Connect with us

national

ಬಿಜೆಪಿ ಅಧಿಕಾರಕ್ಕೆ ಬಂದರೆ, ಅಕ್ರಮ ನುಸುಳುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ತಮ್ಮ ಮೊದಲ ಆದ್ಯತೆ- ಅಮಿತ್ ಶಾ

Published

on

ಪಶ್ಚಿಮ ಬಂಗಾಳದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಅಕ್ರಮ ನುಸುಳುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ತಮ್ಮ ಮೊದಲ ಆದ್ಯತೆಯಾಗಿರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.
ಮೂರು ದಿನಗಳ ಭೇಟಿಗಾಗಿ ಸೋಮವಾರ ಕೋಲ್ಕತ್ತಾಗೆ ಆಗಮಿಸಿದ್ದ ಅವರು “ನಾವು 2026 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ, ನಮ್ಮ ಮೊದಲ ಕೆಲಸ ಅಕ್ರಮ ನುಸುಳುವಿಕೆಯನ್ನು ತಡೆಯುವುದು ಮಾತ್ರವಲ್ಲದೆ ಪ್ರಸ್ತುತ ರಾಜ್ಯದೊಳಗೆ ಉಳಿದುಕೊಂಡಿರುವ ಅಕ್ರಮ ನುಸುಳುಕೋರರನ್ನು ಓಡಿಸುವುದು” ಎಂದು ಕೇಂದ್ರ ಗೃಹ ಸಚಿವರು ಮಂಗಳವಾರ ಪತ್ರಿಕಾಗೋಷ್ಠಿಯ ಆರಂಭದಲ್ಲಿ ಹೇಳಿದರು.


ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ರಾಜಕೀಯ ರ್ಯಾಲಿಗಳು ಮತ್ತು ಕಾರ್ಯಕ್ರಮಗಳಲ್ಲಿ ಈ ಹೇಳಿಕೆಯನ್ನು ಪದೇ ಪದೇ ಒತ್ತಿ ಹೇಳುತ್ತಿದ್ದಾರೆ. ನುಸುಳುವಿಕೆಯಿಂದಾಗಿ ರಾಜ್ಯದ ಜನಸಂಖ್ಯಾ ಸ್ವರೂಪ ಬದಲಾಗುತ್ತಿದೆ ಮತ್ತು ಇದು ರಾಷ್ಟ್ರೀಯ ಭದ್ರತೆಗೆ ಸವಾಲಾಗಿದೆ ಎಂಬುದು ಅವರ ವಾದ. ನುಸುಳುವಿಕೆಯನ್ನು ತಡೆಯುವ ಜೊತೆಗೆ, ನೆರೆ ರಾಷ್ಟ್ರಗಳಿಂದ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ (ಹಿಂದೂಗಳು, ಸಿಖ್ಖರು, ಇತ್ಯಾದಿ) ಪೌರತ್ವ ನೀಡಲು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಅವರು ತಿಳಿಸಿದ್ದಾರೆ. ಪ್ರಸ್ತುತ ಇರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಖಿಒಅ) ಸರ್ಕಾರವು ತನ್ನ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ನುಸುಳುಕೋರರನ್ನು ರಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.


ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹೇಳಿಕೆಯನ್ನು ಪದೇ ಪದೇ ಒತ್ತಿ ಹೇಳುತ್ತಿರುವುದೆಂದರೆ ಗಡಿ ಜಿಲ್ಲೆಗಳಲ್ಲಿ ನುಸುಳುವಿಕೆ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಮತದಾರರನ್ನು ಸೆಳೆಯುವುದು.ನುಸುಳುವಿಕೆ ವಿಷಯವನ್ನು ಮುನ್ನೆಲೆಗೆ ತರುವ ಮೂಲಕ ಚುನಾವಣಾ ಕಣದಲ್ಲಿ ತೀವ್ರ ಪೈಪೋಟಿ ಸೃಷ್ಟಿಸುವುದು. ಬಂಗಾಳದ ಸಮಗ್ರ ಅಭಿವೃದ್ಧಿಗೆ ಶಾಂತಿ ಮತ್ತು ಭದ್ರತೆ ಅಗತ್ಯ, ಅದು ನುಸುಳುವಿಕೆ ಮುಕ್ತವಾದಾಗ ಮಾತ್ರ ಸಾಧ್ಯ ಎಂಬ ಸಂದೇಶ ರವಾನಿಸುವುದೇ ಆಗಿರುತ್ತದೆ.


