ರೆಸ್ಸಿಗ. ಪಕ್ಷದ ಪರಿಸ್ಥಿತಿ ಸವಾಲಿನಿಂದ ಕೂಡಿದ್ದಾಗಲೂ ಕಾಂಗ್ರೆಸ್ ಧ್ವಜವನ್ನು ಎತ್ತಿಹಿಡಿದು, ತಳಮಟ್ಟದ ಕಾರ್ಯಕರ್ತನಲ್ಲಿ ಹೊಸ ಆತ್ಮವಿಶ್ವಾಸ ಮತ್ತು ಭರವಸೆಯ ಕಿಚ್ಚು ಹೊತ್ತಿಸಿದ ಧೀರ ನಾಯಕ ಇವರು.

ಇತಿಹಾಸ ಸೃಷ್ಟಿಸಿದ ಐತಿಹಾಸಿಕ ವಿಜಯಗಳು:

ಇವರ ನಾಯಕತ್ವದ ಕಸುವಿಗೆ, ಸಂಘಟನಾ ಶಕ್ತಿಗೆ ಇತಿಹಾಸವೇ ಸಾಕ್ಷಿ ನೀಡುತ್ತದೆ:

ದಿಗ್ಗಜರನ್ನು ಪತನಗೊಳಿಸಿದ ಸಜಿಪ ಮುನ್ನೂರು ಜಯ: ಸಜಿಪ ಮುನ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಮಾಜಿ ಶಾಸಕರಂತಹ ಪ್ರಭಾವಿ ಎದುರಾಳಿಯನ್ನೇ ನೆಲಕಚ್ಚಿಸಿ ಐತಿಹಾಸಿಕ ಗೆಲುವು ಸಾಧಿಸಿದ ಹೆಗ್ಗಳಿಕೆ ಇವರದ್ದು.

35 ವರ್ಷಗಳ ಕೋಟೆಯನ್ನು ಪುಡಿಗಟ್ಟಿದ ಗೋಲ್ತಮಜಲು ಕ್ರಾಂತಿ: ಬದ್ಧ ವೈರಿ ಬಿಜೆಪಿಯ ಉಕ್ಕಿನ ಕೋಟೆಯಂತಿದ್ದ ಗೋಲ್ತಮಜಲು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಬರೋಬ್ಬರಿ 35 ವರ್ಷಗಳ ಬಳಿಕ ಕಮಲ ಕಲಿಗಳನ್ನು ಸೋಲಿಸಿ, ಕಾಂಗ್ರೆಸ್‌ನ ವಿಜಯ ಪತಾಕೆ ಹಾರಿಸಿದ ಅಪರೂಪದ ಸಾಧನೆ ಇವರದ್ದು!

ಕಾರ್ಯಕರ್ತರೇ ಆಸ್ತಿ, ಹಿರಿಯ-ಕಿರಿಯರ ಸಮನ್ವಯವೇ ಶಕ್ತಿ!

ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಕಟ್ಟಿಬೆಳೆಸಲು ತಳಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸುವ ಶಕ್ತಿ ಬೇಕಿದೆ. ಯುವಕರಲ್ಲಿ ಹೊಸ ಹುರುಪು ತುಂಬಿ, ಹಿರಿಯ ನಾಯಕರ ಸುದೀರ್ಘ ಅನುಭವವನ್ನು ಮಾರ್ಗದರ್ಶನವಾಗಿ ಪಡೆದುಕೊಂಡು ಪಕ್ಷವನ್ನು ಮುನ್ನಡೆಸಬಲ್ಲ ಏಕೈಕ ಸಮರ್ಥ ನಾಯಕ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಎಂಬ ಮಾತುಗಳು ಜಿಲ್ಲೆಯ ಮೂಲೆ ಮೂಲೆಯಿಂದ ಕೇಳಿಬರುತ್ತಿವೆ.

“ಸಂಘಟನೆಗೆ ಶಕ್ತಿ – ಕಾರ್ಯಕರ್ತರಿಗೆ ಗೌರವ – ಕಾಂಗ್ರೆಸ್‌ಗೆ ವಿಜಯ!”

ಈ ಧ್ಯೇಯಮಂತ್ರದೊಂದಿಗೆ ನಿರಂತರವಾಗಿ ಶ್ರಮಿಸುತ್ತಿರುವ ಚಂದ್ರಪ್ರಕಾಶ್ ಶೆಟ್ಟಿ ಅವರಿಗೆ ಜಿಲ್ಲಾ ಕಾಂಗ್ರೆಸ್ ಗಾದಿ ಒಲಿಯಲೇಬೇಕು ಎಂದು ಸಾವಿರಾರು ಅಭಿಮಾನಿಗಳು ಹಾಗೂ ಬ್ಲಾಕ್ ಮಟ್ಟದ ಕಾರ್ಯಕರ್ತರು ಕಾಂಗ್ರೆಸ್ ಹೈಕಮಾಂಡ್‌ಗೆ ಬಿನ್ನವಿಸಿಕೊಂಡಿದ್ದಾರೆ.