ಪಶ್ಚಿಮ ಬಂಗಾಳದ ಮುಂಬರುವ ಚುನಾವಣೆಗಳ ಮೇಲೆ ಈ ಹೇಳಿಕೆ ಬಿಜೆಪಿಯನ್ನು ಅಲ್ಲಿನ ಮತದಾರರು ಕೈ ಹಿಡಿಯುವಂತೆ ಮಾಡಬಹುದು ಅಂದರೆ ಯಾವ ರೀತಿಯ ಪ್ರಭಾವ ಬೀರಬಹುದು ಎಂಬ ವಿಶ್ಲೇಷಣೆಯನ್ನು ಮಾಡಿದಾಗ “ನುಸುಳುವಿಕೆ” ವಿಷಯವು ಚುನಾವಣಾ ಕಣವನ್ನು ಎರಡು ಸ್ಪಷ್ಟ ಭಾಗಗಳನ್ನಾಗಿ ಮಾಡುತ್ತದೆ. ಇದು ಬಿಜೆಪಿಗೆ ತನ್ನ ಹಿಂದೂ ಮತಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ವಿಶೇಷವಾಗಿ ಗಡಿ ಭಾಗದ ಜಿಲ್ಲೆಗಳಲ್ಲಿ ಈ ವಿಷಯವು ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಶ್ಚಿಮ ಬಂಗಾಳವು ಬಾಂಗ್ಲಾದೇಶದೊAದಿಗೆ ಸುದೀರ್ಘ ಗಡಿಯನ್ನು ಹಂಚಿಕೊAಡಿದೆ. ನಾರ್ತ್ 24 ಪರಗಣ, ಮಾಲ್ಡಾ, ಮುರ್ಷಿದಾಬಾದ್ ಮತ್ತು ದಿನಾಜ್‌ಪುರದಂತಹ ಜಿಲ್ಲೆಗಳಲ್ಲಿ ನುಸುಳುವಿಕೆ ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ. ಅಮಿತ್ ಶಾ ಅವರ ಈ ಭರವಸೆಯು ಈ ಭಾಗದ ಮತದಾರರಲ್ಲಿ ಬಿಜೆಪಿಯ ಬಗ್ಗೆ ಭರವಸೆ ಮೂಡಿಸಬಹುದು.


ನುಸುಳುವಿಕೆಯನ್ನು ತಡೆಯುವುದು ಕೇಂದ್ರದ ಜವಾಬ್ದಾರಿ (ಬಿಎಸ್ಎಫ್ ಮೂಲಕ) ಎಂದು ವಾದಿಸುತ್ತಿರುವ ಟಿಎಂಸಿ ಆದರೆ ಬಿಜೆಪಿ ಇದನ್ನು ರಾಜ್ಯ ಸರ್ಕಾರದ ವೈಫಲ್ಯ ಎಂದು ಬಿಂಬಿಸುತ್ತಿದ್ದು, ಇದು ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಬಿಜೆಪಿಗೆ ಅಸ್ತ್ರವಾಗಲಿದೆ ಅಂತೆಯೇ ಟಿಎಂಸಿಗೆ ದೊಡ್ಡ ಸವಾಲಾಗಿದೆ.
ನುಸುಳುವಿಕೆ ತಡೆಯುವ ಮಾತಿನ ಜೊತೆಗೆ, ಪೌರತ್ವ ತಿದ್ದುಪಡಿ ಕಾಯ್ದೆಯ (CAA) ಜಾರಿಯು ಮತುವಾ ಸಮುದಾಯದಂತಹ ನಿರಾಶ್ರಿತ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಸಹಾಯ ಮಾಡುತ್ತದೆ. ಇದು ಬಂಗಾಳದ ಸುಮಾರು 30-40 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿದೆ.