ಅವರ ಕಟ್ಟುಮಸ್ತಾದ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಮುಂಬರುವ ಸ್ಥಳೀಯ ಸಂಸ್ಥೆಗಳು ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿ, ಕರಾವಳಿಯಲ್ಲಿ ಕಾಂಗ್ರೆಸ್ ಅಲೆ ಸೃಷ್ಟಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಜಿಲ್ಲೆಯ ಕಾರ್ಯಕರ್ತರ ದೃಢ ವಿಶ್ವಾಸ!

Continue Reading

Bantawala

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಹನೀಫ್ ಬಗ್ಗುಮೂಲೆ ಅರ್ಜಿ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಕಾಂಗ್ರೆಸ್‌ ಸಮಿತಿಯ ಸಾರಥ್ಯ ವಹಿಸಲು ಪಕ್ಷದ ಹಿರಿಯ, ನಿಷ್ಠಾವಂತ ಹಾಗೂ ನೇರ ನಡೆ-ನುಡಿಯ ಪ್ರಭಾವಿ ನಾಯಕ ಹನೀಫ್ ಬಗ್ಗುಮೂಲೆ ಅವರು ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಪಕ್ಷ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಮೂರು ದಶಕಗಳ ಸುದೀರ್ಘ ರಾಜಕೀಯ ಪಯಣ

ಬಂಟ್ವಾಳ ತಾಲೂಕು ಕುಳ ಗ್ರಾಮದ ಬಗ್ಗುಮೂಲೆ ನಿವಾಸಿಯಾಗಿರುವ ಹನೀಫ್ ಅವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ನಿರಂತರವಾಗಿ ಶ್ರಮಿಸಿದವರು. ಬಾಲ್ಯದಿಂದಲೇ ಸಾಮಾಜಿಕ ಕಳಕಳಿ ಬೆಳೆಸಿಕೊಂಡಿದ್ದ ಇವರು, ಪಕ್ಷದ ಧ್ವಜದಡಿಯಲ್ಲಿ ಉಚಿತ ಮೆಡಿಕಲ್ ಕ್ಯಾಂಪ್‌ಗಳು, ರಕ್ತದಾನ ಶಿಬಿರಗಳು, ಕ್ರೀಡಾ ಕೂಟಗಳು ಹಾಗೂ ಧಾರ್ಮಿಕ ಸಮಾರಂಭಗಳನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಜನಮಾನಸದಲ್ಲಿ ಆಪತ್ಬಾಂಧವನಾಗಿ ನೆಲೆಸಿದ್ದಾರೆ.

ಸಂಸ್ಥಾಪನಾ ಹೆಜ್ಜೆಗಳು ಮತ್ತು ವಹಿಸಿದ ಜವಾಬ್ದಾರಿಗಳು

ಇವರ ನಿಸ್ಪಕ್ಷಪಾತ ಸೇವೆ ಮತ್ತು ಸಂಘಟನಾ ಚತುರತೆಯನ್ನು ಗುರುತಿಸಿದ ಕಾಂಗ್ರೆಸ್ ಪಕ್ಷ, ಇವರಿಗೆ ವಿವಿಧ ಹಂತಗಳಲ್ಲಿ ಜವಾಬ್ದಾರಿಗಳನ್ನು ನೀಡಿ ಗೌರವಿಸಿದೆ:

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸೇವಾದಳ: ಅಧ್ಯಕ್ಷರಾಗಿ 3 ವರ್ಷಗಳ ಕಾಲ ಯಶಸ್ವಿ ಸೇವೆ.

ಜಿಲ್ಲಾ ಕಾಂಗ್ರೆಸ್ ಸೇವಾದಳ: ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷದ ತಳಮಟ್ಟದ ಸಂಘಟನೆ.

ಕೆಪಿಸಿಸಿ (KPCC): ರಾಜ್ಯ ಮಟ್ಟದ ಕಾರ್ಮಿಕ ವಿಭಾಗದ ಕಾರ್ಯದರ್ಶಿಯಾಗಿ ಶ್ರಮಿಕರ ಪರ ಧ್ವನಿ.

ರಾಷ್ಟ್ರೀಯ ರಾಜೀವ ಗಾಂಧಿ ಜ್ಯೋತಿಯಾತ್ರೆ ಸಮಿತಿ: ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ದೇಶಾದ್ಯಂತ ವ್ಯಾಪಕ ಕಾರ್ಯಾಚರಣೆ ಹಾಗೂ ಪಕ್ಷದ ಸಿದ್ಧಾಂತಗಳ ಪ್ರಚಾರ.

ಪ್ರಶಸ್ತಿ ಹಾಗೂ ಪುರಸ್ಕಾರ

ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಜನಸೇವೆ ಸಲ್ಲಿಸಿರುವ ಹನೀಫ್ ಬಗ್ಗುಮೂಲೆ ಅವರ ನಿರಂತರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ “ಗಡಿನಾಡ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸಲು ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಲು ತಮ್ಮ ಅನುಭವ ಮತ್ತು ಬದ್ಧತೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದೊಂದಿಗೆ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ.

Continue Reading

Trending

Copyright © 2025 Deevatige

error: Content is protected !!