ಅಮಿತ್ ಶಾ ಅವರ ಈ ತಂತ್ರವು ಪಶ್ಚಿಮ ಬಂಗಾಳದಲ್ಲಿ “ಅಸ್ಮಿತೆ” ಮತ್ತು “ರಾಷ್ಟ್ರೀಯ ಭದ್ರತೆ”ಯ ಸುತ್ತ ಚುನಾವಣೆ ನಡೆಯುವಂತೆ ಮಾಡುತ್ತದೆ. ಇದು ಅಭಿವೃದ್ಧಿ ವಿಷಯಗಳಿಗಿಂತ ಹೆಚ್ಚಾಗಿ ಭಾವನಾತ್ಮಕ ವಿಷಯಗಳ ಮೇಲೆ ಮತದಾನ ನಡೆಯಲು ಪ್ರೇರೇಪಿಸುತ್ತದೆ.
“ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಪಶ್ಚಿಮ ಬಂಗಾಳದ ಮಹಿಳೆಯರ ಸುರಕ್ಷತೆ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಾಗಲಿ ಅಥವಾ ದಕ್ಷಿಣ ಕೋಲ್ಕತ್ತಾ ಕಾನೂನು ಕಾಲೇಜು ಆಗಲಿ, ಅಥವಾ ಸಂದೇಶಖಾಲಿ ಆಗಲಿ, ಪಶ್ಚಿಮ ಬಂಗಾಳದ ಮಹಿಳೆಯರು ಎಲ್ಲಿಯೂಸುರಕ್ಷಿತವಾಗಿಲ್ಲ. ಈ ವಿಷಯಗಳ ಬಗ್ಗೆ ಮಮತಾ ಬ್ಯಾನರ್ಜಿ ರಾಜ್ಯದ ಜನರಿಗೆ ವಿವರಣೆ ನೀಡಬೇಕಾಗಿದೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದರು.


ಪಕ್ಷದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಈ ರಾಜ್ಯದವರಾಗಿರುವುದರಿಂದ ಪಶ್ಚಿಮ ಬಂಗಾಳವು ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳುತ್ತಾ. 2016 ರಿಂದ ರಾಜ್ಯದಲ್ಲಿ ಬಿಜೆಪಿಯ ಜನಪ್ರಿಯತೆಯ ಏರಿಕೆಯ ಪ್ರವೃತ್ತಿಯನ್ನು ಗಮನಿಸಿದರೆ, 2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದು ಶಾ ಹೇಳಿದರು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಲಿವ್-ಇನ್ ಸಂಗಾತಿ ಕೊಲೆ ಆರೋಪಿಗೆ ಬಸ್ ನಿಲ್ದಾಣದಲ್ಲೇ ಲಾಠಿ ಚಾರ್ಜ್ – ಪೊಲೀಸರ ಕ್ರಮದ ವಿಡಿಯೋ ವೈರಲ್!

Published

on

ಭಾವನಗರ: ಲಿವ್-ಇನ್ ಸಂಗಾತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಅಪರಾಧ ನಡೆದ ಸ್ಥಳದಲ್ಲೇ ಸಾರ್ವಜನಿಕವಾಗಿ ಥಳಿಸಿರುವ ಘಟನೆ ಗುಜರಾತ್‌ನ ಭಾವನಗರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣದ ಹಿನ್ನೆಲೆ:

ಭಾವನಗರದ ಬಸ್ ನಿಲ್ದಾಣದಲ್ಲಿ ಸೆಪ್ಟೆಂಬರ್ 3 ರಂದು 40 ವರ್ಷದ ಕಾಜಲ್‌ಬೆನ್ ಬರಿಯಾ ಎಂಬವರ ಮೇಲೆ ಆಕೆಯ ಲಿವ್-ಇನ್ ಸಂಗಾತಿ, 20 ವರ್ಷದ ಫೈಸಲ್ ಅಲಿಯಾಸ್ ಖಟ್ಟಿ ಲಖಾನಿ ಭೀಕರವಾಗಿ ಹಲ್ಲೆ ನಡೆಸಿದ್ದ.

ಕಾಜಲ್‌ಬೆನ್ ಹಾಗೂ ಆಕೆಯ ಸ್ನೇಹಿತ ರವಿ ಗೋಹಿಲ್ ಅವರ ನಡುವೆ ಅನೈತಿಕ ಸಂಬಂಧವಿದೆ ಎಂಬ ಅನುಮಾನದಿಂದ ಫೈಸಲ್ ಜಗಳ ತೆಗೆದಿದ್ದ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿ, ಫೈಸಲ್ ಕಾಜಲ್‌ಬೆನ್ ಅವರನ್ನು ನೆಲಕ್ಕೆ ಕೆಡವಿ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಬಲವಾಗಿ ಒದ್ದು, ತೀವ್ರವಾಗಿ ಗಾಯಗೊಳಿಸಿದ್ದ. ತೀವ್ರ ಗಾಯಗೊಂಡಿದ್ದ ಕಾಜಲ್‌ಬೆನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಸೆಪ್ಟೆಂಬರ್ 4 ರಂದು ಮೃತಪಟ್ಟಿದ್ದರು. ಮೃತರ ತಾಯಿ ನೀಡಿದ ದೂರಿನನ್ವಯ ಪೊಲೀಸರು ಫೈಸಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.

ಸ್ಥಳ ಮಹಜರು ವೇಳೆ ಬಸ್ ನಿಲ್ದಾಣದಲ್ಲೇ ಥಳಿತ:

ತನಿಖೆಯ ಭಾಗವಾಗಿ ನೀಲಾಂಬಾಗ್ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿ ಫೈಸಲ್‌ನನ್ನು ಘಟನೆ ನಡೆದ ಬಸ್ ನಿಲ್ದಾಣಕ್ಕೆ ಕರೆತಂದು ‘ದೃಶ್ಯ ಮರುನಿರ್ಮಾಣ’ (Crime Scene Recreation) ಮಾಡುತ್ತಿದ್ದರು. ಈ ವೇಳೆ ಹಗ್ಗದಿಂದ ಕಟ್ಟಿ ಕರೆತರಲಾಗಿದ್ದ ಆರೋಪಿಗೆ ಪೊಲೀಸರು ಕೋಲು ಹಾಗೂ ಲಾಠಿಗಳಿಂದ ಸಾರ್ವಜನಿಕರ ಎದುರಲ್ಲೇ ಥಳಿಸಿದ್ದಾರೆ.

ಘಟನೆಯ ವಿಡಿಯೋದಲ್ಲಿ ಪೊಲೀಸರು ಹಾಗೂ ನೂರಾರು ಸಾರ್ವಜನಿಕರು ಆರೋಪಿಯನ್ನು ಸುತ್ತುವರಿದಿರುವುದು ಮತ್ತು ಪೊಲೀಸರು ಆತನಿಗೆ ಲಾಠಿಯಿಂದ ಹೊಡೆಯುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ.

ಪೋಲಿಸರ ಕ್ರಮ ಸಮರ್ಥನೆ:

ಸಾರ್ವಜನಿಕವಾಗಿ ಆರೋಪಿಗೆ ಥಳಿಸಿದ ಕ್ರಮವನ್ನು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. “ಈ ಕೊಲೆ ಕೃತ್ಯವು ಅತ್ಯಂತ ಭೀಕರವಾಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಈ ಘಟನೆಯಿಂದ ಪೊಲೀಸ್ ಇಲಾಖೆಯ ವರ್ಚಸ್ಸಿಗೆ ಧಕ್ಕೆಯಾಗಿದ್ದಲ್ಲದೆ, ಕಾನೂನು-ಸುವ್ಯವಸ್ಥೆಯ ಮೇಲಿನ ನಂಬಿಕೆ ಕುಸಿದಿತ್ತು. ಹೀಗಾಗಿ ಅಪರಾಧಿಗಳಿಗೆ ಎಚ್ಚರಿಕೆ ನೀಡಲು ಮತ್ತು ಸಾರ್ವಜನಿಕರಲ್ಲಿ ಧೈರ್ಯ ತುಂಬಲು ‘ಹೆಚ್ಚುವರಿ ಕಠಿಣ ಕ್ರಮ’ ಕೈಗೊಳ್ಳಬೇಕಾಯಿತು” ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಹಳೆಯ ಅಪರಾಧ ಹಿನ್ನೆಲೆ:

ಆರೋಪಿ ಫೈಸಲ್ ಈ ಹಿಂದೆಯೂ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಆತನ ವಿರುದ್ಧ ದರೋಡೆ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸದ್ಯ ಪೊಲೀಸರು ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷಿಗಳ ಹೇಳಿಕೆ, ವೈದ್ಯಕೀಯ ದಾಖಲೆಗಳು ಹಾಗೂ ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧಾರವಾಗಿಟ್ಟುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.

Continue Reading

MODI

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೂ ಮುನ್ನ ಭದ್ರತಾಲೋಪ: ನಕಲಿ PMO ಐಡಿ, ಬಂದೂಕು ಹೊಂದಿದ್ದ ಇಬ್ಬರು ಮುಂಬೈನಲ್ಲಿ ವಶಕ್ಕೆ!

Published

on

ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಬೇಕಿದ್ದ ಕಾರ್ಯಕ್ರಮದ ಸ್ಥಳದಲ್ಲಿ ಭಾರೀ ಭದ್ರತಾಲೋಪದ ಯತ್ನವೊಂದು ಬೆಳಕಿಗೆ ಬಂದಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ, ನಕಲಿ ಪಿಎಂಒ (PMO) ಗುರುತಿನ ಚೀಟಿ ಹಾಗೂ ಬಂದೂಕು ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂಬೈನ ಬಾಂದ್ರಾ-ಕುರ್ಲಾ ಸಂಕೀರ್ಣದಲ್ಲಿರುವ ‘ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ’ದಲ್ಲಿ (NMACC) ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಪ್ರಧಾನಿಯವರ ಆಗಮನಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ಕಾರ್ಯಕ್ರಮದ ಆವರಣದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ನಕಲಿ ಐಡಿ, ಅಂಗರಕ್ಷಕನ ಬಳಿ ಬಂದೂಕು! ವಶಕ್ಕೆ ಪಡೆಯಲಾದ 24 ವರ್ಷದ ರೋಹನ್ ಪಾರೇಖ್ ಎಂಬಾತ, ತಾನು ಪ್ರಧಾನಮಂತ್ರಿ ಕಚೇರಿಯ (PMO) ಅಧಿಕಾರಿ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಆದರೆ, ಆತ ತೋರಿಸಿದ ಗುರುತಿನ ಚೀಟಿಯನ್ನು ಪರಿಶೀಲಿಸಿದಾಗ ಅದು ನಕಲಿ ಎಂಬುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಆತನೊಂದಿಗೆ ಬಂದಿದ್ದ ಅಂಗರಕ್ಷಕನನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಆತನ ಬಳಿ ಅಕ್ರಮವಾಗಿ ಬಂದೂಕು ಪತ್ತೆಯಾಗಿದೆ.

ಪ್ರಧಾನಿ ಅವರ ಭದ್ರತೆಯ ದೃಷ್ಟಿಯಿಂದ ಈ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಭದ್ರತಾ ಪಡೆಗಳು ಸ್ಥಳದಲ್ಲಿ ಕಟ್ಟೆಚ್ಚರ ವಹಿಸಿವೆ.

ಉದ್ದೇಶವೇನು? ತನಿಖೆ ಚುರುಕು: ಇಬ್ಬರು ವ್ಯಕ್ತಿಗಳು ನಕಲಿ ಐಡಿ ಕಾರ್ಡ್ ಹಾಗೂ ಮಾರಕಾಸ್ತ್ರದೊಂದಿಗೆ ಕಾರ್ಯಕ್ರಮದ ಆವರಣಕ್ಕೆ ಪ್ರವೇಶಿಸಲು ಯತ್ನಿಸಿದ ಹಿಂದಿನ ನಿಜವಾದ ಉದ್ದೇಶವೇನು ಎಂಬುದರ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಮೊಬೈಲ್ ಫೋನ್‌ಗಳು, ಗುರುತಿನ ದಾಖಲೆಗಳು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆಯ ನಂತರ ಆರೋಪಿಗಳ ವಿರುದ್ಧ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2026
ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ (GFF) 2026 ಅನ್ನು ಉದ್ಘಾಟಿಸಲಿದ್ದಾರೆ. ಇದು ವಿಶ್ವದ ಅತಿದೊಡ್ಡ ಹಾಗೂ ಪ್ರಭಾವಶಾಲಿ ವಾರ್ಷಿಕ ಫಿನ್‌ಟೆಕ್ ಸಮ್ಮೇಳನಗಳಲ್ಲಿ ಒಂದಾಗಿದೆ.

ನಾಲ್ಕು ದಿನಗಳ ಕಾಲ ನಡೆಯಲಿರುವ GFF 2026ರ ಈ ಬಾರಿಯ ಥೀಮ್: “Potential to Impact: Agentic AI, Tokenisation, Quantum – Trusted, Connected, Global Systems for Inclusive Finance.” ಆಗಿದೆ.

Continue Reading

arrest

ಜಂತರ್ ಮಂತರ್ ಹಲ್ಲೆ ಪ್ರಕರಣ: ಸಿಜೆಪಿ ಪ್ರತಿಭಟನೆಯ ಬೆನ್ನಲ್ಲೇ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದ ‘ಕಟ್ಟರ್ ಹಿಂದೂ’ ಭಾರದ್ವಾಜ್ ದೆಹಲಿ ಪೊಲೀಸರ ವಶಕ್ಕೆ; ಪೋಕ್ಸೋ, SC/ST ಕಾಯ್ದೆಯಡಿ ಹೊಸ FIR

Published

on

ಬುಲಂದ್‌ಶಹರ್/ದೆಹಲಿ/ಲಖನೌ: ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈ 20 ರಂದು ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿ ಕಾರ್ಯಕರ್ತೆ ನಿಶಾ (ನಿಶು) ಆಝಾದ್ ಅವರ ತಂದೆ ಸಂಜಯ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಸ್ವಯಂಘೋಷಿತ ‘ಕಟ್ಟರ್ ಹಿಂದೂ’ ಪ್ರಭಾವಿ ಸ್ವತಂತ್ರ ಭಾರದ್ವಾಜ್‌ನನ್ನು ದೆಹಲಿ ಪೊಲೀಸರು ಶುಕ್ರವಾರ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ವಶಕ್ಕೆ ಪಡೆದಿದ್ದಾರೆ.

ಈ ಬೆಳವಣಿಗೆಯ ಬೆನ್ನಲ್ಲೇ ಆರೋಪಿ ಭಾರದ್ವಾಜ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಹೊಸ ಎಫ್‌ಐಆರ್ (FIR) ದಾಖಲಿಸಲಾಗಿದ್ದು, ಈ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಎಸ್‌ಸಿ/ಎಸ್‌ಟಿ (SC/ST) ಕಾಯ್ದೆಯ ಸಂಬಂಧಿತ ಕಠಿಣ ಸೆಕ್ಷನ್‌ಗಳನ್ನು ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಗೆ ‘ಕಾಕ್ರೋಚ್ ಜನತಾ ಪಕ್ಷ’ ಮುತ್ತಿಗೆ

ಆರೋಪಿ ಭಾರದ್ವಾಜ್ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಆತನನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ ಪಕ್ಷ (CJP) ಶುಕ್ರವಾರ ರಾಷ್ಟ್ರ ರಾಜಧಾನಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಹೊರಗೆ ಬೃಹತ್ ಪ್ರತಿಭಟನೆ ನಡೆಸಿ ಠಾಣೆಗೆ ಮುತ್ತಿಗೆ ಹಾಕಿತ್ತು. ಪ್ರತಿಭಟನಾಕಾರರ ತೀವ್ರ ಆಕ್ರೋಶಕ್ಕೆ ಮಣಿದ ದೆಹಲಿ ಪೊಲೀಸರು, 72 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ್ದರು. ಭರವಸೆ ನೀಡಿದ ಕೆಲವೇ ಗಂಟೆಗಳಲ್ಲಿ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಲ್ಲೆ ಸಮರ್ಥಿಸಿಕೊಂಡಿದ್ದ ವೈರಲ್ ಪಾಡ್‌ಕಾಸ್ಟ್

ಸಾಮಾಜಿಕ ಜಾಲತಾಣಗಳಲ್ಲಿ ಭಾರದ್ವಾಜ್ ಭಾಗವಹಿಸಿದ್ದ ಪಾಡ್‌ಕಾಸ್ಟ್ ವೀಡಿಯೊ ತುಣುಕೊಂದು ತೀವ್ರ ವೈರಲ್ ಆಗಿತ್ತು. ಅದರಲ್ಲಿ ಆತನ ಬಳಿ ಸಂಜಯ್ ಕುಮಾರ್ ಅವರ ‘ತಲೆಬುರುಡೆ ಒಡೆದಿದ್ದೇನೆ’ ಎಂದು ಬಹಿರಂಗವಾಗಿ ಹೆಮ್ಮೆಪಡುತ್ತಾ ಹೇಳಿಕೊಂಡಿದ್ದನು. ಗಂಭೀರ ಹಲ್ಲೆ ನಡೆಸಿದ್ದರೂ ರಾಜಕೀಯ ನಾಯಕರೊಂದಿಗಿನ ಪ್ರಭಾವಿ ಸಂಪರ್ಕದಿಂದಾಗಿ ತಾನು ಜೈಲಿಗೆ ಹೋಗದೆ ಹೊರಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಗುರುತು ಮರೆಮಾಚಿ ಬೈಕ್‌ನಲ್ಲಿ ಪರಾರಿಯಾಗಲು ಯತ್ನ!

ತನ್ನನ್ನು ಪತ್ತೆಹಚ್ಚಲು ದೆಹಲಿ ಪೊಲೀಸರ ಹಲವಾರು ತಂಡಗಳು ನಿಯೋಜನೆಯಾಗಿವೆ ಎಂದು ತಿಳಿಯುತ್ತಿದ್ದಂತೆ, ಭಾರದ್ವಾಜ್ ಶುಕ್ರವಾರ ಮುಂಜಾನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ಗೆ ಆಗಮಿಸಿ, ನೈತ್ಲಾ ಗ್ರಾಮದ ಸ್ಥಳೀಯರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದ.

ಸ್ಥಳೀಯ ನಿವಾಸಿ ಶರ್ಮಾ ಮಾತನಾಡಿ, “ಭಾರದ್ವಾಜ್ ಮನೆಗೆ ಬಂದಾಗ ಅನುಮಾನ ಬರಲಿಲ್ಲ. ಆದರೆ ಗ್ರಾಮಕ್ಕೆ ಮಾಧ್ಯಮದವರು ಬರಲು ಪ್ರಾರಂಭಿಸಿದಾಗ ಸಂಶಯ ಮೂಡಿತು. ಬಳಿಕ ಆತ ನನ್ನ ಬೈಕ್ ತೆಗೆದುಕೊಂಡು ಹೋಗಿದ್ದ,” ಎಂದು ವಿವರಿಸಿದ್ದಾರೆ.

ಪೊಲೀಸ್ ತಂಡಗಳು ತಲುಪುವಷ್ಟರಲ್ಲಿ ತನ್ನ ಗುರುತು ಯಾರಿಗೂ ಸಿಗದಂತೆ ಹೆಲ್ಮೆಟ್ ಧರಿಸಿದ್ದ ಭಾರದ್ವಾಜ್, ಬುಲೆಟ್ ಮೋಟಾರ್‌ಸೈಕಲ್‌ನಲ್ಲಿ ನೈತ್ಲಾ ಗ್ರಾಮದಿಂದ ಖುರ್ಜಾ ಕಡೆಗೆ ಪರಾರಿಯಾಗಿದ್ದ. ಈ ಕುರಿತು ಪೊಲೀಸ್ ಅಧಿಕಾರಿ ದೀಪಕ್ ಕುಮಾರ್ ಮಾಹಿತಿ ನೀಡಿ, ವಾಟ್ಸಾಪ್ ಮೂಲಕ ಆರೋಪಿ ಬುಲಂದ್‌ಶಹರ್‌ನಲ್ಲಿರುವ ಸುಳಿವು ಸಿಕ್ಕ ತಕ್ಷಣ ಸ್ಥಳೀಯ ಪೊಲೀಸ್ ತಂಡವನ್ನು ಕಳುಹಿಸಲಾಗಿತ್ತು, ಆದರೆ ಆತ ಅಲ್ಲಿಂದ ಕಾಲ್ಕಿತ್ತಿದ್ದ ಎಂದು ತಿಳಿಸಿದ್ದಾರೆ.

ಬಳಿಕ ಸಾದಾ ಉಡುಪಿನಲ್ಲಿದ್ದ ದೆಹಲಿ ಪೊಲೀಸರ ವಿಶೇಷ ತಂಡವು ಧಮೇಡಾ ನಾರಾ ಗ್ರಾಮದ ಬಳಿ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಅತ್ಯಾಚಾರ ಬೆದರಿಕೆ ಹಾಕಿದ್ದರೆಂದು ಸಂತ್ರಸ್ತ ವಿದ್ಯಾರ್ಥಿನಿ ಆರೋಪ

ತಂದೆಯ ಮೇಲಿನ ಹಲ್ಲೆಯ ವಿರುದ್ಧ ದೂರು ನೀಡಿದ ಬಳಿಕ ತನಗೆ ನಿರಂತರವಾಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಅತ್ಯಾಚಾರದ ಬೆದರಿಕೆಗಳು ಬಂದಿದ್ದವು ಎಂದು ವಿದ್ಯಾರ್ಥಿನಿ ನಿಶಾ ಆಝಾದ್ ಗಂಭೀರ ಆರೋಪ ಮಾಡಿದ್ದಾರೆ.

“ಭಯದಿಂದಾಗಿ ನನಗೆ ಹೊರಗೆ ಕಾಲಿಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ವಾರಗಳ ಕಾಲ ಶಾಲೆಗೂ ಹೋಗಲು ಸಾಧ್ಯವಾಗಲಿಲ್ಲ. ಈಗ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ,” ಎಂದು ನಿಶಾ ಆಝಾದ್ ಹೇಳಿದ್ದಾರೆ

Continue Reading

Trending

Copyright © 2025 Deevatige

error: Content is protected !!